ಮಹಿಳಾ ಮತದಾರರ ಅನುಪಾತ ಕಳೆದ 5 ವರ್ಷಗಳಲ್ಲಿ ಅತ್ಯಂತ ಹೆಚ್ಚು
ಬೆಂಗಳೂರು : ಮಾರತ್ಹಳ್ಳಿಯ ಬರ್ಥ್ರೈಟ್ ಬೈ ರೈನ್ಬೋ ಚಿಲ್ಡ್ರನ್ಸ್ ಹಾಸ್ಪಿಟಲ್ ಆಯೋಜಿಸಿದ್ದ ವಾಕಥಾನ್ಗೆ ಮುಖ್ಯ ಚುನಾವಣಾಧಿಕಾರಿ ಶ್ರೀ ಸಂಜೀವ್ ಕುಮಾರ್ ಚಾಲನೆ ನೀಡಿದರು. ಈ ವಾಕಥಾನ್ ಬೆಂಗಳೂರಿನಲ್ಲಿ ಸುರಕ್ಷಿತ ಮತ್ತು ಭದ್ರತೆಯ ಪರಿಸರವನ್ನು ಮಹಿಳೆಯರಿಗೆ ಸೃಷ್ಟಿಸುವ ಕುರಿತು ಅರಿವನ್ನು ಉಂಟು ಮಾಡಲು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸಂಜೀವ್ ಕುಮಾರ್, ಮುಂದಿನ ವಿಧಾನಸಭೆಯ ಚುನಾವಣೆಗೆ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಆಗ
ಮನುವಾದಿ ಕಾಂಗ್ರೆಸ್-ಬಿಜೆಪಿಗಳ ಅಪಪ್ರಚಾರಕ್ಕೆ ಕವಿಗೊಡದೆ ಗೆಲ್ಲುವ ಕಡೆ ಗಮನ ಹರಿಸೋಣ
BSP-JDS ಮೈತ್ರಿಯ ಬಗ್ಗೆ ಕಾಂಗ್ರೆಸ್ಸಿಗರು ಹಾಗು ಬಿಜೆಪಿಗಳು ಬಹಳ ತಲೆಕೆಡಿಸಿಕೊಂಡಿವೆ. ತಾವು ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲಾಗದ ಸುಳಿವು ಸಿಕ್ಕಿ ಅಪಪ್ರಚಾರದಲ್ಲಿ ನಿರತರವಾಗಿವೆ. ಅದರಲ್ಲಿ ಬಹಳ ಮುಖ್ಯವಾದವುಗಳೆಂದರೆ 1. ದೇವೇಗೌಡರು ಎಂತೆಂಥವರಿಗೆ ಮೋಸ ಮಾಡಿದರು? ಇನ್ನು ಬಿಎಸ್ಪಿಯವರಿಗೆ ಮೋಸ ಮಾಡುವುದಿಲ್ಲವೇ...? 2. ದೇವೇಗೌಡರು ತಮ್ಮ ಸ್ವಂತ ಜಿಲ್ಲೆ ಹಾಸನದಲ್ಲಿ ಬಿಎಸ್ಪಿಗೆ ಒಂದು ಕ್ಷೇತ್ರ ಬಿಟ್ಟುಕೊಡಬಹುದಿತ್ತಲ್ಲವೇ..? ಅಲ್ಲಿ ಬಿಎಸ್ಪಿ ಅಭ್ಯರ್ಥಿಯನ
ರಾಜ್ಯ ಕಂಡ ಅಪರೂಪದ ಜ್ಯಾತ್ಯತೀತ ರಾಜಕಾರಣೀ ಪುಟ್ಟಣ್ಣಯ್ಯ
ಮಂಡ್ಯ : ರಾಜ್ಯದಲ್ಲಿ ಹಲವಾರು ರಾಜಕೀಯ ನಾಯಕರು ಇದ್ದಾರೆ ಅದರೆ ಪುಟ್ಟಣ್ಣಯ್ಯ ಅವರು ಕರ್ನಾಟಕ ರಾಜ್ಯ ಕಂಡ ಅಪರೂಪದ ಜ್ಯಾತ್ಯತೀತ ರಾಜಕಾರಣಿ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹೇಳಿದರು ಅವರು ಇಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿವಗಂತ ಕೆ.ಎಸ್.ಪುಟ್ಟಣ್ಣಯ್ಯ ಇವರ ಸ್ಮರಣಾರ್ಥ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಆಯೋಜಿಸಿರುವ ಹಸಿರು ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪುಟ್ಟಣ್ಣಯ್ಯ ಅವರು ದೈಹಿಕವಾಗಿ
ಎಲ್ಲಿ ಸ್ತ್ರೀಯರನ್ನು ಪೂಜಿಸುತ್ತಾರೂ ಅಲ್ಲಿ ದೇವರು ನೆಲೆಸುತ್ತಾರೆ: ಬಿ.ಎಸ್ ಶ್ವೇತಾ ದೇವರಾಜು
