ಆಚಾರ ವಿಚಾರಗಳ ತಾಳೆಯೋಲೆ ಇಂದಿನಿಂದ ನಿಮ್ಮ ಮುಂದೆ
ಆತ್ಮೀಯ, ಗೌರವಾನ್ವಿತ ಓದುಗ ಮಿತ್ರರೇ, ಇಂದಿನಿಂದ ಸತತ ೩೨೭ ದಿನಗಳು ನಿರಂತರವಾಗಿ (ಕೆಲವು ರಜಾ ದಿನಗಳು ಮತ್ತು ಆಕಸ್ಮಿಕ ರಜೆ ಹೊರತು ಪಡಿಸಿ) ಡಾ ವೆಂಗನೂರು ಬಾಲಕೃಷ್ಣನ್ ರವರು ಆಂಗ್ಲ ಭಾಷೆಯಲ್ಲಿ ರಚಿಸಿರುವ *ತಾಳೆಯೋಲೆ* ಗ್ರಂಥವನ್ನು ಊರುಕುಂಟೆ ನರಸಿಂಹಸ್ವಾಮಿ ರವರು ಕನ್ನಡಕ್ಕೆ ವಿಶ್ಲೇಷಣಾತ್ಮಕ ವಾಗಿ ತರ್ಜುಮೆ ಮಾಡಿರುವ ಗ್ರಂಥದ ಒಂದೊಂದು ಲೇಖನವನ್ನು ತಮ್ಮ ಮುಂದಿಡುತ್ತಿದ್ದೇನೆ.
ಪ್ರಾಚೀನ, ಪುರಾಣ ಮತ್ತು ಕೆಲವು ಇತಿಹಾಸದಲ್ಲಿ ದಾಖಲಾಗಿರುವ ನಮ್ಮ ದಿನನಿತ್ಯದ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯ ಸಂಗತಿಗಳ ಬಗ್ಗೆ *ತಾಳೆಯೋಲೆ* ಗ್ರಂಥವು ಮಹತ್ವದ್ದಾಗಿದೆ.
ಎಂದಿನಂತೆ ಓದುಗರು ಸಹಕರಿಸಿ ಚರ್ಚಿಸಿ ಮನನ ಮಾಡಿಕೊಳ್ಳಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ.
ಪ್ರತಿನಿತ್ಯ ವೂ *ಬಯಲುಸೀಮೆ* ಸಂಜೆ ದಿನಪತ್ರಿಕೆ ಮತ್ತು sanmitra.co.in online ಪತ್ರಿಕೆಯಲ್ಲಿ ಓದಬಹುದು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು