Tel: 7676775624 | Mail: info@yellowandred.in

Language: EN KAN

    Follow us :


ಆಹಾರ ಇಲ್ಲದೆ ಎರಡು ದಿನ ಬದುಕಬಹುದು, ನೀರಿಲ್ಲದೆ ಬದುಕುವುದು ಕಷ್ಟ, ತಾಪಂ ಇಓ

Posted date: 08 Aug, 2023

Powered by:     Yellow and Red

ಆಹಾರ ಇಲ್ಲದೆ ಎರಡು ದಿನ ಬದುಕಬಹುದು, ನೀರಿಲ್ಲದೆ ಬದುಕುವುದು ಕಷ್ಟ, ತಾಪಂ ಇಓ

 ಚನ್ನಪಟ್ಟಣ: ಒಂದೆರಡು ದಿನ ಆಹಾರವಿಲ್ಲದಿದ್ದರೂ ಮನುಷ್ಯ ಬದುಕುತ್ತಾನೆ ಆದರೆ, ನೀರಿಲ್ಲದೇ ಬದುಕಲಾರ. ಆದ್ದರಿಂದ ಜನರಿಗೆ ಶುದ್ಧನೀರು ಪೂರೈಕೆ ಮಾಡುವುದು ನಮ್ಮ ಆದ್ಯತೆ ಆಗಿದ್ದು, ನೀರಿನ ಗುಣಮಟ್ಟದಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳುವುದು ನೀರುಗಂಟಿಗಳ ಜವಬ್ದಾರಿಯಾಗಿದ್ದು, ಇದನ್ನು ಸಮರ್ಪಕವಾಗಿ ನಿರ್ವಹಿಸುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಶಿವಕುಮಾರ್ ಸೂಚನೆ ನೀಡಿದರು.

ಅವರು ನಗರದ ತಾಪಂ ಸಭಾಂಗಣದಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆ, ನಿರ್ವಹಣೆ ಹಾಗೂ ಎಫ್ ಟಿ ಕೆ ಕಿಟ್‌ಗಳ ಬಳಕೆಯ ಬಗ್ಗೆ ನೀರುಗಂಟಿಗಳಿಗೆ ಹಮ್ಮಿಕೊಂಡಿರುವ 2 ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.


ನೀರಿನ ಓವರ್ ಹೆಡ್ ಟ್ಯಾಂಕ್, ಬೋರ್ ವೆಲ್ ಗಳನ್ನು ಸ್ವಚ್ಛಗೊಳಿಸುವ ಜತೆಗೆ ೧ ಎಫ್ ಟಿ ಕೆ ಕಿಟ್ ಬಳಸಿ ನೀರಿನ ಪರೀಕ್ಷೆ ನಡೆಸುವಂತೆ ತಾಕೀತು ಮಾಡಿದರು.

ಕೇವಲ ನೀರಿನ ಮೋಟಾರ್ ಆನ್, ಆಫ್ ಮಾಡಿ ವಾಲ್ವ್ ಗಳನ್ನು ತಿರುಗಿಸುವುದಷ್ಟೇ ನೀರುಗಂಟಿಗಳ ಕೆಲಸವಲ್ಲ. ನೀರು ಕುಡಿಯಲು ಯೋಗ್ಯವಾಗಿದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಬೇಕು. ಇದಕ್ಕಾಗಿ ಸರ್ಕಾರ ನೀಡಿರುವ ಎಫ್ ಟಿ ಕೆ ಕಿಟ್ ಗಳನ್ನು ಸಮಪರ್ಕವಾಗಿ ಬಳಕೆ ಮಾಡಿ. ನೀರಿನ ಶುದ್ಧತೆಯ ಕುರಿತು ಯಾವುದೇ ರೀತಿಯ ಅನುಮಾನ ಬಂದರೂ ತಕ್ಷಣ ನೀರನ್ನು ಪರೀಕ್ಷಿಸಿ, ಅನುಮಾನ ಬರಲಿ ಬಾರದಿರಲಿ ಕಡ್ಡಾಯವಾಗಿ ೧೫ದಿನಗಳಿಗೊಮ್ಮೆ ಕಿಟ್ ಬಳಸಿ ನೀರುನ್ನು ಪರೀಕ್ಷಿಸಿ ಎಂದು ಸೂಚಿಸಿದರು.


ನೀರಿನ ಪರೀಕ್ಷೆ ನಡೆಸುವ ಜತೆಗೆ ಕಡ್ಡಾಯವಾಗಿ 15 ದಿನಕ್ಕೊಮ್ಮೆ ತಮ್ಮ ಗ್ರಾಮ ವ್ಯಾಪ್ತಿಯ ಓವರ್ ಹೆಡ್ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸಿ, ಇದರ ಜತೆಗೆ ಬೋರ್ ವೆಲ್ ಮತ್ತಿತರ ನೀರು ಪೂರೈಕೆಯ ಜಾಗಗಳನ್ನು ಸ್ವಚ್ಛಗೊಳಿಸಿ. ಸೋರಿಕೆಯಾಗುವ ಪೈಪ್ ಗಳನ್ನು ದುರಸ್ಥಿಗೊಳಿಸುವ ಜತೆಗೆ ಜಾನುವಾರುಗಳ ಕುಡಿಯುವ ನೀರಿಗಾಗಿ ನಿರ್ಮಿಸಿರುವ ತೊಟ್ಟಿಗಳನ್ನು ಸ್ವಚ್ಛಗೊಳಿಸಿ ಎಂದು ತಿಳಿಸಿದರು.


ತರಬೇತಿ ಕಾರ್ಯಾಗಾರದಲ್ಲಿ ಎಫ್ ಟಿ ಕೆ ಕಿಟ್ ಗಳ ಬಳಕೆಯ ಕುರಿತು ನೀರುಗಂಟಿಗಳಿಗೆ ನಾಲ್ಕು ಹಂತಗಳಲ್ಲಿ ತರಬೇತಿ ನೀಡಲಾಯಿತು. ನೀರಿನಲ್ಲಿ ಕಂಡುಬರುವ ಅಂಶಗಳಾದ    ಪಿ ಹೆಚ್, ಗಡಸುತನ, ಕ್ಲೋರೈಡ್, ಫ್ಲೋರೈಡ್, ನೈಟ್ರೇಟ್, ಕಬ್ಬಿಣದಂಶ, ಸಲ್ಫೇಟ್, ಬ್ಯಾಕ್ಟೀರಿಯಾ    ಸೇರಿದಂತೆ 8 ಅಂಶಗಳ ಪ್ರಯೋಗಿಕವಾಗಿ ತರಬೇತಿ ನೀಡಲಾಯಿತು. 


ಈ ವೇಳೆ ಜಿಲ್ಲಾ ಪಂಚಾಯತ್  ಯೋಜನಾ ನಿರ್ದೇಶಕರಾದ ಮಂಜುನಾಥ್, ತಾಲೂಕು ಸಹಾಯಕ ನಿರ್ದೇಶಕ ಸಿದ್ದರಾಜು, ತಾಪಂ ವ್ಯವಸ್ಥಾಪಕ ಸತೀಶ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಮಧುಸೂದನ್, ಕಿರಿಯ ಅಭಿಯಂತರರ ಶ್ರೇಯಸ್, READS ಅನುಷ್ಠಾನ ಬೆಂಬಲ ನೆರವು ಸಂಸ್ಥೆ, ರಾಮನಗರ ಜಿಲ್ಲಾ ಪಂಚಾಯತ್ ತಂಡ ದವರು, ತಾಲ್ಲೂಕು ಪಂಚಾಯಿತಿ ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