ತಾಳೆಯೋಲೆ ೨೦೯: ಮಾನವನ ಜೀವನದಲ್ಲಿ ಆಧ್ಯಾತ್ಮಿಕ ಗುರುವಿನ ಅವಶ್ಯಕತೆ ಏನು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
ಮಾನವನ ಜೀವನದಲ್ಲಿ ಆಧ್ಯಾತ್ಮಿಕ ಗುರುವಿನ ಅವಶ್ಯಕತೆ ಏನು ?
*ಇಂದು ಕೋಟಿ ವಿದ್ಯೆಗಳು ಇದ್ದರೂ ಅವೆಲ್ಲವೂ ಕೂಳಿಗಾಗಿ ಕೂಡಿರುವ ವಿದ್ಯೆಗಳೇ. ಈ ಕೂಳಿಗಾಗಿ ವಿದ್ಯೆಗಳನ್ನು ಬೋಧಿಸುವವರನ್ನು ಶಿಕ್ಷಕ, ಉಪಾಧ್ಯಾಯರು, ಆಚಾರ್ಯರು ಎಂದು ಕರೆಯಬಹುದು. ಅವರಿಗೆ ' ಗುರು ' ಎನ್ನುವ ಪದ ವರ್ತಿಸುವುದಿಲ್ಲ.* ಯೋಗ ಮಹಿಮೆಯಿಂದ ವಿಶ್ವ ಜ್ಞಾನ - ವನ್ನು ಹೊಂದಿ, ಸಿದ್ದ ಪುರುಷನಾಗಿ, ಅತೀಂದ್ರಿ ಯ ಶಕ್ತಿಗಳನ್ನು ಉಳ್ಳವನಾಗಿ, ನಿಷ್ಕಲ್ಮಷ ಹೃದಯದವನಾದ ಈಶ್ವರ ಪರಾಭಕ್ತನನ್ನು ಗುರು ಇಲ್ಲವೆ ಸದ್ಗುರು ಎಂದು ಕರೆಯುವರು.
ಇಂತಹ ಗುರುವನ್ನು ತ್ರಿಮೂರ್ತಿ ಸ್ವರೂಪವಾಗಿ ಭಾರತೀಯ ಶಾಸ್ತ್ರಗಳು ಸ್ತುತಿಸಿರುವವು. ಮಾನವನ ಜನ್ಮವನ್ನು ಹೊಂದಿದವರು ಆತ್ಮ ಜ್ಞಾನವನ್ನು ( ಇದು ಪುಸ್ತಕಗಳು ಓದುವುದರಿಂದ ಬರುವ ಜ್ಞಾನವಲ್ಲ. ಇದು ಒಂದು ಪ್ರತ್ಯಕ್ಷ ಅನುಭವ ) ಹೊಂದಿ ಮೋಕ್ಷವನ್ನು ( ಮತ್ತೆ ಮತ್ತೆ ಹುಟ್ಟಿ ಮರಣ ಹೊಂದುವುದನ್ನು ಬಿಟ್ಟು ಪರಮಾತ್ಮನಲ್ಲಿ ಐಕ್ಯವಾಗುವಿಕೆ ) ಹೊಂದಬೇಕೆಂಬ ಆಸೆ ಭಾರತ ದೇಶದಲ್ಲಿ ಸಹಜವಾಗಿಯೇ ಅನೇಕರಿಗೆ ಉಂಟಾಗುವುದು.
ಗತ ಕಾಲದಲ್ಲಿ ಪುಸ್ತಕಗಳು ತುಂಬಾ ಕಡಿಮೆ. ಕೆಲವು ಇದ್ದರೂ ಅವು ಎಲ್ಲರಿಗೂ ಕೈಗೆಟುಕುವ ಹಾಗಿರಲಿಲ್ಲ. ಆದ್ದರಿಂದ ವೇದಾಂತ ಜ್ಞಾನವನ್ನು ಹೊಂದುವುದಕ್ಕೆ ಗುರುವಿನ ಅವಶ್ಯಕತೆ ತುಂಬಾ ಹೆಚ್ಚಾಗಿರುತ್ತದೆ. ಅನೇಕ ವಿಷಯಗಳೊಂದಿಗೆ ಮೋಕ್ಷವನ್ನು ನೀಡಬಹುದಾದ ದೇವರ ಮಂತ್ರಗಳನ್ನು ಗುರುಗಳು ಶಿಷ್ಯನಿಗೆ ನೀಡುತ್ತಿದ್ದರು. ಹಾಗೆಯೇ ಸಾಧನೆಯಲ್ಲಿ ಬರುವ ಆಧ್ಯಾತ್ಮಿಕ ಆತಂಕಗಳ ಕುರಿತು ಸಹ ವಿಪುಲವಾಗಿ ಹೇಳುವನು.
ಆದರೆ ಇಂದು ಆಧ್ಯಾತ್ಮಿಕ ಸಮಾಚಾರಕ್ಕಾಗಿ ಯಾವುದೇ ಗುರುಗಳ ಅವಶ್ಯಕತೆ ಬೇಕಾಗಿಲ್ಲ. ಯಾಕೆಂದರೆ ಈಗ ಲಕ್ಷ ಲಕ್ಷಗಟ್ಟಲೇ ಪುಸ್ತಕಗಳು ದೊರೆಯುತ್ತವೆ. ದೀಕ್ಷೆಯನ್ನು ಸಾಧಿಸುವುದಕ್ಕೆ ಆಶೀರ್ವಾದಗಳಿಗೆ ಸಾಧನಾನುಭವ ಅನುಮಾನ ನಿವೃತ್ತಿಗೆ ಮಾತ್ರ, ಈ ಕಾಲದಲ್ಲಿಯೂ ಸಹ ಗುರುವಿನ ಅವಶ್ಯಕತೆ ಇರುವುದು. ಮೋಕ್ಷ ಪ್ರಾಪ್ತಿಗಾಗಿ ತಹತಹಿಸುವ ಈ ಜಿಜ್ಞಾಸುವ ಗುರುವನ್ನು ಆಶ್ರಯಿಸಿ ಪರೋಕ್ಷ ಜ್ಞಾನವನ್ನು, ಗುರುವಿನ ಮುಖಾಂತರ ಹೊಂದಿ, ಗುರುವನ್ನು ಸೇವಿಸಿ, ಆತ್ಮ ಸಾಧನೆಯಲ್ಲಿ ಮುಳುಗಿ ಹೋಗುವನು.
ನಿಜವಾದ ಗುರುವಿಗೆ ಆಶೀರ್ವದಿಸುವ ಶಕ್ತಿ ಇರುತ್ತದೆ. ಅಂತಹ ಗುರುವಿನ ಆಶೀರ್ವಾದವನ್ನು ಹೊಂದಿದ ಶಿಷ್ಯನು ಧನ್ಯನಾಗಿ ಶೀಘ್ರವಾಗಿ ಸಾಧನೆಯಲ್ಲಿ ಪ್ರಗತಿಯನ್ನು ಸಾಧಿಸುವನು. ಭಾರತೀಯರು ಆಧ್ಯಾತ್ಮಿಕ ಗುರುವನ್ನು ಪ್ರತ್ಯಕ್ಷ ದೈವವಾಗಿ ಭಾವಿಸುವರು. ಆ ಕಾಲದಲ್ಲಿ ರಾಜರು ಹಾಗೂ ರಾರಾಜರು ಸಹ ಸದ್ಗುರುಗಳಿಗೆ ಮೊಣಕಾಲೂರಿ ಅವರ ಆಶೀರ್ವಾದವನ್ನು ಹೊಂದುತ್ತಿದ್ದರು. ಭಾರತ ದೇಶದಲ್ಲಿ ಸದ್ಗುರುಗಳು ಎಲ್ಲ ಕಾಲಗಳಲ್ಲಿಯೂ ಸಾವಿರಾರು ಸಂಖ್ಯೆಗಳಲ್ಲಿ ಇರುವರು.
ದೇವರುಗಳಿಗೆ ತವರೂರಾದ ಭಾರತ ದೇಶದಲ್ಲಿ ಗುರುಗಳಿಗೆ ಬರ ಇಲ್ಲ. ಸತ್ಯವಿರುವ ಸ್ಥಳದಲ್ಲಿ ಅಸತ್ಯವೂ ಸಹ ಇರುವ ಹಾಗೆ, ಆತ್ಮ ಸಿದ್ದಿ ಹೊಂದಿದ ಅನೇಕರು ಗುರುಗಳಾಗಿ ಚಲಾವಣೆ ಆಗುತ್ತಿರುವರು. ಯಾವುದು ಕಲ್ಲೋ ಯಾವುದು ರತ್ನವೋ ಪರೀಕ್ಷಿಸಿ ಗ್ರಹಿಸಬೇಕಾದ ಭಾರ ನಿಮ್ಮ ದೆ !.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು