ರಸ್ತೆ ಅಪಘಾತ ತಡೆಗೆ ವೈಜ್ಞಾನಿಕ ಕ್ರಮ : ಜಿಲ್ಲಾಧಿಕಾರಿ
ರಾಮನಗರ:ಸೆ/07/20/ಸೋಮವಾರ. ಜಿಲ್ಲೆಯಲ್ಲಿ ಹಾದು ಹೋಗುವ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಜಿಲ್ಲೆಯ ಒಳಗಿರುವ ರಸ್ತೆಗಳಲ್ಲಿ ಸಂಭವಿಸುವ ಅಪಘಾತಗಳನ್ನು ತಪ್ಪಿಸಲು ಬ್ಲಾಕ್ ಸ್ಪಾಟ್ಗಳನ್ನು ಗುರುತಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷರಾಗಿರುವ ಎಂ.ಎಸ್. ಅರ್ಚನಾ ಅವರು ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ
ಮಾದರಿಯಾಗಬೇಕಿದ್ದ ಶಿಕ್ಷಕರಲ್ಲಿಲ್ಲ ಹೊಂದಾಣಿಕೆ. ಶಿಕ್ಷಕರ ದಿನಾಚರಣೆಯಲ್ಲಿ ಬಹಿರಂಗಗೊಂಡ ಅಸಮಧಾನ
ಚನ್ನಪಟ್ಟಣ:ಸೆ/05/20/ಶನಿವಾರ. ಶಿಕ್ಷಕರು ಎಂದರೆ ಸರ್ವರಿಗೂ ಮಾದರಿಯಾಗುವ ಮಂದಿ ಎಂಬುದು ಜಗತ್ತಿನಾದ್ಯಂತ ಜನಜನಿತವಾಗಿದೆ. ತಾಲ್ಲೂಕಿನ ಸರ್ಕಾರಿ ಶಾಲಾ ಶಿಕ್ಷಕರಲ್ಲೂ ಬಹಳ ಮಂದಿ ಸಂಭಾವಿತರಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಆದರೆ ಅವರದೇ ಹೆಸರಿನ ದಿನಾಚರಣೆಯಂದು ನಡೆದ ಕಾರ್ಯಕ್ರಮದಲ್ಲಿ ಕೆಲವರು ಭಾಗವಹಿಸಿದರೆ, ಮತ್ತೆ ಕೆಲವರು ಭಾಗವಹಿಸಿದ್ದು ಅರ್ಧ ಕಾರ್ಯಕ್ರಮಕ್ಕೆ ಎದ್ದು ಹೋದರೆ, ಇನ್ನ
ರೈಲಿಗೆ ಸಿಲುಕಿ ಹತ್ತು ಮೇಕೆಗಳ ದುರ್ಮರಣ
ಚನ್ನಪಟ್ಟಣ: ಸೆ/05/20/ಶನಿವಾರ. ತಾಲ್ಲೂಕಿನ ಪುಟ್ಟಪ್ಪನದೊಡ್ಡಿ ಗ್ರಾಮದ ರೈತ ಗೋವರ್ಧನ ಎಂಬುವವರಿಗೆ ಸೇರಿದ ಹತ್ತು ಮೇಕೆಗಳು ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಿನ್ನೆ ಸಂಜೆ ನಡೆದಿದೆ.ಬಯಲಿಗೆ ಮೇಯಲು ಬಿಟ್ಟಿದ್ದ ಇಪ್ಪತೈದಕ್ಕೂ ಹೆಚ್ಚು ಮೇಕೆಗಳು ಮಳೆ ಬಂದ ಕಾರಣ ಚೆಲ್ಲಾಪಿಲ್ಲಿಯಾಗಿ ಓಡಲಾರಂಭಿಸಿದವು. ಇದೇ ವೇಳೆ ಮೈಸೂರು ಕಡೆಯಿಂದ ಬಂದ ರೈಲಿನ ಇಂಜಿನ್ (
ಕೋಳಿ ಮತ್ತು ಘನ ತ್ಯಾಜ್ಯದ ಗುಂಡಿಯಾದ ಹೊಂಗನೂರು ಕೆರೆ
ಚನ್ನಪಟ್ಟಣ:ಸೆ/04/20/ಶುಕ್ರವಾರ. ತಾಲ್ಲೂಕಿನ ಕಮರ್ಷಿಯಲ್ ಏರಿಯಾ ಎಂದೇ ಗುರುತಿಸಿಕೊಂಡಿರುವ ಕೆಲವೇ ಗ್ರಾಮಗಳಲ್ಲಿ ಹೊಂಗನೂರು ಗ್ರಾಮವೂ ಒಂದು. ಆ ಗ್ರಾಮದಲ್ಲಿ ನಗರ ಹೊರತುಪಡಿಸಿದರೆ ಹೆಚ್ಚು ಫಿಲೇಚರಿಗಳು ಅಂದರೆ ರೇಷ್ಮೆ ನೂಲು ಸಿದ್ದಪಡಿಸುವ ಕಾರ್ಖಾನೆಗಳಲ್ಲಿ ಅಗ್ರ ಸ್ಥಾನ ಹೊಂದಿದೆ. ಇವೆಲ್ಲಕ್ಕೂ ಕಲಶವಿಟ್ಟಂತೆ ಗ್ರಾಮಕ್ಕೆ ಹೊಂದಿಕೊಂಡ ಬೃಹತ್ ಕೆರೆ ಯೊಂದಿದ್ದು, ಅದು ಸಂಪೂರ್ಣವಾಗಿ ಕಸದ ಗು
450 ಕೋಟಿ ರೂ. ವೆಚ್ಚದ ಶ್ರೀರಂಗ ಏತ ನೀರಾವರಿ ಪರಿಷ್ಕೃತ ಯೋಜನೆಗೆ ಸಂಪುಟ ಒಪ್ಪಿಗೆ
ಮಾಗಡಿ/ರಾಮನಗರ/ಬೆಂಗಳೂರು:ಸೆ/04/20/ಗುರುವಾರ.*ಕುಣಿಗಲ್ ತಾಲ್ಲೂಕುಗಳ 289 ಗ್ರಾಮಗಳಿಗೆ ಶಾಶ್ವತ ನೀರಿನ ಸೌಲಭ್ಯ ಎಂದ ಡಿಸಿಎಂ*-------ರಾಮನಗರ ಜಿಲ್ಲೆಯ ಮಾಗಡಿ ಮತ್ತು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕುಗಳ 83 ಕೆರೆಗಳಿಗೆ ಹೇಮಾವತಿ ನದಿಯಿಂದ ಕುಡಿಯುವ ನೀರನ್ನು ಹರಿಸುವ 450 ಕೋಟಿ ರೂ. ವೆಚ್ಚದ ಪರಿಷ್ಕೃತ ಶ್ರೀರಂಗ ಏತ ನೀರಾವರಿ ಯೋಜನೆಗೆ ರಾಜ್ಯ ಸಚಿವ ಸಂಪುಟವು ಒಪ್ಪಿಗೆ ನೀಡಿದೆ ಎಂದು ರಾ
ಖಡಕ್ ಎಸ್ಪಿ ಎಂದೇ ಹೆಸರಾಗಿದ್ದ ಅನೂಪ್ ಎ ಶೆಟ್ಟಿ ನಿರ್ಗಮನ. ಜಿಲ್ಲೆಯ ನೂತನ ಎಸ್ಪಿಯಾಗಿ ಗಿರೀಶ್ ಆಗಮನ
ರಾಮನಗರ:ಸೆ/04/20/ಗುರುವಾರ. ಜಿಲ್ಲೆಯ ಖಡಕ್ ಎಸ್ಪಿ ಎಂದೇ ಹೆಸರಾಗಿದ್ದ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಅನೂಪ್ ಎ ಶೆಟ್ಟಿಯವರನ್ನು ಸರ್ಕಾರ ಬೆಂಗಳೂರು ಕರ್ನಾಟಕ ರಿಸರ್ವ್ ಪೊಲೀಸ್ನ 9 ನೇ ಬೆಟಾಲಿಯನ್ನ ಕಮಾಂಡೆಂಟ್ ಆಗಿ ವರ್ಗಾವಣೆ ಮಾಡಿ, ರಾಮನಗರ ಜಿಲ್ಲೆಗೆ ನೂತನ ಎಸ್ಪಿಯಾಗಿ 9 ನೇ ಬೆಟಾಲಿಯನ್ನ ಕಮಾಂಡೆಂಟ್ ಆಗಿದ್ದ ಎಸ್.ಗಿರೀಶ್ ರವರನ
ಗಾಂಜಾ ಮಾರಾಟ; ಇಬ್ಬರ ಬಂಧನ
ಚನ್ನಪಟ್ಟಣ:ಸೆ/04/20/ಗುರುವಾರ. ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ, ನಗರ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿ, ಸಾವಿರಾರು ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿರುವ ಘಟನೆ, ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಯಾರಬ್ ನಗರದಲ್ಲಿ ನಡೆದಿದೆ.ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಎ
ಕೊಳವೆ ಬಾವಿ ಕೊರೆಸಲು ಅನುಮತಿ ಕಡ್ಡಾಯ
ರಾಮನಗರ:ಸೆ/02/20/ಬುಧವಾರ. ಜಿಲ್ಲೆಯಲ್ಲಿ ಹೆಚ್ಚು ಅಂತರ್ಜಲ ಬಳಸುವ ತಾಲೂಕುಗಳೆಂದು ಗುರುತಿಸಲಾಗಿರುವ ರಾಮನಗರ ಮತ್ತು ಕನಕಪುರ ತಾಲೂಕುಗಳಲ್ಲಿ ಹೊಸದಾಗಿ ಕೊಳವೆ ಬಾವಿ ಇಲ್ಲವೇ ತೆರೆದ ಬಾವಿಗಳನ್ನು ಕೊರೆಯಿಸಲು ಅನುಮತಿ ಪಡೆದು ಕೊಳ್ಳುವುದನ್ನು ಸಣ್ಣನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯು ಕಡ್ಡಾಯಗೊಳಿಸಿದೆ.ಅಂತರ್ಜಲ ಸಂಪನ್ಮೂಲ ಮೌಲೀಕರಣದ ಅನುಸಾರ ಜಿಲ್
ಸರ್ಕಾರ ಹಣ ಕೊಟ್ಟರೂ ಬಳಸಿಕೊಳ್ಳದ ಅಧಿಕಾರಿಗಳು, ಕೆಲಸ ಮಾಡಿ, ಇಲ್ಲ ಮನೆಗೆ ಹೋಗಿ ಎಂದ ಕುಮಾರಸ್ವಾಮಿ
ಚನ್ನಪಟ್ಟಣ:ಸೆ/03/20/ಬುಧವಾರ. ತನ್ನ ಸ್ವ ಕ್ಷೇತ್ರಕ್ಕೆ ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಒಂದು ವರ್ಷ ಕಳೆದರೂ ಬಳಸಿಕೊಳ್ಳದ ಅಧಿಕಾರಿಗಳಿಗೆ ಮಾಜಿ ಸಿಎಂ ಹಾಗೂ ಕ್ಷೇತ್ರದ ಶಾಸಕ ಎಚ್.ಡಿ.ಕುಮಾರಸ್ವಾಮಿ ಬೆವರಿಳಿಸಿದ ಘಟನೆ ಬುಧವಾರ ನಡೆಯಿತು.ನಗರದ ತಾಪಂ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಎಚ್.ಡಿ.ಕುಮಾರಸ್ವಾಮಿ, ಸಮಾಜಕಲ್ಯಾಣ ಇಲಾಖೆ, ಕೆಆರ
ಸೆ. 10ರಂದು ಜಿ.ಪಂ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ
ರಾಮನಗರ:ಸೆ/1/20/ಮಂಗಳವಾರ. ರಾಮನಗರ ಜಿಲ್ಲಾ ಪಂಚಾಯತಿ ಅಧ್ಯಕ್ಷರ ಸ್ಥಾನಕ್ಕೆ ಸೆಪ್ಟೆಂಬರ್ 10 ರಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆಯಲಿದೆ.ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಸ್ಥಾನವು ಕಳೆದ ಆಗಸ್ಟ್ 25 ರಿಂದ ರಾಜಿನಾಮೆ ಕಾರಣದಿಂದ ಖಾಲಿ ಇದೆ. ಈ ಹಿನ್ನೆಲೆಯಲ್ಲಿ ಸೆ. 10 ರಂದು ಮಧ್ಯಾಹ್ನ 12 ಗಂಟೆಗೆ ರಾಮನಗರ ಜಿಲ್ಲಾ ಪಂ