ಹೋಳಿ ಸಂಭ್ರಮದಲ್ಲಿ ಕಣ್ಣುಗಳನ್ನು ರಕ್ಷಿಸಿಕೊಳ್ಳಿ
ಹೋಳಿ ಹಬ್ಬದಲ್ಲಿ ಬಂಧುಮಿತ್ರರೊಂದಿಗೆ ಬಣ್ಣ ಎರಚಿ ಸಂಭ್ರಮಿಸುವುದು ಹಬ್ಬದ ವಿಶೇಷ. ಹೋಳಿ ಹಬ್ಬ ಎಂದರೆ ಹೊಳೆಯುವ ಬಣ್ಣಗಳ ಹಬ್ಬವಾಗಿದ್ದು ಮದರಂಗಿ, ಮಾರ್ಗೋಸಾ, ಚೆಂಡು ಹೂವು, ಅರಿಶಿನ, ಕುಂಕುಮ ಮತ್ತು ರಕ್ತಚಂದನದಿಂದ ತಯಾರಿಸಿದ ಗುಲಾಲ್ ಬಣ್ಣಗಳ ಬಳಕೆ ಐತಿಹಾಸಿಕವಾಗಿ ಬಂದಿದೆ. ಆದರೆ ಕಾಲ ಬದಲಾದಂತೆ ರಾಸಾಯನಿಕ ಬಣ್ಣಗಳು ಮತ್ತು ಸಿಂಥೆಟಿಕ್ ಬಣ್ಣಗಳು ಮಾರುಕಟ್ಟೆಯನ್ನು ಪ್ರವೇಶಿಸಿವೆ. ಇವುಗಳಲ್ಲಿ ಅತ್ಯಂತ ವಿಷಕಾರಿ ಅಂಶಗಳಿದ್ದು ಮಾನವ ದೇಹಕ್ಕೆ ಹಾನಿಯುಂಟು ಮಾಡಬಲ್ಲವು. ಆದ್ದರಿಂದ ಹೋಳಿಯಲ್ಲಿ ಬಣ್ಣಗಳನ್ನು ಬಳಸುವಾಗ ಎಚ್ಚರಿಕೆ ಅಗತ್ಯ. ಬಹಳಷ್ಟು ಆಧುನಿಕ ಬಣ್ಣಗಳು ರಾಸಾಯನಿಕ ಬಣ್ಣಗಳಾಗಿದ್ದು ಚರ್ಮ ಅಲರ್ಜಿಯನ್ನು ಉಂಟು ಮಾಡಬಲ್ಲದು. ಚರ್ಮದ ಬಣ್ಣಗಳು ಉರಿ, ದದ್ದು, ಶುಷ್ಕತೆ ಮತ್ತು ಕಿರಿಕಿರಿ ಉಂಟು ಮಾಡಬಲ್ಲವು. ಕಣ್ಣುಗಳು ಅತ್ಯಂತ ಬೇಗನೆ ಹಾನಿಗೆ ಒಳಗಾಗುತ್ತವೆ. ಆದ್ದರಿಂದ ರಕ್ಷಣೆ ಅಗತ್ಯ. ಹಾನಿಕಾರಕ ಬಣ್ಣಗಳು ಕಣ್ಣಿಗೆ ಬಿದ್ದು ಕಣ್ಣಿನ ಸೋಂಕು ಉಂಟು ಮಾಡಬಹುದು. ಕಣ್ಣುಗಳು ದೇಹದ ಅತ್ಯಂತ ಸೂಕ್ಷ್ಮ ಅಂಗಗಳಲ್ಲಿ ಪ್ರಮುಖವಾದವು. ರಾಸಾಯನಿಕ ಬಣ್ಣಗಳಲ್ಲಿರುವ ಸೀಸದಿಂದ ಅಲರ್ಜಿ, ಕಂಜಕ್ಟಿವಿಟಿಸ್, ರಾಸಾಯನಿಕ ಸುಡುವಿಕೆ, ಕಾರ್ನಿಯಾ ಘರ್ಷಣೆ ಅಥವಾ ಕಣ್ಣಿಗೆ ಗಾಯ ಉಂಟು ಮಾಡಬಲ್ಲದು.
ಹೋಳಿಯ ಬಣ್ಣಗಳು ಹಲವು ಬಗೆಯ ಸಮಸ್ಯೆಗಳನ್ನು ಉಂಟು ಮಾಡಬಲ್ಲವು
ತಾತ್ಕಾಲಿಕ ಅಂಧತ್ವ:
ಬಣ್ಣ ಎರಚುವಾಗ ಅದು ಕಣ್ಣುಗಳಿಗೆ ಪ್ರವೇಶಿಸಿ ದೃಷ್ಟಿಯನ್ನು ತಾತ್ಕಾಲಿಕವಾಗಿ ಮಂದಗೊಳಿಸಬಹುದು. ರೆಟಿನಾದ ಮೇಲೆ ಕಂದು ಪೊರೆ ಕಂಡುಬಂದು ಅದು ದೃಷ್ಟಿಯನ್ನು ನಿರ್ಬಂಧಿಸಬಹುದು. ನೀರಿನ ಬಲೂನ್ಗಳಲ್ಲಿ ಆಡುವವರು ಎಚ್ಚರಿಕೆ ವಹಿಸಬೇಕು. ಏಕೆಂದರೆ ಅವು ನೇರವಾಗಿ ಕಣ್ಣಿಗೆ ಹೊಡೆಯಬಹುದು ಮತ್ತು ಗಂಭೀರ ಕಣ್ಣಿನ ಗಾಯದಿಂದ ಶಾಶ್ವತ ಅಂಧತ್ವ ಉಂಟಾಗಬಹುದು.
ಕಾರ್ನಿಯಾ ಗೀಚುಗಳು:
ಕಾರ್ನಿಯಾ ಅತ್ಯಂತ ತೆಳುವಾದ, ಪದರವಾಗಿದ್ದು ಅಕ್ಷಿಪಟಲವನ್ನು ರಕ್ಷಿಸುತ್ತದೆ. ಹಾನಿಕಾರ ಬಣ್ಣ ಕಣ್ಣಿನ ರೆಪ್ಪೆಯ ಒಳಗಡೆ ಸೇರಿಕೊಳ್ಳಬಹುದು. ಈ ಕಣಗಳು ಕಣ್ಣಿನ ಮೇಲ್ಮೈಗೆ ಹಾನಿಯುಂಟು ಮಾಡಿ ಸವೆತ ಉಂಟು ಮಾಡಬಲ್ಲವು.
ಕಂಜಕ್ಟಿವಿಟಿಸ್:
ಕಣ್ಣಿನ ರೆಪ್ಪೆಯ ಒಳಪದರದ ತೆಳು ಜೀವಕೋಶದ ಉರಿಯೂತ ಕಂಜಕ್ಟಿವಿಟಿಸ್ ಎನ್ನಲಾಗುತ್ತದೆ. ಈ ಪಾರದರ್ಶಕ ಪದರ ನಿಮ್ಮ ಕಣ್ಣುಗಳ ಬಿಳಿ ಭಾಗವನ್ನು ಮುಚ್ಚುತ್ತದೆ ಹೋಳಿ ಬಣ್ಣಗಳಿಂದ ನಿಮ್ಮ ಕಣ್ಣುಗಳು ಉರಿಯೂತಕ್ಕೆ ಒಳಗಾಗುತ್ತವೆ.
ಕಣ್ಣಿನ ಅಲರ್ಜಿಗಳು:
ಹೋಳಿ ಬಣ್ಣಗಳು ಅಲರ್ಜಿ ಪರಿಣಾಮ ಉಂಟು ಮಾಡುತ್ತವೆ, ಇದರಿಂದ ಕೆಂಪಾಗುವುದು, ಊತ ಬರುವುದು ಮತ್ತು ಕಣ್ಣಿನಲ್ಲಿ ನೀರು ಸೋರುವುದು ಉಂಟಾಗುತ್ತದೆ.
ಐರಿಸ್ನ ಉರಿಯೂತ:
ಹೋಳಿ ಆಡುವಾಗ ಬಣ್ಣಗಳು ನೇರ ಅಕ್ಷಿಪಟಲಕ್ಕೆ ಬಿದ್ದು ಗಂಭೀರ ಉರಿಯೂತಕ್ಕೆ ಕಾರಣವಾಗಬಲ್ಲವು. ಕಾಂಟಾಕ್ಟ್ ಲೆನ್ಸ್ ಬಳಸುವವರಿಗೆ ಇದು ಮತ್ತಷ್ಟು ಸಮಸ್ಯಾತ್ಮಕವಾಗಿದ್ದು ರಾಸಾಯನಿಕಗಳು ಲೆನ್ಸ್ ಸೇರಿ ಲೆನ್ಸ್ ಮತ್ತು ಕಣ್ಣಿನ ಮೇಲ್ಮೈ ನಡುವೆ ಸಿಲುಕಿಕೊಳ್ಳುತ್ತವೆ.
ಹೋಳಿ ಹಬ್ಬದಲ್ಲಿ ಕಣ್ಣು ರಕ್ಷಿಸಿಕೊಳ್ಳಲು ಹೀಗೆ ಮಾಡಿ:
• ಕನ್ನಡಕಗಳು ಅಥವಾ ಸನ್ಗ್ಲಾಸ್ ಧರಿಸುವ ಮೂಲಕ ಕಣ್ಣುಗಳನ್ನು ರಕ್ಷಿಸಿಕೊಳ್ಳಿ.
• ಹೋಳಿ ಆಡುವಾಗ ನೈಸರ್ಗಿಕ ಬಣ್ಣಗಳನ್ನು ಬಳಸಿ
• ನಿಮ್ಮ ಕಣ್ಣ ಸುತ್ತಲೂ ಕೊಬ್ಬರಿ ಎಣ್ಣೆ ಹಚ್ಚುವ ಮೂಲಕ ನೇರ ರಾಸಾಯನಿಕಗಳು ಕಣ್ಣಿನ ಸಂಪರ್ಕಕ್ಕೆ
• ಬಾರದಂತೆ ತಡೆಯಿರಿ
ಎಚ್ಚರ ವಹಿಸಿ:
• ಕಾಂಟ್ಯಾಕ್ಟ್ ಲೆನ್ಸ್ ಧರಿಸದಿರಿ
• ಸಿಂಥೆಟಿಕ್ ಬಣ್ಣಗಳನ್ನು ಬಳಸಬೇಡಿ
• ಕಣ್ಣುಗಳ ಬಳಿ ಬಣ್ಣ ಎರಚುವುದನ್ನು ತಡೆಯಿರಿ
• ಆಡುವಾಗ ಕಣ್ಣುಗಳನ್ನು ಉಜ್ಜಬೇಡಿ
ಕಣ್ಣಿಗೆ ಹಾನಿಯಾದರೆ:
ಅಕಸ್ಮಾತ್ತಾಗಿ ಬಣ್ಣ ನಿಮ್ಮ ಕಣ್ಣು ಪ್ರವೇಶಿಸಿದರೆ ನಿಮ್ಮ ಕಣ್ಣುಗಳನ್ನು ಸ್ವಚ್ಛ ನೀರಿನಿಂದ ಕೂಡಲೇ ತೊಳೆಯಿರಿ. ಉರಿ ಹಾಗೆಯೇ ಉಳಿದರೆ ಕಣ್ಣಿನ ವೈದ್ಯರನ್ನು ಸಂಪರ್ಕಿಸಿ.
ವಾಟರ್ ಗನ್, ವಾಟರ್ ಬಲೂನ್ ಇತ್ಯಾದಿಗಳಿಂದ ಗಂಭೀರ ಗಾಯವಾದರೆ ತುರ್ತು ನೇತ್ರ ಚಿಕಿತ್ಸಾ ಸೇವೆಗಳಿಗೆ ಕರೆ ಮಾಡಿ.
ಸುರಕ್ಷಿತ ಮತ್ತು ಆನಂದದಾಯಕ ಹೋಳಿ ನಿಮ್ಮದಾಗಲಿ.
ಲೇಖನ : -ಡಾ.ಸೊನಾಲಿ ಮುರಳೀಧರ್
(ಡಾ.ಸೊನಾಲಿ ಮುರಳೀಧರ್ ಪೀಪಲ್ ಟ್ರೀ ಹಾಸ್ಪಿಟಲ್ಸ್ನ ನೇತ್ರ ತಜ್ಞರಾಗಿದ್ದಾರೆ)
Recent news in karnataka »
ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ
ರಾಮನಗರ: ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಕಳೆದ 30 ವರ್ಷಗಳಿಂದಲೂ ನಿಮ್ಮ ಸೇವೆ ಮಾಡಿದ್ದೇನೆ. ಮುಂದೆಯೂ ನಿಮ್ಮ ಕಷ್ಟಗಳನ್ನರಿತು ನಿಮಗಾಗಿ ಮತ್ತಷ್ಟು ಕ
ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ
ರಾಮನಗರ, ಫೆ. 02 : ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಧ್ವಜ ಸ್ತಂಭದ ವಿಚಾರವು ತುಂಬಾ ಸೂಕ್ಷ್ಮ ವಿಚಾರವಾಗಿದ್ದು, ಈ ಸಂಬಂಧ ಯಾವು
ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ
ಚನ್ನಪಟ್ಟಣ: ಸಂವಿಧಾನ ಜಾಗೃತಿ ಜಾಥಾಕ್ಕೆ ತಾಲ್ಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಇದೇ ಸಂದರ್ಭದಲ್ಲಿ
ಸಂವಿಧಾನ ಜಾಗೃತಿ ಜಾಥಾ
ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ
ಚನ್ನಪಟ್ಟಣ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಶ್ರೀ ವೀರಾಂನೇಯಸ್ವಾಮಿ ಗೆ ವಿಶೇಷ
ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ
ರಾಮನಗರ, ಜ. 17: ರಾಮನಗರ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಹೊಂದಿರುವ ಆಸ್ತಿಗಳನ್ನು ದಿನಾಂಕ: 02.05.2015 ರಿಂದ ಜಾರಿಗೆ ಬರುವಂತೆ,
ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ
ರಾಮನಗರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20, 2020-21, 2021-22 ಮತ್ತು 2022-23ರ (ಜುಲೈ ಆವೃತ್ತಿ) ದ್ವಿತೀಯ/ತೃತೀಯ ವರ್ಷದ ಬಿ
ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ
ಹಾಸನ: ಪ್ರಾಕೃತಿಕ ಸೌಂದರ್ಯವು ಇ-ತ್ಯಾಜ್ಯ, ಕೆಲ ತಂತ್ರಜ್ಞಾನ ಹಾಗೂ ಪ್ಲಾಸ್ಟಿಕ್ ನಿಂದ ಹಾಳಾಗುತ್ತಿದೆ. ಪರಿಸರ ನಾಶಕ್ಕೆ ಮುನ್ನುಡಿ ಬರೆದವನೇ
೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ
ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಪಡಿತರ ಅಕ್ಕಿಯ ಪೈಕಿ ಸುಮಾರು ೫೨ ಲಕ್ಷಕ್ಕೂ ಮೌಲ್ಯದ ೧,೫೪೩.೬೫ ಕ್ವಿಂಟಾಲ್ ಅ
ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್
ಚನ್ನಪಟ್ಟಣ: ದಸರಾ ಎಂದರೆ ಕೇವಲ ಮೈಸೂರು ಎಂಬಂತಾಗಿದೆ, ಇದು ನಾಡ ಹಬ್ಬ ಎಂಬುದು ಕೇವಲ ಉಲ್ಲೇಖಕ್ಕಷ್ಟೇ ಸೀಮಿತವಾಗಿದೆ. ಇದು ನಾಡಹಬ್ಬ ಎಂಬುದು ಸರ
ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ
ರಾಮನಗರ: ಚನ್ನಪಟ್ಟಣ; ಪ್ರೊ ಭಗವಾನ್ ವಿಚಾರವಾದಿ, ಮೂಢನಂಬಿಕೆಗಳನ್ನು ಕಿತ್ತೊಗೆಯಲು, ಪುರಾಣ ಎಂಬುದು ಕಪೋಲ ಕಲ್ಪಿತ, ಇತಿಹಾಸ ಎಂಬುದು ಸಾರ್ವಕಾಲ
ಪ್ರತಿಕ್ರಿಯೆಗಳು