ಮುನಿರತ್ನನೂ ಬೇಡ, ಮತ್ತೊಬ್ಬರೂ ಬೇಡ, ಮುನಿರಾಜು ಗೆದ್ದುಬರಲಿ.
ಇಂದಿನ ಸಾಮಾಜಿಕ ಹಾಗೂ ಬಡಬಗ್ಗರ ಕಲ್ಯಾಣವಾಗಬೇಕೆಂದರೆ ಕೇವಲ ವಿದ್ಯಾವಂತ, ಉದ್ಯಮಿ, ಹಲವಾರು ಬಾರಿ ಗೆದ್ದು ಮೋಸ, ವಂಚನೆ ಹಾಗೂ ದುಡ್ಡು ಮಾಡುವ ಕಾಯಕವನ್ನೇ ಉದ್ಯಮ ಮಾಡಿಕೊಂಡಿರುವ ರಾಜಕಾರಣಿಯಿಂದ ಸಮಾಜದ ನೊಂದ ಬಡವರು ಉದ್ದಾರವಾಗುವುದಿಲ್ಲ,
ಹಾಗೇ ಅವರು ಪ್ರತಿನಿಧಿಸುವ ಕ್ಷೇತ್ರವೂ ಸಹ ಹಿಂದುಳಿಯುತ್ತದೆ. ಅಂತಹ ಕ್ಷೇತ್ರವೀಗ ಕಾಂಗ್ರೆಸ್ ಪಕ್ಷದ ಶಾಸಕ ಮುನಿರತ್ನ ಮಾಡಿದ ಅನೈತಿಕ ಅವಾಂತರಗಳಿಂದ ಈ ತಿಂಗಳ ಹನ್ನೆರಡರಂದು ನಡೆಯಬೇಕಾಗಿದ್ದ ಚುನಾವಣೆ ಇದೇ ತಿಂಗಳ ಇಪ್ಪತ್ತೆಂಟಕ್ಕೆ ನಿಗದಿಯಾಗಿದೆ.
ಒಂದೆರೆಡಲ್ಲ ಸರಿ ಸುಮಾರು ಹತ್ತಾರು ಸಾವಿರ ಮತಚೀಟಿ(Other Id)ಗಳನ್ನು ಖರೀದಿಸಿ (ಹೆದರಿಸಿ, ಹಣದ ಆಮಿಷ ಒಡ್ಡಿ) ತನ್ನ ಸುಪರ್ದಿಯಲ್ಲಿ ಇಟ್ಟುಕೊಂಡಿದ್ದರೆಂದರೆ ಮತದಾರ ಪ್ರಭುಗಳಾದ ನೀವೆ ಯೋಚಿಸಿ ಇಂತಹ ದುಷ್ಟ ನಾಯಕರಿಂದ ಕ್ಷೇತ್ರದ ಅಭಿವೃದ್ಧಿಯನ್ನಾಗಲಿ, ಸಮಾಜದ ನೊಂದ ನಾಗರೀಕರ ಉದ್ದಾರವನ್ನಾಗಲಿ ಹೇಗೆ ನಿರೀಕ್ಷಿಸುವುದು ?
ಇಂತಹ ನಾಯಕರ ನಡುವೆ ಸಜ್ಜನ ಯುವಕ, ಸಮಾಜದ ಕಳಕಳಿ ಹೊಂದಿರುವ ಮಾತೃಹೃದಯಿ, ನಾಗರೀಕ ಸಮಾಜ ನಮ್ಮದಾಗಬೇಕೆಂಬ ತುಡಿತ ಇವೆಲ್ಲವೂ ಸಾಕಾರವಾಗಬೇಕೆಂದರೆ ರಾಜರಾಜೇಶ್ವರಿ ನಗರದ ಮತದಾರ ಪ್ರಭುಗಳು ಬಿಜೆಪಿಯ ಯುವನಾಯಕ ತುಳಸಿ ಮುನಿರಾಜುಗೌಡರನ್ನು ಗೆಲ್ಲಿಸಬೇಕಾಗಿದೆ.
ಅವರ ಸಾಮಾಜಿಕ ಕಳಕಳಿಗೆ ಹಲವು ಜೀವಂತ ಉದಾಹರಣೆಗಳಿವೆ, ಇಡೀ ಕರ್ನಾಟಕ ರಾಜ್ಯದಲ್ಲಿ ಯುವಮೋರ್ಚಾ ಎಂದು ಗೊತ್ತಾಗಿದ್ದೆ ಮುನಿರಾಜುಗೌಡ ಯುವ ಮೋರ್ಚಾ ಅಧ್ಯಕ್ಷರಾದ ನಂತರ ಕೇವಲ ಬೆಂಗಳೂರಿಗೆ ಸೀಮಿತವಾಗದೆ ಕರ್ನಾಟಕ ರಾಜ್ಯದಾದ್ಯಂತ ಯುವಕರನ್ನು ಸಂಘಟಿಸಿ ಯುವ ಬಿಜೆಪಿಯನ್ನು ಸದೃಢವಾಗಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ.
ಸುಮಾರು ಎಂಟು ವರ್ಷಗಳಿಂದ ಬೆಂಗಳೂರಿನಾದ್ಯಂತ ಶಾಲೆಗಳಲ್ಲಿ ಹತ್ತನೆ ತರಗತಿಯನ್ನು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವುದರ ಜೊತೆಗೆ ಕೆಲ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ಮಾಡುತ್ತಿದ್ದಾರೆ.
ಸಹಕಾರ ಬೇಕೆಂದು ಕೇಳಿಕೊಂಡು ಹೋದ ಅನೇಕ ಬಡ, ಆರ್ಥಿಕವಾಗಿ ಹಿಂದುಳಿದ ಜನಗಳಿಗೆ ಅವರೆಂದು ಬರಿಗೈಲಿ ಕಳುಹಿಸಿ ಕೊಟ್ಟಿಲ್ಲ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಮಾಜ ಕಳಕಳಿಯ ಮನವಿಗೆ ಓಗೊಟ್ಟು ಬೀದರ್ ಜಿಲ್ಲೆಯ ಗೊರಟ ಗ್ರಾಮವನ್ನು ದತ್ತುಪಡೆದು ಉನ್ನತ ಶಾಲೆ ಮತ್ತು ವಾಚನಾಲಯವನ್ನು ನಿರ್ಮಿಸಿ ಕೊಡುವುದರ ಜೊತೆಗೆ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ಪ್ರತಿಮೆಯನ್ನು ನಿರ್ಮಿಸಿದ್ದಾರೆ.
ಇಷ್ಟೆಲ್ಲಾ ಅಭಿವೃದ್ಧಿಗಳನ್ನು ಅಧಿಕಾರ ಇಲ್ಲದೆ ಮಾಡಿರುವ ತುಳಸಿ ಮುನಿರಾಜುಗೌಡರಿಗೆ ರಾಜರಾಜೇಶ್ವರಿ ನಗರ ಕ್ಷೇತ್ರದ ಮತದಾರ ಪ್ರಭುಗಳು ಗೆಲ್ಲಿಸಿದರೆ ಸರ್ಕಾರ ಅಧಿಕಾರದಲ್ಲಿ ಇರಲಿ ಬಿಡಲಿ ತಮ್ಮ ಶಕ್ತ್ಯಾನುಸಾರ ಕ್ಷೇತ್ರದ ಅಭಿವೃದ್ಧಿ ಗೆ ಬಿಜೆಪಿಯ ಅಭ್ಯರ್ಥಿ ಮುನಿರಾಜುಗೌಡ ಮತ್ತು ಅವರ ಸಹೋದರ ಮೂರ್ತಿ ಪಾಪಣ್ಣ ಮತ್ತು ತಂಡದ ಸ್ನೇಹಿತರು ಸದಾ ನಿಮ್ಮೊಂದಿಗಿದ್ದು ನ್ಯಾಯ ದೊರಕಿಸಿಕೊಡುತ್ತಾರೆಂಬ ಭರವಸೆ ಬಿಜೆಪಿಯ ಹಿರಿಯ ನಾಯಕರು ವ್ಯಕ್ತಪಡಿಸುತ್ತಾರೆ.
ಮತದಾರ ಪ್ರಭುಗಳೇ ಕಣ್ಣ ಮುಂದೆಯೇ ಕೆಟ್ಟ ಸಂಪ್ರದಾಯದ ದಂಧೆ ನಡೆಸುವ ಮುನಿರತ್ನ ರಂತಹ ನಾಲಾಯಕ್ ನಾಯಕರಿಗಿಂತ ಅಭಿವೃದ್ಧಿಯ ಪಥದ ಕನಸು ಹೊಂದಿರುವ ಮುನಿರಾಜುಗೌಡರಿಗೆ ರಾಜರಾಜೇಶ್ವರಿ ಕ್ಷೇತ್ರದ ಮತದಾರರು ಹರಸಿ ಹಾರೈಸುತ್ತಾರೆಂಬ ನಂಬಿಕೆ ನಮಗಿದೆ.
ಲಕ್ಷ್ಮಿಶ್ರೀ...
Recent news in karnataka »
ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ
ರಾಮನಗರ: ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಕಳೆದ 30 ವರ್ಷಗಳಿಂದಲೂ ನಿಮ್ಮ ಸೇವೆ ಮಾಡಿದ್ದೇನೆ. ಮುಂದೆಯೂ ನಿಮ್ಮ ಕಷ್ಟಗಳನ್ನರಿತು ನಿಮಗಾಗಿ ಮತ್ತಷ್ಟು ಕ
ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ
ರಾಮನಗರ, ಫೆ. 02 : ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಧ್ವಜ ಸ್ತಂಭದ ವಿಚಾರವು ತುಂಬಾ ಸೂಕ್ಷ್ಮ ವಿಚಾರವಾಗಿದ್ದು, ಈ ಸಂಬಂಧ ಯಾವು
ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ
ಚನ್ನಪಟ್ಟಣ: ಸಂವಿಧಾನ ಜಾಗೃತಿ ಜಾಥಾಕ್ಕೆ ತಾಲ್ಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಇದೇ ಸಂದರ್ಭದಲ್ಲಿ
ಸಂವಿಧಾನ ಜಾಗೃತಿ ಜಾಥಾ
ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ
ಚನ್ನಪಟ್ಟಣ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಶ್ರೀ ವೀರಾಂನೇಯಸ್ವಾಮಿ ಗೆ ವಿಶೇಷ
ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ
ರಾಮನಗರ, ಜ. 17: ರಾಮನಗರ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಹೊಂದಿರುವ ಆಸ್ತಿಗಳನ್ನು ದಿನಾಂಕ: 02.05.2015 ರಿಂದ ಜಾರಿಗೆ ಬರುವಂತೆ,
ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ
ರಾಮನಗರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20, 2020-21, 2021-22 ಮತ್ತು 2022-23ರ (ಜುಲೈ ಆವೃತ್ತಿ) ದ್ವಿತೀಯ/ತೃತೀಯ ವರ್ಷದ ಬಿ
ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ
ಹಾಸನ: ಪ್ರಾಕೃತಿಕ ಸೌಂದರ್ಯವು ಇ-ತ್ಯಾಜ್ಯ, ಕೆಲ ತಂತ್ರಜ್ಞಾನ ಹಾಗೂ ಪ್ಲಾಸ್ಟಿಕ್ ನಿಂದ ಹಾಳಾಗುತ್ತಿದೆ. ಪರಿಸರ ನಾಶಕ್ಕೆ ಮುನ್ನುಡಿ ಬರೆದವನೇ
೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ
ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಪಡಿತರ ಅಕ್ಕಿಯ ಪೈಕಿ ಸುಮಾರು ೫೨ ಲಕ್ಷಕ್ಕೂ ಮೌಲ್ಯದ ೧,೫೪೩.೬೫ ಕ್ವಿಂಟಾಲ್ ಅ
ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್
ಚನ್ನಪಟ್ಟಣ: ದಸರಾ ಎಂದರೆ ಕೇವಲ ಮೈಸೂರು ಎಂಬಂತಾಗಿದೆ, ಇದು ನಾಡ ಹಬ್ಬ ಎಂಬುದು ಕೇವಲ ಉಲ್ಲೇಖಕ್ಕಷ್ಟೇ ಸೀಮಿತವಾಗಿದೆ. ಇದು ನಾಡಹಬ್ಬ ಎಂಬುದು ಸರ
ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ
ರಾಮನಗರ: ಚನ್ನಪಟ್ಟಣ; ಪ್ರೊ ಭಗವಾನ್ ವಿಚಾರವಾದಿ, ಮೂಢನಂಬಿಕೆಗಳನ್ನು ಕಿತ್ತೊಗೆಯಲು, ಪುರಾಣ ಎಂಬುದು ಕಪೋಲ ಕಲ್ಪಿತ, ಇತಿಹಾಸ ಎಂಬುದು ಸಾರ್ವಕಾಲ
ಪ್ರತಿಕ್ರಿಯೆಗಳು