ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಹತ್ತು ಸ್ಥಾನಗಳನ್ನು ಗೆದ್ದ ಕೆಂಚಪ್ಪಗೌಡ ತಂಡ
ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯು ಈ ಬಾರಿ ಬಹಳ ರಮಾರಮಿಯಾಗಿ
ಕಳೆದ 12ರಂದು ಚುನಾವಣೆ ಜರುಗಿತು. ವಿವಿಧ ಜಿಲ್ಲೆಗಳಿಂದ 20 ಸ್ಥಾನಗಳಿಗೆಹಾಗೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,
ರಾಮನಗರ ಹಾಗೂ ಹೊಸೂರು ಸೇರಿದಂತೆ 1
ಕ್ಷೇತ್ರದಿಂದ 15 ಸ್ಥಾನಕ್ಕೆ 141 ಅಭ್ಯರ್ಥಿಗಳು ಕಣದಲ್ಲಿ ಇದ್ದರು. 141 ಅಭ್ಯರ್ಥಿಗಳಿಗೆ ಮತದಾರರು ಅದಾವರೀತಿಯಲ್ಲಿ ಮತ ಚಲಾಯಿಸಬಹುದು ಎಂಬ
ಆತಂಕವು ಅಭ್ಯರ್ಥಿಗಳಲ್ಲಿ ಮನೆಮಾಡಿತ್ತು.
ಇಷ್ಟರ ಮಧ್ಯೆಯೂ ಸಹ ಮತದಾರರು ಹೆಚ್ಚು
ಮತಗಳು ಅಸಿಂಧುವಾಗದ ರೀತಿಯಲ್ಲಿ ಮತದಾನ ಮಾಡಿ, ತಮ್ಮ ಬುದ್ಧಿವಂತಿಕೆಯನ್ನು
ಮೆರೆದಿದ್ದಾರೆ. ನೆನ್ನೆ ನಡೆದ ಮತ ಎಣಿಕೆಯನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಿಯೋಜಿಸ
ಲಾಗಿತ್ತು. ಸಕಲ ರೀತಿಯ ಮುನ್ನೆಚ್ಚರಿಕೆಯಿಂದ
ಎಣಿಕೆಯ ಸಂದರ್ಭದಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾಗದ ರೀತಿಯಲ್ಲಿ
ಚುನಾವಣಾಧಿಕಾರಿಗಳು ನಿಯೋಜನೆ ಮಾಡಿದ್ದರು.
ಈ ಸಂದರ್ಭದಲ್ಲಿ ಪ್ರತಿ ಎಣಿಕೆ ಕೇಂದ್ರದಲ್ಲಿಯೂ ಸಹ ಸಿ.ಸಿ ಕ್ಯಾಮರಾವನ್ನು ಅಳವಡಿಸಿ, ಕರಾರುವಕ್ಕಾಗಿ ಎಣಿಕೆ ಕಾರ್ಯ ಮಾಡಲಾಯಿತು.
ಯಾವುದೇ ಅಹಿತಕರ ಘಟನೆ ನಡೆಯಬಾರದು
ಎಂಬ ಉದ್ದೇಶದಿಂದ ಸುಮಾರು 3 ಸಾವಿರ ಜನ
ಸಿಬ್ಬಂದಿಯನ್ನು ಎಣಿಕೆ ಕಾರ್ಯಕ್ಕೆ ನಿಯೋಜನೆ
ಮಾಡಿದ್ದು ವಿಶೇಷವಾಗಿತ್ತು. ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿದ್ದ ಈ ಮತ ಎಣಿಕೆ
ಕಾರ್ಯದಲ್ಲಿ ಆರಂಭಕ್ಕೆ ಮುನ್ನಡೆ ಸಾಧಿಸಿದ್ದ ಹಲವು ಪ್ರತಿಷ್ಠಿತ ಅಭ್ಯರ್ಥಿಗಳು,
ಎಣಿಕೆ ಕಾರ್ಯ ಪ್ರಗತಿ ಹೊಂದುತ್ತಾ ಹೋದಂತೆ
ಅವರ ಹೆಸರುಗಳು ನೇಪಥ್ಯಕ್ಕೆ ಸರಿದಿದ್ದು ಒಂದು ರೀತಿಯಲ್ಲಿ ವಿಶೇಷ ಎನ್ನಬಹುದು.
ಅಂತಿಮವಾಗಿ ಕೆಂಚಪ್ಪಗೌಡ ತಂಡ 10 ಸ್ಥಾನಗಳನ್ನು ಗೆಲ್ಲುವ ಮೂಲಕ ವಿಕ್ರಮ ಸಾಧಿಸಿತು ಎಂಬುದು ಗಮನಾರ್ಹ ಸಂಗತಿ. ಕೆಂಚಪ್ಪಗೌಡ ತಂಡದಿಂದ ಹೆಚ್.ಎನ್ ಅಶೋಕ್, ಕೆಂಚಪ್ಪಗೌಡ,
ಆರ್ ಪ್ರಕಾಶ್, ದೇವರಾಜ್ (ಹಾಪ್ಕಾಮ್ಸ್), ಎಲ್
ಶ್ರೀನಿವಾಸ್, ಮಾರೇಗೌಡ, ರಾಜಶೇಖರಗೌಡ, ಸುರೇಶ್, ವೆಂಕಟರಾಮೇಗೌಡ, ನಾರಾಯಣಸ್ವಾಮಿ ಇವರುಗಳು ಆಯ್ಕೆಯಾದರು.
ಇನ್ನಿತರ ತಂಡಗಳಿಂದ ಡಾ.ಆಂಜನಪ್ಪ, ಜಯಮುತ್ತು, ಉಮಾಪತಿ, ಹನುಮಂತಯ್ಯ, ಪುಟ್ಟಸ್ವಾಮಿ ಆಯ್ಕೆಯಾದರು. ಇದರಲ್ಲಿ ಡಾ. ಆಂಜನಪ್ಪ 68,938 ಮತ ಪಡೆದು ದಾಖಲೆ ಮಾಡಿದರು. ಕೆಂಚಪ್ಪಗೌಡ ತಂಡದ ನಾಯಕ
ಕೆಂಚಪ್ಪಗೌಡ 58,066 ಮತಗಳನ್ನು ಪಡೆದರು,
ಅವರ ತಂಡದ ಅಶೋಕ್ ಹೆಚ್.ಎನ್ ಅವರು
61,892 ಮತ ಪಡೆದು ಎರಡನೇ ಸ್ಥಾನ ಪಡೆದರು.
ಜಿಲ್ಲಾ ಮಟ್ಟದಲ್ಲಿ 20 ಸ್ಥಾನಗಳಿಗೆ ಆಯ್ಕೆಯಾಗಬೇಕಾಗಿದ್ದು, ಮೈಸೂರು
ಜಿಲ್ಲೆಯ 3 ಸ್ಥಾನಗಳ ಪೈಕಿ ಕೆ.ಶ್ರೀಧರ್, ಡಾ.ಎಂ.ಬಿ
ಮಂಜೇಗೌಡ, ಗಂಗಾಧರ್ ಸಿ ಜೆ ಆಯ್ಕೆಗೊಂಡರು.
ಮಂಡ್ಯ ಜಿಲ್ಲೆಯ ನಾಲ್ಕು ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ, ಅಶೋಕ್ ಜಯರಾಮ್, ಮೂಡ್ಯ ಚಂದ್ರು, ರಾಘವೇಂದ್ರ, ನಲ್ಲಿಗೆರೆ ಬಾಬು ಇವರು ಆಯ್ಕೆಯಾದರು. ಹಾಸನ ಜಿಲ್ಲೆಯ 3 ಸ್ಥಾನಗಳ ಪೈಕಿ, ಸಿ.ಎನ್ ಬಾಲಕೃಷ್ಣ (ಶಾಸಕ),
ರಘುಗೌಡ, ಬಿ.ಪಿ ಮಂಜೇಗೌಡ ಆಯ್ಕೆಯಾದರು.
ತುಮಕೂರು ಜಿಲ್ಲೆಯ 2 ಸ್ಥಾನಗಳ ಪೈಕಿ ಹನುಮಂತರಾಯಪ್ಪ, ಲೋಕೇಶ್ ನಾಗರಾಜಯ್ಯ ಆಯ್ಕೆಯಾದರು. ಕೋಲಾರ ಜಿಲ್ಲೆಯ
3 ಸ್ಥಾನಗಳ ಪೈಕಿ ಡಾ.ರಮೇಶ್, ಕೋನಪ್ಪ ರೆಡ್ಡಿ,
ಎಲವಳ್ಳಿ ರಮೇಶ್ ಆಯ್ಕೆಯಾದರು. ಕೊಡಗು
ಜಿಲ್ಲೆಯಿಂದ ಚಿಕ್ಕಮಗಳೂರು ಜಿಲ್ಲೆಯಿಂದ ಪೂರ್ಣೇಶ್, ದ.ಕನ್ನಡ ಜಿಲ್ಲೆಯಿಂದ ಡಾ.ರೇಣುಕಾಪ್ರಸಾದ್,
ಶಿವಮೊಗ್ಗ ಜಿಲ್ಲೆಯಿಂದ ಸಿರಿಬಯಲು ಸರ್ವೇಶ್,
ಚಿತ್ರದುರ್ಗ ಜಿಲ್ಲೆಯಿಂದ ಜೆ. ರಾಜು ಬೇತೂರು ಪಾಳ್ಯ ಇವರುಗಳು ಆಯ್ಕೆಯಾಗಿದ್ದಾರೆ.
