
ನವೆಂಬರ್ 2 ನೇ ತಾರೀಖಿನಂದು ರೈತಸಂಘದಿಂದ ನಾಲ್ಕು ತಾಲ್ಲೂಕು ಕಛೇರಿಗಳ ಮುಂದೆ ಏಕಕಾಲದಲ್ಲಿ ಪ್ರತಿಭಟನೆ
ಚನ್ನಪಟ್ಟಣ: ಅ:23/21. ಜಿಲ್ಲೆಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಚಾರ, ಲಂಚಗುಳಿತನ ಮತ್ತು ಭ್ರಷ್ಟಚಾರದಿಂದ ಕೂಡಿರುವ ಆಡಳಿತ ವೈಫಲ್ಯವನ್ನು ಖಂಡಿಸುವುದಕ್ಕಾಗಿ ನವೆಂಬರ್ 2 ನೇ ತಾರೀಖಿನ ಮಂಗಳವಾರದಂದು ನಾಲ್ಕು ತಾಲ್ಲೂಕುಗಳಲ್ಲಿ ಏಕ ಕಾಲದಲ್ಲಿ ತಾಲ್ಲೂಕು ಕಛೇರಿಗಳ ಮುಂಭಾಗ ಬೆಳಿಗ್ಗೆ 11:00 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತಸಂಘದ ಪದಾಧಿಕಾರಿಗಳು ಪ್ರಕಟಣೆಯಲ್

ಕೋಳಿಫಾರಂ ಗೆ ಚಿರತೆ ದಾಳಿ ಲಕ್ಷಾಂತರ ರೂ ಲುಕ್ಸಾನು
ರಾಮನಗರ.ಅ.25/21: ರಾಮನಗರ ತಾಲೂಕಿನ ಬಿಡದಿ ಹೋಬಳಿ ಶೆಟ್ಟಿಗೌಡನದೊಡ್ಡಿ ಗ್ರಾಮದ ಬಳಿ ಇರುವ ಕೋಳಿ ಫಾರಂ ನಲ್ಲಿ ಚಿರತೆ ಏಕಾಏಕಿ ದಾಳಿ ನಡೆಸಿ ನೂರಾರು ಕೋಳಿಗಳ ಮಾರಣ ಹೋಮ ನಡೆಸಿದೆ.ಶೆಟ್ಟಿಗೌಡನದೊಡ್ಡಿ ಬಳಿಯಿರುವ ನಾಟಿ ಕೋಳಿ ಫಾರಂ ನೊಳಗೆ ಕಳೆದ ರಾತ್ರಿ ನುಗ್ಗಿದ ಚಿರತೆ, ಗ್ರಾಮದ ರೈತ ಭಾಸ್ಕರ್ ಎಂಬುವರ ಮಾಲೀಕತ್ವದ ಕೋಳಿ ಫಾರಂ ನಲ್ಲಿನ ನೂರಾರು ಕೋಳಿಗಳ ಮೇಲೆ ದಾಳಿ ಮಾಡಿ, ಇ

ನೂತನ ಹೆದ್ದಾರಿಯಲ್ಲಿ ಅವೈಜ್ಞಾನಿಕ ಚರಂಡಿ ನಿರ್ಮಾಣ. ಗದ್ದೆಗೆ ನುಗ್ಗಿದ ನೀರು
ಚನ್ನಪಟ್ಟಣ.ಅ.20:21. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣವಾಗುತ್ತಿದೆ. ಈ ನಿರ್ಮಾಣದ ಕಾಮಗಾರಿ ವೇಳೆ ಅವೈಜ್ಞಾನಿಕ ಚರಂಡಿ ನಿರ್ಮಾಣ ಮಾಡಿದ ಹಿನ್ನೆಲೆಯಲ್ಲಿ ಮಳೆ ನೀರು ಕೃಷಿ ಜಮೀನಿಗೆ ನುಗ್ಗಿ ತಿಟ್ಟಮಾರನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ರೈತ ಅಜಿತ್ ರವರ 2 ಎಕರೆ ಟೊಮೆಟೋ ಬೆಳೆ ಮಳೆನೀರು ಪಾಲಾಗಿರುವ ಘಟನೆ ನಡೆದಿದೆ.ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಹಳೆಯ ನಾಲ್ಕು ಪಥದ ರಸ್

ಗರಕಹಳ್ಳಿ ಡೈರಿ ಸಭೆಯಲ್ಲಿ ಮಾರಾಮಾರಿ. ಸೆಕ್ರೆಟರಿ ವಿರುದ್ದ ಹರಿಹಾಯ್ದ ಸದಸ್ಯರು. ಮೂರು ಮಂದಿಗೆ ಗಾಯ
ಚನ್ನಪಟ್ಟಣ: ಅ/11/21. ಗರಕಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2020/21 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಶಿವಲಿಂಗಯ್ಯ ನವರ ನೇತೃತ್ವದಲ್ಲಿ ಆರಂಭಗೊಂಡಿತ್ತಾದರೂ ತದ ನಂತರ ಎರಡು ಗುಂಪುಗಳ ನಡುವೆ ಮಾರಾಮಾರಿ ಆಗಿ ಮೂರು ಮಂದಿಗೆ ತಲೆ ಮತ್ತು ಹಣೆಯ ಮೇಲೆ ರಕ್ತಗಾಯಗಳಾಗಿ ಆಸ್ಪತ್ರೆ ಮತ್ತು ಪೋಲಿಸ್ ಠಾಣೆಯ ಮೆಟ್ಟಿಲೇರಿದ್ದಾರೆ.ಹಾಲಿನ ಡೈರಿಯ

ಉತ್ತರ ಪ್ರದೇಶದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹರಿಸಿ ಕೊಂದ ಸಚಿವರ ಪುತ್ರ. ತಹಶಿಲ್ದಾರ್ ಗೆ ಮನವಿ ಸಲ್ಲಿಸಿದ ಸಂಘಟನಾಕಾರರು
ಚನ್ನಪಟ್ಟಣ: ಅ/04. ದೇಶಾದ್ಯಂತ ರೈತ ವಿರೋಧಿ ಕಾಯ್ದೆಗಳ ವಿರುದ್ದ ರೈತ ಚಳವಳಿಗಳು ತೀವ್ರತೆ ಪಡೆಯುತ್ತಿರುವುದನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಮುಗ್ಧ ರೈತರ ವಿರುದ್ದ ಯುದ್ದ ಸಾರಿ, ಚಳವಳಿ ನಿರತ ರೈತರನ್ನು ಬಲಿ ಪಡೆಯುತ್ತಿದೆ. ಇದನ್ನು ತಡೆದು ಪ್ರಜಾಪ್ರಭುತ್ವವನ್ನು ರಕ್ಷಿಸಬೇಕೆಂದು, ಚನ್ನಪಟ್ಟಣ ತಾಲ್ಲೂಕಿನ ವಿವಿಧ ಸಂಘಟನೆಗಳು ನಗರದ ತಾಲ್ಲೂಕು ಕಛೇರಿಯ ಮುಂಭಾಗ ಕೆಲಕಾಲ ಪ್ರತಿಭಟನೆ ನಡೆಸಿ ರ

ಕಾಡು ಪ್ರಾಣಿಗಳಿಂದ ಬೆಳೆ ನಾಶ, ಅಮ್ಮಳ್ಳಿದೊಡ್ಡಿ ಗ್ರಾಮಸ್ಥರಿಂದ ರಸ್ತೆತಡೆ ಅಧಿಕಾರಿಗಳು ದೌಡು
ಚನ್ನಪಟ್ಟಣ: ಅ/04. ತಡರಾತ್ರಿ ಒಂಭತ್ತು ಆನೆಗಳು ಅಮ್ಮಳ್ಳಿದೊಡ್ಡಿ ಗ್ರಾಮದ ರೈತರ ಜಮೀನಿಗೆ ನುಗ್ಗಿ ತೆಂಗು, ಬಾಳೆ ಮತ್ತು ಸೋತೆಕಾಯಿ ಫಸಲನ್ನು ಸಂಪೂರ್ಣವಾಗಿ ನಾಶ ಮಾಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಒಗ್ಗೂಡಿ ತಮ್ಮ ಗ್ರಾಮದ ಬಳಿ ಹಾದುಹೋಗಿರುವ ಚನ್ನಪಟ್ಟಣ-ಸಾತೂರು ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದರು.ಒಂಭತ್ತು ಆನೆಗಳು ಒಟ್ಟಿಗೆ ದಾಂಗುಡಿ ಇಟ್ಟಿದ್ದು

ಚನ್ನಪಟ್ಟಣದಲ್ಲಿ ಭಾರತ್ ಬಂದ್ ಗೆ ನೀರಸ ಪ್ರತಿಕ್ರಿಯೆ
ಚನ್ನಪಟ್ಟಣ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯಿದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದ ಭಾರತ್ ಬಂದ್ಗೆ ತಾಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೋಮವಾರ ರೈತ ಸಂಘಟನೆಗಳು ಮತ್ತು ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಬಂದ್ ಜನ ಜೀವನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಭಾರತ್ ಬಂದ್ ತಾಲೂಕಿನಲ್ಲಿ ಪ್ರತಿಭಟನೆ ಮತ್ತು ರ್ಯಾಲಿಗೆ ಮಾತ್ರ ಸೀಮಿತವಾಗಿದ್ದು, ಸರ್ಕಾರಿ ಮತ್ತು ಖಾಸಗಿ ಕಚೇರಿಗಳು, ಅಂಗಡಿ ಮಳಿ

