ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದು ಸರಿಯಲ್ಲ ಬಳ್ಳಾರಿ ಸಂಸದ ನಾಸೀರ್ ಹುಸೇನ್
ಚನ್ನಪಟ್ಟಣ: ಎನ್ ಡಿ ಎ ನೇತೃತ್ವದ ಕೇಂದ್ರ ಸರ್ಕಾರವು ಧರ್ಮದ ಆಧಾರದ ಮೇಲೆ ಪೌರತ್ವ ನೀಡುತ್ತಿರುವುದು ಸರಿಯಾದ ಕ್ರಮವಲ್ಲ, ಸಿಎಎ, ಎನ್ಆರ್ಸಿ, ಎನ್ಪಿಆರ್ ಕಾಯಿದೆಗಳನ್ನು ಶೀಘ್ರವಾಗಿ ಹಿಂಪಡೆಯಬೇಕು ಎಂದು ಬಳ್ಳಾರಿ ಮೂಲದ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಹೇಳಿದರು. ಅವರು ಇಂದು ನಗರದಲ್ಲಿ ನಡೆದ ಸಿಎಎ, ಎನ್ಆರ್ಸಿ, ಎನ್ಪಿಆರ್ ವಿರುದ್ಧ ಮುಸ್ಲಿಂ ಸಮುದಾಯ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ನಮ್ಮ ದೇಶದ ಸುತ್ತ ಏಳು ವಿದೇಶಗಳಿದ್ದು, ಕೇವಲ ಮೂರು ವಿದೇಶಗಳ ನಾಗರೀಕರಿಗೆ ಮಾತ್ರ ಪೌರತ್ವ ನಿಷೇಧ ಹೇರಿರುವುದು ಎಷ್ಟು ಸರಿ. ಇದು ಧರ್ಮದ ವಿರುದ್ದ ನಡೆಸಿರುವ ಷಡ್ಯಂತ್ರ ಎಂದು ಆರೋಪಿಸಿದರು. ಎನ್ ಡಿ ಎ ಸರ್ಕಾರವು ಬಹುಮತ ಇದೆ ಎಂದು ಇಷ್ಟ ಬಂದಂತೆ ಕಾನೂನು ರೂಪಿಸುತ್ತಿದೆ. ಕಾನೂನು ತರಲು ಸಹಿ ಹಾಕಿದ ಮಿತ್ರ ಪಕ್ಷಗಳೇ ಇಂದು ಕಾನೂನನ್ನು ವಿರೋಧಿಸುತ್ತಿವೆ. ತಕ್ಷಣ ಈ ಕಾನೂನನ್ನು ಹಿಂತೆಗೆದುಕೊಳ್ಳಬೇಕು. ನಂತರ ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾನೂನು ರೂಪಿಸಬೇಕೆಂದು ಸಲಹೆ ನೀಡಿದರು.
ಜನರಿಂದ, ಜನರಿಗಾಗಿ, ಜನರಿಗೋಷ್ಕರ ಪ್ರಜಾಪ್ರಭುತ್ವ ಇದು ಸಂವಿಧಾನದ ಆಶಯ. ಕಳ್ಳರಿಂದ, ಕಳ್ಳರಿಗಾಗಿ, ಕಳ್ಳರಿಗೋಷ್ಕರ ಇರೋದೆ ಬಿಜೆಪಿ ಸರ್ಕಾರ.
ಭಾರತೀಯರನ್ನು ಮೂರ್ಖರನ್ನಾಗಿ ಮಾಡಿದ್ದೇ ಮೋದಿಯ ಸಾಧನೆ,
೧೫ ಲಕ್ಷ ಅಕೌಂಟ್ ಗೆ ಮೊದಲ ಸುಳ್ಳು, ಜಮ್ಮು ಕಾಶ್ಮೀರ ೩೭೦ ನೇ ವಿಧಿ ತೆಗೆದು ಹಾಕಿದ್ದು, ನೋಟ್ ಬ್ಯಾನ್ ಮಾಡಿದ್ದು, ಮಹಾರಾಷ್ಟ್ರದಲ್ಲಿ ರಾತ್ರೋರಾತ್ರಿ ಪ್ರಮಾಣ ವಚನ ಮಾಡಲು ರಾಜ್ಯಪಾಲರನ್ನು ದುರುಪಯೋಗ ಪಡಿಸಿಕೊಂಡಿದ್ದು ತ್ರಿವಳಿ ತಲಾಕ್ ನಿಷೇಧಿಸಿದ್ದು, ಏರ್ ಇಂಡಿಯಾ, ಬಿಎಸ್ಎನ್ಎಲ್, ಭಾರತ್ ಪೆಟ್ರೋಲಿಯಂ ಇಂತಹ ಕಂಪೆನಿಗಳನ್ನು ಮಾರುತ್ತಿದ್ದರೂ ನಾವು ಪ್ರತಿಭಟಿಸಲಿಲ್ಲ, ಆದರೆ ಪೌರತ್ವ ಕಾಯಿದೆಯನ್ನು ಜಾರಿಗೆ ತಂದಿರುವುದನ್ನು ಹಿಂಪಡೆಯುವ ತನಕ ನಾವು ವಿಶ್ರಮಿಸುವುದಿಲ್ಲ.
ಸ್ವಚ್ಛ ಭಾರತ, ಯೋಗ, ಫಿಟ್ ಇಂಡಿಯಾ ಎಲ್ಲವೂ ನಮ್ಮವೇ ಕಾರ್ಯಕ್ರಮ ಮಾತ್ರ ಬಿಜೆಪಿ, ಪೋಟೋ ಮೋದಿದು. ಎಂದು ಎಸ್ ಡಿ ಪಿ ಐ ನ ನ್ಯಾಷನಲ್ ಸೆಕ್ರೆಟರಿ ಯಾದ ಆಲ್ಫೋನ್ಸ್ ನೇರವಾಗಿ ದೂರಿದರು.
ಪ್ರಮೋದ್ ಮುತಾಲಿಕ್ ನಮ್ಮೆಲ್ಲರ ವಿರೋಧಿ, ಅವರಿಗೆ ದೇವರು ಆಶೀರ್ವದಿಸಲಿ, ಅವರ ಧರ್ಮ ಅವರಿಗೆ ಮೇಲು, ದೇಶಕ್ಕೆ ಬೇಕಾಗಿದ್ದು ಸಂವಿಧಾನ.
ಕಲ್ಲಡ್ಕ ಪ್ರಭಾಕರ್ ಭಟ್ಟರು ಗಲಾಟೆ ಮಾಡಿಯೇ ಬದುಕೋದು, ಕ್ರೈಸ್ತರ ದುಡ್ಡು ಆಗುತ್ತೆ, ಕ್ರೈಸ್ತರು ಆಗಲ್ಲ, ಚುನಾವಣೆ ಗೆದ್ದಿದ್ದೆ ಇವಿಎಂ ನಿಂದ, ಇವಿಎಂ ನಿಷೇಧಿಸುವ ತನಕ ಬಿಜೆಪಿಯ ಸರ್ಕಾರವೇ ಬರುತ್ತದೆ ಎಂದರು.
ಕೆಪಿಸಿಸಿ ಸದಸ್ಯ ನಿಜಾಮ್ ಫೌಜದಾರ್ ಮಾತನಾಡಿ ಸರ್ಕಾರದ ನೀತಿಗಳು ಸರಿಯಾಗಿಲ್ಲ, ಸಂವಿಧಾನವನ್ನು ತಿರುಚಿ, ಮನುವಾದವನ್ನು ತರಲೆತ್ನಿಸುತ್ತಿದ್ದಾರೆ, ಇದನ್ನು ಮೋದಿ, ಷಾ ಮತ್ತು ಅನಂತ ಕುಮಾರ ಹೆಗ್ಗಡೆ ಯವರ ಮಾತಿನಲ್ಲೇ ವ್ಯಕ್ತವಾಗುತ್ತಿದೆ.
ಮಾಜಿ ಶಾಸಕ ಸಿ ಪಿ ಯೋಗೇಶ್ವರ್ ಇಪ್ಪತ್ತು ವರ್ಷಗಳ ಕಾಲ ಶಾಸಕರಾಗಿದ್ದು ಕಾಂಗ್ರೆಸ್ ಸರ್ಕಾರದಿಂದ. ಇದುವರೆಗೂ ಅವರು ಬಂದು ನಮಗೆ ಮಾಹಿತಿ ನೀಡುತ್ತಿಲ್ಲ. ಅವರು ಬಹಿರಂಗವಾಗಿ ಬಂದು ಸಂವಿಧಾನದ ಪರವೋ ? ಆರ್ ಎಸ್ ಎಸ್ ಪರವೋ ಎಂಬುದನ್ನು ಹೇಳಲಿ ಎಂದು ಸವಾಲು ಹಾಕಿದರು.
ಪೌರತ್ವ ಎಂಬುದು ಧರ್ಮದ ಮತ್ತು ರಾಜಕೀಯ ಪಕ್ಷಗಳ ಸಮಸ್ಯೆ ಅಲ್ಲ, ಎಲ್ಲರೂ ಒಂದೇ ಕಡೆ ವಾಲಲಿ ಎಂದು ಮಾಡಿಕೊಂಡಿರುವ ಕಾನೂನು ಇದು. ಅಮಿತ್ ಷಾ ಅಸ್ಸಾಂ ಗೆ ಮಾತ್ರ ಎಂದು ಹೇಳಿದ್ದು ಈಗ ದೇಶಕ್ಕೆ ಗಂಡಾಂತರ ತಂದಿದ್ದಾರೆ, ದಲಿತನಿಂದ ಬ್ರಾಹ್ಮಣನವರೆಗೆ, ಎಲ್ಲಾ ಧರ್ಮಿಯರಿಗೂ ಈ ಕಾನೂನು ತೊಂದರೆಯಾಗಿದೆ, ಡಾ ಅಂಬೇಡ್ಕರ್ ಮೂರು ಪಿಎಚ್ಡಿ ಮಾಡಿದ್ದಾರೆ, ಇಂತಹ ವಿದ್ವಾಂಸರು ಬರೆದ ಸಂವಿಧಾನವನ್ನೇ ಬದಲಿಸಲು ಹೊರಟಿದ್ದಾರೆ, ಹಿಂದೂಸ್ಥಾನದಲ್ಲಿ ಎಲ್ಲರೂ ಒಂದೇ ಎಂದು ನಿವೃತ್ತ ಐಎಎಸ್ ಅಧಿಕಾರಿ ಜನಾಬ್ ಜಮೀರ್ ಪಾಷ ಹೇಳಿದರು.
*ಇತಿಹಾಸ ನಿರ್ಮಿಸಿದ ಪ್ರತಿಭಟನೆ*
ಮುಸ್ಲಿಂ ಸಮುದಾಯದ ಪುರುಷರು ಮಾತ್ರ ಇದುವರೆಗೂ ಪ್ರತಿಭಟನೆ ನಡೆಸುತ್ತಿದ್ದು, ಇಂದು ಮುಸ್ಲಿಂ ಮಹಿಳೆಯರು ಸಹ ಸಹಸ್ರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಹೆಜ್ಜೆ ಹಾಕಿದ್ದು ಜಿಲ್ಲೆಯ ಮಟ್ಟಿಗೆ ಇತಿಹಾಸ ನಿರ್ಮಿಸಿತು.
ತಂಡೋಪತಂಡೋಪವಾಗಿ ಬಂದು ಫರ್ಹಾ ಶಾಲೆಯ ಬಳಿ ಹೆಂಗಸರು, ಗುರುಭವನದ ಆವರಣದಲ್ಲಿ ಗಂಡಸರು ಜಮಾಯಿಸಿದ್ದು ಸಾತನೂರು ವೃತ್ತ, ಷೇರು ಹೋಟೆಲ್ ಕಡೆಯಿಂದ ಪೆಟ್ಟಾ ಶಾಲೆಯ ಬಳಿ ಜಮಾಯಿಸಿ ಪ್ರತಿಭಟಿಸಿದರು.
