ಪ್ರತಿ ವರ್ಷ ಬೊಂಬೆ ಉತ್ಸವ, ತಯಾರಕರು ಮತ್ತು ಪ್ರವಾಸಿಗರ ನಡುವೆ ವೇದಿಕೆ ಕಲ್ಪಿಸಲ ಬದ್ದ ಡಿಸಿಎಂ ಅಶ್ವಥ್ ನಾರಾಯಣ
**ಚನ್ನಪಟ್ಟಣ:ಅ/೨೧/೨೦೧೯/ಸೋಮವಾರ.*ಬೊಂಬೆಗಳ ಉತ್ಸವ*ವಿಶ್ವ ಪ್ರಸಿದ್ಧಿ ಪಡೆದಿರುವ ಚನ್ನಪಟ್ಟಣ ದ ಗೊಂಬೆಗಳ ಉತ್ಸವವನ್ನು ಪ್ರತಿ ವರ್ಷ ನಡೆಸಲು ತೀರ್ಮಾನ ಕೈಗೊಳ್ಳಲಾಗುವುದು, ಗೊಂಬೆಗಳ ತಯಾರಕರೂ ಮತ್ತು ಪ್ರವಾಸಿಗರಿಗೆ ನೇರ ವೇದಿಕೆ ಕಲ್ಪಿಸಲು ಬದ್ದರಾಗಿರುವುದಾಗಿ ಉಪ ಮುಖ್ಯಮಂತ್ರಿ ಡಾ ಅಶ್ವಥ್ ನಾರಾಯಣ ತಿಳಿಸಿದರು.ಅವರು ಚನ್ನಪಟ್ಟಣ ದ ಮಹದೇಶ್ವರ ನಗರದಲ್ಲಿರುವ ಚನ್ನಪಟ್ಟಣ ಕ್ರಾಫ್ಟ್ ಪಾಕ್೯ ಗೆ ಭೇಟಿ ನೀಡಿ ಮಾತ
ದೊಡ್ಡನಹಳ್ಳಿ ಸರ್ಕಾರಿ ಶಾಲಾ ಜಾಗ ಒತ್ತುವರಿ ತೆರವುಗೊಳಿಸಿಕೊಡಲು ತಹಶಿಲ್ದಾರ್ ರವರಿಗೆ ಮನವಿ
ಚನ್ನಪಟ್ಟಣ: ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವ ಪೋಷಕರು, ಮಕ್ಕಳಿಲ್ಲದೆ ಬಾಗಿಲು ಮುಚ್ಚುತ್ತಿರುವ ಸರ್ಕಾರಿ ಶಾಲೆಗಳು ಅನೇಕ, ಇವುಗಳ ನಡುವೆ ಶಾಲೆ ಇರುವ ಜಾಗವನ್ನು ಒತ್ತುವರಿ ಮಾಡಿಕೊಂಡು ದರ್ಪ ಮೆರೆಯುವ ಹಾಗೂ ಅವರಿಗೆ ಸಾಥ್ ನೀಡುವ ಕೆಲ ಅಧಿಕಾರಿ ವರ್ಗ ! ಇಂಥದ್ದೇ ಒಂದು ಭೂ ಕಬಳಿಕೆ ತಾಲ್ಲೂಕಿನ ದೊಡ್ಡನಹಳ್ಳಿಯಲ್ಲಿ ನಡೆದಿದೆ ಎಂದು ರೈತ ಮುಖಂಡ ಪಾರ್ಥಸಾರಥಿ, ಶಾಲಾಭಿವೃದ್ದಿ ಸಮಿತಿ ಅಧ್ಯ
ಮೂಢನಂಬಿಕೆ ಬಿಟ್ಟು ಜಾನುವಾರುಗಳಿಗೆ ಲಸಿಕೆ ಹಾಕಿಸಿ ಹರೂರು ರಾಜಣ್ಣ
ಚನ್ನಪಟ್ಟಣ: ಜಾನುವಾರುಗಳಿಗೆ ತಗಲುವ ಸಾಂಕ್ರಾಮಿಕ ರೋಗಗಳಲ್ಲಿ ಕಾಲುಬಾಯಿ ಜ್ವರವೂ ಒಂದಾಗಿದ್ದು ಮೂಢನಂಬಿಕೆ ಬಿಟ್ಟು ಲಸಿಕೆ ಹಾಕಿಸುವ ಮೂಲಕ ಆರೋಗ್ಯ ಕಾಪಾಡಬೇಕು ಎಂದು ತಾಲ್ಲೂಕು ಪಂಚಾಯತಿ ಅಧ್ಯಕ್ಷ ಹರೂರು ರಾಜಣ್ಣ ತಿಳಿಸಿದರು.ಅವರು ತಾಲ್ಲೂಕಿನ ಬೇವೂರು ಗ್ರಾಮದಲ್ಲಿ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ಹಾಗೂ ಬೆಂಗಳೂರು ಹಾಲು ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊ
ಆದರ್ಶ ವ್ಯಕ್ತಿತ್ವದ ಮಹಾಮುನಿ ವಾಲ್ಮೀಕಿ. ದಂಡಾಧಿಕಾರಿ ಸುದರ್ಶನ್
ಚನ್ನಪಟ್ಟಣ: ವಾಲ್ಮೀಕಿ ಹೆಸರೇ ಒಂದು ರೋಮಾಂಚನ, ದರೋಡೆಕಾರನಾಗಿದ್ದ ವಾಲ್ಮೀಕಿ ಮುಂದೊಂದು ದಿನ ತನ್ನ ತಪ್ಪಿನ ಅರಿವಾಗಿ ತಪಸ್ಸನ್ನಾಚರಿಸಿ ಪ್ರಪಂಚವೇ ಹೊಗಳುವಂತಹ ಶ್ರೀ ರಾಮಾಯಣ ಎಂಬ ಅತ್ಯದ್ಭುತ ಕೃತಿಯನ್ನು ರಚಿಸಿ ಅಂದು, ಇಂದು ಮತ್ತು ಮುಂದೆಯೂ ತನ್ನ ಹೆಸರನ್ನು ಅಜರಾಮರವಾಗಿರಿಸಿಕೊಂಡು ನಮ್ಮೆಲ್ಲರಿಗೂ ಆದರ್ಶ ವ್ಯಕ್ತಿಯಾಗಿದ್ದಾರೆ ಎಂದು ತಾಲ್ಲೂಕಿನ ದಂಡಾಧಿಕಾರಿ ಸುದರ್ಶನ್ ನುಡಿದರು.
ಪಾರಂಪರಿಕ ವೈದ್ಯಪದ್ದತಿಗೆ ಸರ್ಕಾರ ಮಾನ್ಯತೆ ನೀಡಲಿ, ಗಾ ನಂ ಶ್ರೀಕಂಠಯ್ಯ
ರಾಮನಗರ: ಪಾರಂಪರಿಕ ವೈದ್ಯ ಪದ್ದತಿಗೆ ಮಂಡಳಿ ರಚಿಸಿ, ಎಲ್ಲಾ ಪಾರಂಪರಿಕ ವೈದ್ಯರಿಗೆ ವೈದ್ಯ ಮಾನ್ಯತೆ ಮತ್ತು ಸೌಲಭ್ಯಗಳನ್ನು ಒದಗಿಸಿ ಸರ್ಕಾರ ಮಾನ್ಯತೆ ದೊರಕಿಸಿಕೊಡಬೇಕು ಎಂದು ಪಾರಂಪರಿಕ ವೈದ್ಯ ಪರಿಷತ್-ಕರ್ನಾಟಕದ ಗೌರವ ಉಪಾಧಕ್ಷ ಗಾ.ನಂ.ಶ್ರೀಕಂಠಯ್ಯ ಆಗ್ರಹಿಸಿದರು. ಅವರು ನಗರದ ಹೊರವಲಯದಲ್ಲಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಬಿಜಿಎಸ್ ವರ್ಲ್ಡ್ ಸ್ಕೂಲ್ನಲ್ಲಿ ಪಾರಂಪರಿಕ ವೈದ್ಯ ಪರಿಷತ್ - ಕರ್ನಾಟಕ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ , ಕರ್ನಾಟಕ ಜಾನಪದ ವಿಶ್ವವಿದ್
ಗ್ರಾಮೀಣ ಜನರ ಪೌಷ್ಟಿಕ ಆಹಾರಕ್ಕಾಗಿ ಹಿತ್ತಲ ಕೋಳಿ ಸಾಕಿ ಡಾ ಜಯರಾಮ್
ಚನ್ನಪಟ್ಟಣ: ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಪ್ರೋಟೀನ್ ಯುಕ್ತ ಪೌಷ್ಟಿಕ ಆಹಾರಕ್ಕಾಗಿ ಮನೆಯ ಹಿತ್ತಲಿನಲ್ಲಿ ಕೋಳಿ ಸಾಕುವುದು ಉತ್ತಮ ಎಂದು ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ ಜಯರಾಮ್ ತಿಳಿಸಿದರು. ಅವರು ನಗರದ ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಹಿತ್ತಲ ಕೋಳಿ ವಿತರಣೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಕೋಳಿ ಮರಿಗಳನ್ನು ವಿತರಣೆ ಮಾಡಿ ಮಾತನಾಡಿದರು.
ಭಾರತ ಜಗತ್ತಿನ ಜನಕ, ಜಗತ್ತಿಗೆ ಪಾರಂಪರಿಕ ವೈದ್ಯಕೀಯ ಪರಿಚಯಿಸಿದ ಹೆಗ್ಗಳಿಕೆ ಭಾರತದ್ದು ನಿರ್ಮಲಾನಂದ ಶ್ರೀ
ಭಾರತ ಜಗತ್ತಿನ ಜನಕ, ಭಾರತ ಇಲ್ಲದಿದ್ದರೆ ಜಗತ್ತೇ ಇಲ್ಲ, ಪಾರಂಪರಿಕ ವೈದ್ಯವನ್ನು ಹೇಳಿಕೊಟ್ಟವರು ಭಾರತೀಯರು, ಜಗತ್ತಿಗೆ ಲೆಕ್ಕ ಬರೆದಿಡಲು ಅಂಕಿ ಅಂಶಗಳನ್ನು ಹೇಳಿಕೊಟ್ಡವರು ನಮ್ಮ ದೇಶದ ಮಹಾನ್ ಇತಿಹಾಸಕಾರರು, ನಮ್ಮ ಆರೋಗ್ಯ ಗಿಡ ಮೂಲಿಕೆಗಳಲ್ಲಿದೆ ಎಂದು ಜಗತ್ತಿಗೆ ಸಾರಿದವರು ನಮ್ಮ ಭಾರತೀಯ ಋಷಿ ಮುನಿಗಳು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ದ ಪೀಠಾಧ್ಯಕ್ಷ ಡಾ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
ಮಳೆಯಲ್ಲಿ ಕೊಚ್ಚಿಹೋದ ಬದುಕು, ನೆರವಿನ ಹಸ್ತಕ್ಕಾಗಿ ಕಾದು ನಿಂತ ವಯೋವೃದ್ದೆ
ಚನ್ನಪಟ್ಟಣ: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಹಲವಾರು ಜನಸಾಮಾನ್ಯರ ಬದುಕು ಕೊಚ್ಚಿ ಹೋಗಿದೆ, ನಗರದ ಸಾತನೂರು ರಸ್ತೆಯ ಲಾಳಾಘಟ್ಟ ವೃತ್ತದಲ್ಲಿರುವ ಭಾಗ್ಯಮ್ಮ ಉ ಭಾಗ್ಯಲಕ್ಷ್ಮಿ ರವರ ಮನೆಯ ಒಂದು ಭಾಗದ ಗೋಡೆ ಸಂಪೂರ್ಣ ಕುಸಿದಿದ್ದು ಬಾಗಿಲಿದ್ದೂ ಬಯಲಿನಂತಾಗಿದೆ.ವಾರಸುದಾರರಿಲ್ಲದ ವೃದ್ದೆ ಭಾಗ್ಯಮ್ಮ ರವರಿಗೆ ಹತ್ತಿರದ ಸಂಬಂಧಿಗಳು ಯಾರು ಇಲ್ಲ, ಕೆಲ ಸಂಬಂಧಿಗಳಿದ
ಜಾನಪದವನ್ನು ನೋಡುವ ಮತ್ತು ಕೇಳುವುದಕ್ಕಿಂತ ಅನುಭವಿಸಬೇಕು ಸಿ ಟಿ ರವಿ
ರಾಮನಗರ: ಜಾನಪದ ಎಂಬುದು ಕೇವಲ ಒಂದು ಕುಟುಂಬದಂತಲ್ಲ, ಪ್ರತಿ ಕುಟುಂಬದ ಸಾಕು ಪ್ರಾಣಿಗಳು, ಜಾನುವಾರುಗಳು, ಕಾಡಿನ ಪ್ರಾಣಿ ಪಕ್ಷಿಗಳು ಹಾಗೂ ಭೂಮಂಡಲವನ್ನು ಸದೃಢಗೊಳಿಸುವಂತಹ ಮರಗಿಡಗಳೆಲ್ಲವೂ ಸೇರಿಯೇ ಜನಪದರ ಬಾಯಿಂದ ಬಾಯಿಗೆ ಹರಡುವ ಮೂಲಕ ಜಾನಪದವಾಗಿ ಬೆಳೆದು ನಿಂತಿದೆ, ಇಂತಹ ಜಾನ
ಕಲೆ ಎಂಬುದು ಜೀವನದ ಭಾಗವಾಗಬೇಕು ಉಪನ್ಯಾಸಕ ಪಿ ಸುರೇಶ್
ಚನ್ನಪಟ್ಟಣ: ಕಲೆ ಎಂಬುದು ಕೇವಲ ಕೆಲವು ಗಂಟೆಗಳಿಗೆ ಸೀಮಿತವಾಗದೆ ತಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಬೇಕು, ಆಗಲೇ ಕಲೆಗೆ ಜೀವಂತಿಕೆ ತುಂಬಲು ಸಾಧ್ಯ ಎಂದು ಹಲಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪಿ ಸುರೇಶ್ ಹೇಳಿದರು.ಅವರು ತಾಲ್ಲೂಕಿನ ನೇರಳೂರು ಗ್ರಾಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಮತ್ತು ನೃಪತುಂಗ ಕನ್ನಡ ಸೇವಾ ಸಂಘ ದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ *ಜೋಡೆತ್