ಸಿಲಿಂಡರ್ ನಿಂದ ಬೆಂಕಿ ಹೊತ್ತಿ ಕೊಂಡು ಗುಡಿಸಲು ಭಸ್ಮ
ವೀರೇಗೌಡನದೊಡ್ಡಿ (ಅಂಬೇಡ್ಕರ್ ನಗರ)ದ ಎರಡನೇ ತಿರುವಿನ ಗುಡಿಸಲೊಂದರಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆ ಯಿಂದ ಬೆಂಕಿ ಸೋಂಕಿದ ಪರಿಣಾಮ ಇಡೀ ಗುಡಿಸಲು ಸಂಪೂರ್ಣವಾಗಿ ಭಸ್ಮವಾಗಿ ಹೋಗಿದೆ.
ಬೇಸಿಗೆಯ ಬಿಸಿಲ ಜಳಕ್ಕೆ ತಕ್ಷಣ ಆವರಿಸಿದ ಬೆಂಕಿ ಇಡೀ ಗುಡಿಸಲನ್ನು ಕ್ಷಣಾರ್ಧದಲ್ಲಿ ಆವರಿಸಿಕೊಂಡು ಗುಡಿಸಲಿನ ಹಿಂದಿದ್ದ ಸೌದೆಯ ದಾಸ್ತಾನನ್ನು ಆವರಿಸಿಕೊಂಡ ಜ್ವಾಲೆಯು ಮುಗಿಲೆತ್ತರಕ್ಕೆ ಆವರಿಸಿಕೊಂಡು ಒಳಗಿದ್ದ ಐವತ್ತು ಸಾವಿರ ನಗದು, ಒಂದು ಜೊತೆ ಓಲೆ, ದಿನಸಿ ಮತ್ತು ಅಡುಗೆ ಸಾಮಾನುಗಳು, ತೊಡುವ ಬಟ್ಟೆಗಳು, ದಾಖಲೆಗಳು.
ಸುಟ್ಟು ಬಾಳು ಬೀದಿಗೆ ಬಿತ್ತು ಎಂದು ವೃದ್ದೆ ಚಲ್ಲಮ್ಮ ಗೋಳಾಡುತ್ತಿದುದು ಮನಕಲಕುವಂತಿತ್ತು.
ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಯವರು ಬೆಂಕಿ ನಂದಿಸಿ ಅಕ್ಕಪಕ್ಕದ ಮನೆಗಳಿಗೆ ಉಂಟಾಗುವ ಹಾನಿಯನ್ನು ತಪ್ಪಿಸಿದರು.
ಗ್ರಾಮಾಂತರ ಠಾಣೆ ಪೋಲಿಸರು ಮಹಜರು ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.
ನಗರಸಭೆಯ ಸದಸ್ಯ ನಂದೀಶ್ ಸ್ಥಳಕ್ಕಾಗಮಿಸಿ ನಗರಸಭೆಯಿಂದ ದೊರಕುವ ಸೌಲಭ್ಯಗಳನ್ನು ಶೀಘ್ರವಾಗಿ ಕಲ್ಪಸಿಕೊಡುವುದರ ಜೊತೆಗೆ ವೈಯುಕ್ತಿಕವಾಗಿಯೂ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು