ದಾನಿಗಳ ನೆರವಿನಿಂದ ಚನ್ನಪ್ಪಸ್ವಾಮಿ ಬೆಟ್ಟಕ್ಕೆ ಶಾಶ್ವತವಾಗಿ ನೀರೆರೆದ ಗ್ರಾಮಸ್ಥರು
ಚನ್ನಪಟ್ಟಣ:ಡಿ/19/20/ಶನಿವಾರ. ಭೂಮಿಯಲ್ಲಿ ಕೊಳವೆ ಬಾವಿಗೆ ನೀರು ದಕ್ಕಿದ್ದು ತಾಳು ಬೆಟ್ಟಕ್ಕೆ 900 ಮೀಟರ್ ದೂರದಲ್ಲಿ. ತಾಳು ಬೆಟ್ಟದಿಂದ ಶ್ರೀ ಚನ್ನಪ್ಪ ಸ್ವಾಮಿ ಬೆಟ್ಟದ ಎತ್ತರ 1610 ಮೀಟರ್. ಒಟ್ಟು 2510 ಮೀಟರ್ ಬೆಟ್ಟಕ್ಕೆ ಶಾಶ್ವತವಾಗಿ ನೀರು ಸರಬರಾಜು ಆಗುವಂತೆ ದಾನಿಗಳ ನೆರವಿನಿಂದ, ಮಂಗಾಡಹಳ್ಳಿ ಗ್ರಾಮದ ಮುಖಂಡ ಮುನಿಸಿದ್ದೇಗೌಡ ರ ನೇತೃತ್ವದಲ್ಲಿ ನಿನ್ನೆ ಜರುಗಿತು.
ತಗಚಗೆರೆ ಗ್ರಾಪಂ ಯಲಚಿಪಾಳ್ಯ ಕ್ಷೇತ್ರ ಹೊರತುಪಡಿಸಿ ತಾಲ್ಲೂಕಿನಲ್ಲಿ 1782 ನಾಮಪತ್ರ ಸಲ್ಲಿಕೆ
ರಾಮನಗರ:ಡಿ/೧೮/20/ಗುರುವಾರ. ಗ್ರಾಮ ಪಂಚಾಯಿತಿ ಚುನಾವಣೆ-2020 ರ ಅಂಗವಾಗಿ ಚನ್ನಪಟ್ಟಣ ತಾಲ್ಲೂಕಿನಲ್ಲಿ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯು ಡಿ.16 ಕ್ಕೆ ಅಂತ್ಯಗೊಡಿದ್ದು, 482 ಸದಸ್ಯ ಸ್ಥಾನಗಳಲ್ಲಿ ಒಂದು ಸ್ಥಾನಕ್ಕೆ ನಾಮಪತ್ರಸಲ್ಲಿಕೆಯಾಗದೇ ಖಾಲಿ ಉಳಿದಿರುತ್ತದೆ ಹಾಗೂ ಉಳಿದ ಸ್ಥಾನಗಳಿಗೆ ಒಟ್ಟು 1782 ನಾಮಪತ್ರ ಸಲ್ಲಿಕೆಯಾಗಿರುತ್ತದೆ ಎಂದು ಚನ್ನಪಟ್ಟಣ ತಹಶೀಲ್ದಾರ್ ನಾಗೇಶ್ ರವರು
ಮಕ್ಕಳ ಪಠ್ಯದಲ್ಲಿ ಬ್ರಾಹ್ಮಣರ ಅವಹೇಳನ ಸರಿಯಲ್ಲ; ತಾಲೂಕು ಬ್ರಾಹ್ಮಣ ಮಹಾಸಭಾ ಖಂಡನೆ
ಚನ್ನಪಟ್ಟಣ:ಡಿ/17/20/ಗುರುವಾರ. ಕರ್ನಾಟಕ ರಾಜ್ಯ ಸರ್ಕಾರವು ೬ನೆ ತರಗತಿಯ ಸಮಾಜವಿಜ್ಞಾನ ಪಠ್ಯಪುಸ್ತಕದಲ್ಲಿ ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನಾಕಾರಿಯಾದ ಪಠ್ಯ ಮುದ್ರಿಸಿರುವುದನ್ನು ಕೂಡಲೇ ತೆಗೆದು ಹಾಕಬೇಕು ಎಂದು ತಾಲೂಕು ಬ್ರಾಹ್ಮಣ ಮಹಾಸಭಾ ಒತ್ತಾಯಿಸಿದೆ.ಈ ಸಂಬಂಧ ನಗರದ ತಾಲೂಕು ಬ್ರಾಹ್ಮಣಮಹಾಸಭಾ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಮಹಾಸಭಾದ ಪದಾಧಿಕಾರಿಗಳು, ಬ್ರಾಹ
