ನಗರದಲ್ಲಿ ಗುರುವಾರ ಮುಂಜಾನೆ ಚಡ್ಡಿ ಗ್ಯಾಂಗ್ ನಿಂದ ಸರಣಿ ಕಳವು
ಚನ್ನಪಟ್ಟಣ:ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ವಿವಿಧ ರೀತಿಯ ಕಳ್ಳತನ ಪ್ರಕರಣಗಳು ದಿನೆದಿನೇ ಹೆಚ್ಚಾಗುತ್ತಿದ್ದು, ಪೋಲೀಸರ ಆಲಕ್ಷ್ಯವೋ ಕಳ್ಳರ ಕೈಚಳಕವೋ ತಿಳಿಯದಾಗಿದೆ. ಬೈಕ್ ಗಳು, ಕಾರುಗಳು, ಮನೆಯಲ್ಲಿನ ಕಳವಿನ ಜೊತೆಗೆ ಅಂಗಡಿ, ಹೋಟೆಲ್ ಗಳ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಪೋಲಿಸ್ ಠಾಣೆಗಳಲ್ಲಿ ದಾಖಲಾಗುವ ದೂರುಗಳಿಗೂ ಪತ್ತೆಯಾಗುವ ಪ್ರಕರಣಗಳಿಗೂ ಅಜಗಜಾಂತರವಿದೆ ಎಂಬುದು ಸತ್ಯ ಸಂಗತಿ. ಪೋಲಿಸ್ ಇಲಾಖೆಯಲ್ಲಿನ ಸಿಬ್ಬಂದಿಗಳ ಕೊರತೆಯೋ ಅಥವಾ ತನಿಖಾಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯೋ ಎಂಬುದು ಗೊಂದಲವಾಗಿದೆ. ಇದಕ್ಕೆಲ್ಲಾ ಹಲವಾರು ಪ್ರಕರಣಗಳು ಇನ್ನೂ ಪತ್ತೆಯಾಗದೆ ಧೂಳು ಹಿಡಿಯುತ್ತಿರುವುದು ಸಾಕ್ಷಿಭೂತವಾಗಿ ನಿಂತಿವೆ. ಸಣ್ಣ ಉದಾಹರಣೆಯಾಗಿರುವ ಕುವೆಂಪು ನಗರದ ಆರನೇ ತಿರವಿನಲ್ಲಿನ ನಗ-ನಗದು ಸೇರಿ ಕೋಟ್ಯಾಂತರ ರೂಪಾಯಿ ಕಳವು, ಸರ್ಕಾರಿ ಜಮೀನು ಕಬಳಿಸಿದ ಹತ್ತಾರು ಮಂದಿ ಪ್ರಕರಣ, ನ್ಯಾಯಾಲಯದ ಬಳಿ ಇರುವ ಬೃಹತ್ ನೀರಿನ ಟ್ಯಾಂಕ್ ನ ಕೊಳವೆಗಳಲ್ಲಿ ಸಿಕ್ಕ ಶವದ ಅಂಗಾಂಗಳ ಬಗ್ಗೆ ಇದುವರೆಗೂ ಪತ್ತೆಯಾಗದಿರುವ ಕಾರಣ ಸಾರ್ವಜನಿಕರಲ್ಲಿ ಅನುಮಾನ ಮೂಡುವುದರ ಜೊತೆಗೆ ಪೋಲಿಸರ ಮೇಲಿನ ವಿಶ್ವಾಸ ಕಡಿಮೆಯಾಗುವುದು ಸಹಜವಾಗಿದೆ
ಇತ್ತೀಚೆಗೆ ನಗರದಲ್ಲಿ ಕಳ್ಳರ ಕಾಟ ಮಿತಿಮೀರಿದ್ದು, ಗುರುವಾರ ಮುಂಜಾನೆ ನಗರದ ಬೆಂ-ಮೈ ಹೆದ್ದಾರಿಯಲ್ಲಿ ನಾಲ್ಕು ಕಳ್ಳರ ತಂಡ ಸರಣಿ ಕಳ್ಳತನಕ್ಕೆ ಯತ್ನಿಸಿದ್ದು, ಒಂದು ಅಂಗಡಿಯಲ್ಲಿ ಕಳ್ಳತನ ಮಾಡುವಲ್ಲಿ ಯಶಸ್ವಿಯಾಗಿದ್ದು, ಮಿಕ್ಕೆರಡು ಅಂಗಡಿಗಳಲ್ಲಿ ಕಳ್ಳತನ ಮಾಡುವ ವಿಫಲ ಯತ್ನ ನಡೆಸಿರುವ ಘಟನೆ ಜರುಗುದ್ದು, ನಗರಿಗರು ಭಯಭೀತರಾಗಿದ್ದಾರೆ.
ಗುರುವಾರ ಮುಂಜಾನೆ ನಗರದ ನ್ಯಾಯಾಲಯದ ಮುಂಭಾಗ ಬೆಂ-ಮೈ ಹೆದ್ದಾರಿ ಬಳಿಯ ತಿಟ್ಟಮಾರನಹಳ್ಳಿ ರಸ್ತೆಯ ಭಾಸ್ಕರ್ ಮೆಡಿಕಲ್ ಸ್ಟೋರ್ನ ಬೀಗ ಒಡೆದು ಒಳನುಗ್ಗಿರುವ ಕಳ್ಳರು ಅಂಗಡಿಯಲ್ಲಿದ್ದ ನಗದು, ಚಾಕಲೇಟ್ ಬಾಕ್ಸ್ ಸೇರಿದಂತೆ ಕೆಲ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ದ್ವಿಚಕ್ರ ವಾಹನದಲ್ಲಿ ಬಂದ ನಾಲ್ಕು ಜನರ ಗುಂಪು ಈ ಕಳ್ಳತನ ಕೃತ್ಯ ನಡೆಸಿದ್ದು, ಇಬ್ಬರು ಅಂಗಡಿಯಲ್ಲಿದ್ದ ಹಣ ಮತ್ತು ವಸ್ತುಗಳನ್ನು ದೋಚಿದ್ದರೆ, ಮತ್ತಿಬ್ಬರು ಹೊರಗಡೆ ನಿಂತಿದ್ದು ರಸ್ತೆಯ ಮೇಲೆ ಗಮನವಿಟ್ಟಿದ್ದಾರೆ. ಅಂಗಡಿಯಲ್ಲಿ ಸುಮಾರು ಮೂವತ್ತು ಸಾವಿರ ರೂ. ನಗದು ಇತ್ತೆಂದು ಹೇಳಲಾಗಿದ್ದು, ಕಳ್ಳರು ಅಂಗಡಿಯ ಡ್ರಾಯರ್ನಲ್ಲಿದ್ದ ಹಣವನ್ನು ಕಳುವು ಮಾಡಿದ್ದು, ಹೋಗುವಾಗ ಅವರಲ್ಲಿ ಒಬ್ಬ ಚಾಕಲೇಟ್ ಡಬ್ಬವನ್ನು ಎತ್ತಿಕೊಂಡು ಹೋಗಿದ್ದಾನೆ. ಕಳ್ಳರ ಗುಂಪಿನ ಕೈಚಳಕ ಹಾಗೂ ಅವರ ಸಂಭಾಷಣೆ ಅಂಗಡಿಯಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
*ವಿಫಲ ಯತ್ನ:*
ಇದೇ ವೇಳೆ ಕಳ್ಳರ ತಂಡ ಪುರ ಪೊಲೀಸ್ ಠಾಣೆಗೆ ಕೂಗಳತೆಯ ದೂರದಲ್ಲಿರುವ ಅಪೊಲೋ ಮೆಡಿಕಲ್ಸ್ ಹಾಗೂ ನ್ಯೂ ರಾಜ್ ದಿನಸಿ ಅಂಗಡಿಯಲ್ಲಿ ಕಳ್ಳತನ ಮಾಡುವ ವಿಫಲ ಯತ್ನ ನಡೆಸಿದೆ.
ಕುವೆಂಪು ನಗರದ ನಾಲ್ಕನೇ ಅಡ್ಡರಸ್ತೆಯಲ್ಲಿನ ನ್ಯೂ ರಾಜ್ ದಿನಸಿ ಅಂಗಡಿಯ ಶಟರ್ ನ ಬೀಗ ಹೊಡೆಯಲು ಕಳ್ಳರು ಯತ್ನಿಸಿದ್ದಾರೆ. ಈ ವೇಳೆ ಅಂಗಡಿಯ ಹೊರಗೆ ಅಳವಡಿಸಿದ್ದ ಸಿಸಿ ಕ್ಯಾಮೆರಾ ಕಳ್ಳನಿಗೆ ಕಂಡುಬಂದಿದ್ದು, ಬೀಗ ಒಡೆಯುತ್ತಿದ್ದ ಆಯುಧದಿಂದ ಸಿಸಿ ಕ್ಯಾಮೆರಾವನ್ನು ಹೊಡೆದು ಹಾಕಿದ್ದಾನೆ. ನಂತರ ಶಟರ್ ಬೀಗ ಒಡೆಯಲು ವಿಫಲ ಯತ್ನ ನಡೆಸಿ ಕೈಗೂಡದ ಕಾರಣ ಅಲ್ಲಿಂದ ತೆರಳಿದ್ದಾರೆ.
ನಗರದ ಪುರಪೊಲೀಸ್ ಠಾಣೆ ಸಮೀಪ ಎರಡನೇ ಅಡ್ಡರಸ್ತೆಯಲ್ಲಿರುವ ಅಪೊಲೋ ಮೆಡಿಕಲ್ಸ್ ಬೀಗ ಮುರಿದು ಒಳನುಗ್ಗಿರುವ ಕಳ್ಳರ ತಂಡ ಕಳುವಿನ ವಿಫಲ ಯತ್ನ ನಡೆಸಿದೆ. ಕಳ್ಳರ ತಂಡ ಅಂಗಡಿಯ ಶಟರ್ ಬೀಗ ಮುರಿದಿದ್ದು, ಕಳ್ಳರ ಗುಂಪಿನ ಒಬ್ಬ ಅಂಗಡಿಯಲ್ಲಿನ ಕ್ಯಾಶ್ ಡ್ರಾಯರ್ಗಾಗಿ ಹುಡುಕಾಟ ನಡೆಸಿದ್ದಾನೆ. ಈ ವೇಳೆ ಕಂಡು ಬಂದ ಡ್ರಾಯರ್ ಒಂದನ್ನು ಆಯುಧದಿಂದ ಒಡೆದು ಹಣಕ್ಕಾಗಿ ಹುಡುಕಾಟ ನಡೆಸಿರುವ ದೃಶ್ಯ ಮೆಡಿಕಲ್ ಸ್ಟೋರ್ನೊಳಗಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಒಟ್ಟು ನಾಲ್ಕು ಮಂದಿ ಕಳ್ಳರು ಎರಡು ಬೈಕ್ನಲ್ಲಿ ಆಗಮಿಸಿ ಕಳ್ಳತನ ನಡೆಸಿದ್ದು, ಎಲ್ಲರೂ ಶಾರ್ಟ್ಸ್ ಧರಿಸಿದ್ದು, ಗುರುವಾರ ಮುಂಜಾನೆ ಈ ಚಡ್ಡಿ ಗ್ಯಾಂಗ್ ನಡೆಸಿದ ಕಳ್ಳತನ ಕೃತ್ಯ ಬೊಂಬೆನಗರಿರನ್ನು ಬೆಚ್ಚಿಬೀಳಿಸಿದೆ. ಇವೆಲ್ಲಾ ಕಳ್ಳತನಗಳ ಜೊತೆಗೆ ಒಂಟಿಯಾಗಿ ಹೋಗುವ ಮಹಿಳೆಯರು, ಜಾನುವಾರು ಮೇಯಿಸಲು ಹೋಗುವ ಗ್ರಾಮೀಣ ಭಾಗದ ರೈತ ಮಹಿಳಯರ ಕುತ್ತಿಗೆಗೆ ಕೈ ಹಾಕಿ ಚಿನ್ನದ ಚೈನು ಎಗರಿಸುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೋಲಿಸರು ಹೆಚ್ಚಿನ ಗಮನ ನೀಡಿ, ಕಳ್ಳರನ್ನು ಎಡೆಮುರಿ ಕಟ್ಟುವ ಮೂಲಕ ಸಾರ್ವಜನಿಕರಿಗೆ ನ್ಯಾಯ ಒದಗಿಸುವುದರ ಜೊತೆಗೆ ಕಳ್ಳಕಾಕರಿಗೆ ಪೋಲಿಸರು ಭಯ ಹುಟ್ಟಿಸುವ ಕೆಲಸ ಮಾಡಬೇಕಾಗಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು