ಪ್ರಕೃತಿಯೇ ಆಯುರ್ವೇದ, ಪಥ್ಯವೇ ಆರೋಗ್ಯ. ಆಯುರ್ವೇದ ರತ್ನ ಡಾ ಮಹೇಶ್ ಮೂರ್ತಿ
ಚನ್ನಪಟ್ಟಣ: ಆಯುರ್ವೇದ ರತ್ನ ಚನ್ನಪಟ್ಟಣ ದ ಉಗಮ ಚಿಕಿತ್ಸಾಲಯದ ಡಾ ಮಹೇಶ್ ಮೂರ್ತಿಯವರೊಂದಿಗೆ ಗೋ ರಾ ಶ್ರೀನಿವಾಸ ನಡೆಸಿದ ಒಂದು ಸಂವಾದ
*ಆಯುರ್ವೇದ ನೈಸರ್ಗಿಕ ಇಂಗ್ಲಿಷ್ ವೈದ್ಯ ಅನೈಸರ್ಗಿಕ*
*ನಮ್ಮ ಆರೋಗ್ಯ ಮಿತ್ರ ಪ್ರಕೃತಿ ಮಾತ್ರ, ಆಯಾಯ ಋತುಮಾನದಲ್ಲಿ ಚಿಗುರೊಡೆಯುವ ಸೊಪ್ಪು ತರಕಾರಿಗಳು, ಹಣ್ಣು ಹಂಪಲುಗಳ ಜೊತೆಗೆ ಸೂಕ್ತ ಮತ್ತು ಮಿತ ಆಹಾರಗಳೇ ನಮ್ಮ ಆಯುಷ್ಯ ಮತ್ತು ಆರೋಗ್ಯವನ್ನು ನಿರ್ಧರಿಸುತ್ತವೆ. ಮಾನವ ನಿರ್ಮಿತ ಬಹುತೇಕ ಆಹಾರ ಪದಾರ್ಥಗಳೇ ನಮ್ಮ ಅನಾರೋಗ್ಯಕ್ಕೆ ಕಾರಣ. ಆಯುರ್ವೇದ ವೈದ್ಯ ನೈಸರ್ಗಿಕ, ಇಂಗ್ಲಿಷ್ ವೈದ್ಯ ಅನೈಸರ್ಗಿಕ. ಇವು ಇತ್ತೀಚೆಗೆ ಪ್ರಖ್ಯಾತಿ ಹೊಂದುತ್ತಿರುವ ದೇಶದ ಉದ್ದಗಲದಿಂದಲೂ ಬರುವ ರೋಗಿಗಳಿಗೆ ಹತ್ತಾರು ಲಕ್ಷ ಖರ್ಚು ಮಾಡಿಯೂ ವಾಸಿಯಾಗದ ಅನಾರೋಗ್ಯ ಪೀಡಿತರಿಗೆ ಪಾರಂಪರಿಕ ಮತ್ತು ಆಯುರ್ವೇದ ಔ಼ಷಧಗಳಿಂದಲೇ ರೋಗಿಗಳ ರೋಗಗಳಿಗೆ ಮುಕ್ತಿ ನೀಡುತ್ತಿರುವ ಆಯುರ್ವೇದ ರತ್ನ ಡಾ ಮಹೇಶ್ ಮೂರ್ತಿ ಯವರ ನುಡಿಮುತ್ತುಗಳು.*
*ನಾಟಿ ವೈದ್ಯ ಪಾರಂಪರಿಕ ಕುಟುಂಬ*
ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯ ತುರಗನೂರು ಗ್ರಾಮದ ಪಾರಂಪರಿಕ ನಾಟಿ ವೈದ್ಯ ಕುಟುಂಬದಲ್ಲಿ ಜನಿಸಿದ ಮಹೇಶ್ ಮೂರ್ತಿ ಯವರು ಅರಣ್ಯ ಶಾಸ್ತ್ರದಲ್ಲಿ ಬಿಎಸ್ಸಿ ಪದವಿ ಅಧ್ಯಯನ ಮಾಡಿದವರು. ವಂಶ ಪಾರಂಪರ್ಯವಾಗಿ ಬಂದಿದ್ದ ನಾಟಿವೈದ್ಯಕೀಯದ ಜೊತೆಗೆ ಪದವಿ ಸಮಯದಲ್ಲೇ ಚಿಗುರೊಡೆದ ಆಯುರ್ವೇದದ ಕನಸನ್ನು ಸಾಕಾರಗೊಳಿಸುವಲ್ಲಿ ಸಫಲರಾದರು. ಆಯುರ್ವೇದವನ್ನು ಕೇವಲ ವಿಶ್ವವಿದ್ಯಾಲಯ ದ ಪದವಿಗಷ್ಟೇ ಸೀಮಿತವಾಗಿಸದೇ ಬಿಳಿಗಿರಿರಂಗನ ಬೆಟ್ಟದ ಸೋಲಿಗರ ಹಾಡಿಯಲ್ಲಿ ಗೆಡ್ಡೆ ಗೆಣಸು, ಸೊಪ್ಪುಸದೆ, ಹಣ್ಣು ಕಾಯಿಗಳ ಅಧ್ಯಯನ, ಅಲ್ಲಿನ ಪಾರಂಪರಿಕ ವೈದ್ಯಕೀಯ ಹಾಗೂ ಅನೇಕ ಹಿರಿಯ ಅಳಲೆಕಾಯಿ ಪಂಡಿತರ ಮೂಲಕ ತಿಳಿದುಕೊಂಡಿದ್ದಲ್ಲದೆ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಪರ್ಯಾಯ ಚಿಕಿತ್ಸೆ ಎಂಬ ವಿಷಯವನ್ನು ಮಂಡಿಸಿ ಪಿ ಹೆಚ್ ಡಿ ಪದವಿ ಗಳಿಸಿರುವುದಾಗಿ ಹೇಳಿದರು.
*ಹೃದಯ, ಲೋಬಿಪಿ ಮತ್ತು ಕ್ಯಾನ್ಸರ್ ಗೆ ಕೊಡಲ್ಲ, ಬೇರೆ ಖಾಯಿಲೆಗಳಿಗೆ ಬಿಡಲ್ಲ*
ಹೃದಯ ಸಂಬಂಧಿ, ಕ್ಯಾನ್ಸರ್ ಮತ್ತು ಕಡಿಮೆ ರಕ್ತದೊತ್ತಡ (ಲೋ ಬಿಪಿ) ಹೊರತುಪಡಿಸಿ ಮಿಕ್ಕೆಲ್ಲ ಖಾಯಿಲೆಗಳಿಗೂ ಆಯುರ್ವೇದ ಔಷಧ ಕೊಡುತ್ತೇನೆ. ಮೇಲಿನ ರೋಗಗಳಿಗೂ ಔಷಧ ಕೊಡಬಹುದಾದರೂ ಸಹ ರೋಗಿಯ ಪೋಷಕರ (ಕೆಲವರು ಮಾತ್ರ) ದುರ್ನಡತೆ ಯಿಂದಾಗಿ ಕೊಡಲು ಮುಂದಾಗುವುದಿಲ್ಲ. ಮಿಕ್ಕೆಲ್ಲ ಖಾಯಿಲೆಗಳಿಗೂ ಸಂಪೂರ್ಣ ಆಯುರ್ವೇದ ಔಷಧಗಳನ್ನೇ ನೀಡಲಾಗುತ್ತದೆ, ಈ ಔಷಧಗಳಲ್ಲಿ ಶೇಕಡಾ ೯೦ ಕ್ಕೂ ಹೆಚ್ಚು ಅಡ್ಡಪರಿಣಾಮ ಇರುವುದಿಲ್ಲ. ಧೀರ್ಘ ಕಾಲದ ರೋಗಿಗಳಿಗೂ ಸಹ ಕಡಿಮೆ ಅವಧಿಯ ಔಷಧೋಪಚಾರ ಮತ್ತು ಪಥ್ಯ (ಮಿತ ಮತ್ತು ಸೀಮಿತ ಆಹಾರ) ಇರಬೇಕಾದ್ದು ಅತ್ಯವಶ್ಯ ಎನ್ನುತ್ತಾರೆ.
*ವಾಸಿಯಾಗದ ಖಾಯಿಲೆಗಳೇ ಇಲ್ಲ*
ಇತ್ತೀಚೆಗೆ ಗಂಭೀರ ಖಾಯಿಲೆ ಹಾಗೂ ಒತ್ತಡದಿಂದ ದಿನನಿತ್ಯ ಬರುವ ಖಾಯಿಲೆಗಳಾದ ಬೆನ್ನುನೋವು, ಮಂಡಿನೋವು (Back Pain, Joint Pain) ಪಾರ್ಶ್ವವಾಯು, ಅಸ್ತಮಾ, ಉಬ್ಬಸ,ಸೋರಿಯಾಸಿಸ್ ಹಾಗೂ ಬಹಳ ಮುಖ್ಯವಾಗಿ ಸಂಧಿವಾತ ದಂತಹ ರೋಗಿಗಳೇ ಹೆಚ್ಚು ಬರುತ್ತಿದ್ದು ಶೇಕಡಾ ೯೦ ಕ್ಕೂ ಹೆಚ್ಚು ರೋಗಿಗಳಿಗೆ ವಾಸಿಯಾಗಿದೆ. ಆಯುರ್ವೇದ ಔಷಧ ಎಂದರೆ ದೇಹದೊಳಗಿನ ಎಲ್ಲಾ ಕಲ್ಮಶಗಳನ್ನು (ರೋಗಗಳನ್ನು) ಪ್ರಾಕೃತಿಕ ಔಷಧಗಳಿಂದಲೇ ಮುಕ್ತಿಗೊಳಿಸುವುದು. ಯಾವುದೇ ಆಪರೇಷನ್ ಇಲ್ಲದೆ ಗಿಡ ಮೂಲಿಕೆಗಳಿಂದಲೇ ಸಂಸ್ಕರಿಸಿದ ಔಷಧಿಗಳಿಂದಲೇ ಗುಣಪಡಿಸುವಂತದ್ದು. ಇದಕ್ಕೆ ಬೇಕಾಗಿರುವುದು ರೋಗಿಯ ನಂಬಿಕೆ ಮತ್ತು ಪಥ್ಯ ಆಹಾರ ಮಾತ್ರ.
*ನಾನೇ ಸಂಶೋಧಿಸಿ ತಯಾರಿಸಿದ ಔಷಧ ಗಳ ಜೊತೆಗೆ ಉತ್ತಮ ದರ್ಜೆಯ ಕಂಪನಿಗಳ ಔಷಧ*
ಕೆಲವು ಖಾಯಿಲೆಗಳಾದ ಚರ್ಮವ್ಯಾಧಿ, ಸ್ಥೂಲಕಾಯ, ಗ್ಯಾಸ್ಟ್ರಿಕ್ ಚೂರ್ಣ, ನೆಗಡಿ-ಕೆಮ್ಮು, ಕಫ ಸಂಹಾರದಂತಹ ಖಾಯಿಲೆಗಳಿಗೆ ನಾನೇ ಸಂಶೋಧಿಸಿ ತಯಾರಿಸಿದ ಔಷಧಿಗಳನ್ನು ನೀಡುತ್ತೇನೆ, ಇನ್ನುಳಿದ ಖಾಯಿಲೆಗಳಿಗೆ ನೋಂದಣಿ ಯಾಗಿರುವ ಆಯುರ್ವೇದ ಕಂಪನಿಗಳಿಂದ ಖರೀದಿಸಿ ಕೊಡುತ್ತೇನೆ. ಶೇಕಡಾ ೯೯ ಅಡ್ಡಪರಿಣಾಮಗಳಿರುವುದಿಲ್ಲ. ನಾನು ಸಂಶೋಧಿಸಿ ತಯಾರಿಸಿದ ಔಷಧಗಳಿಗೆ ಯಾರ ಅನುಮತಿಯೂ ಬೇಕಾಗಿಲ್ಲ, ಇದುವರೆಗೆ ಯಾವ ಅಡ್ಡಪರಿಣಾಮಗಳಾಗಿಲ್ಲ.ಮಾರುಕಟ್ಟೆ ಮಾಡುವುದಾದರೆ ನೋಂದಣಿಯ ಅವಶ್ಯಕತೆ ಇದೆ.
*ಆಯುರ್ವೇದ ಕಲಿತವರು ಇಂಗ್ಲಿಷ್ ವೈದ್ಯ ಕೊಡುತ್ತಾರೆ ಇದು ತಪ್ಪು*
ಆಯುರ್ವೇದ ಕಲಿತ ವೈದ್ಯರೂ ಸಹ ಇಂಗ್ಲೀಷ್ ವೈದ್ಯ ನೀಡುತ್ತಾರೆ, ಕೆಲವರು ಸ್ಟಿರಾಯ್ಡ್ ನಂತಹ ಔಷಧಿಗಳನ್ನು ನೀಡುವುದನ್ನು ಕೇಳಿದ್ದೇನೆ. ಇದು ಅಡ್ಡ ಪರಿಣಾಮ ಅಲ್ಲದೆ ರೋಗಿಯ ಜೀವದ ಮೇಲೆ ಚಲ್ಲಾಟವಾಡುವಂತದ್ದು, ಆಯುರ್ವೇದ ಸಂಪೂರ್ಣ ತಿಳಿಯದಾಗಿದ್ದರೆ ಅವರು ಎಷ್ಟು ತಿಳಿದಿದ್ದಾರೋ ಅಷ್ಟಕ್ಕೇ ಮಾತ್ರ ಔಷಧ ನೀಡಬೇಕು, ಎರಡು ರೀತಿಯ ಔಷಧಗಳನ್ನು ನೀಡಿದರೆ ವ್ಯಕ್ತಿಯು ಚೇತರಿಸಿಕೊಳ್ಳುವುದು ಕಷ್ಟವಾಗುತ್ತದೆ. ಕಳೆದ ಇಪ್ಪತ್ನಾಲ್ಕು ವರ್ಷಗಳಿಂದಲೂ ಆಯುರ್ವೇದ ಔಷಧ ಕೊಡುತ್ತಿದ್ದು ಈ ಹಿಂದೆ ಹನ್ನೆರಡು ನಗರಗಳಲ್ಲಿ ಕ್ಲಿನಿಕ್ ತೆರೆದಿದ್ದೆ, ಒತ್ತಡಗಳಿಂದಾಗಿ ಈಗ ಇದೊಂದೆ ಕ್ಲಿನಿಕ್ ನಡೆಸುತ್ತಿದ್ದು ರಾಜ್ಯ ದ ರೋಗಿಗಳಲ್ಲದೆ ಹೊರ ರಾಜ್ಯ ಮತ್ತು ಅನಿವಾಸಿ ಭಾರತೀಯರು ಸಹ ಪೋನ್ ಮೂಲಕ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
*ವೀಡಿಯೋ ವೈರಲ್*
ಹತ್ತಾರು ಆಸ್ಪತ್ರೆಗಳಿಗೆ ಎಡತಾಕಿ ಹತ್ತಾರು ಲಕ್ಷ ಖರ್ಚು ಮಾಡಿ ವಾಸಿಯಾಗದೇ ಇದ್ದಂತಹ ರೋಗಿಗಳನ್ನು ಆಯುರ್ವೇದ ದಿಂದ ಗುಣಪಡಿಸಿದ ನಂತರ ರೋಗಿ, ರೋಗ ಮತ್ತು ಔಷಧ ಮಾಹಿತಿಯನ್ನು ವೀಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಹಂಚಿಕೊಳ್ಳುತ್ತಿದ್ದೇನೆ, ಅಂದರೆ ಸಾಮಾಜಿಕ ಜಾಲತಾಣದ ಮೂಲಕ ನೋಡಿಕೊಂಡು ರೋಗಿಗಳು ಬರುತ್ತಿದ್ದಾರೆ.
ಕೀಲು ತಿರುಗಿಸುವುದಕ್ಕೆ (ದೇಹದ ಎಲ್ಲಾ ಭಾಗಗಳ ನಟ್ಟಿಗೆ ತೆಗೆಯುವುದು) ೩೦೦ ರೂಪಾಯಿ ತೆಗೆದುಕೊಳ್ಳುವುದು ಬಿಟ್ಟರೆ ಮಿಕ್ಕೆಲ್ಲಾ ಖಾಯಿಲೆಗಳಿಗೆ ಔಷಧದ ಬೆಲೆಯನ್ನು ಮಾತ್ರ ತೆಗೆದುಕೊಳ್ಳುತ್ತೇವೆ.
ಪ್ರತಿ ವ್ಯಕ್ತಿಗೆ ಔಷಧ ಕೊಡುವಾಗಲೂ ಔಷಧಗಳನ್ನು ಮುಖದ ಮುಂಭಾಗ ಕೈಯಲ್ಲಿ ಹಿಡಿದು ದೇವರನ್ನು ಪ್ರಾರ್ಥಿಸಿಯೇ ಕೊಡುವುದಾಗಿ ತಿಳಿಸಿದರು.
*ಸಹಸ್ರಾರು ಉಪನ್ಯಾಸಗಳು*
ಇಪ್ಪತ್ನಾಲ್ಕು ವರ್ಷಗಳಿಂದ ಕಳೆದ ಮೂರು ವರ್ಷಗಳ ತನಕ ಆಯುರ್ವೇದ ವೈದ್ಯರು, ಪಾರಂಪರಿಕ ವೈದ್ಯರು, ನಾಟಿ ಮತ್ತು ಅಳಲೆಕಾಯಿ ಪಂಡಿತರು, ಮಹಿಳಾ ಸಂಘಟನೆಗಳು ರೈತ ಸಭೆಗಳು ಸೇರಿದಂತೆ ಸೋಲಿಗರ ಆಹಾರ ಮತ್ತು ಕೃಷಿ ಪದ್ದತಿ, ಸಾವಯವ ಕೃಷಿ ಮತ್ತು ಶಾಲಾಕಾಲೇಜುಗಳಲ್ಲಿ ಸಹಸ್ರಾರು ಉಪನ್ಯಾಸಗಳನ್ನು ನೀಡಿದ್ದು ಒತ್ತಡ ಹಾಗೂ ಸಮಯದ ಅಭಾವದಿಂದ ಇತ್ತೀಚಿಗೆ ಉಪನ್ಯಾಸ ನೀಡಲು ಆಗುತ್ತಿಲ್ಲ.
ಆದರೂ ಮುಂದಿನ ಪೀಳಿಗೆ ಮತ್ತು ದೇಶದ ಅತ್ಯಮೂಲಾಗ್ರ ಔಷಧ ಸಸ್ಯಗಳ ಉಳಿವಿಗಾಗಿ ತಿಳುವಳಿಕೆ ನೀಡಲು ಬದ್ದನಾಗಿದ್ದೇನೆ ಎಂದರು.
ರೋಗಿಗಳು ದೂರದೂರುಗಳಿಂದ ಬರುವುದರಿಂದ ಮೊದಲೇ ನೋಂದಾಯಿಸಿಕೊಂಡು ಬರುವುದು ಒಳ್ಳೆಯದು. ಬುಧವಾರ ಮತ್ತು ಶನಿವಾರ ಮಧ್ಯಾಹ್ನ ಒಂದು ಗಂಟೆಯವರೆಗೆ ಮಿಕ್ಕ ದಿನಗಳಲ್ಲಿ ಸಂಜೆ ನಾಲ್ಕು ಗಂಟೆಯವರೆಗೆ ಚಿಕಿತ್ಸಾಲಯ ತೆರೆದಿದ್ದು ಭಾನುವಾರ ರಜಾ ದಿನ ವಾಗಿರುತ್ತದೆ.
ವಿಳಾಸ;
*ಡಾ ಮಹೇಶ್ ಮೂರ್ತಿ.*
*ಉಗಮ ಆಯುರ್ವೇದ ಚಿಕಿತ್ಸಾಲಯ.*
*ಹನುಮಂತ ನಗರ. ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ. ಬಾಲಾಜಿ ಕಲ್ಯಾಣ ಮಂಟಪದ ಹತ್ತಿರ. ಚನ್ನಪಟ್ಟಣ. ರಾಮನಗರ ಜಿಲ್ಲೆ.*
*ಮೊ:7975322174.*
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in health »
ವ್ಯವಹಾರಕ್ಕಾಗಿ ಆಸ್ಪತ್ರೆಯಲ್ಲಾ, ಸೇವೆಗಾಗಿ ನಮ್ಮ ಆಸ್ಪತ್ರೆ. ಕಾಂಗರೂ ಆಸ್ಪತ್ರೆಯ ಸಂಸ್ಥಾಪಕ ಡಾ ಶೇಖರ್ ಸುಬ್ಬಯ್ಯ
ರಾಮನಗರ: ನಾವು ಹಣಕ್ಕಾಗಿ ಆಸ್ಪತ್ರೆ ನಡೆಸುವುದಿಲ್ಲ, ಇದೊಂದು ಸೇವೆ ಎಂದು ಪರಿಗಣಿಸಿ ಆಸ್ಪತ್ರೆ ನಡೆಸುತ್ತಿದ್ದೇವೆ. ಬೆಂಗಳೂರು ಮೈಸೂರು ಸೇರಿದಂತೆ ನಾಲ್ಕು
೪೬ ವರ್ಷದ ಮಹಿಳೆಯ ಹೊಟ್ಟೆಯಲ್ಲಿದ್ದ ೧೦ ಕಿಲೋ ಕ್ಯಾನ್ಸರ್ ಗಡ್ಡೆ ಹೊರತೆಗೆದ ಬಾಲು ಆಸ್ಪತ್ರೆಯ ವೈದ್ಯರು
ಚನ್ನಪಟ್ಟಣ: ತಾಲ್ಲೂಕಿನ ಗ್ರಾಮವೊಂದರ ೪೬ ವರ್ಷದ ಮಹಿಳೆಯೊಬ್ಬರ ಗರ್ಭ (ಅಂಡಾಶಯ) ದಲ್ಲಿದ್ದ ಬರೋಬ್ಬರಿ ೧೦ ಕಿಲೋ ೩೦೦ ಗ್ರಾಂ ತೂಕದ ಕ್ಯಾನ್ಸರ್ ಗಡ್ಡೆ ಯನ್ನ
ಹೊಂಗನೂರು, ಕೋಡಂಬಳ್ಳಿ ಗ್ರಾಮದಲ್ಲಿ ಪರವಾನಗಿ ಇಲ್ಲದ ಖಾಸಗಿ ಆಸ್ಪತ್ರೆಗಳಿಗೆ ಬೀಗ ಜಡಿದ ಟಿಹೆಚ್ಓ
ಚನ್ನಪಟ್ಟಣ: ತಾಲ್ಲೂಕಿನ ಹೊಂಗನೂರು ಗ್ರಾಮದಲ್ಲಿ ಗೋಪಿ ಕ್ಲಿನಿಕ್ ಎಂಬ ಖಾಸಗಿ ಆಸ್ಪತ್ರೆ ಇದ್ದು, ಗೋಪಿ ಎಂಬುವವರು ವೈದ್ಯರಾಗಿ ಸೇವೆ ನಿರ್ವಹಿಸುತ್ತಿದ್ದಾರ
ಉತ್ತಮ ಆರೋಗ್ಯಕ್ಕೆ ಆಯುರ್ವೇದವೇ ದಿವ್ಯ ಔಷಧ ಡಾ ಸಹನಾ ಕೃಷ್ಣ
ಚನ್ನಪಟ್ಟಣ: ಪುರಾಣೇತೀಹಾಸದಿಂದಲೂ ಪ್ರಖ್ಯಾತವಾಗಿರುವ ಔಷಧ ಎಂದರೆ ಅದು ಆಯುರ್ವೇದ ಔಷಧ, ಜಗತ್ತಿನ ಅತ್ಯಂತ ಪ್ರಾಚೀನ ಔಷಧವೂ ಹೌದು, ನಮ್ಮ ಪ್ರಕೃತಿ ಹೇಗೆ ಸಮ
ದೊಡ್ಡಮಳೂರು ಗ್ರಾಮದಲ್ಲಿ ದೀರ್ಘಾಯು ವೆಲ್ ನೆಸ್ ಆಯುರ್ವೇದ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ಶಿಬಿರ
ಚನ್ನಪಟ್ಟಣ: ತಾಲ್ಲೂಕಿನ ದೊಡ್ಡಮಳೂರು ಗ್ರಾಮದ ದೇವಸ್ಥಾನದ ಬೀದಿಯಲ್ಲಿರುವ ದೀರ್ಘಾಯು ವೆಲ್ ನೆಸ್ ಸೆಂಟರ್ ಇವರ ವತಿಯಿಂದ ನಾಳೆ (ಭಾನುವಾರ) ಬೆಳಿ
ಕ್ರಿಯೇಟಿವ್ ಅಸೋಸಿಯೇಷನ್ ಹಾಗೂ ಸೊಸೈಟಿ ವತಿಯಿಂದ ಶನಿವಾರ ನಗರದಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ
ಚನ್ನಪಟ್ಟಣ : ತಾಲ್ಲೂಕಿನಿಂದ ಬೆಂಗಳೂರಿಗೆ ಹೋಗಿ, ಜೀವನ ಕಟ್ಟಿಕೊಂಡು ತಾಲ್ಲೂಕಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲದಿಂದ ಕ್ರಿಯೇಟಿವ್ ಅಸೋಸಿಯೇಷನ್ ಮತ್ತ
ದುಶ್ಚಟದಿಂದ ದೂರವಿರಿ, ಆರೋಗ್ಯ ಕಾಪಾಡಿಕೊಳ್ಳಿ : ಪ್ರತಿಮಾ ಕೆ.ವಿ
ರಾಮನಗರ, ಜೂ. 17: ಇತ್ತೀಚೆಗೆ ಅತಿ ಹೆಚ್ಚು ಹಲವಾರು ದುಶ್ಚಟಗಳು ಮನುಷ್ಯನನ್ನು ಆವರಸಿಕೊಂಡಿವೆ. ಇದರಿಂದಾಗಿ ನೂರಾರು ಖಾಯಿಲೆಗಳು ದೇಹ ಹೊಕ್ಕು ನಿತ್ಯ ಸಾ
ಫ್ಲೋರೋಸಿಸ್ ನಿಯಂತ್ರಿಸಿ ಉತ್ತಮ ಜೀವನ ನಡೆಸುವಂತೆ ಸಲಹೆ - ಡಾ.ಅನಿಲ್
ರಾಮನಗರ, ಜೂ. 15: ಫ್ಲೋರೈಡ್ ನಮ್ಮ ದೇಹಕ್ಕೆ ಬೇಕಾದ ಒಂದು ಖನಿಜಾಂಶ ನಾವು ಸೇವಿಸುವ ಆಹಾರ ಮತ್ತು ಕುಡಿಯುವ ನೀರಿನಲ್ಲಿ ಅವಶ್ಯಕತೆಗಿಂತ ಹೆಚ್ಚು ಫ್ಲೋರೈಡ
ಆರೋಗ್ಯ ಕೇಂದ್ರದಲ್ಲಿ ದೊರೆಯುವ ಸೇವೆಗಳನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದ ಬಿ.ಎಸ್.ಗಂಗಾಧರ್.
ರಾಮನಗರ: ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕೆ.ಕರೇನಹಳ್ಳಿ ಇವರ ಸಂಯುಕ್ತ ಆಶ್ರ
ಶ್ರೀಗಿರಿಪುರ ಗ್ರಾಪಂ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆದ ಆರೋಗ್ಯ ತಪಾಸಣಾ ಶಿಬಿರ
ರಾಮನಗರ, ಜೂ. 07: ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾತ್ಮಗಾಂಧಿ ನರೇಗಾ ಉದ್ಯೋಗ ಖಾತ್ರಿ ಯೋಜನೆ ಹಾಗೂ ಕುದೂರು ಪ್ರ
ಪ್ರತಿಕ್ರಿಯೆಗಳು