ಮದ್ಯಪಾನ ಮಾಡಿ ಬಿಜಿಎಸ್ ಬಸ್ ಚಾಲನೆ, ಟಾಟಾ ಏಸ್ ಗೆ ಢಿಕ್ಕಿ
ರಾಮನಗರ: ಮದ್ಯಪಾನ ಮಾಡಿ ಮಕ್ಕಳಿದ್ದ ಬಿಜಿಎಸ್ ಸ್ಕೂಲ್ ಬಸ್ ಚಾಲಾಯಿಸುತ್ತಿದ್ದ ಭೂಪ!. ಟಾಟಾ ಏಸ್ ವಾಹನಕ್ಕೆ ಢಿಕ್ಕಿ ಹೊಡೆಸಿದ್ದು, ಮೂವರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ*
ಕುಡಿದ ಮತ್ತಿನಲ್ಲಿ ಮುಂದೆ ಹೋಗುತ್ತಿದ್ದ ಟಾಟಾ ಏಸ್ ವಾಹನಕ್ಕೆ ಸ್ಕೂಲ್ ವ್ಯಾನ್ ಡಿಕ್ಕಿ ಹೊಡೆದಿದೆ. ಈ ಘಟನೆ ಮಂಗಳವಾರ ಸಂಜೆ
ಚನ್ನಪಟ್ಟಣ ತಾಲೂಕಿನ ಕೆಂಗಲ್ ಬಳಿ ಘಟನೆ ನಡೆದಿದೆ.
*ಬಿಜಿಎಸ್ ವರ್ಲ್ಡ್ ಸ್ಕೂಲ್ ಸೇರಿರೋ ಶಾಲಾ ವಾಹನ.*
ಬಸ್ನಲ್ಲಿ ಮಕ್ಕಳು ಇದ್ದರೂ ಸಹ ಕುಡಿದು ವಾಹನ ಚಲಾಯಿಸುತ್ತಿದ್ದ ಚಾಲಕ.
ಟಾಟಾ ಏಸ್ಗೆ ಡಿಕ್ಕಿ ಹೊಡೆದ ಪರಿಣಾಮ ಶಾಲಾ ವಾಹನ ಜಖಂ ಆಗಿದೆ. ಸ್ಥಳದಲ್ಲಿದ್ದ ಸಾರ್ವಜನಿಕರು ಕುಡುಕ ಚಾಲಕನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮತ್ತೊಮ್ಮೆ ಇಂತಹ ತಪ್ಪು ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದು ಬಿಜಿಎಸ್ ವರ್ಲ್ಡ್ ಸ್ಕೂಲ್ ಸಿಬ್ಬಂದಿಯೊಬ್ಬರು ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ.
ತಪ್ಪು ಮಾಡಿದವನಿಗೆ ಶಿಕ್ಷೆ ಆಗಬೇಕೆಂದು ಸಾರ್ವಜನಿಕರ ಪಟ್ಟು ಹಿಡಿದಿದ್ದು, ಸ್ಥಳಕ್ಕೆ ಚನ್ನಪಟ್ಟಣ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.
ಹಲವಾರು ಪೋಷಕರು ಕರೆ ಮಾಡಿ, ಅಪಘಾತದ ಸಂದರ್ಭದಲ್ಲಿ ಸಡನ್ ಬ್ರೇಕ್ ಹಾಕಿದಾಗ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಾಲಕ ಯಾವಾಗಲೂ ಕಿವಿಗೆ ಇಯರ್ ಪೋನ್ ಹಾಕಿಕೊಂಡು ಬಸ್ ಚಲಾಯಿಸುತ್ತಾನೆ. ಎಲ್ಲೆಂದರಲ್ಲಿ ಬಸ್ ನಿಲ್ಲಿಸುತ್ತಾನೆ ಎಂದು ನಮ್ಮ ಮಕ್ಕಳು ಹೇಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದು, ಚಾಲಕನ ಮೇಲೆ ಆಡಳಿತ ಮಂಡಳಿ ಮತ್ತು ಪೋಲೀಸರು ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ಸ್ಥಳದಲ್ಲಿದ್ದ ಸಿಬ್ಬಂದಿಯೋರ್ವರನ್ನು ಈ ಬಗ್ಗೆ ಪ್ರಶ್ನಿಸಿದಾಗ ಆತ ಬೇರೆ ಬಸ್ ನ ಚಾಲಕನಾಗಿದ್ದು, ಇಂದು ಮಾತ್ರ ಈ ಬಸ್ ಚಲಾಯಿಸುತ್ತಿದ್ದ. ಆತ ಮದ್ಯಪಾನ ಮಾಡಿರಲಿಲ್ಲ, ವಿಮಲ್ ಎನ್ನುವ ತಂಬಾಕು ಹಾಕಿಕೊಂಡಿದ್ದ ಎಂದು ಸಮಜಾಯಿಷಿ ನೀಡಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು