ದುಡ್ಡು ಪೀಕುವ ಕೆಲವು ಪತ್ರಕರ್ತರು, ಅವರನ್ನು ಭ್ರಷ್ಟರನ್ನಾಗಿಸುತ್ತಿರುವ ರಾಜಕಾರಣಿಗಳು.
ಮಾನ್ಯರೇ,
ಈಗ ಚುನಾವಣೆಯು ಬಾಗಿಲಿಗೆ ಬರುತ್ತಿದೆ. ಸ್ಪರ್ಧಾಳುಗಳಾಗುವವರೆಲ್ಲ ರನ್ನೂ ಇಂದ್ರ-ಚಂದ್ರ ಎಂದು ಹೊಗಳುವ ಕಾಲ ಹತ್ತಿರವಾಗುತ್ತಿದೆ. ನಿಮ್ಮಲ್ಲಿರುವ ಒಂದು ಮುಖವಷ್ಟೇ ಅನಾವರಣ ಆಗ ಬಹುದು. ನೀವು ಹೊಗಳುವವರನ್ನು ಸರಿಯಾಗಿ ಗಮನಿಸದೇ ಹೋದರೆ, ನಿಮ್ಮ ಇನ್ನೊಂದು ಮುಖದ ಬಗ್ಗೆ ಬೆಳಕು ಚೆಲ್ಲಿ ನೀವು ವಿಚಲಿತರಾಗುವಂತೆ ಮಾಡುವ ಮಂದಿಯೂ ಬರಬಹುದು.
ಇಂತಹ ವಿಷಯಗಳನ್ನು ಪ್ರಸ್ತಾಪಿಸಿ ದಾಗ, ಯಾಕೆ ಬೇಕು ಎಂದು, ಹಾಗೆ ಬರೆ ಯುವವರನ್ನು ಸಂತೃಪ್ತಿಪಡಿಸಿ ಅವರನ್ನೇ ಸದ್ದಿಲ್ಲದ ರೀತಿಯಲ್ಲಿ ಮಾಡಬಹುದಾದ ಮನಸ್ಸು ನಿಮಗೂ ಸಹ ಬರಬಹುದು. ಹಾಗಾಗಿ ಹುಳುಕು ಮುಚ್ಚಿಕೊಳ್ಳಲು ನೀವು ಆ ರೀತಿ ಬರೆಯುವ ಮುದ್ರಣ ಮಾಧ್ಯಮ ಹಾಗೂ ವಿದ್ಯುನ್ಮಾನ ಮಾಧ್ಯಮ ಮಂದಿಯ ಕೈ ಬೆಚ್ಚಗೆ ಮಾಡಿ ಅವರನ್ನು ಓಲೈಸಿಕೊಳ್ಳಲು ಯತ್ನಿಸಬಹುದು.
ಇದು ಚುನಾವಣೆಯ ಹೊತ್ತಿಗೆ ಮಾತ್ರ ಸೀಮಿತವಾಗದೆ, ಅದೊಂದು ಸಂಪ್ರದಾಯವಾಗಿ ಬಿಡಬಹುದು ಆಮೇಲೆ ನಿರಂತರವಾಗಿ ನಿಮ್ಮನ್ನು ಸುಲಿಗೆ ಮಾಡುವ ಪರಿಪಾಠವೂ ಸಹ ಬೆಳೆಯಬಹುದಾದ ಸಾಧ್ಯತೆಯು ಬರಬಹುದು.