6 ರಿಂದ 18 ವರ್ಷದೊಳಗಿನ ಮಕ್ಕಳನ್ನು ಗ್ರಂಥಾಲಯ ಸದಸ್ಯರಾಗಿ ದಾಖಲು ಮಾಡಿಕೊಳ್ಳಿ : ಇಕ್ರಂ
ರಾಮನಗರ:ಡಿ/09/20/ಬುಧವಾರ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ 6 ರಿಂದ 18 ವರ್ಷದೊಳಗಿನ ಮಕ್ಕಳನ್ನು ಗ್ರಂಥಾಲಯದ ಸದಸ್ಯರಾಗಿ ದಾಖಲು ಮಾಡಿಕೊಂಡು ಗ್ರಂಥಾಲಯದ ಸೇವೆ ಒದಗಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಅವರು ತಿಳಿಸಿದರು.ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಗ್ರಾಮ ಪಂಚಾಯಿತ
ಬೀಗರ ಔತಣ ಕೂಟದಲ್ಲಿ ಆಹಾರ ಸೇವಿಸಿದ 300 ಕ್ಕೂ ಹೆಚ್ಚು ಮಂದಿ ಅಸ್ವಸ್ಥ. ಮೋಳೆದೊಡ್ಡಿ ಗ್ರಾಮದಲ್ಲಿ ತಾತ್ಕಾಲಿಕ ಆಸ್ಪತ್ರೆ. ಸಾರ್ವಜನಿಕ ಆಸ್ಪತ್ರೆಗೆ ದಾಖಲ
ಚನ್ನಪಟ್ಟಣ:ಡಿ/09/20/ಬುಧವಾರ. ತಾಲ್ಲೂಕಿನ ಮೋಳೆದೊಡ್ಡಿ ಗ್ರಾಮದಲ್ಲಿ ನಿನ್ನೆ ಬೀಗರ ಔತಣ ಕೂಟದಲ್ಲಿ ಮಾಂಸಾಹಾರ ಸೇವಿಸಿದ ಕಾರಣ ಮುನ್ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ವಧು ವರ ಇಬ್ಬರು ಮೋಳೆದೊಡ್ಡಿಯವರೇ ಆಗಿದ್ದು, ಭಾನುವಾರ ವಿವಾಹವಾಗಿತ್ತು. ನಿನ್ನೆ ಅಂದರೆ ಡಿಸೆಂಬರ್ 08 ನೇ ತಾ
ಚನ್ನಪಟ್ಟಣದಲ್ಲಿ ಯಶಸ್ವಿಯಾಗದ ಭಾರತ್ ಬಂದ್, ಮೆರವಣಿಗೆ, ಪ್ರತಿಭಟನೆಗಷ್ಟೇ ಸೀಮಿತವಾದ ಸಂಘಟನೆಗಳು
ಚನ್ನಪಟ್ಟಣ:ಡಿ/08/20/ಮಂಗಳವಾರ. ರಾಷ್ಟ್ರ ಮಯ ರಾಜ್ಯ ರೈತ ಸಂಘಟನೆಗಳು ಹಾಗೂ ