ಅಪಘಾತದಲ್ಲಿ ಗಾಯಗೊಂಡವರ ರಕ್ಷಣೆಗೆ ಅತ್ಯಾಧುನಿಕ ತಂತ್ರಜ್ಞಾನ
ಬೆಂಗಳೂರು : ರಸ್ತೆ ಅಪಘಾತಗಳು ಜೀವ ಕಳೆಯುವುದಷ್ಟೇ ಅಲ್ಲ, ಶಾಶ್ವತ ಅಂಗವಿಕಲತೆ ಉಂಟು ಮಾಡುತ್ತವೆ. ರಸ್ತೆ ಅಪಘಾತಗಳು ಮತ್ತು ಶಾಶ್ವತ ಅಂಗವಿಕಲತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೆಶದ ಮುಂಚೂಣಿಯ ಮೂಳೆ ತಜ್ಞರು ಬೆಂಗಳೂರಿನಲ್ಲಿ ನಡೆದ ಅಸೋಸಿಯೇಷನ್ ಆಫ್ ಪೆಲ್ವಿಕ್ ಅಸೆಟ್ಯಾಬ್ಯುಲರ್ ಸರ್ಜನ್ನರ ದ್ವಿತೀಯ ವಾರ್ಷಿಕ ಸಮ್ಮೇಳನದಲ್ಲಿ ಕೈ ಜೋಡಿಸಿದರು; ಇಲ್ಲಿ ತಜ್ಞರು ಅಪಘಾತಗಳಲ್ಲಿ ಗಾಯಗೊಂಡವರಿಗೆ ನೆರವಾಗುವ ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಶಸ್ತ್ರಚಿಕಿತ್ಸೆಗಳ ಕುರಿತು ಚರ್ಚೆ ನಡೆಸಿದರು.
ಪೆಲ್ವಿಸ್ ಮತ್ತು ಅಸೆಟಬ್ಯುಲಂ ಮೂಳೆ ತಜ್ಞರು ಚಿಕಿತ್ಸೆ ನೀಡುತ್ತಿರುವ ಅತ್ಯಂತ ಗಂಭೀರ ಗಾಯಗಳಾಗಿದ್ದು ಮೋಟಾರು ವಾಹನ ಅಪಘಾತ ಅಥವಾ ಬೀಳುವುದರಿಂದ ಉಂಟಾಗುತ್ತದೆ. ಪೆಲ್ವಿಕ್ ಮತ್ತು ಅಸೆಟಬ್ಯುಲರ್ ಮುರಿತಗಳಿಗೆ ಕೂಡಲೇ ಚಿಕಿತ್ಸೆ ನೀಡಬೇಕು. ಕೆಲ ಪ್ರಕರಣಗಳಲ್ಲಿ ಆಸ್ಟಿಯೊಪೊರೊಸಿಸ್ನಿಂದ ದುರ್ಬಲಗೊಂಡ ಮೂಳೆಗಳು ಕೂಡಲೇ ಮತ್ತು ಸೂಕ್ಷ್ಮ ಚಿಕಿತ್ಸೆ ಬೇಡುತ್ತವೆ. ಕೆಲ ಪ್ರಕರಣಗಳಲ್ಲಿ ಎಲ್ಲ ವಯಸ್ಸಿನ ಜನರು ಈ ಗಾಯಗಳಿಗೆ ತುತ್ತಾಗುತ್ತಾರೆ.
ಇತ್ತೀಚೆಗೆ ನಡೆಸಲಾದ ಸಮೀಕ್ಷೆಯ ಪ್ರಕಾರ ರಸ್ತೆ ಅಪಘಾತ ಪ್ರಕರಣಗಳು ಭಾರತದಲ್ಲಿ ಅಂಗವಿಕಲತೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ತಲೆಗೆ ಗಾಯ, ಕಾಲು ಮತ್ತು ಶ್ರೋಣಿಯ ಗಾಯಗಳುಂಟಾಗುತ್ತವೆ. ರಸ್ತೆ ಅಪಘಾತಗಳು ಅಪಾರ ಸಂಖ್ಯೆಯ ಮರಣಕ್ಕೂ ಕಾರಣವಾಗಿವೆ.
ಅಂಗವಿಕಲತೆಗೆ ಒಳಗಾದ ಜನರು ಇತ್ತೀಚೆಗೆ ಶ್ರೋಣಿಯ ಮುರಿತಕ್ಕೆ ಉಂಟಾಗಿರುವ ಚಿಕಿತ್ಸೆಯ ಸೌಲಭ್ಯಗಳ ಕುರಿತು ಅರಿವಿಲ್ಲದೆ ತಮ್ಮ ಜೀವನದ ಮೇಲೆ ಭರವಸೆ ಕಳೆದುಕೊಳ್ಳುತ್ತಾರೆ. ಆದ್ದರಿಂದ ಈ ಗಾಯಗಳನ್ನು ಗುಣಪಡಿಸುವ ಅತ್ಯಾಧುನಿಕ ತಂತ್ರಜ್ಞಾನಗಳ ಕುರಿತು ತಜ್ಞರು ಚರ್ಚೆ ನಡೆಸಲು ಒಗ್ಗೂಡಿದ್ದರು. ಈ ಸಮ್ಮೇಳನ ಪೆಲ್ವಿಸ್ ಅಸೆಟ್ಯಾಬ್ಯುಲರ್ ಮುರಿತದ ಕುರಿತು ಅರಿವನ್ನು ಉಂಟು ಮಾಡಲು ಮೊದಲ ಹೆಜ್ಜೆಯಾಗಿತ್ತು.
ವಿಕ್ಟೋರಿಯಾ ಆಸ್ಪತ್ರೆಯ ಪ್ರೊಫೆಸರ್ ಡಾ.ಪಿ.ಕೆ.ರಾಜು, ಹಿಂದಿನ ದಿನಗಳಲ್ಲಿ ಪೆಲ್ವಿಕ್ ಅಸೆಟ್ಯಾಬ್ಯುಲರ್ ಮುರಿತದ ಚಿಕಿತ್ಸೆ ಬಹಳ ಶೈಶವದಲ್ಲಿತ್ತು. ಬಹುತೇಕ ಶಸ್ತ್ರಚಿಕಿತ್ಸೆ ವಿಧಾನ ಅಳವಡಿಸಿಕೊಳ್ಳಲಾಗುತ್ತಿತ್ತು. ಆದರೆ ಈಗ ತಾಂತ್ರಿಕ ಪ್ರಗತಿಯಿಂದ ಪೆಲ್ವಿಕ್ ಅಸೆಟ್ಯಾಬ್ಯುಲರ್ ಶಸ್ತ್ರಚಿಕಿತ್ಸೆ ಸರಳವಾಗಿದ್ದು ಉತ್ತಮ ಫಲಿತಾಂಶ ಪಡೆಯಬಹುದಾಗಿದೆ ಎಂದರು.
ಶ್ರೋಣಿಯ ಮೂಳೆ ಮುರಿತಕ್ಕೆ ಸ್ಕ್ರ್ಯೂ ಜೋಡಿಸುವುದು ಪ್ರಮುಖ ಸವಾಲು ಎಂದು ವೈದ್ಯರು ಚರ್ಚೆ ನಡೆಸಿ ಉಪಯುಕ್ತ ಮಾಹಿತಿ ಪಡೆದರು.
ಈ ಸಮ್ಮೇಳನ ಶ್ರೋಣಿಯ ಮುರಿತ, ಅಸೆಟ್ಯಾಬ್ಯುಲರ್ ಮುರಿತ, ಚಿಕಿತ್ಸೆಯ ಆಯ್ಕೆಗಳು, ಸಂಕೀರ್ಣತೆಗಳು ಮತ್ತು ಅವುಗಳ ನಿಯಂತ್ರಣ ಕುರಿತು ಗಮನ ನೀಡಿತು. ಪೆಲ್ವಿಕ್ ಮತ್ತು ಅಸೆಟ್ಯಾಬ್ಯುಲರ್ ಶಸ್ತ್ರಚಿಕಿತ್ಸೆ ಪ್ರಾಚೀನತೆಯಿಂದ ಆಧುನಿಕತೆಗೆ ಬಂದಿದೆ. ಆಧುನಿಕ ಮತ್ತು ಸುಧಾರಿತ ವಿಧಾನಗಳನ್ನು ರೂಪಿಸಲಾಗಿದೆ. ಇದರಿಂದ ಮುರಿತವನ್ನು ಸರಿಪಡಿಸಲು ಸಾಧ್ಯ ಎಂದು ಡಾ.ಪ್ರದೀಪ್ ಕೊಥಾಡಿಯಾ(ಎಒಪಿಎಎಸ್ ಅಧ್ಯಕ್ಷರು) ಮತ್ತು ಡಾ.ರಮೇಶ್ ಸೇನ್ ವಿವರಿಸಿದರು. ಭಾರತ ಮತ್ತು ವಿದೇಶಗಳ ವಿಶೇಷ ತಜ್ಞ ವೈದ್ಯರು ಭಾಗವಹಿಸಿದ್ದರು ಎಂದು ಸಂಘಟನಾ ಕಾರ್ಯದರ್ಶಿ ಡಾ.ಪ್ರಸನ್ನ ಹೇಳಿದರು.
ಸಮ್ಮೇಳನದಲ್ಲಿ ರೋಗಿಗಳಿಗೆ ನೇರ ಪ್ರಾತ್ಯಕ್ಷಿಕೆಗಳು, ಕಾಡಾವರಿಕ್ ಶಸ್ತ್ರಚಿಕಿತ್ಸೆಯ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಲಾಗಿತ್ತು.
Recent news in karnataka »
ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ
ರಾಮನಗರ: ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಕಳೆದ 30 ವರ್ಷಗಳಿಂದಲೂ ನಿಮ್ಮ ಸೇವೆ ಮಾಡಿದ್ದೇನೆ. ಮುಂದೆಯೂ ನಿಮ್ಮ ಕಷ್ಟಗಳನ್ನರಿತು ನಿಮಗಾಗಿ ಮತ್ತಷ್ಟು ಕ
ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ
ರಾಮನಗರ, ಫೆ. 02 : ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಧ್ವಜ ಸ್ತಂಭದ ವಿಚಾರವು ತುಂಬಾ ಸೂಕ್ಷ್ಮ ವಿಚಾರವಾಗಿದ್ದು, ಈ ಸಂಬಂಧ ಯಾವು
ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ
ಚನ್ನಪಟ್ಟಣ: ಸಂವಿಧಾನ ಜಾಗೃತಿ ಜಾಥಾಕ್ಕೆ ತಾಲ್ಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಇದೇ ಸಂದರ್ಭದಲ್ಲಿ
ಸಂವಿಧಾನ ಜಾಗೃತಿ ಜಾಥಾ
ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ
ಚನ್ನಪಟ್ಟಣ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಶ್ರೀ ವೀರಾಂನೇಯಸ್ವಾಮಿ ಗೆ ವಿಶೇಷ
ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ
ರಾಮನಗರ, ಜ. 17: ರಾಮನಗರ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಹೊಂದಿರುವ ಆಸ್ತಿಗಳನ್ನು ದಿನಾಂಕ: 02.05.2015 ರಿಂದ ಜಾರಿಗೆ ಬರುವಂತೆ,
ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ
ರಾಮನಗರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20, 2020-21, 2021-22 ಮತ್ತು 2022-23ರ (ಜುಲೈ ಆವೃತ್ತಿ) ದ್ವಿತೀಯ/ತೃತೀಯ ವರ್ಷದ ಬಿ
ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ
ಹಾಸನ: ಪ್ರಾಕೃತಿಕ ಸೌಂದರ್ಯವು ಇ-ತ್ಯಾಜ್ಯ, ಕೆಲ ತಂತ್ರಜ್ಞಾನ ಹಾಗೂ ಪ್ಲಾಸ್ಟಿಕ್ ನಿಂದ ಹಾಳಾಗುತ್ತಿದೆ. ಪರಿಸರ ನಾಶಕ್ಕೆ ಮುನ್ನುಡಿ ಬರೆದವನೇ
೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ
ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಪಡಿತರ ಅಕ್ಕಿಯ ಪೈಕಿ ಸುಮಾರು ೫೨ ಲಕ್ಷಕ್ಕೂ ಮೌಲ್ಯದ ೧,೫೪೩.೬೫ ಕ್ವಿಂಟಾಲ್ ಅ
ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್
ಚನ್ನಪಟ್ಟಣ: ದಸರಾ ಎಂದರೆ ಕೇವಲ ಮೈಸೂರು ಎಂಬಂತಾಗಿದೆ, ಇದು ನಾಡ ಹಬ್ಬ ಎಂಬುದು ಕೇವಲ ಉಲ್ಲೇಖಕ್ಕಷ್ಟೇ ಸೀಮಿತವಾಗಿದೆ. ಇದು ನಾಡಹಬ್ಬ ಎಂಬುದು ಸರ
ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ
ರಾಮನಗರ: ಚನ್ನಪಟ್ಟಣ; ಪ್ರೊ ಭಗವಾನ್ ವಿಚಾರವಾದಿ, ಮೂಢನಂಬಿಕೆಗಳನ್ನು ಕಿತ್ತೊಗೆಯಲು, ಪುರಾಣ ಎಂಬುದು ಕಪೋಲ ಕಲ್ಪಿತ, ಇತಿಹಾಸ ಎಂಬುದು ಸಾರ್ವಕಾಲ
ಪ್ರತಿಕ್ರಿಯೆಗಳು