ಅಬಕಾರಿ ಅಧಿಕಾರಿಗಳೇ ಇಂದಿನ ಕಾನೂನು ಎಂದೆಂದೂ ಯಾಕಿಲ್ಲ ?
ಬೆಂಗಳೂರು ಮೈಸೂರು ಹೆದ್ದಾರಿ ನಡುವಿನ ಚನ್ನಪಟ್ಟಣ ಭಾಗವಾದ ಜಾನಪದ ಲೋಕದಿಂದ ಕೋಲೂರು ಗೇಟ್ ತನಕ ಅನೇಕ ತರಹೇವಾರಿ ಮಾಂಸದ ಹೋಟೆಲ್ ಗಳು ಢಾಭಾಗಳು ತೋಟದ ಹೋಟೆಲ್ ಗಳು ತಲೆ ಎತ್ತಿ ನಿಂತಿವೆ.
ಫ್ಯಾಮಿಲಿ ಹೋಟೆಲ್ ಎಂದು ಬೋಡ್೯ ನೇತು ಹಾಕಿಕೊಂಡಿದ್ದರೂ ಸಹ ಕುಟುಂಬ ಸಮೇತ ಹೋಗಿ ಊಟ ಮಾಡಲು ಆಗದಷ್ಟು ಮದ್ಯಪ್ರಿಯರು ಪ್ರತಿ ಟೇಬಲ್ ನಲ್ಲಿಯೂ ಎದುರಾಗುವುದರಿಂದ ಫ್ಯಾಮಿಲಿಗಳು ಹೆಚ್ಚು ಶುಲ್ಕದ ದೊಡ್ಡ ಹೋಟೆಲ್ ಗಳು ಅಥವಾ ಸಸ್ಯಹಾರಿ ಹೋಟೆಲ್ ಗಳಿಗೆ ಹೋಗುವಂತಾಗಿದೆ.
ಈ ಬಾರಿಯ ವಿಧಾನಸಭಾ ಚುನಾವಣೆಯ ನೀತಿಸಂಹಿತೆ ಜಾರಿಯಾದನಂತರ ಅಬಕಾರಿ ಇಲಾಖಾಧಿಕಾರಿಗಳು ಹೆದ್ದಾರಿ ಬದಿಯ ಎಲ್ಲಾ ಹೋಟೆಲ್ ಗಳಿಗೂ ಮದ್ಯ ಸೇವನೆ ಮಾಡಿಸಬಾರದಾಗಿ ಕಟ್ಟುನಿಟ್ಟಿನ ಅಪ್ಪಣೆ ಹೊರಡಿಸಿದ್ದಾರೆ.
ನೀವು ಯಾವುದೇ ಹೋಟೆಲ್ ಗೆ ಹೋದ ತಕ್ಷಣ ಅವರು ಮೊದಲು ಹೇಳುವುದೇ ಸರ್ ಡ್ರಿಂಕ್ಸ್ ಮಾಡೋ ಹಾಗಿಲ್ಲ, ಅಂತಾ, ಅದೂ ಅಲ್ಲದೆ ನೀವು ಕೇಳದೆ ಇದ್ದರೂ ಅವರು ಮೊದಲೇ ಹೇಳುತ್ತಾರೆಂದರೆ ಅದು ಪ್ರತಿನಿತ್ಯ ನಡೆಯುವ ಒಂದು ದೊಡ್ಡ ವಹಿವಾಟು ಎಂಬುದು ವೇದ್ಯವಾಗುತ್ತದೆ.
ಕಾನೂನು ಬಾಹಿರ ಎಂದು ಗೊತ್ತಿದ್ದು ಸಹ ಮದ್ಯಸೇವನೆಗೆ ಅವಕಾಶ ಮಾಡಿಕೊಡುವ ಹೋಟೆಲ್ ಮಾಲೀಕರು ಒಂದು ಕಡೆಯಾದರೆ ಅನುಮತಿ ಕೊಡಲು ಬರುವುದಿಲ್ಲ ಎನ್ನುವ ಕಾನೂನು ಅಧಿಕಾರಿಗಳಿಗಿದ್ದರೂ ಸಹ ಒಳ ಒಪ್ಪಂದ, ಹಾಗೂ ಕೊಡುಕೊಳ್ಳುವ (ಮಾಮೂಲು) ಅಲಿಖಿತ ನಿಯಮದಂತೆ ಇದು ಎಲ್ಲಾ ರಸ್ತೆಬದಿ ಹಾಗೂ ಹಳ್ಳಿಗಳ ಗೂಡಂಗಡಿಗಳಲ್ಲಿ ಯಥೇಚ್ಛವಾಗಿ ನಡೆಯುತ್ತಿರುವುದು ಸಹ ಅಷ್ಟೇ ಬಹಿರಂಗ ಸತ್ಯ.
ಅಬಕಾರಿ ಅಧಿಕಾರಿಗಳೇ ಚುನಾವಣೆ ಮುಗಿದ ನಂತರವೂ ಇದೇ ಕಟ್ಟುನಿಟ್ಟಿನ ಕಾನೂನನ್ನು ನೀವು ಏಕೆ ಸಡಿಲುಸುತ್ತೀರಿ ?
ಏಕೆ ಮುಂದುವರಿಸುವುದಿಲ್ಲಾ ?
