
ಮನೆಯೇ ಮೊದಲ ಪಾಠ ಶಾಲೆ: ಸೇಂಟ್ ಆನ್ಸ್ ಇಂಗ್ಲಿಷ್ ಶಾಲೆಯ ಮುಖ್ಯ ಶಿಕ್ಷಕಿ ಆಲ್ಫೋನ್ಸ್.
ಚನ್ನಪಟ್ಟಣ: ಮನೆಯೇ ಮೊದಲ ಪಾಠ ಶಾಲೆ ನಂತರ ಶಾಲೆಯ ಗುರುಗಳು, ಆದ್ದರಿಂದ ಮಕ್ಕಳ ವಿದ್ಯಾ ಬೆಳವಣಿಗೆಗೆ ಪೋಷಕರೇ ಹೆಚ್ಚು ಜವಾಬ್ದಾರಿ ಹೊರಬೇಕು. ಶಾಲಾ ಶಿಕ್ಷಕರು ಸಹ ಅವರ ಜೊತೆ ನಿರಂತರ ಎಂಟು ಗಂಟೆಗಳ ಕಾಲ ಬೋಧಿಸುವ ಮೂಲಕ ವಿದ್ಯಾರ್ಥಿಗಳಿಗೆ ಬೆನ್ನೆಲುಬಾಗಿರುತ್ತಾರೆ ಎಂದು ನಗರದ ಸೇಂಟ್ ಆನ್ಸ್ ಇಂಗ್ಲಿಷ್ ಶಾಲೆಯ ವ್ಯವಸ್ಥಾಪಕ ರಾದ ಸಿಸ್ಟರ್ ಆಲ್ಫೋನ್ಸ್ ಅಭಿಪ್ರಾಯ ಪಟ್ಟರು.ಅವರ

ಸ್ವಾತಂತ್ರ್ಯ ಪೂರ್ವದಿಂದಲೂ ನೆನೆಗುದಿಗೆ ಬಿದ್ದಿರುವ ಕಂದಾಯ ಇಲಾಖೆಯ ಕೆಲಸ. ನಿರಂತರ ಧರಣಿ
ಚನ್ನಪಟ್ಟಣ: ಮೇ 31 22. ಸ್ವಾತಂತ್ರ್ಯ ಪೂರ್ವದಿಂದಲೂ ಕಂದಾಯ ಇಲಾಖೆಯಲ್ಲಿ ರೈತರ ಮತ್ತು ದೀನ ದಲಿತರಿಗೆ ಸಂಬಂಧಿಸಿದ ರೈತರ ಕೆಲಸಗಳು ಬಾಕಿ ಇದ್ದು, ಅವುಗಳನ್ನು ಇತ್ಯರ್ಥ ಪಡಿಸುವವರೆಗೂ ತಾಲ್ಲೂಕು ಕಛೇರಿಯ ಮುಂಭಾಗ ಆಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಕರ್ನಾಟಕ ರಾಜ್ಯ ಕೃಷಿ ಉತ್ಪಾದಕರ ರೈತ ಸಂಘದ ರಾಜ್ಯಾಧ್ಯಕ್ಷ ಸುಜೀವನ್ ಕುಮಾರ್ ತಿಳಿಸಿದರು. ಅವರು ಇಂದು ನಗರದ ತಹಶ

ರಾಕೇಶ್ ಟಿಕಾಯತ್ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸಿದ ರೈತಮುಖಂಡರು
ಚನ್ನಪಟ್ಟಣ: ಮೇ 31 22. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಸ್ಪಷ್ಟೀಕರಣ ನೀಡಲು, ಬೆಂಗಳೂರಿನ ಗಾಂಧಿಭವನಕ್ಕೆ ಪತ್ರಿಕಾಗೋಷ್ಠಿ ನಡೆಸಲು ಬಂದಿದ್ದ, ರಾಕೇಶ್ ಟಿಕಾಯತ್ ರವರ ಮುಖಕ್ಕೆ ಮಸಿ ಬಳಿದು ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ರೈತಸಂಘದ ಮುಖಂಡರು, ನಗರದ ಗಾಂಧಿ ಭವನದ ಮುಂದೆ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ, ಮೆರವಣಿಗೆ ಮೂಲಕ ತಾಲ್ಲೂಕು ಕಛೇರಿ

ಮಳೂರುಪಟ್ಟಣ ವಿಎಸ್ಎಸ್ಎನ್ ಚುನಾವಣೆಯಲ್ಲಿ ಜೆಡಿಎಸ್ ಜಯಭೇರಿ
ಮುಂದಿನ ಐದು ವರ್ಷಗಳ ಅವಧಿಗೆ ಹಾಗೂ ಮುಂದಿನ ಚುನಾವಣೆಯಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹತೆ ಪಡೆಯಲು ಬೇಕಾಗಿದ್ದ ಮಳೂರುಪಟ್ಟಣ ಟಿಎಪಿಸಿಎಂಎಸ್ ಚುನಾವಣೆಯು ತೀವ್ರ ಜಿದ್ದಾಜಿದ್ದಿನಿಂದಾಗಿ ಕೂತೂಹಲ ಕೆರಳಿಸಿದ್ದು, ತಾಲೂಕಿನ ಮಳೂರುಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು ನೇತೃತ್ವದ ತಂಡ ಭರ್ಜರಿ ಜಯ ಸಾಧಿಸಿದೆ.

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ತಾಲ್ಲೂಕು ರೈತಸಂಘ ಪ್ರತಿಭಟನೆ
ಚನ್ನಪಟ್ಟಣ: ಮೇ 28 22 ಮುಗ್ಧ ರೈತರ ಹೆಸರಿನಲ್ಲಿ ತನ್ನ ಬೇಳೆ ಬೇಯಿಸಿಕೊಂಡು, ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿರುವ ರೈತ ಸಂಘದ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಕೂಡಲೇ ತಮ್ಮ ಹೆಗಲ ಮೇಲಿರುವ ಹಸಿರು ಶಾಲನ್ನು ಕಳಚಿಡಬೇಕು. ಹಾಗೂ ಅವರು ಡೀಲ್ ನಡೆಸಿದ್ದಾರೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ಸ್ವತಂತ್ರ್ಯ (ಸ್ವಾಯತ್ತ) ಸಂಸ್ಥೆಗೆ ಸರ್ಕಾರ ವಹಿಸಿಕೊಡಬೇಕು ಎಂದು ಆಗ್ರಹಿಸಿ ರಾಜ್

ಸ್ವಾವಲಂಬಿ ಬದುಕು ಸಾಗಿಸಲು ಮಹಿಳೆಯರು ಮುಂದಾಗುತ್ತಿರುವುದು ಸಂತಸ ಸಿಇಓ ಇಕ್ರಂ
ಚನ್ನಪಟ್ಟಣ: ಮೇ 26 22. ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮುಂದಾಗುತ್ತಿರುವುದು ಸಂತಸ ತಂದಿದೆ ಎಂದು ರಾಮನಗರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಸಂತಸ ವ್ಯಕ್ತಪಡಿಸಿದರು. ಅವರು ತಾಲ್ಲೂಕಿನ ತಗಚಗೆರೆ ಗ್ತಾಪಂ ವ್ಯಾಪ್ತಿಯ ಹರಿಸಂದ್ರ ಗ್ರಾಮದಲ್ಲಿ, ಶ್ರೀ ಸಂಜೀವಿನಿ ತಗಚಗೆರೆ ಗ್ರಾಮ ಪಂಚಾಯತಿ ಒಕ್ಕೂಟದ ವತಿಯಿಂದ ಶ್ರೀ ಕಾಳಿಕ

ಕಾಯಕ ಬಂಧುಗಳು ನರೇಗಾ ಕಾಮಗಾರಿಯ ಚಾಲಕ ಶಕ್ತಿಯಾಗಿದ್ದಾರೆ: ರೂಪೇಶ್ ಕುಮಾರ್
ಕಾಯಕ ಬಂಧುಗಳು ನರೇಗಾ ಕಾಮಗಾರಿಯ ಕಾರ್ಯಕ್ರಮದ ಚಾಲಕ ಶಕ್ತಿಗಳಾಗಿದ್ದು, ನರೇಗಾ ಪ್ರಗತಿಗೆ ಹಾಗೂ ಗ್ರಾಮೀಣ ಜನರ ಆರ್ಥಿಕ ಬದುಕಿಗೆ ಕಾಯಕ ಬಂಧುಗಳು ನರೇಗಾ ಆಪ್ತ ಸಹಾಯಕರಾಗಿದ್ದಾರೆ ಎಂದು ಸಹಾಯಕ ನಿರ್ದೇಶಕ (ಗ್ರಾ.ಉ) ರೂಪೇಶ್ ಕುಮಾರ್ ಹೆಚ್.ಆರ್ ತಿಳಿಸಿದರು. ಅವರು ಇಂದು ರಾಮನಗರ ಜಿಲ್ಲೆ ಹಾಗೂ ತಾಲ್ಲೂಕಿನ ಗೋಪಹಳ್ಳಿ ಗ್ರಾಮ ಪಂಚಾಯತಿಯ ಸಂಜೀವಿನಿ ಹಮ್ಮಿಕೊಂಡಿದ್ದ ಬೈರಮಂಗಲ, ಕಂಚುಗಾರನಹಳ್ಳಿ ಹಾಗ

ನರೇಗಾ ಯೋಜನೆಯಡಿ ಕಾಯಕ ಬಂಧುಗಳಿಗೆ ತರಬೇತಿ
ಚನ್ನಪಟ್ಟಣ: ಮೇ 23 22., ಇಂದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಸೋಗಾಲ ಗ್ರಾಮ ಪಂಚಾಯತಿಯ ಸಂಜೀವಿನಿ ಭವನದಲ್ಲಿ ಇಗ್ಗಲೂರು, ಹಾರೋಕೊಪ್ಪ, ಬಾಣಗಹಳ್ಳಿ, ಸೋಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಹಕ ಬಂಧುಗಳನ್ನು ಒಗ್ಗೂಡಿಸಿ ಕಾಯಕ ಬಂಧು ತರಬೇತಿಯನ್ನು ಯಶಸ್ವಿಯಾಗಿ ನಡೆಸಲಾಯಿತು. ಸೋಗಾಲ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ಶ್ರೀನಿವಾಸ್

ಅರಣ್ಯ ನಾಶದಿಂದ ಬದುಕು ನಾಶ ಆಯುಕ್ತ ದಯಾನಂದ
ಚನ್ನಪಟ್ಟಣ: ಮೇ 21 22. ಅರಣ್ಯ ನಾಶ ಪಡಿಸಿದರೆ ಬದುಕು ನಾಶವಾಗುತ್ತದೆ, ಪರಿಸರ ಉಳಿಸಿದರೆ ಮಾತ್ರ ಎಲ್ಲರ ಬದುಕು ಬಂಗಾರವಾಗುತ್ತದೆ. ಪ್ರಕೃತಿ ಉಳಿಸಲು ಕೇವಲ ಅರಣ್ಯ ಇಲಾಖೆ ಅಷ್ಟೇ ಅಲ್ಲಾ ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಉಳಿಸಿ ಬೆಳೆಸಬೇಕು. ಓಝೋನ್ ಪದರ ಸರಿಹೋಗಲು ಪರಿಸರ ಬಹಳ ಮುಖ್ಯ. ಮನುಷ್ಯ ಸೇರಿದಂತೆ ಪ್ರತಿಯೊಂದು ಜೀವಿಯೂ ಬದುಕುಳಿಯಬೇಕಾದರೆ ಪ್ರಕೃತಿ ಸಮತೋಲನ ಮುಖ್ಯವಾಗುತ್ತದೆ ಎಂದ

*ಆಡಳಿತಾಧಿಕಾರಿ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ*
ತಾಲ್ಲೂಕಿನಾದ್ಯಂತ ಶಿಥಿಲಗೊಂಡಿರುವ ಕೆರೆಗಳ ಮಾಹಿತಿ ಪಡೆದು ದುರಸ್ಥಿ ಮಾಡಿ, ನಿರಂತರ ಸುರಿದ ಮಳೆಯಿಂದ ಬೆಳೆ ನಷ್ಟವಾಗಿದ್ದರೆ ಜಂಟಿ ಸರ್ವೇ ಮಾಡಿಸಿ ಬೆಳೆ ಹಾನಿ ಬಗ್ಗೆ ಮಾಹಿತಿ ನೀಡುವಂತೆ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಮತ್ತು ಕೆಡಿಪಿ ಸದಸ್ಯರು ವಿಸ್ತೃತ ಚರ್ಚೆ ನಡೆಸಿದರು.ನಗರ ಮತ್ತು ನಗರಕ್ಕೆ ಹೊಂದಿಕೊಂಡಿರುವ ಹಾಗೂ ತಾಲ್ಲೂಕಿನಾದ್ಯಂತ ಇರುವ ಹಲವಾರು ಕೆರೆಗಳು ಅಪಾಯದ ಅಂಚಿನಲ್ಲಿವ