ಸೃಜನಾತ್ಮಕ ಮಹಾ ಕಾವ್ಯಗಳ ಮೂಲಕವೇ ಕನಕದಾಸರು ಇಂದಿಗೂ ಜೀವಂತ. ಭೂಹಳ್ಳಿ ಪುಟ್ಟಸ್ವಾಮಿ
ಚನ್ನಪಟ್ಟಣ: ಪುರಾತನ ಕಾಲದಿಂದ ಇಂದಿನವರೆಗೂ ಕುವೆಂಪು ರವರ ಆದಿಯಾಗಿ ಎಲ್ಲಾ ಕವಿಗಳು ಒಂದು ಅಥವಾ ಎರಡು ಮಹಾ ಕಾವ್ಯಗಳನ್ನಷ್ಟೇ ರಚಿಸಿದ್ದಾರೆ. ಕನಕದಾಸರು ಅವರ ಜೀವಿತಾವಧಿಯಲ್ಲಿ ಹಲವು ಕಾವ್ಯಗಳನ್ನು ಇಂದಿಗೂ ಪ್ರಸ್ತುತವೆನಿಸುವ ಕೀರ್ತನೆಗಳನ್ನು ರಚಿಸಿದ್ದರಿಂದಲೇ ಐದು ನೂರು ವರ್ಷಗಳು ಕಳೆದರೂ ಜನಮಾನಸದಲ್ಲಿ ಅಜರಾಮರವಾಗಿ ಉಳಿಯಲು ಕಾರಣ ಎಂದು ಸಾಹಿತಿ ಭೂಹಳ್ಳಿ ಪುಟ್ಟಸ್ವಾಮಿ ಹೇಳಿದರು.
ಗ್ರಾಮ ಪಂಚಾಯತಿ ವಸತಿ ಫಲಾನುಭವಿಗಳಿಗೆ ಸರ್ಕಾರದಿಂದ ಹಣ ಬಿಡುಗಡೆ ಭಾಗ್ಯವಿಲ್ಲ ಆರೋಪ
ಚನ್ನಪಟ್ಟಣ: ಇಂದಿರಾಗಾಂಧಿ ಆವಾಸ ಯೋಜನೆ, ಅಂಬೇಡ್ಕರ್ ವಸತಿ ಯೋಜನೆ, ಬಸವ ವಸತಿ, ವಾಜಪೇಯಿ ವಸತಿ ಯೋಜನೆ ಸೇರಿದಂತೆ ಗ್ರಾಮ ಪಂಚಾಯತಿ ವತಿಯಿಂದ ಫಲಾನುಭವಿಗಳಿಗೆ ನೀಡುವ ವಿವಿಧ ವಸತಿ ಯೋಜನೆಗಳಿಗೆ ಕಳೆದ ಎರಡು ವರ್ಷಗಳಿಂದ ಸರ್ಕಾರ ಹಣ ಮಂಜೂರು ಮಾಡದಿರುವುದರಿಂದ ತಲೆಯ ಮೇಲೆ ಸೂರು ನಿರ್ಮಿಸಿಕೊಳ್ಳುವ ಬಡವರ ಕನಸು ಕನಸಾಗಿಯೇ ಉಳಿದಿದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷರ ಸಂಘದ ತಾಲ್ಲೂಕು ಅಧ್ಯಕ್ಷ
ನಗರ ವ್ಯಾಪ್ತಿಯ ಸಾತನೂರು ರಸ್ತೆ ಗುಂಡಿಗಳ ಆಗರ ಹೆಸರಿಗಷ್ಟೇ ದ್ವಿಪಥ ರಸ್ತೆ !
ಚನ್ನಪಟ್ಟಣ: ರಾಜ್ಯ ಹೆದ್ದಾರಿ ಸಾತನೂರು ರಸ್ತೆಯಲ್ಲಿ ಕಿರಿದಾದ ರಸ್ತೆಗಳು, ಕಿರಿದಾದ ಸೇತುವೆಗಳು ಹಾಗೂ ಕುಸಿದ ಸೇತುವೆಗಳದ್ದೇ ದರ್ಬಾರು ಎಂಬುದು ಸರ್ವೇಸಾಮಾನ್ಯವಾಗಿದೆ, ಇನ್ನೂ ನಗರ ವ್ಯಾಪ್ತಿ ಅಂದರೆ ಸಾತನೂರು ವೃತ್ತ ದಿಂದ ಮಹದೇಶ್ವರ ದೇವಾಲಯದ ತನಕ ಜೋಡಿ ರಸ್ತೆ ಮಾಡಿದರೂ ಸಹ ಏಕ ವಾಹನ ಸಂಚರಿಸುವಷ್ಟೇ ರಸ್ತೆ ಇದೆ. ರಸ್ತೆ ಅಗಲೀಕರಣ ಎಂದರೆ ಪಾದಚಾರಿ ರಸ್ತೆ (ಫುಟ್ ಪಾತ್) ತೆರವುಗೊಳಿಸಿ ಅಗ
ಕೆಂಗಲ್ ದೇವಾಲಯದ ಕಲ್ಯಾಣಿಗೆ ಜಾರಿ ಬಿದ್ದು ಸಾವು
ಚನ್ನಪಟ್ಟಣ: ತಾಲ್ಲೂಕಿನ ಸುಪ್ರಸಿದ್ಧ ಐತಿಹಾಸಿಕ ಕೆಂಗಲ್ ದೇವಾಲಯದ ಮುಂಭಾಗದಲ್ಲಿ ಇರುವ ಪುರಾಣ ಪ್ರಸಿದ್ಧ ಕಲ್ಯಾಣಿ (ಕೊಳ) ಯಲ್ಲಿ ಕಾಲು ಜಾರಿ ಬಿದ್ದು ಪ್ರವಾಸಿಗನೋರ್ವ ಮರಣ ಹೊಂದಿದ್ದು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಅರಮನೆ ಹೊನ್ನಮಾಚನಹಳ್ಳಿ ಗ್ರಾಮದ ಮೂಗಯ್ಯ ನ ಮಗ ಗಂಗಯ್ಯ (೪೫) ಇಂದು ಬೆಳಿಗ್ಗೆ ೦೯:೦
ಕನಕ ಜಯಂತಿ ಪೂರ್ವಭಾವಿ ಸಭೆ ಮುಂದೂಡಿಕೆ
ಚನ್ನಪಟ್ಟಣ: ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಇದೇ ತಿಂಗಳ ಹದಿನೈದನೇ ತಾರೀಖು ನಡೆಯಲಿರುವ ಕನಕ ಜಯಂತಿ ಯ ಪೂರ್ವಭಾವಿ ಸಭೆಯನ್ನು ಶಿರಸ್ತೇದಾರ ಮಹದೇವಯ್ಯ ಮುಂದಿನ ಸೋಮವಾರ ಅಂದರೆ ಹನ್ನೊಂದನೇ ತಾರೀಖಿಗೆ ಮುಂದೂಡಿದರು.ತಹಶಿಲ್ದಾರ್ ಸುದರ್ಶನ್ ರವರು ಕಾರ್ಯನಿಮಿತ್ತ ಮಾಗಡಿ ತಾಲ್ಲೂಕಿಗೆ ಹೋಗಿದ್ದ ಕಾರಣ ಅವರ ಅನುಪಸ್ಥಿತಿಯಲ್ಲಿ
ಇಪ್ಪತ್ತಾರು ಮಂದಿಯಿಂದ ಶೆಟ್ಟಿಹಳ್ಳಿ ಕೆರೆ ಒತ್ತುವರಿ ನೋಟೀಸ್ ಜಾರಿ
ಚನ್ನಪಟ್ಟಣ: ನಗರದ ಶೆಟ್ಟಿಹಳ್ಳಿ ಕೆರೆಯ ಒತ್ತುವರಿ ಸರ್ವೇ ಕಾರ್ಯವು ಜಿಲ್ಲಾ ಪಂಚಾಯತಿ ಮತ್ತು ನಗರಸಭೆ ಅಧಿಕಾರಿಗಳ ಸಹಭಾಗಿತ್ವದಲ್ಲಿ ಜಂಟಿಯಾಗಿ ನಡೆಯಿತು. ಈಗಾಗಲೇ ಸರ್ವೇ ನಡೆದು ಗುರುತು ಮಾಡಿದ್ದರೂ ಸಹ ತಾಲ್ಲೂಕು ಆಡಳಿತ, ನಗರಸಭೆ, ಜಿಲ್ಲಾ ಪಂಚಾಯತಿ ಹಾಗೂ ದೂರುದಾರರ ಸಮಕ್ಷಮದಲ್ಲಿ ಸರ್ವೇ ಮಾಡಿಸಿ ಒತ್ತುವರಿ ಮಾಡಿಕೊಂಡಿರುವ ಒಟ್ಟು ಇಪ್ಪತ್ತಾರು ಮಂದಿಗೆ ನೋಟೀಸ್ ನೀಡಲು ತೀರ್ಮಾನಿಸಲಾಗಿದೆ.
ಲಂಚ ಸ್ವೀಕಾರದಷ್ಟೇ ಲಂಚ ಕೊಡುವುದು ಶಿಕ್ಷಾರ್ಹ ಅಪರಾಧ ಎಸಿಪಿ ಚಂದ್ರಶೇಖರ.
ಚನ್ನಪಟ್ಟಣ: ಲಂಚ ಸ್ವೀಕರಿಸುವುದು ಎಷ್ಟು ಅಪರಾಧವೋ ಲಂಚ ಕೊಡುವುದು ಅಷ್ಟೇ ಶಿಕ್ಷಾರ್ಹ ಅಪರಾಧ ಎಂದು ಭ್ರಷ್ಟಾಚಾರ ನಿಗ್ರಹ ದಳದ ಎಸಿಪಿ ಚಂದ್ರಶೇಖರ್ ಹೇಳಿದರು.ಅವರು ನಗರದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕಿನ ಕುಂದುಕೊರತೆಗಳು ಹಾಗೂ ದೂರು ಸ್ವೀಕಾರ ಮಾಡಿ ಮಾತನಾಡಿದರು.ಕಾಲೇಜಿನ ವಿದ್ಯಾರ್ಥಿಗಳಿಗೆ ತಿಳಿ ಹೇಳಿದ ಚಂದ್ರಶೇಖರ್ ಕಾನೂನನ್ನು ಆದಷ್ಟೂ ತಿಳಿದುಕ
ಶೆಟ್ಟಿಹಳ್ಳಿ ಕೆರೆ ಯಾವ ಇಲಾಖೆ ಗೆ ಸೇರಿದ್ದು ? ಬಗೆಹರಿಯದ ಗೊಂದಲ ! ಲೋಕಾಯುಕ್ತ ಬೇಸರ
ಚನ್ನಪಟ್ಟಣ: ಶೆಟ್ಟಿಹಳ್ಳಿ ಕೆರೆಯ ಒತ್ತುವರಿಗೆ ಸಂಬಂಧಿಸಿದಂತೆ ಅರ್ಜಿದಾರರ ದೂರಿನ ಮೇರೆಗೆ ದೂರು ದಾಖಲಿಸಿಕೊಂಡು ಸರ್ವೇ ಮಾಡಿಸಲು ಸೂಚನೆ ನೀಡಿದ್ದು ಪರಿಶೀಲಿಸಲು ಇಂದು ಲೋಕಾಯುಕ್ತ ಡಿವೈಎಸ್ಪಿ ಗೌತಮ್ ಮತ್ತು ತಂಡ ತಾಲ್ಲೂಕು ಕಛೇರಿಯಲ್ಲಿ ದೂರುದಾರರ ಸಮ್ಮುಖದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.ಈ ಮೊದಲು ನಮ್ಮ ವ್ಯಾಪ್ತಿಗೆ ಬರುತ್ತದೆ ಎಂದು ಒಪ್ಪಿಕೊಂಡಿದ್ದ ಜಿಲ
ಕನ್ನಡವನ್ನು ಬಳಸಿ ಬೆಳೆಸಿದರೆ ಶಾಶ್ವತವಾಗಿ ಉಳಿಯಲಿದೆ ಕೆ ಸುಚೇಂದ್ರಪ್ರಸಾದ್
ಚನ್ನಪಟ್ಟಣ: ಕನ್ನಡ ಭಾಷೆಯನ್ನು ಬಳಸಿದಷ್ಟಾದರೂ ಬೆಳೆಸಬೇಕಾಗಿದೆ. ಕನ್ನಡ ನಾಡಿಗೆ ಚನ್ನಪಟ್ಟಣ ತಾಲ್ಲೂಕಿನ ಹಲವಾರು ಹಿರಿಯರು ಕೊಟ್ಟ ಕೊಡುಗೆ ಅಪಾರವಾದುದು. ನಾಡಿಗೆ ನನ್ನ ಮತ್ತು ನನ್ನ ತವರಿನ ಕೊಡುಗೆ ಏನು ಎಂಬುದನ್ನು ಅರಿತುಕೊಳ್ಳುವುದು ನಮ್ಮೆಲ್ಲರ ಅತ್ಯವಶ್ಯ. ನಿಮ್ಮ ತಾಲ್ಲೂಕಿನ ಹಿರಿಮೆಗಳನ್ನು ನೀವು ತಿಳಿಯಬೇಕಾದರೆ ವಿಜಯ್ ರಾಂಪುರ ಸಂಪಾದಿಸಿರುವ ತಾಲ್ಲೂಕಿನ ಪುರಾಣ ಮತ್ತು ಇತಿಹಾಸ ಪುರು
ತಾಲ್ಲೂಕಿನಾದ್ಯಂತ ವಿಜೃಂಭಿಸಿದ ಕನ್ನಡದ ಹಬ್ಬ
ಚನ್ನಪಟ್ಟಣ: ನಗರವೂ ಸೇರಿದಂತೆ ತಾಲ್ಲೂಕಿನಾದ್ಯಂತ ಇರುವ ಶಾಲೆಗಳು, ಸಂಘ ಸಂಸ್ಥೆಗಳು, ಹೋರಾಟಗಾರರು ಮತ್ತು ವಾಹನಗಳ ಮಾಲೀಕರು ಸಹ ೬೪ ನೇ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು.ನಗರದ ಪ್ರಮುಖ ಕೇಂದ್ರವಾದ ನಗರಸಭೆ ಆವರಣದಲ್ಲಿ ನಾಡ ದೇವತೆಗೆ ಪೂಜೆ ಸಲ್ಲಿಸಿ ಧ್ವಜಾರೋಹಣ ಮಾಡಲಾಯಿತು. ಈ ಸಂದರ್ಭದಲ್ಲಿ ಪೌರಾಯುಕ್ತ ಶಿವಾಂಕರಿಗೌಡ ಸೇರಿದಂತೆ ನಗರಸಭೆ