ಕೇಂದ್ರ ಸ್ಥಾನದಲ್ಲಿ ಅಷ್ಟೇ ಅಲ್ಲದೆ, ಉಳಿದ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಸಹ ಈ ಚುನಾವಣೆಯು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು.
ಕೆಲವು ಜಿಲ್ಲೆಗಳಲ್ಲಿ ರಾಜಕೀಯ ಪ್ರವೇಶವೂ ಸಹ
ಆಗಿದ್ದರಿಂದ ನೇರವಾಗಿ, ಪರೋಕ್ಷವಾಗಿ ಹಲವಾರು ರಾಜಕೀಯ ಧುರೀಣರು ಮತಯಾಚನೆ ಮಾಡಿದ್ದು ವಿಶೇಷವಾಗಿತ್ತು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in karnataka »
ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ
ರಾಮನಗರ: ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಕಳೆದ 30 ವರ್ಷಗಳಿಂದಲೂ ನಿಮ್ಮ ಸೇವೆ ಮಾಡಿದ್ದೇನೆ. ಮುಂದೆಯೂ ನಿಮ್ಮ ಕಷ್ಟಗಳನ್ನರಿತು ನಿಮಗಾಗಿ ಮತ್ತಷ್ಟು ಕ
ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ
ರಾಮನಗರ, ಫೆ. 02 : ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಧ್ವಜ ಸ್ತಂಭದ ವಿಚಾರವು ತುಂಬಾ ಸೂಕ್ಷ್ಮ ವಿಚಾರವಾಗಿದ್ದು, ಈ ಸಂಬಂಧ ಯಾವು
ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ
ಚನ್ನಪಟ್ಟಣ: ಸಂವಿಧಾನ ಜಾಗೃತಿ ಜಾಥಾಕ್ಕೆ ತಾಲ್ಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಇದೇ ಸಂದರ್ಭದಲ್ಲಿ
ಸಂವಿಧಾನ ಜಾಗೃತಿ ಜಾಥಾ
ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ
ಚನ್ನಪಟ್ಟಣ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಶ್ರೀ ವೀರಾಂನೇಯಸ್ವಾಮಿ ಗೆ ವಿಶೇಷ
ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ
ರಾಮನಗರ, ಜ. 17: ರಾಮನಗರ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಹೊಂದಿರುವ ಆಸ್ತಿಗಳನ್ನು ದಿನಾಂಕ: 02.05.2015 ರಿಂದ ಜಾರಿಗೆ ಬರುವಂತೆ,
ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ
ರಾಮನಗರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20, 2020-21, 2021-22 ಮತ್ತು 2022-23ರ (ಜುಲೈ ಆವೃತ್ತಿ) ದ್ವಿತೀಯ/ತೃತೀಯ ವರ್ಷದ ಬಿ
ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ
ಹಾಸನ: ಪ್ರಾಕೃತಿಕ ಸೌಂದರ್ಯವು ಇ-ತ್ಯಾಜ್ಯ, ಕೆಲ ತಂತ್ರಜ್ಞಾನ ಹಾಗೂ ಪ್ಲಾಸ್ಟಿಕ್ ನಿಂದ ಹಾಳಾಗುತ್ತಿದೆ. ಪರಿಸರ ನಾಶಕ್ಕೆ ಮುನ್ನುಡಿ ಬರೆದವನೇ
೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ
ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಪಡಿತರ ಅಕ್ಕಿಯ ಪೈಕಿ ಸುಮಾರು ೫೨ ಲಕ್ಷಕ್ಕೂ ಮೌಲ್ಯದ ೧,೫೪೩.೬೫ ಕ್ವಿಂಟಾಲ್ ಅ
ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್
ಚನ್ನಪಟ್ಟಣ: ದಸರಾ ಎಂದರೆ ಕೇವಲ ಮೈಸೂರು ಎಂಬಂತಾಗಿದೆ, ಇದು ನಾಡ ಹಬ್ಬ ಎಂಬುದು ಕೇವಲ ಉಲ್ಲೇಖಕ್ಕಷ್ಟೇ ಸೀಮಿತವಾಗಿದೆ. ಇದು ನಾಡಹಬ್ಬ ಎಂಬುದು ಸರ
ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ
ರಾಮನಗರ: ಚನ್ನಪಟ್ಟಣ; ಪ್ರೊ ಭಗವಾನ್ ವಿಚಾರವಾದಿ, ಮೂಢನಂಬಿಕೆಗಳನ್ನು ಕಿತ್ತೊಗೆಯಲು, ಪುರಾಣ ಎಂಬುದು ಕಪೋಲ ಕಲ್ಪಿತ, ಇತಿಹಾಸ ಎಂಬುದು ಸಾರ್ವಕಾಲ
ಪ್ರತಿಕ್ರಿಯೆಗಳು