ಈಗ ಮುದ್ರಣ ಮಾಧ್ಯಮಕ್ಕೂ ದುಸ್ಥಿತಿಯು ಹೆಗಲು ಏರಿದೆ, ಕಾಸಿ ಗಾಗಿ ಸುದ್ದಿ ಬರೆಯುವ ಪ್ರವೃತ್ತಿ ಶುರುವಾಗಿದೆ. ಹಣ ಹಂಚಿದರೆ ಎಂತಹ ಅದ್ಭುತವಾದ ಭಾಷೆಯ ಮೂಲಕ ಹೊಗಳುವ ಮಂದಿಗೇನೂ ಕಡಿಮೆ ಇಲ್ಲ. (4ನೇ ಪುಟಕ್ಕೆ)
ಇವತ್ತಿಗೂ ಸಹ ಮಾಧ್ಯಮಗಳು ಹಾಗೂ ನ್ಯಾಯಾಂಗ ಗೌರವವನ್ನು ಉಳಿಸಿಕೊಂಡಿವೆ ಎಂಬ ಭಾವನೆಯು ಇದೆ. ಅದು ಎಷ್ಟರ ಪ್ರಮಾಣದ್ದು ಎಂದು ನಾನು ಇಲ್ಲಿ ವಿಶ್ಲೇ ಷಣೆ ಮಾಡಲು ಹೋಗು ವುದಿಲ್ಲ. ಈಚಲಮರದ ಕೆಳಗೆ ಕುಳಿತು ಮಜ್ಜಿಗೆ ಯನ್ನು ಕುಡಿದರೂ ಸಹ ಅದು ಹೆಂಡ ಕುಡಿದಂತೆಯೇ ಆಗುವುದು.
ಈಗದೊಡ್ಡ ದೊಡ್ಡ ನಗರಗಳಿಂದ ಮೊದಲ್ಗೊಂಡು ಸಣ್ಣ ಸಣ್ಣ ಪಟ್ಟಣಗಳ ವರೆಗೂ ಮಾಧ್ಯಮಗಳಲ್ಲಿ ಕೆಲಸ ಮಾಡುವವರ ಬಗ್ಗೆ ಅಪಸ್ವರಗಳು ಇವೆ. ಜನ ಸಾಮಾನ್ಯರೂ ಸಹ ಕಾಸು ಕೊಟ್ಟರೆ ಅವರು ಏನು ಬೇಕಾದರೂ ಬರೆಯು ತ್ತಾರೆ ಎಂಬ ಅಭಿಪ್ರಾಯ ಬಂದಿರುವುದು. ಅದನ್ನು ಹೋಗಲಾಡಿಸದೇ ಹೋದರೆ, ಈ ಒಂದು ಮಾಧ್ಯ ಮವೂ ಸಹ ಭ್ರಷ್ಟತೆಯ ಪಟ್ಟಿಯೊಳಗೆ ಕೇವಲ ಅಡಗಿ ಕುಳಿತುಕೊಳ್ಳು ವುದಷ್ಟೇ ಅಲ್ಲ, ಸಾರ್ವತ್ರಿ ವಾಗಿ ಹರಿದಾಡುವ ಸಂದ ರ್ಭಗಳು ಜಾಸ್ತಿಯಾಗು ತ್ತದೆ.
ಕೆಲವು ಪತ್ರಕರ್ತರು ಕೂಟ ಕಟ್ಟಿ ಕೊಂಡು ಒಂದೂವರೆಯಷ್ಟು 2ರಷ್ಟು ಹೆಸರು ಹಾಗೂ ಪಟ್ಟಿ ನೀಡಿ, ಎಲ್ಲರ ಹಣ ಸಂಗ್ರಹ ಮಾಡಿಕೊಂಡು ಹಂಚಿ ಕೊಳ್ಳುವ ಪರಿಪಾಠ ಶುರುವಾಗಿದೆ.
ರಾಜಕೀಯದವರನ್ನು ಯಾರಾದರೂ ಕೇಳಿದರೆ ಅವರಿಗೆ ಕಪ್ಪ-ಕಾಣಿಕೆ ಕೊಟ್ಟಿಲ್ಲ ಅದಕ್ಕಾಗಿಯೇ ಅವರು ಸುತ್ತಾಡುತ್ತಾರೆ ಎಂದು ಜೋರು ಧ್ವನಿಯಲ್ಲಿ ಹೇಳುವ ಕೆಲಸವೂ ನಡೆ ಯುತ್ತದೆ.
ಇಂತಹವೆಲ್ಲವೂ ಅಸಹ್ಯ ವೆನ್ನಿಸುತ್ತವೆ, ಆದರೂ ಕೂಡ ಹಣ ಸಿಗುತ್ತದೆ ಎಂದರೆ ಗೋಷ್ಠಿಗಳಿಗೆ ಮಹತ್ವ ನೀಡುವ, ಇಲ್ಲದಿ ದ್ದರೆ, ಅದಾವ ಪತ್ರಿಕಾ ಗೋಷ್ಠಿ ಬಿಸ್ಕೆಟ್ ಎಸೆದು ಬಾಳೆಹಣ್ಣು ಕೊಟ್ಟು ಕಳು ಹಿಸುತ್ತಾರೆ ಎನ್ನುವ ಒಂದು ಪರಿಪಾಠವೂ ಸಹ ಬೆಳೆದಿದೆ.
ದಯಮಾಡಿ ನಮ್ಮ ಪತ್ರಿಕೆಯ ಹೆಸರು ಹೇಳಿ ಕೇಳಿದರೆ ಕೊಡಬೇಡಿ
ಮಾನ್ಯ ರಾಜಕಾರಣಿಗಳೇ, ಗೋಷ್ಠಿಯ ಮೂಲಕ ಅತಿ ಯಾದ ಪ್ರಚಾರ ಪಡೆಯುವ ಬಯಕೆ ಹೊತ್ತವರೇ, ನಮ್ಮ ಪತ್ರಿಕೆಯ ಪರವಾಗಿ ಗೋಷ್ಠಿಗೆ ಬಂದವರು ಹಣ ಕೇಳಿದರೆ ದಯಮಾಡಿ ಕೊಡಬೇಡಿ.
ಆ ಲೆಕ್ಕ ನೋಡಿದರೆ ಸಮಯ ಸಂದರ್ಭ ಬಂದಾಗ ನೀವು ಮಿಂಚುವ ಸಲು ವಾಗಿ ಹಣ ನೀಡುತ್ತೀರಿ. ಒಂದು ಸಾರಿ ಎಂದು ನೀಡಿದ ಆ ಕಾಣಿಕೆಯು ಆಮೇಲೆ ಕೊಡಲೇ ಬೇಕು ಎಂಬ ಕಡ್ಡಾಯವಾದ ಕ್ರಿಯೆಯಾ ಗುತ್ತದೆ.
ಚುನಾವಣೆಯ ಹೊತ್ತಿ ನಲ್ಲಿ ನಿಮ್ಮ ಪರವಾಗಿ ಫ್ಯೂಚರ್ ಬರೆಯು ತ್ತೇವೆ. ಎಲ್ಲರೂ ಒಟ್ಟಾಗಿ ಬರೆಯು ತ್ತೇವೆ ಎಂದು ಗುಂಪು ಬರವಣಿಗೆಯೂ ಕಪ್ಪ ವಸೂಲಿ ಮಾಡು ವುದೂ ನಡೆಯುತ್ತಿದೆ.
ಕಳೆದ 5ವರ್ಷದ ಹಿಂದಿನ ಚುನಾವಣೆಯಲ್ಲಿ ನಮ್ಮ ಪತ್ರಿಕೆಯ ವರ ವರದಿಗಾರ ರಾಗಿದ್ದವರೂ ಸೇರಿ ತಲಾ 50ಸಾವಿರ ಹಣ ಸಂಗ್ರಹ ಮಾಡಿ ಹಂಚಿಕೊಂಡಿದ್ದಾರೆ. ಈ ಪ್ರಮಾಣ ಈ ಸಾರಿ ಇನ್ನೂ ಜಾಸ್ತಿ ಯಾಗಬಹುದಾಗಿದೆ.
ನಿಮಗೆ ಆತ್ಮಗೌರವ ಇಲ್ಲ ಎಂದು ಎಲ್ಲರನ್ನೂ ಆತ್ಮ ಗೌರವ ವಿಲ್ಲದವರ ರೀತಿಯಲ್ಲಿ ಮಾಡುವುದು ಅಕ್ಷಮ್ಯ.ಇದನ್ನು ನಿಲ್ಲಿಸಿ.
ಪ್ರಾಯೋಜಿತವಾದ ಸುದ್ದಿಗಾಗಿ ಹಣ ಸಂಗ್ರಹ ಮಾಡುವ ಕೆಲಸವೂ ಸಹ ಆಗಬಹುದು. ಸದ್ಯಕ್ಕೆ ಇಲ್ಲಿಗೆ ನಿಲ್ಲಿಸುತ್ತಿದ್ದೇನೆ. ಇಲ್ಲ ನಾನು ಅದೇ ಮಾಡುವುದು. ಯಾರಿಂದಲೋ ಹೊಡೆದು ಅದರಲ್ಲಿ ಒಂದಂಶವನ್ನು ಬೇರೆಯವರಿಗೂ ಹಂಚು ತ್ತೇನೆ ಎಂದು ಮೊಂಡು ಬಿದ್ದರೆ ನಿಮ್ಮ ಹಣೆಯ ಬರಹವೇ ಅಷ್ಟು ಎಂದು ನಾವು ಸುಮ್ಮನಾಗಬೇಕಾಗು ತ್ತದೆ. ಆ ರೀತಿಯಲ್ಲಿ ನೀವು ನಡೆದುಕೊಂಡರೆ ಅದಕ್ಕೆ ನಾವು ಏನು ಹೇಳಲು ಸಾಧ್ಯ ವಾದೀತು. ಕೊಟ್ಟವನು ಕೋಡಂಗಿ ಪಡೆದ ವನು ವೀರಭದ್ರ ಎಂದು ಸುಮ್ಮ ನಾಗುವುದು ಒಳಿತು ಎಂದು ಭಾವಿಸಬೇಕಾಗುತ್ತದೆ.
ಈ ಬರಹವನ್ನು ಓದಿದ ನಮ್ಮ ಉದ್ಯಮದ ಸ್ನೇಹಿ ತರೂ ಸಹ ನಮ್ಮನ್ನು ಮೂರು ಮೂಲೆ ಕೂಡಿದ ಜಾಗದಲ್ಲಿ ತಮಗೆ ಇಷ್ಟ ಬಂದ ರೀತಿಯಲ್ಲಿ ಟೀಕಿಸ ಬಹುದಾಗಿದೆ. ಇಂತಹ ಟೀಕೆಗೆ ನಾವು ಸೊಪ್ಪು ಹಾಕುವುದಿಲ್ಲ.
ಮನುಷ್ಯ ಅಬ್ಬಬ್ಬಾ ಎಂದರೆ, 100 ವರ್ಷ ಬದುಕಬಹುದು. ಅದಾದ ನಂತರ ಎಲ್ಲವನ್ನು ಬಿಟ್ಟು ಇಲ್ಲಿಂದ ನಿರ್ಗಮಿಸಲೇ ಬೇಕಾಗಿದೆ. ಇದಕ್ಕಾಗಿ ನಾವು ಏನೆಲ್ಲಾ ಮಾಡಬೇಕೊ ಅದೆಲ್ಲವನ್ನು ಮಾಡುತ್ತಾ ಆತ್ಮಗೌರವವನ್ನು ಕಳೆದು ಕೊಳ್ಳುವುದು ಎಷ್ಟು ಸರಿಯಾದೀತು? ಇಂತಹ ವನ್ನು ನೋಡುವುದು ನಮ್ಮ ದುರದೃಷ್ಟ.
-ಸು.ತ. ರಾಮೇಗೌಡ
ಹಿರಿಯ ಪತ್ರಕರ್ತರು.
Recent news in karnataka »
ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ
ರಾಮನಗರ: ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಕಳೆದ 30 ವರ್ಷಗಳಿಂದಲೂ ನಿಮ್ಮ ಸೇವೆ ಮಾಡಿದ್ದೇನೆ. ಮುಂದೆಯೂ ನಿಮ್ಮ ಕಷ್ಟಗಳನ್ನರಿತು ನಿಮಗಾಗಿ ಮತ್ತಷ್ಟು ಕ
ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ
ರಾಮನಗರ, ಫೆ. 02 : ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಧ್ವಜ ಸ್ತಂಭದ ವಿಚಾರವು ತುಂಬಾ ಸೂಕ್ಷ್ಮ ವಿಚಾರವಾಗಿದ್ದು, ಈ ಸಂಬಂಧ ಯಾವು
ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ
ಚನ್ನಪಟ್ಟಣ: ಸಂವಿಧಾನ ಜಾಗೃತಿ ಜಾಥಾಕ್ಕೆ ತಾಲ್ಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಇದೇ ಸಂದರ್ಭದಲ್ಲಿ
ಸಂವಿಧಾನ ಜಾಗೃತಿ ಜಾಥಾ
ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ
ಚನ್ನಪಟ್ಟಣ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಶ್ರೀ ವೀರಾಂನೇಯಸ್ವಾಮಿ ಗೆ ವಿಶೇಷ
ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ
ರಾಮನಗರ, ಜ. 17: ರಾಮನಗರ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಹೊಂದಿರುವ ಆಸ್ತಿಗಳನ್ನು ದಿನಾಂಕ: 02.05.2015 ರಿಂದ ಜಾರಿಗೆ ಬರುವಂತೆ,
ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ
ರಾಮನಗರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20, 2020-21, 2021-22 ಮತ್ತು 2022-23ರ (ಜುಲೈ ಆವೃತ್ತಿ) ದ್ವಿತೀಯ/ತೃತೀಯ ವರ್ಷದ ಬಿ
ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ
ಹಾಸನ: ಪ್ರಾಕೃತಿಕ ಸೌಂದರ್ಯವು ಇ-ತ್ಯಾಜ್ಯ, ಕೆಲ ತಂತ್ರಜ್ಞಾನ ಹಾಗೂ ಪ್ಲಾಸ್ಟಿಕ್ ನಿಂದ ಹಾಳಾಗುತ್ತಿದೆ. ಪರಿಸರ ನಾಶಕ್ಕೆ ಮುನ್ನುಡಿ ಬರೆದವನೇ
೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ
ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಪಡಿತರ ಅಕ್ಕಿಯ ಪೈಕಿ ಸುಮಾರು ೫೨ ಲಕ್ಷಕ್ಕೂ ಮೌಲ್ಯದ ೧,೫೪೩.೬೫ ಕ್ವಿಂಟಾಲ್ ಅ
ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್
ಚನ್ನಪಟ್ಟಣ: ದಸರಾ ಎಂದರೆ ಕೇವಲ ಮೈಸೂರು ಎಂಬಂತಾಗಿದೆ, ಇದು ನಾಡ ಹಬ್ಬ ಎಂಬುದು ಕೇವಲ ಉಲ್ಲೇಖಕ್ಕಷ್ಟೇ ಸೀಮಿತವಾಗಿದೆ. ಇದು ನಾಡಹಬ್ಬ ಎಂಬುದು ಸರ
ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ
ರಾಮನಗರ: ಚನ್ನಪಟ್ಟಣ; ಪ್ರೊ ಭಗವಾನ್ ವಿಚಾರವಾದಿ, ಮೂಢನಂಬಿಕೆಗಳನ್ನು ಕಿತ್ತೊಗೆಯಲು, ಪುರಾಣ ಎಂಬುದು ಕಪೋಲ ಕಲ್ಪಿತ, ಇತಿಹಾಸ ಎಂಬುದು ಸಾರ್ವಕಾಲ
ಪ್ರತಿಕ್ರಿಯೆಗಳು