ವೇದಿಕೆಯಲ್ಲಿ ಧರ್ಮಗುರು ಅಮಾನುಲ್ಲಾ, ಧರ್ಮಗುರು ಮೌಲಾನಾ ಮುಜೀಬ್ ರೆಹಮಾನ್, ಜಬಿಉಲ್ಲಾಖಾನ್ ಘೋರಿ, ನಿಜಾಮ್ ಫೌಜದಾರ್, ಹಮೀಬುಲ್ಲಾ, ಅಹಮದ್ ಮುನಾವರ್, ಜಕೀ ಅಹಮದ್, ವಾಸೀಲ್ಅಲಿಖಾನ್, ಶರತ್ ಚಂದ್ರ, ಕೋಟೆ ಸಿದ್ದರಾಮಯ್ಯ ಇನ್ನಿತರರು ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in karnataka »
ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ
ರಾಮನಗರ: ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಕಳೆದ 30 ವರ್ಷಗಳಿಂದಲೂ ನಿಮ್ಮ ಸೇವೆ ಮಾಡಿದ್ದೇನೆ. ಮುಂದೆಯೂ ನಿಮ್ಮ ಕಷ್ಟಗಳನ್ನರಿತು ನಿಮಗಾಗಿ ಮತ್ತಷ್ಟು ಕ
ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ
ರಾಮನಗರ, ಫೆ. 02 : ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಧ್ವಜ ಸ್ತಂಭದ ವಿಚಾರವು ತುಂಬಾ ಸೂಕ್ಷ್ಮ ವಿಚಾರವಾಗಿದ್ದು, ಈ ಸಂಬಂಧ ಯಾವು
ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ
ಚನ್ನಪಟ್ಟಣ: ಸಂವಿಧಾನ ಜಾಗೃತಿ ಜಾಥಾಕ್ಕೆ ತಾಲ್ಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಇದೇ ಸಂದರ್ಭದಲ್ಲಿ
ಸಂವಿಧಾನ ಜಾಗೃತಿ ಜಾಥಾ
ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ
ಚನ್ನಪಟ್ಟಣ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಶ್ರೀ ವೀರಾಂನೇಯಸ್ವಾಮಿ ಗೆ ವಿಶೇಷ
ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ
ರಾಮನಗರ, ಜ. 17: ರಾಮನಗರ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಹೊಂದಿರುವ ಆಸ್ತಿಗಳನ್ನು ದಿನಾಂಕ: 02.05.2015 ರಿಂದ ಜಾರಿಗೆ ಬರುವಂತೆ,
ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ
ರಾಮನಗರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20, 2020-21, 2021-22 ಮತ್ತು 2022-23ರ (ಜುಲೈ ಆವೃತ್ತಿ) ದ್ವಿತೀಯ/ತೃತೀಯ ವರ್ಷದ ಬಿ
ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ
ಹಾಸನ: ಪ್ರಾಕೃತಿಕ ಸೌಂದರ್ಯವು ಇ-ತ್ಯಾಜ್ಯ, ಕೆಲ ತಂತ್ರಜ್ಞಾನ ಹಾಗೂ ಪ್ಲಾಸ್ಟಿಕ್ ನಿಂದ ಹಾಳಾಗುತ್ತಿದೆ. ಪರಿಸರ ನಾಶಕ್ಕೆ ಮುನ್ನುಡಿ ಬರೆದವನೇ
೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ
ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಪಡಿತರ ಅಕ್ಕಿಯ ಪೈಕಿ ಸುಮಾರು ೫೨ ಲಕ್ಷಕ್ಕೂ ಮೌಲ್ಯದ ೧,೫೪೩.೬೫ ಕ್ವಿಂಟಾಲ್ ಅ
ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್
ಚನ್ನಪಟ್ಟಣ: ದಸರಾ ಎಂದರೆ ಕೇವಲ ಮೈಸೂರು ಎಂಬಂತಾಗಿದೆ, ಇದು ನಾಡ ಹಬ್ಬ ಎಂಬುದು ಕೇವಲ ಉಲ್ಲೇಖಕ್ಕಷ್ಟೇ ಸೀಮಿತವಾಗಿದೆ. ಇದು ನಾಡಹಬ್ಬ ಎಂಬುದು ಸರ
ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ
ರಾಮನಗರ: ಚನ್ನಪಟ್ಟಣ; ಪ್ರೊ ಭಗವಾನ್ ವಿಚಾರವಾದಿ, ಮೂಢನಂಬಿಕೆಗಳನ್ನು ಕಿತ್ತೊಗೆಯಲು, ಪುರಾಣ ಎಂಬುದು ಕಪೋಲ ಕಲ್ಪಿತ, ಇತಿಹಾಸ ಎಂಬುದು ಸಾರ್ವಕಾಲ
ಪ್ರತಿಕ್ರಿಯೆಗಳು