ರಾಮನಗರ ಚನ್ನಪಟ್ಟಣದಲ್ಲಿ ತ್ರಿಕೋನ ಸ್ಪರ್ಧೆ, ನಗರಾಭಿವೃದ್ಧಿಗಾಗಿ ಕಾಂಗ್ರೆಸ್ ಗೆ ಮತನೀಡಿ. ಸಂಸದ ಡಿ ಕೆ ಸುರೇಶ್
ರಾಮನಗರ ಮತ್ತು ಚನ್ನಪಟ್ಟಣ ನಗರಸಭೆಯ ಚುನಾವಣೆಯೂ ತ್ರಿಕೋನ ಸ್ಪರ್ಧೆಯಿಂದ ಕೂಡಿದೆ. ನಗರವೂ ಅನೈರ್ಮಲ್ಯದಿಂದ ಕೂಡಿದೆ. ಕುಡಿಯುವ ನೀರಿನ ಸಮಸ್ಯೆ ಬಹಳ ಇದೆ. ಕಸ ವಿಲೇವಾರಿ ಸಮಸ್ಯೆ, ಇ-ಖಾತೆ ಸಮಸ್ಯೆ ಬಹಳಷ್ಟಿದೆ. ಸ್ಥಳೀಯ ಆಡಳಿತದಲ್ಲಿ ಒಮ್ಮತ ಮೂಡಿಸುವ ಮೂಲಕ ಕೆಲಸ ಮಾಡಬೇಕಾದ್ದರಿಂದ ಕಾಂಗ್ರೆಸ್ ಮತ ನೀಡಿ ಎಂದು ಸಂಸದ ಡಿ ಕೆ ಸುರೇಶ್ ಮಾಧ್ಯಮದ ಮೂಲಕ ನಗರದ ಮತದಾರರಲ್ಲಿ ಮನವಿ ಮಾಡಿದರು.ಅವರು ನಿನ್ನೆ ಸಂಜೆ ನಗರದ ಕೆ ಹೆಚ್ ಬಿ ಬಡಾವಣ
ಕೊರೊನಾ ಸೋಂಕಿತ ಸಂಪರ್ಕಿತರನ್ನು ಪತ್ತೆ ಹಚ್ಚಲು ನಗರದ 31 ವಾರ್ಡ್ ಗಳಿಗೆ ತಲಾ 4 ಮಂದಿ ತಂಡ ರಚನೆ ಪೌರಾಯುಕ್ತ
ತಾಲ್ಲೂಕಿನ ಕೊರೊನಾ ಸೋಂಕಿತರನ್ನು ಗಮನಿಸಿದಾಗ ನಗರದಲ್ಲಿ, ಹೆಚ್ಚು ಮಂದಿ ಕೊರೊನಾ ಸೋಂಕಿತರು ಕಂಡು ಬರುತ್ತಿದ್ದಾರೆ. ಮಾವಿನ ಹಣ್ಣಿನ ಕಾಲವಾದ್ದರಿಂದ ನಗರ ಪ್ರದೇಶದ ಒಳಗಿರುವ ಎಪಿಎಂಸಿಯಲ್ಲಿ ಹೊರ ರಾಜ್ಯದ ವ್ಯಾಪಾರಸ್ಥರು ಬರುತ್ತಿರುವ ಕಾರಣ ಜೊತೆಗೆ ನಗರಸಭಾ ಚುನಾವಣಾ ಪ್ರಚಾರದಲ್ಲಿ, ಸರ್ಕಾರದ ಮಾರ್ಗಸೂಚಿ ಇದ್ದರೂ ಸಹ ಹೆಚ್ಚು ಜನರು ಗುಂಪು ಗೂಡಿ ಪ್ರಚಾರ ನಡೆಸುತ್ತಿರುವುದರಿಂದ ಸೋಂಕು ಹೆಚ್ಚುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಹಿನ
ದಿನೇದಿನೇ ಹೆಚ್ಚುತ್ತಿರುವ ಕೊರೊನಾ; ರಸ್ತೆಗಿಳಿದು ಜಾಗೃತಿ ಮೂಡಿಸಿ ದಂಡ ವಸೂಲಿಗಿಳಿದ ತಾಲ್ಲೂಕು ಆಡಳಿತ
ದಿನೇ ದಿನೆ ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣ, ಸರ್ಕಾರದ ಮಾರ್ಗಸೂಚಿಗಳನ್ನು ಸಾರ್ವಜನಿಕರು ಪಾಲಿಸದಿರುವುದರಿಂದ, ತಾಲ್ಲೂಕು ಆಡಳಿತವು ನೆನ್ನೆ ನಗರ ಹಾಗೂ ಗ್ರಾಮೀಣ ಭಾಗಕ್ಕೆ ತೆರಳಿ ರಸ್ತೆಯಲ್ಲಿ ಓಡಾಡುವ ಪ್ರಯಾಣಿಕರು ಹಾಗೂ ವ್ಯಾಪಾರ ಸ್ಥಳಗಳಿಗೆ ಭೇಟಿ ನೀಡಿ, ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿದರು.ಕೊರೊನಾದ ಎರಡನೆಯ ಅಲೆಯು ಶೇ 25 ಅನುಪಾತದಲ್ಲಿ ಏರಿಕೆಯಾಗಿದ್ದು, ಸಾರ್ವಜನಿಕರು ಕೊರೊನಾ ಮಾರ್ಗಸೂಚಿಗಳನ್ನು ಉದಾಸೀ
1 ರಿಂದ 9 ನೇ ತರಗತಿ ವಿದ್ಯಾರ್ಥಿಗಳೆಲ್ಲರೂ ಪಾಸ್; ಜೂ.15 ರಿಂದ ಹೊಸ ಶೈಕ್ಷಣಿಕ ವರ್ಷ. ಶಿಕ್ಷಣ ಇಲಾಖೆ
ಬೆಂಗಳೂರು: 1 ರಿಂದ 9 ನೇ ತರಗತಿಯವರೆಗಿನ ಎಲ್ಲಾ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ. ಈ ಎಲ್ಲಾ ತರಗತಿಗಳ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಬಡ್ತಿ ನೀಡಬೇಕು ಎಂದು ರಾಜ್ಯ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಆದರೆ, ನಿಗದಿಯಂತೆ 10 ನೇ ತರಗತಿ ಪರೀಕ್ಷೆ ಜೂನ್ 21 ರಿಂದ ಪ್ರಾರಂಭವಾಗಲಿದೆ ಎಂದು ಶಿಕ್ಷಣ ಇಲಾಖೆ ಇಂದು ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದೆ.ಕೋವಿಡ್ ಹಿನ್ನೆಲೆಯಲ್ಲಿ ಭೌತಿಕವಾಗಿ ಶಾಲೆಗಳು ಆರಂಭವಾ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ ಚನ್ನಪಟ್ಟಣ ದವರಿಗೆ ಸಿಗಲಿ. ಬೇರೆ ತಾಲ್ಲೂಕಿನ ಪಾಲಾಗುವುದು ಬೇಡ. ಶಿವಮಾದು
ರಾಮನಗರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಸಂಬಂಧಿಸಿದಂತೆ ತಾಲ್ಲೂಕಿನಲ್ಲಿ ಜಿಲ್ಲೆಯ ಅರ್ಧದಷ್ಟು ಮತದಾರರಿರುವುದರಿಂದ ಈ ಬಾರಿಯೂ ನಮ್ಮ ತಾಲ್ಲೂಕಿಗೆ ಅಧ್ಯಕ್ಷ ಸ್ಥಾನ ಸಿಗಬೇಕು ಎಂಬ ದೃಷ್ಟಿಯಿಂದ ನಾವೆಲ್ಲರೂ ನಾಮಪತ್ರವನ್ನು ಹಿಂಪಡೆದು ಶಿಕ್ಷಕ ಯೋಗೇಶ್ ಗೆ ಬೆಂಬಲ ನೀಡುತ್ತಿದ್ದೇವೆ ಎಂದು ನಿಕಟಪೂರ್ವ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಶಿವಮಾದು ರವರು ತಿಳಿಸಿದರು.
ನಾನೇ ರೆಬೆಲ್ ಎನ್ನುತ್ತಿದ್ದ ಜೆಸಿಬಿ ಲೋಕೇಶ್ ಕುಟುಂಬ ನಾಯಕರ ಮಾತಿಗೆ ಬೆಲೆ ನೀಡಿ ಎಜಿಎಸ್ ಕುಟುಂಬಕ್ಕೆ ಶರಣು
ನನಗೆ ಪಕ್ಷ ತಾಯಿ ಇದ್ದಂತೆ, ಆ ಪಕ್ಷಕ್ಕೆ ದ್ರೋಹ ಬಗೆಯಲಾರೆ. ಯಾರದೋ ಮೂರನೇ ವ್ಯಕ್ತಿಯ ಮಾತಿಗೆ ನಾನು ಮತ್ತು ಎ ಜಿ ಸ್ವಾಮಿಯವರು ಅಸಮಧಾನಗೊಳ್ಳುವಂತೆ ಆಯಿತು. ಹಾಗಾಗಿ ಈ ನಗರಸಭೆಯ ಚುನಾವಣೆಯಲ್ಲಿ ನಾನು ಜೆಡಿಎಸ್ ಅಭ್ಯರ್ಥಿಯಾದ ಶಶಿರೇಖಾ ಎ ಜಿ ಸ್ವಾಮಿ ರವರಿಗೆ ಸಂಪೂರ್ಣ ಸಹಕಾರ ನೀಡಿ ಗೆಲ್ಲಿಸಿಕೊಂಡು ಬರುತ್ತೇನೆ ಎಂದು 31 ನೇ ವಾರ್ಡ್ ನ ಮಾಜಿ ನಗರಸಭಾ ಸದಸ್ಯ ಜೆಸಿಬಿ ಲೋಕೇಶ್ ತಿಳಿಸಿದರು.ಅವರು ಇಂದು ತಾಲ್ಲೂಕು ಜೆಡಿಎಸ್ ಪಕ್ಷದ ವತ
ಶಾಂತಿಯುತ, ಪಾರದರ್ಶಕ ಚುನಾವಣೆ ನಡೆಸಲು ಜಿಲ್ಲಾಡಳಿತ ಸಜ್ಜು: ಡಾ ರಾಕೇಶ್ ಕುಮಾರ್ ಕೆ
ರಾಮನಗರ ಹಾಗೂ ಚನ್ನಪಟ್ಟಣ ನಗರಸಭೆಯ ಒಟ್ಟು 62 ವಾಡ್೯ಗಳಲ್ಲಿ ಪಾರದರ್ಶಕ ಹಾಗೂ ಶಾಂತಿಯುತ ಚುನಾವಣೆ ನಡೆಸಲು ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರು ತಿಳಿಸಿದರು.ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ದಿನಾಂಕ: 08-04-2021 ರಿಂದ 30-04-2021 ರವರೆಗೆ ಚುನಾವಣೆ ನಡೆಯುವ
ಕೋವಿಡ್ ರೋಗಿಗಳ ಚಿಕಿತ್ಸೆಗೆ ಯಾವುದೇ ತೊಂದರೆ ಇಲ್ಲ: ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ.
ಕೋವಿಡ್ ರೋಗಿಗಳ ಚಿಕಿತ್ಸೆಗೆ ಬೇಕಿರುವ ರೆಮಿಡಿಸ್ವರ್ ಔಷಧಿ ಹಾಗೂ ಆಮ್ಲಜನಕ ಲಭ್ಯವಿದ್ದು ಕೋವಿಡ್ ರೋಗಿಗಳ ಚಿಕಿತ್ಸೆಗೆ ಯಾವುದೇ ತೊಂದರೆ ಇಲ್ಲ ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರು ತಿಳಿಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಜಿಲ್ಲೆಯಲ್ಲಿ 567 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವ್ ಸರಾಸರಿ 3.9 ಇರುತ್ತದೆ. ಕಂದಾಯ ಭವನದ ಕೋವಿಡ್ ಆಸ್ಪತ್ರೆ ಯಲ್ಲಿ 153 ಜನರಿಗೆ, ರಾಜರಾಜೇಶ
ರಸಗೊಬ್ಬರ ಬೆಲೆ ಏರಿಕೆ ವಿರುದ್ದ ರಾಜ್ಯದ ಎಲ್ಲಾ ಸಂಸದರ ಕಛೇರಿ ಮುಂದೆ ಪ್ರತಿಭಟನೆ. ಚಾಮರಸ ಮಾಲೀ ಪಾಟೀಲ್.
ರೈತರಿಗೆ ಬರೆ ಮೇಲೆ ಬರೆ ಹಾಕುವಂತೆ ಒಂದೊಂದೇ ಬರೆ ಹಾಕುತ್ತಾ ಹೊರಟಿರುವ ಕೇಂದ್ರ ಸರ್ಕಾರದ ವಿರುದ್ಧ ಅದರಲ್ಲೂ ರಾಜ್ಯದಿಂದ ಆರಿಸಿ ಹೋಗಿರುವ ಎಲ್ಲಾ ಸಂಸದರ ಕಛೇರಿಯ ಮುಂದೆ ಇದೇ ತಿಂಗಳ 26 ನೇ ಸೋಮವಾರ ಮಧ್ಯಾಹ್ನ 12:00 ಗಂಟೆಯಿಂದ 01:30 ರವರೆಗೆ ಪ್ರತಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷರಾದ ಚಾಮರಸ ಮಾಲೀ ಪಾಟೀಲ್ ತಿಳಿಸಿದರು.ಅವರು ನಗರದ ರೈತ ಸಂಘದ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಪ
ಪಶ್ಚಿಮಬಂಗಾಳದಲ್ಲಿ ಪರಿಶಿಷ್ಟರಿಗೆ ಅವಮಾನ ಮಾಡಿದ ತೃಣಮೂಲ ಕಾಂಗ್ರೆಸ್. ತಹಶಿಲ್ದಾರ್ ಮುಖೇನ ರಾಷ್ಟ್ರಪತಿಗೆ ದೂರು ಸಲ್ಲಿಸಿದ ಬಿಜೆಪಿ ಎಸ್ಸಿ ಮೋರ್ಚಾ
ನಾವು ಹಿಂದುಳಿದವರ ಪರ, ಅಲ್ಪಸಂಖ್ಯಾತರ ಪರ ಎಂದು ಬೊಬ್ಬಿರಿಯುವ ಪಶ್ಚಿಮ ಬಂಗಾಳದ ನಾಯಕಿ ಮಮತಾ ಬ್ಯಾನರ್ಜಿಯವರು, ಅವರ ತೃಣಮೂಲ ಕಾಂಗ್ರೆಸ್ ಪಕ್ಷದ ಮತ್ತೋರ್ವ ನಾಯಕಿ ಸುಜಾತ ಮೊಂಡಲ್ ಖಾನ್ ರವರ ಬಾಯಲ್ಲಿ, ಪರಿಶಿಷ್ಟ ಜಾತಿ ಜನರನ್ನು ಕುರಿತು ಅವಹೇಳನಕಾರಿ ಹೇಳಿಕೆ ಕೊಡಿಸಿರುವುದು ಆಘತಕಾರಿ ಜೊತೆಗೆ ಅವರ ಬಾಯಿಮಾತಿನ ಚಪಲವನ್ನು ಹಾಗೂ ನಾವು ಪರಿಶಿಷ್ಟ ಸಮುದಾಯದ ವಿರುದ್ದ ಎಂಬುದನ್ನು ಸಾಬೀತುಪಡಿಸಿದೆ ಎಂದು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ನೀಲಸಂದ್ರ ಸ