ಕುಟುಂಬದ ಸದಸ್ಯರೆಲ್ಲರೂ ಹೋಗಿ ಕೂತು ಊಟ ಮಾಡಿ ಬರುವ ನಿರ್ಭಯ ವಾತಾವರಣವನ್ನು ಸೃಷ್ಟಿಸುವ ಮೂಲಕ ನೀವುಗಳು ನಿಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಜನಮಾನಸದಲ್ಲಿ ನೀವು ಅಜರಾಮರಾಗುವಿರಿ,
ನಿಮ್ಮ ವೈಯುಕ್ತಿಕ ಚಂಚಲತೆಗಾಗಿ ಕಾನೂನನ್ನು ಸಡಿಲಿಸಿ ಹೋಟೆಲ್ ಗಳಲ್ಲಿ ಮದ್ಯ ಸೇವನೆಗೆ ಅನುವು ಮಾಡಿಕೊಟ್ಟರೆ ಮುಂದೊಂದು ದಿನ ಹೆಚ್ಚು ಬೆಲೆ ತೆರಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ.
ನೀತಿ ಸಂಹಿತೆಯ ಭಾಗವಾಗಿ ವಿಧಿಸಿರುವ ಕಾನೂನನ್ನು ಮುಂದುವರೆಸುತ್ತೀರಿ ಎನ್ನುವ ಭರವಸೆಯನ್ನು ಮರ್ಯಾದಸ್ತ ಆಹಾರ ಪ್ರಿಯರು ಹೊಂದಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ: 9845856139.
Recent news in karnataka »
ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ
ರಾಮನಗರ: ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಕಳೆದ 30 ವರ್ಷಗಳಿಂದಲೂ ನಿಮ್ಮ ಸೇವೆ ಮಾಡಿದ್ದೇನೆ. ಮುಂದೆಯೂ ನಿಮ್ಮ ಕಷ್ಟಗಳನ್ನರಿತು ನಿಮಗಾಗಿ ಮತ್ತಷ್ಟು ಕ
ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ
ರಾಮನಗರ, ಫೆ. 02 : ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಧ್ವಜ ಸ್ತಂಭದ ವಿಚಾರವು ತುಂಬಾ ಸೂಕ್ಷ್ಮ ವಿಚಾರವಾಗಿದ್ದು, ಈ ಸಂಬಂಧ ಯಾವು
ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ
ಚನ್ನಪಟ್ಟಣ: ಸಂವಿಧಾನ ಜಾಗೃತಿ ಜಾಥಾಕ್ಕೆ ತಾಲ್ಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಇದೇ ಸಂದರ್ಭದಲ್ಲಿ
ಸಂವಿಧಾನ ಜಾಗೃತಿ ಜಾಥಾ
ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ
ಚನ್ನಪಟ್ಟಣ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಶ್ರೀ ವೀರಾಂನೇಯಸ್ವಾಮಿ ಗೆ ವಿಶೇಷ
ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ
ರಾಮನಗರ, ಜ. 17: ರಾಮನಗರ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಹೊಂದಿರುವ ಆಸ್ತಿಗಳನ್ನು ದಿನಾಂಕ: 02.05.2015 ರಿಂದ ಜಾರಿಗೆ ಬರುವಂತೆ,
ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ
ರಾಮನಗರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20, 2020-21, 2021-22 ಮತ್ತು 2022-23ರ (ಜುಲೈ ಆವೃತ್ತಿ) ದ್ವಿತೀಯ/ತೃತೀಯ ವರ್ಷದ ಬಿ
ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ
ಹಾಸನ: ಪ್ರಾಕೃತಿಕ ಸೌಂದರ್ಯವು ಇ-ತ್ಯಾಜ್ಯ, ಕೆಲ ತಂತ್ರಜ್ಞಾನ ಹಾಗೂ ಪ್ಲಾಸ್ಟಿಕ್ ನಿಂದ ಹಾಳಾಗುತ್ತಿದೆ. ಪರಿಸರ ನಾಶಕ್ಕೆ ಮುನ್ನುಡಿ ಬರೆದವನೇ
೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ
ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಪಡಿತರ ಅಕ್ಕಿಯ ಪೈಕಿ ಸುಮಾರು ೫೨ ಲಕ್ಷಕ್ಕೂ ಮೌಲ್ಯದ ೧,೫೪೩.೬೫ ಕ್ವಿಂಟಾಲ್ ಅ
ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್
ಚನ್ನಪಟ್ಟಣ: ದಸರಾ ಎಂದರೆ ಕೇವಲ ಮೈಸೂರು ಎಂಬಂತಾಗಿದೆ, ಇದು ನಾಡ ಹಬ್ಬ ಎಂಬುದು ಕೇವಲ ಉಲ್ಲೇಖಕ್ಕಷ್ಟೇ ಸೀಮಿತವಾಗಿದೆ. ಇದು ನಾಡಹಬ್ಬ ಎಂಬುದು ಸರ
ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ
ರಾಮನಗರ: ಚನ್ನಪಟ್ಟಣ; ಪ್ರೊ ಭಗವಾನ್ ವಿಚಾರವಾದಿ, ಮೂಢನಂಬಿಕೆಗಳನ್ನು ಕಿತ್ತೊಗೆಯಲು, ಪುರಾಣ ಎಂಬುದು ಕಪೋಲ ಕಲ್ಪಿತ, ಇತಿಹಾಸ ಎಂಬುದು ಸಾರ್ವಕಾಲ
ಪ್ರತಿಕ್ರಿಯೆಗಳು