ರಾಮನಗರದಲ್ಲಿ ರಾರಾಜಿಸಿದ ಭಗವಾನ ಬಿರಸಾ ಮುಂಡಾ
ಸಾರ್ಥಕಾಯಿತು ಗಿರಿಜನ ಸ್ವಾಭಿಮಾನ ದಿನ : ವನವಾಸಿ ಕಲ್ಯಾಣ, ಕರ್ನಾಟಕದ ವತಿಯಿಂದ ರಾಮನಗರ ಜಿಲ್ಲೆಯಲ್ಲೊಂದು ವಿಶೆಷ ರೀತಿಯಲ್ಲಿ ಗಿರಿಜನ ಸ್ವಾಭಿಮಾನ ದಿನ (ಭಗವಾನ್ ಬಿರಸಾ ಮುಂಡಾ ಜಯಂತಿ) ವನ್ನು ದಿನಾಂಕ 21/11/2019 ರಂದು ಆಚರಿಸಲಾಯಿತು.
ರಾಮನಗರ , ಕನಕಪುರ, ಮಾಗಡಿ ತಾಲೂಕುಗಳಲ್ಲಿ ಬುಡಕಟ್ಟು ಜನಾಂಗದ ಈರುಳಿಗರನ್ನು ಒಳಗೊಂಡ ರಾಮನಗರ ಜಿಲ್ಲೆಯು ಅದ್ಭುತವಾದ ವನವಾಸಿಗರ ಶೊಭಾಯಾತ್ರೆಗೆ ಸಾಕ್ಷಿಯಾಯಿತು.
ಸಾವಿರಾರು ಸಂಖ್ಯೆಯಲ್ಲಿ ತಮ್ಮ ಸಾಂಪ್ರದಾಯಿಕ ವೇಷಭೂಷಣವನ್ನು ಧರಿಸಿ ಸಾಂಪ್ರದಾಯಿಕ ಹಾಡು , ನೃತ್ಯ, ವಾದ್ಯ , ಕುಣಿತದ ಮೂಲಕ ವನವಾಸಿ ಬಂಧುಗಳು, ಪುಟಾಣಿ ಮಕ್ಕಳು, ಯುವಕರು, ಮಾತೆಯರು ಸಮುದಾಯದ ಹಿರಿಯರು ಮತ್ತು ವನವಾಸಿ ಕಲ್ಯಾಣದ ಹಿರಿಯರನ್ನು ಒಳಗೊಂಡ ಶೋಭಾಯಾತ್ರೆಯು ...
ಭಗವಾನ್ ಬಿರಸಾ ಮುಂಡಾ ಕೀ ಜೈ.. ಭಾರತ್ ಮಾತಾ ಕೀ ಜೈ.. ವನವಾಸಿ ನಗರವಾಸಿ ಗ್ರಾಮವಾಸಿ ನಾವೆಲ್ಲರೂ ಭಾರತವಾಸಿ.. ಮುಂತಾದ ಘೊಷಣೆಗಳನ್ನು ಮೊಳಗಿಸುತ್ತಾ 1ಕಿಮಿ ದೂರದವರೆಗೂ ಸುಭದ್ರವಾದ ಆರಕ್ಷಕ (ಪೊಲಿಸ್) ಪಡೆಯೊಂದಿಗೆ ಹೊರಟ ಶೊಭಾಯಾತ್ರೆಯು.. ರಾಮನಗರದ ಗಲ್ಲಿ ಗಲ್ಲಿಗಳಲ್ಲಿ ಬುಡಕಟ್ಟು ಜನರ ಒಗ್ಗಟ್ಟು, ಸಾಂಪ್ರದಾಯಿಕ ಕಲೆ , ಮತ್ತು ಶಿಸ್ತಿನಮೂಲಕ ಭಗವಾನ್ ಬಿರಸಾ ಮುಂಡಾ ರವರನ್ನು ಪರಿಚಯಿಸುವ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ ಪ್ರೆಕ್ಷಕರಿಗೆ ಮನರಂಜನೆ ನೀಡುವಲ್ಲಿ ಸಾಕ್ಷಿಯಾಯಿತು.
ವೇದಿಕೆ ಕಾರ್ಯಕ್ರಮ :
ಶೊಭಾಯಾತ್ರೆಯ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲೂ ಕೂಡ ಸಾವಿರಾರು ಸಂಖ್ಯೆಯಲ್ಲಿ ವನವಾಸಿ ಬಂಧುಗಳು ಮತ್ತು ನಗರದ ಜನರು ಭಾಗವಹಿಸಿ ಸಭಾಂಗಣ ಪೂರ್ತಿ ತುಂಬಿ ತುಳುಕಿತು.
ವೇದಿಕೆಯನ್ನು ಅಲಂಕರಿಸಿದ
ವನವಾಸಿ ಕಲ್ಯಾಣದ ಹಿರಿಯರಾದ ಶ್ರೀ ಶ್ರೀಪಾದ್ ( ಕ್ಷೆತ್ರಿಯ ಸಂಘಟನಾ ಕಾರ್ಯದರ್ಶಿ) ಬಿರಸಾ ಮುಂಡಾರವರ ಕುರಿತು ಮುಖ್ಯ ವಕ್ತಾರರಾಗಿ ಮಾತನಾಡಿದರು.
ಶ್ರೀ ವೆಂಕಟೇಶ್ ಸಾಗರ್ ( ರಾಜ್ಯಧ್ಯಕ್ಷರು) ಪ್ರಸ್ತಾವಣಾ ಭಾಷಣವನ್ನು ಮಾಡಿದರು.
ಶ್ರೀ ಸತ್ಯಕಿರ್ತೀ ( ಪ್ರಾಂತದ ಸಹ ಕಾರ್ಯದರ್ಶಿಗಳು) ಕಾರ್ಯಕ್ರಮ ಪೂರ್ತಿ ಉಪಸ್ತಿತರಿದ್ದರು.
ಹಾಗು ಅಧಿಕಾರಿಗಳಾದ
ಶ್ರೀಮತಿ ಎಂ ಎಸ್ ಅರ್ಚನಾ ( ರಾಮನಗರ ಜಿಲ್ಲಾಧಿಕಾರಿಗಳು)
ಪ್ರೋ ಟಿ ಬಿ ಬಸವನಗೋಡ ( ನಿರ್ದೇಶಕರು, ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು)
ಶ್ರೀ ಕೃಷ್ಣಮೂರ್ತಿ ( ರಾಮನಗರ ಜಿಲ್ಲಾಧ್ಯಕ್ಷರು , ವನವಾಸಿ ಕಲ್ಯಾಣ)
ಇವರೆಲ್ಲರೂ..
ಮಾತನಾಡಿ ಸಮೂದಾಯದ ಸಮಸ್ಯೆಗಳನ್ನು ಮತ್ತು ಮುಂದಿನ ದಿನಗಳಲ್ಲಿ ವನವಾಸಿ ಕಲ್ಯಾಣದ ಜೊತೆಯಲ್ಲಿ ಮಾಡಬಹುದಾದ ಕೆಲವು ಕಾರ್ಯಗಳನ್ನು ಪ್ರಸ್ತುತಪಡಿಸಲಾಯಿತು.
ಶ್ರೀ ರಾಜು (ಕಾರ್ಯಕ್ರಮದ ನಿರ್ವಹಣೆ ಮಾಡಿದರು)
ಶ್ರೀ ಸತೀಶ್ ( ಸ್ವಾಗತ ಪರಿಚಯ ನಡೆಸಿಕೊಟ್ಟರು.)
ಶ್ರೀ ಮಂಜುನಾಥ ( ರಾಮನಗರ ಜಿಲ್ಲಾ ಸಂಘಟನಾ ಕಾರ್ಯದರ್ಶಿ.) ವಂದನಾರ್ಪನೆ ನಡೆಸಿಕೊಟ್ಟರು.
ಶ್ರೀ ದೊಂಡು ಪಾಟೀಲ ( ರಾಜ್ಯ ಹಿತರಕ್ಷಾ ಪ್ರಮುಖರು, ವನವಾಸಿ ಕಲ್ಯಾಣ) ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು