ನನಗೂ ಬ್ಯಾರಿ ಅಕಾಡೆಮಿ ಗೌರವ ಪ್ರಶಸ್ತಿ ಬಂತು!
ಅಧಿಕಾರ, ಪ್ರಶಸ್ತಿ, ಪುರಸ್ಕಾರ...ಇದ್ಯಾವುದನ್ನೂ ಒಬ್ಬ ಸಾಮಾಜಿಕ ಕಾರ್ಯಕರ್ತ ಬಯಸಬಾರದೆಂಬುದು ನನ್ನ ನಿಲುವು. ಆದರೆ ಕೆಲವೊಮ್ಮೆ ಅವಕಾಶಗಳು ತಾನಾಗಿಯೇ ಹುಡುಕಿ ಬಂದಾಗ ಅದನ್ನು ತಿರಸ್ಕರಿಸಬೇಕೇ ಎಂಬುದು ನನ್ನ ಪ್ರಶ್ನೆ. ಈ ಗೊಂದಲ ಯಾಕೆಂದರೆ ಇಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಘೋಷಣೆಯಾಗಿದೆ. ಅದೂ ನನ್ನ ಬ್ಯಾರಿ ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದ ಸೇವೆಗಾಗಿ.
ಆದ್ದರಿಂದಲೇ ಗೊಂದಲ ಮತ್ತು ಸಂತೋಷ ಜೊತೆಯಾಗಿ ಮೂಡಿಬಂದಿದೆ. ಸಂತೋಷ ಯಾಕೆಂದರೆ ಇದು ಅಕಾಡೆಮಿಯ ಸರ್ವ ಸದಸ್ಯರ ಒಕ್ಕೊರಳ ಆಯ್ಕೆಯಂತೆ ಮತ್ತು ಪ್ರಶಸ್ತಿಯ ಜೊತೆಗೆ ರೂ. 50000 ನನಗೆ ಸಿಗುತ್ತಿದೆ. ಬ್ಯಾರಿ ಸಾಹಿತ್ಯ ಮತ್ತು ಸಂಶೋಧನೆಯಲ್ಲಿ ನನ್ನ ಕೊಡುಗೆಗಳೇನೆಂಬುದು ನನಗೆ ತಿಳಿದಿಲ್ಲ. ಆದರೆ ಮಾತೃಭಾಷೆಯ ಉಳಿವಿಗಾಗಿ ನನ್ನಿಂದಾದ ಪ್ರಾಮಾಣಿಕ ಸೇವೆ ಮಾಡುತ್ತಾ ಬಂದಿದ್ದೇನೆ. ಕೆಳಗಿನ ಪಟ್ಟಿಯನ್ನೊಮ್ಮೆ ಸಾಧ್ಯವಾದರೆ ಓದಿ.
*ಬ್ಯಾರಿ ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸೇವೆಗಳು*
ಮಂಗಳೂರಿನಲ್ಲಿ 1998ರಲ್ಲಿ ಸ್ಥಾಪನೆಗೊಂಡ ‘ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ’ದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ.
1998ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಗೊಂಡ ‘ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್’ನ ಮಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ.
2000ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಗೊಂಡ ‘ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್’ನಲ್ಲಿ ಸುಮಾರು 10 ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ.
ಮಂಗಳೂರು, ಬಂಟ್ವಾಳ, ಉಡುಪಿ ಮತ್ತು ಚಿಕ್ಕಮಗಳೂರಿನಲ್ಲಿ ನಡೆದ ಬ್ಯಾರಿ ಸಾಹಿತ್ಯ ಸಮ್ಮೇಳನಗಳ ಯಶಸ್ಸಿಯಲ್ಲಿ ಪ್ರಮುಖ ಪಾತ್ರ ನಿರ್ವಹಣೆ.
ಬ್ಯಾರಿ ಸಾಹಿತ್ಯ ಅಕಾಡೆಮಿ ಸ್ಥಾಪನೆಯ ಹೋರಾಟದಲ್ಲಿ ಪ್ರಮುಖ ಪಾತ್ರ ನಿರ್ವಹಣೆ.
‘ಬ್ಯಾರಿ ವಾರ್ತೆ’ ನಿಯತಕಾಲಿಕದಲ್ಲಿ ಅಂಕಣಕಾರನಾಗಿ ಬರವಣಿಗೆ.
‘ಬ್ಯಾರಿ ಟೈಮ್ಸ್’ ನಿಯತಕಾಲಿಕದ ಉಪಸಂಪಾದಕನಾಗಿ ಸೇವೆ.
ಮಂಗಳೂರು ಪೊಲೀಸರಿಗೆ ಬ್ಯಾರಿ ಭಾಷೆ ಕಲಿಸುವ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ.
ಅಬುಧಾಬಿಯ ‘ಬ್ಯಾರೀಸ್ ವೆಲ್ಫೇರ್ ಫೋರಂ’ನ ಪ್ರಾದೇಶಿಕ ಸಂಘಟನಾ ಸಮಿತಿಯ ಸಂಚಾಲಕನಾಗಿ ಸೇವೆ.
ದುಬೈನ ‘ಬ್ಯಾರೀಸ್ ಕಲ್ಚರಲ್ ಫೋರಂ’ನ ಪ್ರಾದೇಶಿಕ ಸಂಘಟನಾ ಸಮಿತಿಯಲ್ಲಿ ಸಂಚಾಲಕನಾಗಿ ಸೇವೆ.
*ಇತರ ಸಾಹಿತ್ಯಿಕ ಚಟುವಟಿಕೆಗಳು*
‘ಪೆರ್ನಾಲ್’ ಕನ್ನಡ ಮಾಸಿಕದ ಸಂಪಾದಕ ಮತ್ತು ಪ್ರಕಾಶಕ.
ನಾಡಿನ ಹಲವು ಪತ್ರಿಕೆಗಳಲ್ಲಿ ಲೇಖನಗಳ ಪ್ರಕಟಣೆ.
‘ಕರ್ನಾಟಕ ಮುಸ್ಲಿಮ್ ಲೇಖಕರ ಸಂಘ’ದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸುಮಾರು 15 ವರ್ಷಗಳ ಸೇವೆಗೈದು ಹಾಲಿ ರಾಜ್ಯಾಧ್ಯಕ್ಷನಾಗಿ ಸೇವೆ.
‘ಸಂಗಾತಿ’ (ಶಿಕ್ಷಣ ಮತ್ತು ವೃತ್ತಿ ಮಾರ್ಗದರ್ಶನ ಕೈಪಿಡಿ) ಕೃತಿಯ ಸಂಪಾದಕನಾಗಿ ಸೇವೆ.
ಪ್ರಜಾವಾಣಿ ದೈನಿಕದ ‘ಸಹಪಾಠಿ’ ಪುರವಣಿಯಲ್ಲಿ ಅಂಕಣಕಾರನಾಗಿ ನಿರಂತರ ಬರವಣಿಗೆ.
‘ತುಳುನಾಡು ಪ್ರಕಾಶನ’ ಸಂಸ್ಥೆಯ ಸ್ಥಾಪಕ (ಪುಸ್ತಕ ಪ್ರಕಟಣೆ ಮತ್ತು ಸಾಹಿತ್ಯಿಕ ಚಟುವಟಿಕೆಗಳು)
*ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳು*
‘ಕರಿಯರ್ ಗೈಡೆನ್ಸ್ ಎಂಡ್ ಇನ್ಫೊರ್ಮೇಶನ್ ಸೆಂಟರ್’ನ ಸ್ಥಾಪಕಾಧ್ಯಕ್ಷನಾಗಿ ಕಳೆದ 14 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನ.
‘ದಿ ಕ್ಯಾಂಪಸ್ ಕರಿಯರ್ ಅಕಾಡೆಮಿ’ಯ ಸ್ಥಾಪಕ ನಿರ್ದೇಶಕನಾಗಿ ಯುವ ತಲೆಮಾರಿಗೆ ಕರಿಯರ್ ಕೌನ್ಸಿಲಿಂಗ್.
ಹಲವು ಶಿಕ್ಷಣ ಸಂಸ್ಥೆಗಳ ಆಡಳಿತ ಸಮಿತಿಯಲ್ಲಿ ಸಕ್ರೀಯ ಶೈಕ್ಷಣಿಕ ಸೇವೆ.
‘ಸಹಮತ ದ.ಕ. ಜಿಲ್ಲೆ’ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ.
‘ಕರ್ನಾಟಕ ಕೋಮು ಸೌಹಾರ್ದ ವೇದಿಕೆ’ಯ ರಾಜ್ಯ ಸಮಿತಿ ಸದಸ್ಯನಾಗಿ, ದ.ಕ. ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಕೋಮು ಸೌಹಾರ್ದಕ್ಕಾಗಿ ಸೇವೆ.
‘ರಾಣಿ ಅಬ್ಬಕ್ಕ ಉತ್ಸವ ಸಮಿತಿ’ಯ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ.
‘ಅಲ್ ವಫಾ ಚಾರಿಟೆಬಲ್ ಟ್ರಸ್ಟ್’ನ ಪ್ರಧಾನ ಕಾರ್ಯದರ್ಶಿಯಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಮತ್ತು ‘ವರದಕ್ಷಿಣೆ ವಿರೋಧಿ ಆಂದೋಲನ’ಗಳ ನಿರ್ವಹಣೆ.
‘ಕಿಡ್ನಿ ಆರೋಗ್ಯ ಅಭಿಯಾನ ದ.ಕ. ಜಿಲ್ಲಾ ಸಂಘಟನಾ ಸಮಿತಿ’ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ. ಜಿಲ್ಲೆಯಾದ್ಯಂತ ಕಿಡ್ನಿ ಆರೋಗ್ಯ ಕುರಿತಂತೆ ಜನಜಾಗೃತಿ.
ಕಿಡ್ನಿ ರೋಗಿಗಳ ಸಂಘದ ಗೌರವ ಸಂಚಾಲಕನಾಗಿ ಸೇವೆ.
ದ.ಕ. ಜಿಲ್ಲೆಯಾದ್ಯಂತ ಅನೇಕ ಆರೋಗ್ಯ ಸಂರಕ್ಷಣಾ ಶಿಬಿರಗಳ ನಿರ್ವಹಣೆ.
‘ಫೋರಂ ಫಾರ್ ರೈಟ್ಸ್ ಎಂಡ್ ಜಸ್ಟಿಸ್ ದ.ಕ. ಜಿಲ್ಲೆ’ಯ ಸಂಚಾಲಕನಾಗಿ ಮಾನವ ಹಕ್ಕುಗಳ ಸೇವೆ.
‘ಕರ್ನಾಟಕ ಮುಸ್ಲಿಮ್ ಮುತ್ತಹಿದ ಮಹಾಝ್’ನ ದ.ಕ. ಜಿಲ್ಲಾ ಸಮಿತಿ ಸಂಚಾಲಕನಾಗಿ ಸೇವೆ.
‘ಹಿದಾಯ ಫೌಂಡೇಶನ್’ನ ಸ್ಥಾಪಕ ಸದಸ್ಯನಾಗಿ ಹಲವು ಸಾಮಾಜಿಕ ಮತ್ತು ಶೈಕಷಣಿಕ ಸೇವೆ.
ಹಲವು ಟಿವಿ ಚಾನೆಲ್ ಮತ್ತು ರೇಡಿಯೋಗಳಲ್ಲಿ ಕರಿಯರ್ ಗೈಡ್ ಆಗಿ ಅನೇಕ ಕಾರ್ಯಕ್ರಮ ನಿರ್ವಹಣೆ.
‘ರೇಡಿಯೋ ಸಾರಂಗ್’ ಕಮ್ಯುನಿಟಿ ರೇಡಿಯೋನ ಮಾರ್ಗದರ್ಶಕ ಮಂಡಳಿ ಸದಸ್ಯನಾಗಿ ಸೇವೆ.
‘ಸೇವ್ ಲೈಫ್ ಫೌಂಡೇಶನ್ ಕರ್ನಾಟಕ’ದ ಸ್ಥಾಪಕ ಅಧ್ಯಕ್ಷನಾಗಿ ಸೇವೆ.
ಇವಿಷ್ಟು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಸ್ವೀಕರಿಸವ ಅರ್ಹತೆಗೆ ಸಾಕೆಂದರೆ ನಾನು ಪ್ರಶಸ್ತಿ ಸ್ವೀಕರಿಸುತ್ತೇನೆ. ನೀವೇನನ್ನುತ್ತೀರಿ?
-ಉಮರ್ ಯು. ಹೆಚ್
Recent news in karnataka »
ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ
ರಾಮನಗರ: ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಕಳೆದ 30 ವರ್ಷಗಳಿಂದಲೂ ನಿಮ್ಮ ಸೇವೆ ಮಾಡಿದ್ದೇನೆ. ಮುಂದೆಯೂ ನಿಮ್ಮ ಕಷ್ಟಗಳನ್ನರಿತು ನಿಮಗಾಗಿ ಮತ್ತಷ್ಟು ಕ
ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ
ರಾಮನಗರ, ಫೆ. 02 : ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಧ್ವಜ ಸ್ತಂಭದ ವಿಚಾರವು ತುಂಬಾ ಸೂಕ್ಷ್ಮ ವಿಚಾರವಾಗಿದ್ದು, ಈ ಸಂಬಂಧ ಯಾವು
ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ
ಚನ್ನಪಟ್ಟಣ: ಸಂವಿಧಾನ ಜಾಗೃತಿ ಜಾಥಾಕ್ಕೆ ತಾಲ್ಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಇದೇ ಸಂದರ್ಭದಲ್ಲಿ
ಸಂವಿಧಾನ ಜಾಗೃತಿ ಜಾಥಾ
ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ
ಚನ್ನಪಟ್ಟಣ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಶ್ರೀ ವೀರಾಂನೇಯಸ್ವಾಮಿ ಗೆ ವಿಶೇಷ
ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ
ರಾಮನಗರ, ಜ. 17: ರಾಮನಗರ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಹೊಂದಿರುವ ಆಸ್ತಿಗಳನ್ನು ದಿನಾಂಕ: 02.05.2015 ರಿಂದ ಜಾರಿಗೆ ಬರುವಂತೆ,
ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ
ರಾಮನಗರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20, 2020-21, 2021-22 ಮತ್ತು 2022-23ರ (ಜುಲೈ ಆವೃತ್ತಿ) ದ್ವಿತೀಯ/ತೃತೀಯ ವರ್ಷದ ಬಿ
ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ
ಹಾಸನ: ಪ್ರಾಕೃತಿಕ ಸೌಂದರ್ಯವು ಇ-ತ್ಯಾಜ್ಯ, ಕೆಲ ತಂತ್ರಜ್ಞಾನ ಹಾಗೂ ಪ್ಲಾಸ್ಟಿಕ್ ನಿಂದ ಹಾಳಾಗುತ್ತಿದೆ. ಪರಿಸರ ನಾಶಕ್ಕೆ ಮುನ್ನುಡಿ ಬರೆದವನೇ
೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ
ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಪಡಿತರ ಅಕ್ಕಿಯ ಪೈಕಿ ಸುಮಾರು ೫೨ ಲಕ್ಷಕ್ಕೂ ಮೌಲ್ಯದ ೧,೫೪೩.೬೫ ಕ್ವಿಂಟಾಲ್ ಅ
ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್
ಚನ್ನಪಟ್ಟಣ: ದಸರಾ ಎಂದರೆ ಕೇವಲ ಮೈಸೂರು ಎಂಬಂತಾಗಿದೆ, ಇದು ನಾಡ ಹಬ್ಬ ಎಂಬುದು ಕೇವಲ ಉಲ್ಲೇಖಕ್ಕಷ್ಟೇ ಸೀಮಿತವಾಗಿದೆ. ಇದು ನಾಡಹಬ್ಬ ಎಂಬುದು ಸರ
ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ
ರಾಮನಗರ: ಚನ್ನಪಟ್ಟಣ; ಪ್ರೊ ಭಗವಾನ್ ವಿಚಾರವಾದಿ, ಮೂಢನಂಬಿಕೆಗಳನ್ನು ಕಿತ್ತೊಗೆಯಲು, ಪುರಾಣ ಎಂಬುದು ಕಪೋಲ ಕಲ್ಪಿತ, ಇತಿಹಾಸ ಎಂಬುದು ಸಾರ್ವಕಾಲ
ಪ್ರತಿಕ್ರಿಯೆಗಳು