ನವೀನತೆಯ ಪಶುಕೊಟ್ಟಿಗೆ ಪ್ರಾಜೆಕ್ಟ್. ರಾಷ್ಟ್ರಪ್ರಶಸ್ತಿಗೆ ಭಾಜನರಾದ ವಿದ್ಯಾರ್ಥಿ
ಮೂಲ ಮತ್ತು ಹೈನೀದ್ಯೋಮವನ್ನೇ ನೆಚ್ಚಿಕೊಂಡಿರುವ ರೈತರಿಗೆ ಉಪಯುಕ್ತವಾಗುವಂತ ಆಧುನಿಕ ದನದ ಕೊಟ್ಟಿಗೆಯನ್ನು ಆವಿಷ್ಕಾರಗೊಳಿಸಿ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿರುವ ವಿದ್ಯಾರ್ಥಿ ದೇವೇಗೌಡ ಅವರಿಗೆ ಜಿಲ್ಲಾಡಳಿತ ಅಭಿನಂದನೆ ಸಲ್ಲಿಸಿದೆ.ಕನಕಪುರ ತಾಲ್ಲೂಕಿನ ಕಾಡಂಚಿನ ಗ್ರಾಮದಲ್ಲಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಯೊಬ್ಬ ಅಭಿವೃದ್ಧಿಪಡಿಸಿರುವ \'\'ಆಧುನಿಕ ದನದ ಕೊಟ್ಟಿಗೆ\'\' ಪ್ರಾಜೆಕ್ಟ್ಗೆ ರಾಷ್ಟ್ರ ಪ್ರಶಸ್ತಿ ಲಭಿಸಿದ

ಅರಣ್ಯ ಇಲಾಖಾ ಕಛೇರಿ ಬಳಿಯ ತೋಟಕ್ಕೆ ನುಗ್ಗಿದ ಕಾಡಾನೆಗಳು
ಚನ್ನಪಟ್ಟಣ.ಸೆ.೧೬: ತಾಲ್ಲೂಕಿನ ಕೆಂಗಲ್ ಆಂಜನೇಯ ದೇವಸ್ಥಾನದ ಮುಂಭಾಗ, ಅರಣ್ಯ ಇಲಾಖೆಯ ಕಛೇರಿ ಪಕ್ಕದಲ್ಲೇ ಇರುವ ತೋಟಕ್ಕೆ ಕಾಡಾನೆಗಳು ದಾಂಗುಡಿ ಇಟ್ಟಿದ್ದು ವರದಿಯಾಗಿದೆ. ಕೆಂಗಲ್ ಸಮೀಪದ ಕುವೆಂಪು ಕಾಲೇಜಿನ ಪಕ್ಕದ ಅರಣ್ಯಾಧಿಕಾರಿಗಳ ಕಚೇರಿ ಬಳಿಯಿರುವ ತೋಟವನ್ನು ಹಾಳು ಮಾಡಿವೆ.ರುದ್ರಪ್ಪ ಎಂಬುವವರಿಗೆ ಸೇರಿದ ತೋಟಕ್ಕೆ ನುಗ್ಗಿದ ಆನೆಗಳು ತೆಂಗಿನ ಮರ ಹಾಗೂ ಅಡಿಕೆ ಮರಗಳನ್ನು

ವಿದ್ಯುತ್ ಸ್ಪರ್ಶದಿಂದ ಆನೆ ಸಾವು, ನ್ಯಾಯಾಂಗ ಬಂಧನಕ್ಕೆ ರೈತ
ಚನ್ನಪಟ್ಟಣ.ಸೆ.೧೧: ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಗಿನಕಲ್ಲು ಅರಣ್ಯ ಪ್ರದೇಶದ ಚಿಕ್ಕವಿಠಲೇನಹಳ್ಳಿ ಗ್ರಾಮದ ತೋಟವೊಂದರಲ್ಲಿ ಕಾಡಾನೆಯೊಂದು ನೆನ್ನೆ ಮುಂಜಾನೆ ಸತ್ತು ಬಿದ್ದಿದ್ದು, ಮರಣೋತ್ತರ ಪರೀಕ್ಷೆಯ ನಂತರ ವಿದ್ಯುತ್ ಸ್ಪರ್ಶದಿಂದ ಸತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ.ಇತ್ತೀಚಿಗೆ ಆನೆಗಳು ಮತ್ತು ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ರೈತರ ಬೆಳೆಗಳು ಮತ್ತು ಜಾನುವಾರಗಳು ಬಲಿಯಾಗ