ಅತ್ಯಾಚಾರ ಎಸಗಿ ಕೊಲೆಗೈದ ಪಾಪಿಗಳಿಗೆ ಗಲ್ಲು ಶಿಕ್ಷೆ ನೀಡಿ, ದಲಿತ ಸಂಘಟನೆಗಳ ಆಕ್ರೋಶ

ಚನ್ನಪಟ್ಟಣ:ಅ/05/20/ಸೋಮವಾರ.
ಉತ್ತರ ಪ್ರದೇಶದ ಹಥ್ರಾಸ್ ಜಿಲ್ಲೆಯಲ್ಲಿ ಯುವತಿ ಮೇಲೆ ಪೈಶಾಚಿಕವಾಗಿ ಅತ್ಯಾಚಾರ ನಡೆಸಿ, ಅಮಾನುಷವಾಗಿ ಹತ್ಯೆಗೈದ ಕ್ರೂರಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು. ಕುಟುಂಬದವರಿಗೂ ಮುಖ ತೋರಿಸದೆ ರಾತ್ರೋರಾತ್ರಿ ಶವವನ್ನು ಸುಟ್ಟು ಹಾಕಿದ ಪೋಲೀಸರನ್ನು ಬಂಧಿಸಬೇಕು. ಉತ್ತರ ಪ್ರದೇಶ ಸರ್ಕಾರವನ್ನು ಅಮಾನತ್ತಿನಲ್ಲಿಡಬೇಕು ಎಂದು ತಾಲ್ಲೂಕಿನ ದಲಿತ ಪರ ಸಂಘಟನೆಗಳ ಒಕ್ಕೂಟ ಇಂದು ನಗರದ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ರಾಷ್ಟ್ರಪತಿಯವರಿಗೆ ತಹಶಿಲ್ದಾರ್ ರವರ ಮೂಲಕ ಮನವಿ ಸಲ್ಲಿಸಿದರು.
ಕಾಂಗ್ರೆಸ್ ಮುಖಂಡ ಶರತ್ ಚಂದ್ರ ಮಾತನಾಡಿ ದಲಿತರು ಮತ್ತು ಹಿಂದುಳಿದ ವರ್ಗಗಳ ಜನರನ್ನು ಹತ್ತಿಕ್ಕುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ಅದರಲ್ಲೂ ಉತ್ತರ ಪ್ರದೇಶದ ಸರ್ಕಾರವು ಒಡೆದಾಳುವ ನೀತಿ ಪ್ರದರ್ಶಿಸುತ್ತಿದೆ. ಹೀಗೆ ಮುಂದುವರೆದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತಸಂಘ ದ ಹಿರಿಯ ಮುಖಂಡ ಎಂ ರಾಮು ಮಾತನಾಡಿ ಜನ ತಪ್ಪು ಮಾಡಿದರೆ ಪೋಲಿಸರು ಕ್ರಮ ಕೈಗೊಳ್ಳುವಂತೆ, ಸರ್ಕಾರ ತಪ್ಪು ಮಾಡಿದರೆ ರಾಜ್ಯಪಾಲರು ಮತ್ತು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಇಲ್ಲವೇ ರಾಷ್ಟ್ರಪತಿ ಕ್ರಮ ಕೈಗೊಳ್ಳಬೇಕು. ಇವರೆಲ್ಲರೂ ಪ್ರಧಾನಿ ಮತ್ತು ಬಿಜೆಪಿ ಪಕ್ಷದ ಕೈಗೊಂಬೆಗಳಾಗಿದ್ದು ಸಾಮಾನ್ಯ ಜನರು ಪರಿತಪಿಸುವಂತೆ ಆಗಿದೆ. ಹೀಗೆ ಮುಂದುವರೆದರೆ ಸರ್ಕಾರವು ರೊಚ್ಚಿಗೆದ್ದ ಜನರಿಂದಲೇ ಪತನವಾಗುವುದು ಸತ್ಯ ಎಂದರು.
ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಸೈಯದ್ ನವಾಜ್ ಮಾತನಾಡಿ ಇದು ರಾಮರಾಜ್ಯವಲ್ಲ ರಾವಣ ರಾಜ್ಯ ಆಗಿದೆ. ಇದು ಚಡ್ಡಿಗಳ ಸರ್ಕಾರ ಎಂದು ಜರಿದರು.
ದಲಿತ ಮುಖಂಡ ಜಯಂತ್ ಚಾಲುಕ್ಯ ಮಾತನಾಡಿ ಉತ್ತರ ಪ್ರದೇಶ ಸರ್ಕಾರವನ್ನು ಅಮಾನತ್ತಿನಲ್ಲಿಟ್ಟು ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ದವಾದರೆ ಮುಂದಿನ ದಿನಗಳಲ್ಲಿ ದೇಶಾದ್ಯಂತ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯ ನಂತರ ರಸ್ತೆಯಲ್ಲಿ ಮೆರವಣಿಗೆ ಮೂಲಕ ತಾಲ್ಲೂಕು ಕಛೇರಿಗೆ ಆಗಮಿಸಿ ಅಲ್ಲಿಯೂ ಘೋಷಣೆ ಕೂಗಿದರು. ಇದೆ ವೇಳೆ ಕಕಜವೇ ರಾಜ್ಯಾಧ್ಯಕ್ಷ ರಮೇಶ್ ಗೌಡ ಮಾತನಾಡಿ ಜಾತಿ ಧರ್ಮ ಬಿಟ್ಟು ಹೋರಾಟ ಮಾಡಬೇಕು. ಯಾವ ಹೆಣ್ಣಿಗೆ ಅನ್ಯಾಯವಾದರೂ ಎಲ್ಲರೂ ಸಿಡಿದೇಳಬೇಕು ಎಂದು ಕರೆ ನೀಡಿದರು.
ಸ್ವರಾಜ್ ಸಂಘಟನೆಯ ಸುಕನ್ಯಾ, ಅಕ್ಕೂರು ಶೇಖರ್, ಎ ಸಿ ವೀರೇಗೌಡ ಸೇರಿದಂತೆ ಅನೇಕ ದಲಿತ ಮುಖಂಡರು ಮಾತನಾಡಿ ತಮ್ಮ ಆಕ್ರೋಶ ಹೊರಹಾಕಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶಿಲ್ದಾರ್ ನಾಗೇಶ್ ರವರು ಈಗಾಗಲೇ ಸರ್ಕಾರವು ತನಿಖೆಯನ್ನು ಕೈಗೆತ್ತಿಕೊಂಡಿದೆ. ತಾಲ್ಲೂಕಿನ ಹೋರಾಟಗಾರರು ನೀಡಿರುವ ಮನವಿಯನ್ನು ನಾನು ಸರ್ಕಾರಕ್ಕೆ ಸಲ್ಲಿಸುತ್ತೇನೆ ಎಂದರು.
ಪ್ರತಿಭಟನೆಯಲ್ಲಿ ಕರವೇ ಸತ್ಯನಾರಾಯಣ ಮತ್ತು ಹೋ ಪು ಸಾಗರ್, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಹನುಮಂತಯ್ಯ, ವೆಂಕಟೇಶ (ಶೇಟು), ಶ್ರೀನಿವಾಸ, ಕೋಟೆ ಸಿದ್ದರಾಮು, ಸಮತಾ ಸೈನ್ಯದ ಶಿವಕುಮಾರ್, ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in nation »

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಹೊಸ ಫಾರ್ಚೂನರ್ ಮತ್ತು ಲೆಜೆಂಡರ್ ನೊಂದಿಗೆ ಹೊಸ ವರ್ಷವನ್ನು ಪ್ರಾರಂಭಿಸುತ್ತಿದೆ

ಅತ್ಯಾಚಾರ ಎಸಗಿ ಕೊಲೆಗೈದ ಪಾಪಿಗಳಿಗೆ ಗಲ್ಲು ಶಿಕ್ಷೆ ನೀಡಿ, ದಲಿತ ಸಂಘಟನೆಗಳ ಆಕ್ರೋಶ
ಚನ್ನಪಟ್ಟಣ:ಅ/05/20/ಸೋಮವಾರ.
ಉತ್ತರ ಪ್ರದೇಶದ ಹಥ್ರಾಸ್ ಜಿಲ್ಲೆಯಲ್ಲಿ ಯುವತಿ ಮೇಲೆ ಪೈಶಾಚಿಕವಾಗಿ ಅತ್ಯಾಚಾರ ನಡೆಸಿ, ಅಮಾನುಷವಾಗಿ ಹತ್ಯೆಗೈದ ಕ್ರೂರಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು. ಕುಟುಂಬದವರಿಗೂ ಮುಖ ತೋರಿಸದೆ ರಾ

ಇನ್ನು ಮುಂದೆ ಪ್ಯಾರಾಮಿಲ್ಟ್ರಿ ಕ್ಯಾಂಟೀನ್ ಗಳಲ್ಲಿ ಸ್ವದೇಶಿ ವಸ್ತುಗಳಷ್ಟೇ ಮಾರಾಟ ಅಮಿತ್ ಷಾ
ದೆಹಲಿ:ಮೇ/೧೩/೨೦/ಬುಧವಾರ. ದೇಶ ಕಾಯುತ್ತಿರುವ ಅರೆಸೈನಿಕ ಪಡೆಯ ದೇಶದ ನಾನಾ ಭಾಗದ ಎಲ್ಲಾ ಕ್ಯಾಂಟೀನ್ ಗಳಲ್ಲೂ ಜೂನ್ ಒಂದನೇ ತಾರೀಖಿನಿಂದ ಸ್ವದೇಶ

ಮೇ ಹದಿನೇಳ ರವರೆಗೆ ಲಾಕ್ಡೌನ್ ಮುಂದುವರಿಕೆ, ಕಠಿಣ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ
ನವದೆಹಲಿ:ಬೆಂಗಳೂರು:ಮೇ/೦೧/೨೦/ಶುಕ್ರವಾರ. ಕೇಂದ್ರ ಸರ್ಕಾರವು ಹಂತಹಂತವಾಗಿ ಸ್ವಲ್ಪ ಸ್ವಲ್ಪ ದಿನಗಳೇ ಲಾಕ್ ಡೌನ್ ಮಾಡುತ್ತಿದ್ದು ಮೇ ೦೩ ತನಕ ಇದ

ಭಾರತ ಆಹಾರ ನಿಗಮವು ರಾಷ್ಟ್ರಕ್ಕೆ ಆಹಾರ ಪೂರೈಸುವ ಜೀವನಾಡಿ
ಭಾರತ ಆಹಾರ ನಿಗಮವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಯಡಿಯಲ್ಲಿ ರಾಜ್ಯಕ್ಕೆ ಅಗತ್ಯವಾದ ಆಹಾರ ಧಾನ್ಯಗಳನ್ನು ನಿರಂತರವಾಗಿ ಪೂರೈಸುವುದರ ಮೂಲಕ ಕರ್ನಾಟಕ ರಾಜ್ಯದಲ್ಲಿ ಪ್ರಮುಖವಾದ ಪಾತ್ರವನ್ನು

ಕೊರೊನಾ ಲಸಿಕೆ ಸಂಶೋಧನಾ ತಂಡದಲ್ಲಿ ಕನ್ನಡಿಗ ವಿಜ್ಞಾನಿ
ಅರಕಲಗೂಡು: ಕೊರೊನಾ ವೈರಸ್ಗೆ ಲಸಿಕೆ ಸಂಶೋಧಿಸಲು ವಿಶ್ವ ಆರೋಗ್ಯ ಸಂಸ್ಥೆ ರೂಪಿಸಿರುವ ಯುರೋಪಿಯನ್ ಟಾಸ್ ಫೋರ್ಸ್ ಫಾರ್ ಕೊರೊನಾ ವೈರಸ್ ತಂಡದಲ್ಲ

ಅಮೂಲ್ಯ ಜೊತೆಗೆ ಆಯೋಜಕರನ್ನು ಗಡಿಪಾರು ಮಾಡಲಿ ಹಿಂಜಾವೇ
ಚನ್ನಪಟ್ಟಣ:ಫೆ/೨೧/೨೦/ಶುಕ್ರವಾರ.
ಪಾಕಿಸ್ತಾನದ ಪರ ಘೋಷಣೆ ಕೂಗಿ ಅನ್ನ ತಿನ್ನುತ್ತಿರುವ ದೇಶಕ್ಕೆ ದ್ರೋಹ ಬಗೆದ ಅಮೂಲ್ಯ ಜೊತೆಗೆ, ಈಕೆಯನ್ನು ವೇದಿಕೆಗೆ ಕರೆಸಿದ ಆಯೋಜಕರು

ಭಾರತ ಯಾರಪ್ಪನ ಸ್ವತ್ತಲ್ಲ, ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರ ಪಾತ್ರವಿದೆ ಕುಮಾರಸ್ವಾಮಿ
ಚನ್ನಪಟ್ಟಣ:ಫೆ/೧೪/೨೦/ಗುರುವಾರ.
ಭಾರತ ದೇಶ ಯಾರಪ್ಪನ ಸ್ವತ್ತಲ್ಲ, ಆರ್ ಎಸ್ ಎಸ್, ವಿ ಹೆಚ್ ಪಿ ಅಥವಾ ಬಿಜೆಪಿಯವರು ಕಟ್ಟಿದ ದೇಶ ನಮ್ಮದಲ್ಲ, ಸ್ವಾತಂತ್ರ್ಯ ಬಂದಾಗ ಇಂದಿನ ಬ

ಕನ್ನಡದ ಟ್ವಿಟರ್ ಆ್ಯಪ್ ಸಂಶೋಧಿಸಿದ ಯುವಕರು
ಮಂಡ್ಯ: ಇದುವರೆಗೆ ಹಿಂದಿ, ಇಂಗ್ಲೀಷ್ ಭಾಷೆಯ ಟ್ವಿಟರ್ ಗಳಲ್ಲೆ ಕನ್ನಡದ ಟ್ವೀಟ್ ಮಾಡುತ್ತಿದ್ದ ಕನ್ನಡಿಗರಿಗೆ ಸಿಹಿ ಸುದ್ದಿಯೊಂದನ್ನು ಯುವಕರೀರ್ವರು ಹೊರತ

ಬಡ ಮಹಿಳೆ ಖಾತೆಗೆ ಮೂವತ್ತು ಕೋಟಿ ! ಅನುಮಾನ ಮೂಡಿಸಿರುವ ಜನ ‘ಧನ’
ಚನ್ನಪಟ್ಟಣ:ಫೆ/೦೩/೨೦೨೦/ಸೋಮವಾರ.
ವಹಿವಾಟು ನಡೆಸದೇ ಸ್ಥಗಿತ ಗೊಂಡಿದ್ದ ಖಾತೆಗೆ ಮೂವತ್ತು
ಪ್ರತಿಕ್ರಿಯೆಗಳು