Tel: 7676775624 | Mail: info@yellowandred.in

Language: EN KAN

    Follow us :


ನಾನು ಕಂಡಂತೆ ಸೋಬಾನೆ ಕೃಷ್ಣೇಗೌಡರು.
ನಾನು ಕಂಡಂತೆ ಸೋಬಾನೆ ಕೃಷ್ಣೇಗೌಡರು.

ಕರ್ನಾಟಕ ಕಂಡ ದಕ್ಷ ಐಎಎಸ್ ಅಧಿಕಾರಿಗಳ ಪೈಕಿ ಡಾ ಹೆಚ್ ಎಲ್ ನಾಗೇಗೌಡರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ, ಅಧಿಕಾರದ ಅವಧಿಯಲ್ಲಿದ್ದಾಗಲೇ ಅವರು ಜಾನಪದದ ಕಡೆ ಹೆಚ್ಚು ಒಲವು ತೋರಿ ನಂತರ ಬೆಂಗಳೂರು ಮೈಸೂರು ಹೆದ್ದಾರಿಯ ರಾಮನಗರ ಚನ್ನಪಟ್ಟಣದ ನಡುವೆ ಜಾನಪದ ಲೋಕ ವನ್ನು ತೆರೆದು ಜಾನಪದ ಮತ್ತು ಜನಪದರನ್ನು ಉಳಿಸಿ ಬೆಳೆಸುವ ಕಾರ್ಯವನ್ನು ನಮಗೆಲ್ಲ ಬಳುವಳಿಯಾಗಿ ಕೊಟ್ಟು ಹೋಗಿದ್ದಾರೆ.

ಚನ್ನಪಟ್ಟಣದಲ್ಲಿ ಕೃಷಿ ಪದ್ದತಿ ಕಾರ್ಯಾಗಾರ.
ಚನ್ನಪಟ್ಟಣದಲ್ಲಿ ಕೃಷಿ ಪದ್ದತಿ ಕಾರ್ಯಾಗಾರ.

ಚನ್ನಪಟ್ಟಣದ ಖ್ಯಾತ ವೈದ್ಯ ಹಾಗೂ ಸಮಾಜ ಸೇವಕ ದಿವಂಗತ ಡಾ ಟಿ ವಿ ವರದಪ್ಪ ನವರ ಸ್ಮರಣಾರ್ಥ ಸೇವಾಸದನ ಟ್ರಸ್ಟ್ (ರಿ) ಸಂಯುಕ್ರಾಶ್ರಯದಲ್ಲಿ ಡಾ ವರದಪ್ಪ ನವರ ಪುತ್ರ ಸ್ವತಃ ಕೃಷಿಕರೂ ಆಗಿರುವ ಡಾ ಶಂಕರ್ ರವರು 20/05/18 ನೇ ಭಾನುವಾರ ಬೆಳಿಗ್ಗೆ 9:00 ಗಂಟೆಗೆ ಚನ್ನಪಟ್ಟಣ ನಗರದ ಶತಮಾನೋತ್ಸವ ಭವನದಲ್ಲಿ ನೈಸರ್ಗಿಕ ಕೃಷಿ ಪದ್ದತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಭಾಗವಹಿಸುವ ಆಸಕ್ತ ರೈತರಿಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುಭಾಷ್ ಪಾಳೇಕರ್ ರವರ ಅನ

ಜೆಡಿಎಸ್/ಕಾಂಗ್ರೆಸ್ ಖರ್ಗೆ ಸಿಎಂ, ರೇವಣ್ಣ ಡಿಸಿಎಂ. ಜೆಡಿಎಸ್/ಬಿಜೆಪಿ ಹೆಚ್ಡಿಕೆ ಸಿಎಂ/ಕೇಂದ್ರಮಂತ್ರಿ !?
ಜೆಡಿಎಸ್/ಕಾಂಗ್ರೆಸ್ ಖರ್ಗೆ ಸಿಎಂ, ರೇವಣ್ಣ ಡಿಸಿಎಂ. ಜೆಡಿಎಸ್/ಬಿಜೆಪಿ ಹೆಚ್ಡಿಕೆ ಸಿಎಂ/ಕೇಂದ್ರಮಂತ್ರಿ !?

ಇಂದು ಕರ್ನಾಟಕದಲ್ಲಿ ಮೊನ್ನೆ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಬರಲು ಸಜ್ಜಾಗಿದೆ, ಬಹುತೇಕ ಎಲ್ಲಾ ಮಾಧ್ಯಮ ಮತ್ತು ಸಂಘಸಂಸ್ಥೆಗಳ ಸಮೀಕ್ಷೆಗಳು ಸಮ್ಮಿಶ್ರ ಸರ್ಕಾರ ಬರುತ್ತದೆ ಎಂದೇ ಟಾಂ ಟಾಂ ಹೊಡೆದಿದ್ದಾರೆ. ಸಮ್ಮಿಶ್ರ ಸರ್ಕಾರ ಅಂದರೆ ಕಾಂಗ್ರೆಸ್ ಮತ್ತು ಬಿಜೆಪಿ ಸೇರಿ ಸರ್ಕಾರ ರಚನೆ ಮಾಡುವುದು ಸುಲಭವಲ್ಲ, ಯಾಕೆಂದರೆ ಅದಕ್ಕೆ ನೂರಾರು ಕಾರಣಗಳ ಜೊತೆಗೆ ತೊಡರುಗಳು ಬಹಳಷ್ಟಿವೆ, ಬಹು ಮುಖ್ಯವಾದ ಸಂಗತಿ ಎಂದರೆ ರಾಷ್ಟ್ರೀಯ ಪಕ್ಷಗಳಾದ ಇವು ಸಾರ್ವಜನಿಕರಿಗೆ ಉತ್ತರ

ಡಿಕೆ ದುಡ್ಡಿನಲ್ಲಿ ಹೆಚ್ಡಿಕೆ ಸ್ಪರ್ಧೆ, ನಾನು ಸೋಲುವ ಮುನ್ಸೂಚನೆ ಇದೆ ಸಿಪಿವೈ.
ಡಿಕೆ ದುಡ್ಡಿನಲ್ಲಿ ಹೆಚ್ಡಿಕೆ ಸ್ಪರ್ಧೆ, ನಾನು ಸೋಲುವ ಮುನ್ಸೂಚನೆ ಇದೆ ಸಿಪಿವೈ.

ಈ ಬಾರಿ ನಡೆದ ಚುನಾವಣೆಯಲ್ಲಿ ಹಣಬಲ ಮತ್ತು ತೋಳ್ಬಲದ ಮುಂದೆ ನನ್ನ ಅಭಿವೃದ್ಧಿ ಬಲ ಏನೂ ನಡೆಯದಾಗಿದೆ, ಹಾಗಾಗಿ ಸೋಲುವ ಮುನ್ಸೂಚನೆ ನನಗಾಗಿದೆ, ಗೆದ್ದರೆ ಕೂದಲೆಳೆಯ ಅಂತರದಲ್ಲಿ ಗೆಲ್ಲಬಹುದು, ಸೋಲು ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸುತ್ತೇನೆ ಎಂದು ಶಾಸಕ ಸಿ ಪಿ ಯೋಗೇಶ್ವರ್ ಹೇಳಿದರು. ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಇಲ್ಲಿ ನನಗೆ ನೇರಸ್ಪರ್ಧಿ ಹೆಚ್ ಡಿ ಕುಮಾರಸ್ವಾಮಿ, ರೇವಣ್ಣನವರು ನೆಪಮಾತ್ರವಾಗಿದ್ದರು,

ಯೋಗೇಶ್ವರ್ ಗೆಲ್ಲಲಿ ಎಂದು ನಾನು ಆಶೀರ್ವದಿಸಿಲ್ಲ, ಗಿಮಿಕ್ ರಾಜಕಾರಣ ಬಿಡಲಿ, ರೇವಣ್ಣ.
ಯೋಗೇಶ್ವರ್ ಗೆಲ್ಲಲಿ ಎಂದು ನಾನು ಆಶೀರ್ವದಿಸಿಲ್ಲ, ಗಿಮಿಕ್ ರಾಜಕಾರಣ ಬಿಡಲಿ, ರೇವಣ್ಣ.

ಯೋಗೇಶ್ವರ್ ಎದುರು ಸಿಕ್ಕಾಗ ಸೌಜನ್ಯಕ್ಕಾಗಿ ಮಾತನಾಡಿದ್ದೇನೆ, ಅವರಿಗೆ ನೀವು ಗೆಲ್ಲಿ ಎಂದು ಆಶೀರ್ವಾದ ಮಾಡಿಲ್ಲ, ಮಾತನಾಡಿದ್ದನ್ನೇ ಅವರು ನನಗೆ ರೇವಣ್ಣನವರು ಆಶೀರ್ವಾದ ಮಾಡಿದ್ದಾರೆ ಕಾಂಗ್ರೆಸ್ ಮತಗಳೆಲ್ಲ ನಮಗೆ ಬೀಳುತ್ತವೆ ಎಂದು ಹೋದಲೆಲ್ಲ ಸುಳ್ಳು ಹೇಳಿಕೊಂಡು ಬರುತಿದ್ದಾರೆ, ನಾನು ಕಾಂಗ್ರೆಸ್ ಅಭ್ಯರ್ಥಿ ನಾನು ಗೆಲ್ಲುತ್ತೇನೆ, ಮೊದಲು ಅವರು ಸುಳ್ಳು ಹೇಳುವುದನ್ನು ಬಿಡಬೇಕು ಎಂದರು. ನಗರದ ತಮ್ಮ ಮನೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರ

ಕಾಂಗ್ರೆಸ್ ಜೆಡಿಎಸ್ ನಡುವೆ ಪೈಪೋಟಿ, ಬಿಜೆಪಿಗೆ ಮೂರನೆ ಸ್ಥಾನ. ಯಲಿಯೂರು ನಾಗಣ್ಣ.
ಕಾಂಗ್ರೆಸ್ ಜೆಡಿಎಸ್ ನಡುವೆ ಪೈಪೋಟಿ, ಬಿಜೆಪಿಗೆ ಮೂರನೆ ಸ್ಥಾನ. ಯಲಿಯೂರು ನಾಗಣ್ಣ.

ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಜೆ ಪೈಪೋಟಿಯೇ ವಿನಹ ಬಿಜೆಪಿಯಲ್ಲ, ಬಿಜೆಪಿ ಏನಿದ್ದರೂ ಮೂರನೇ ಸ್ಥಾನ ಎಂದು ಕುರುಬರ ಸಂಘದ ತಾಲ್ಲೂಕು ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಯಲಿಯೂರು ನಾಗಣ್ಣ ಹೇಳಿದರು. ಅವರು ನಗರದ ತಮ್ಮ ಮನೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿ ಮಾತನಾಡಿದರು. ಸಿ ಪಿ ಯೋಗೇಶ್ವರ್ ಮೆಗಾಸಿಟಿ ಹೆಸರಿನಲ್ಲಿ ಜನರಿಗೆ ಮೋಸ ಮಾಡಿ ಬಂದವರು, ಆದರೆ ರೇವಣ್ಣನವರು ಸರಳ ಸಜ್ಜನಿಕೆಯನ್ನು ಹೊಂದಿದವರು, ಕುರುಬ

ಸಿ ಪಿ ಯೋಗೇಶ್ವರ್ ಗೆ ಅಹಿಂದ ಬೆಂಬಲ, ವಿಶ್ವಕರ್ಮ ಕೆ ಪಿ ನಂಜುಂಡಿ.
ಸಿ ಪಿ ಯೋಗೇಶ್ವರ್ ಗೆ ಅಹಿಂದ ಬೆಂಬಲ, ವಿಶ್ವಕರ್ಮ ಕೆ ಪಿ ನಂಜುಂಡಿ.

ಸಿ ಪಿ ಯೋಗೇಶ್ವರ್ ಮತ್ತು ನಾನು ಇಪ್ಪತ್ತು ವರ್ಷಗಳ ಸ್ನೇಹಿತರು, ಅವರು ನಾನು ಇಬ್ಬರೂ ಬಿಜೆಪಿ ಪಕ್ಷದಲ್ಲಿ ಇದ್ದೇವೆ, ಚನ್ನಪಟ್ಟಣದ ವಿಶ್ವಕರ್ಮ ಬಾಂಧವರು ಮತ್ತು ತಾಲ್ಲೂಕಿನ ಹಿಂದುಳಿದ ವರ್ಗದ ಜನತೆ ನೀರಾವರಿ ಹರಿಕಾರರನ್ನು ಗೆಲ್ಲಿಸಿಕೊಳ್ಳಬೇಕು ಎಂದು ವಿಶ್ವಕರ್ಮ ಜನಾಂಗದ ಮುಖಂಡ ಕೆ ಪಿ ನಂಜುಂಡಿ ಮನವಿ ಮಾಡಿದರು. ಅವರು ಶಾಸಕ ಸಿ ಪಿ ಯೋಗೇಶ್ವರ್ ರವರ ನಿವಾಸದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ ಪಿ

ಅಂಬೇಡ್ಕರ್ ನಗರದಲ್ಲಿ ಕೆಲಯುವಕರಿಂದ ಯೋಗೇಶ್ವರ್ ಮತ್ತು ಕೆ ಶಿವರಾಂ ವಿರುದ್ಧ ಧಿಕ್ಕಾರ.
ಅಂಬೇಡ್ಕರ್ ನಗರದಲ್ಲಿ ಕೆಲಯುವಕರಿಂದ ಯೋಗೇಶ್ವರ್ ಮತ್ತು ಕೆ ಶಿವರಾಂ ವಿರುದ್ಧ ಧಿಕ್ಕಾರ.

ಚನ್ನಪಟ್ಟಣದ ಅಂಬೇಡ್ಕರ್ ನಗರದಲ್ಲಿ ಇಂದು ಸಂಜೆ ಮತಯಾಚನೆಗೆ ಬಂದು ಭಾಷಣ ಮುಗಿಸಿ ಹೊರಡುವ ಸಮಯದಲ್ಲಿ ಇಪ್ಪತ್ತು  ವರ್ಷಗಳ ಶೂನ್ಯ ಸಾಧನೆಯ ವಿರುದ್ಧ ಧಿಕ್ಕಾರ ಕೂಗಿದರು. ಮಧ್ಯಾಹ್ನ 12:30 ಕ್ಕೆ ಛಲವಾದಿ ಮಹಾಸಭಾದ ಅಧ್ಯಕ್ಷ ಕೆ ಶಿವರಾಂ ಮತ್ತು ಬಿಗ್‌ ಬಾಸ್‌ ಖ್ಯಾತಿಯ ಜಯ ಶ್ರೀನಿವಾಸ ರವರ ಪತ್ರಿಕಾಗೋಷ್ಠಿ, ಸಂಜೆ 06:30 ಕ್ಜೆ  ವಿಶ್ವಕರ್ಮ ಸಮುದಾಯದ ಮುಖಂಡ ಕೆ ಪಿ ನಂಜುಂಡಿ ರವರ ಜೊತೆ ಸಿ ಪಿ ಯೋಗೇಶ್ವರ್ ಪತ್ರಿಕಾಗೋಷ್ಠಿ ನಡೆಸಿಸ್ದರು.

ಎಲ್ಲಾ ದಲಿತರು ಮತ್ತು ಛಲವಾದಿ ಮಹಾಸಭಾದ ಸದಸ್ಯರು ಸಿ ಪಿ ಯೋಗೇಶ್ವರ್ ಮತ ಹಾಕಿ, ಕೆ ಶಿವರಾಂ.
ಎಲ್ಲಾ ದಲಿತರು ಮತ್ತು ಛಲವಾದಿ ಮಹಾಸಭಾದ ಸದಸ್ಯರು ಸಿ ಪಿ ಯೋಗೇಶ್ವರ್ ಮತ ಹಾಕಿ, ಕೆ ಶಿವರಾಂ.

ಛಲವಾದಿ ಮಹಾಸಭಾದ ಸದಸ್ಯರು ಹಾಗೂ ದಲಿತರು ಈ ಬಾರಿ ಬಿಜೆಪಿಯನ್ನು ಬೆಂಬಲಿಸಬೇಕೆಂದು ಛಲವಾದಿ ಮಹಾಸಭಾದ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ನಿವೃತ್ತ ಐಎಎಸ್ ಅಧಿಕಾರಿ ಕೆ ಶಿವರಾಂ ಮನವಿ ಮಾಡಿದರು,  ಅವರು ಚನ್ನಪಟ್ಟಣದ ಬಿಜೆಪಿ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ರವರ ನಿವಾಸದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಚನ್ನಪಟ್ಟಣದಲ್ಲಿ ಒಂದು ಶಕ್ತಿಯಾಗಿ, ವ್ಯಕ್ತಿಯಾಗಿ ಬೆಳೆದಿರುವ ಸಿ ಪಿ ಯೋಗೇಶ್ವರ್ ರವರನ್ನು ಗೆಲ್ಲಿಸಬೇಕೆಂದು ದಲಿತ ಮುಖಂಡರಲ್ಲಿ ಮನವಿ ಮಾಡಿದರ

ಅಸ್ತಿತ್ವ ಕಳೆದುಕೊಳ್ಳುತ್ತಿರುವ ಚನ್ನಪಟ್ಟಣದ ಶೆಟ್ಟಿಹಳ್ಳಿ ಕೆರೆ.
ಅಸ್ತಿತ್ವ ಕಳೆದುಕೊಳ್ಳುತ್ತಿರುವ ಚನ್ನಪಟ್ಟಣದ ಶೆಟ್ಟಿಹಳ್ಳಿ ಕೆರೆ.

ಅಸ್ತಿತ್ವ ಕಳೆದುಕೊಳ್ಳುತ್ತಿರುವ ಚನ್ನಪಟ್ಟಣದ ಶೆಟ್ಟಿಹಳ್ಳಿ ಕೆರೆ. ಜನಪ್ರತಿನಿಧಿಗಳ ನಿರ್ಲಕ್ಷ್ಯ, ಕಸದ ಗುಂಡಿ ಆಗುತ್ತಿರುವ ಕೆರೆ, ಕಳೆ, ಒತ್ತುವರಿ ಕಾಟ. ಚನ್ನಪಟ್ಟಣ ನಗರದೊಳಗೆ ಇರುವ ಏಕೈಕ ದೊಡ್ಡ ಕೆರೆ ಶೆಟ್ಟಿಹಳ್ಳಿ ಕೆರೆ ಮಾತ್ರ, ನಗರದ ಮಧ್ಯಭಾಗದಲ್ಲಿ ಇರುವ ಕೆರೆಯಾದ್ದರಿಂದ ಸುಂದರವಾಗಿ ನಿರ್ಮಿಸಿ ನಗರ ವಾಸಿಗಳಿಗೆ ನೀರಿನ ಜೊತೆಗೆ ಒಳ್ಳೆಯ ತಂಪಾದ ವಾತಾವರಣ ನಿರ್ಮಿಸಬಹುದಾಗಿತ್ತು, ಆದರೆ ಸಂಬಂಧಿಸಿದ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಕೆರೆಯ ಬ

Top Stories »  



Top ↑