ಹಾಸನ : ಮಹಿಳೆ ಅಬಲೆಯಲ್ಲ ಸಬಲೆ, ಎಲ್ಲಿ ಸ್ತ್ರೀಯರನ್ನು ಪೂಜಿಸುತ್ತಾರೂ ಅಲ್ಲಿ ದೇವರು ನೆಲೆಸುತ್ತಾರೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಬಿ.ಎಸ್ ಶ್ವೇತಾ ದೇವರಾಜು ಅವರು ಹೇಳಿದರು. ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಇಲಾಖೆ, ಜಿಲ್ಲೆಯ ಸ್ತ್ರೀ ಶಕ್ತಿ ಒಕ್ಕೂಟ ಹಾಗೂ ವಿವಿಧ ಮಹಿಳಾಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅ
ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚು ಆಚರಣೆಗೆ ತರಬೇಕಿದೆ: ಡಾ|| ಟಿ. ರಂಗಸ್ವಾಮಿ
ಹಾಸನ : ನಮ್ಮ ಪೂರ್ವಿಕರು ಹಬ್ಬ ಹರಿದಿನಗಳಲ್ಲಿ ಹಳ್ಳಿ ಸೊಗಡು ತುಂಬಿರುವಂತಹ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು ಇವುಗಳನ್ನು ನೋಡಿ ಆನಂದದಿಂದ ಮೈ ಮರೆಯುತ್ತಿದ್ದೆವು, ಇಂತಹ ಮನೋರಮಣಿಯ ದೃಶ್ಯಗಳನ್ನು ನಮ್ಮ ಮುಂದಿನ ಪೀಳಿಗೆಯು ಸಹ ನೋಡಿ ಆನಂದಿಸಲು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚು ಆಚರಣೆಗೆ ತರಬೇಕಿದೆ ಎಂದು ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲರಾದ ಡಾ|| ಟಿ. ರಂಗಸ್ವಾಮಿ ಅವರು ಹೇಳಿದರು. ಜಿಲ್ಲಾಡಳಿತ, ಕನ್ನಡ ಮತ್
ಆಚಾರ್ಯ ಶ್ರೀ ಚಂದ್ರಪ್ರಭಾ ಸಾಗರ ವiಹಾರಾಜರಿಗೆ ‘ಸಂತವಾತ್ಸಲ್ಯ’ ಬಿರುದು
ಶ್ರವಣಬೆಳಗೊಳ: ಆಚಾರ್ಯ ಶ್ರೀ ಚಂದ್ರಪ್ರಭಾ ಸಾಗರ ವiಹಾರಾಜರಿಗೆ ಕ್ಷೇತ್ರದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿಯವರು ‘ಸಂತವಾತ್ಸಲ್ಯ’ ಬಿರುದು ನೀಡಿ ಗೌರವಿಸಿದರು. ಜೈನಕಾಶಿ ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಕಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಂಡು ಮಂಗಳ ವಿಹಾರ ಆರಂಭಿಸಿದ ಚಂದ್ರಪ್ರಭಸಾಗರ ಮಹಾರಾಜರಿಗೆ ಸನ್ಮಾನಿಸಿ ಮಾತನಾಡುತ್ತಾ ಶ್ರವಣಬೆಳಗೊಳದಲ್ಲಿಯೇ 2 ಚಾತುರ್ಮಾಸಗಳನ್ನು ಕಳೆದಿದ್ದು. ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ದೇಶದಾದ್ಯಂತ
ಹತ್ತು ಸಾವಿರ ಉದ್ಯೋಗ ಅವಕಾಶ
ಮೈಸೂರು : ಮೈಸೂರು ವಿಭಾಗ ಮಟ್ಟದ ಉದ್ಯೋಗ ಮೇಳದಲ್ಲಿ 10 ಸಾವಿರ ಉದ್ಯೋಗಳನ್ನು 150 ಕ್ಕೂ ವಿವಿಧ ಅಧಿಕ ಕಂಪನಿಗಳಿಂದ ಉದ್ಯೋಗಾಂಕ್ಷಿಗಳಿಗೆ ಉದ್ಯೋಗ ದೊರೆಯಲಿದೆ. ಉದ್ಯೋಗ ಸಿಗದವರು ಚಿಂತಿಸಬೇಕಿಲ್ಲ ಅವರಿಗೆ ಇನ್ನೂ ಉತ್ತಮ ಉದ್ಯೋಗ ಪಡೆಯಲು ಅವಕಾಶ ಲಭಿಸುವುದು ಎಂದು ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವೆ ಎಂ.ಸಿ.ಮೋಹನಕುಮಾರಿ ಉ|| ಗೀತಾ ಮಹದೇವಪ್ರಸಾದ್ ಅವರು ಹೇಳಿದರು. ಮಹಾರಾಜು ಕಾಲೇಜು ಮೈದಾನದಲಿ ಶನಿವಾರ ಕಾರ್ಮಿಕ ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋ
ಸಮಸ್ಯೆಗಳ ಪರಿಹಾರಕ್ಕೆ ಗಾಂಧಿ ಮಾರ್ಗ ಅಗತ್ಯ: ಪ್ರೊ.ಜಿ.ಬಿ. ಶಿವರಾಜು
ಮೈಸೂರು : ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಗಾಂಧೀಜಿ ಅವರ ಶಾಂತಿ ಮತ್ತು ಅಹಿಂಸೆ ಮಾರ್ಗವೇ ಸರಿಯಾದ ಮಾರ್ಗ ಎಂದು ಕರ್ನಾಟಕ ಸ್ಮಾರಕ ನಿಧಿ ಉಪಾಧ್ಯಕ್ಷ ಪ್ರೊ.ಜಿ.ಬಿ. ಶಿವರಾಜು ಅವರು ತಿಳಿಸಿದರು. ಕಿರು ರಂಗಮಂದಿರದಲ್ಲಿ ಆಯೋಜಿಸಿದ್ದ ಗಾಂಧಿ ಧ್ವನಿ ಮತ್ತು ಬೆಳಕು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಹಳಷ್ಟು ರಾಷ್ಟ್ರಗಳ ಮಕ್ಕಳು ಗಾಂಧಿ ವಿಚಾರಗಳನ್ನು ತಿಳಿಯಲು ವೆಬಸೈಟ್ನಲ್ಲಿ ಹುಡುಕುತ್ತಾರೆ. ನೆಮ್ಮದಿಯ ಬದುಕು ನಡೆಸಲು ಯುವಜನತೆಯು ಗಾಂಧೀಜಿಯ ಬಗ್ಗೆ ತಿಳಿ
10 ನಿಮಿಷಗಳಲ್ಲಿ25 ಚಪಾತಿ ಸಿದ್ಧತೆ
ಬೆಂಗಳೂರು : ಬನಶಂಕರಿಯ ಸಾಗರ್ ಆಸ್ಪತ್ರೆ ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ವಿನೂತನ ಸ್ಪರ್ಧೆಗಳನ್ನು ಆಯೋಜಿಸಿತ್ತು. ಮಹಿಳೆಯರಿಗೆ ದಿನವೂ ಅಡುಗೆಮನೆಯಲ್ಲಿ ಅಡುಗೆ ಸಿದ್ಧಪಡಿಸುವುದು ಸಹಜವಾದ ಕೆಲಸ. ಆದರೆ ಅವರಿಗೆ ಬೆಂಕಿ ಇಲ್ಲದೆ ಅಡುಗೆ ಸಿದ್ಧಪಡಿಸುವ ಸವಾಲು ನೀಡಲಾಯಿತು. ಬೆಂಕಿರಹಿತ ಅಡುಗೆ ಮಾಡಲು ಉತ್ತೇಜಿಸಿದ್ದರಿಂದ ಭಾಗವಹಿಸಿದ ಮಹಿಳೆಯರು ವಿನೂತನ ರೀತಿಯಲ್ಲಿ ಆಲೋಚಿಸಲು ಅವಕಾಶ ನೀಡಿತು. ಇತರೆ ವಿನೂತನ ಸ್ಪರ್ಧೆಗಳಲ್ಲಿ ಹೇರ್ ಸ್ಟೈಲಿಂಗ್ ಕೂಡಾ ಒಳಗೊಂಡಿದ್ದ
ಕನ್ನಡ ನಾಡಿನ ಅಸ್ಮಿತೆಗಾಗಿ ಪ್ರತ್ಯೇಕ ನಾಡಧ್ವಜ
ಬೆಂಗಳೂರು : ಕನ್ನಡಿಗರ ಆಶಯ, ಅಭಿಪ್ರಾಯಕ್ಕೆ ಧ್ವನಿಯಾಗುವ ಮೂಲಕ ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜ ಬೇಕು ಎಂಬ ಸರ್ಕಾರದ ಐತಿಹಾಸಿಕ ನಿರ್ಣಯಕ್ಕೆ ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಹಿರಿಯ ಸಾಹಿತಿಗಳ ಒಕ್ಕೊರಲ ಬೆಂಬಲ ದೊರೆತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸರ್ಕಾರದ ರಚನೆ ಮಾಡಿದ್ದ ಸಮಿತಿ ಸಿದ್ಧಪಡಿಸಿರುವ ನಾಡಧ್ವಜದ ವಿನ್ಯಾಸದ ಬಗ್ಗೆ ಚರ್ಚಿಸಲು ಗೃಹ ಕಚೇರಿ ಕೃಷ್ಣ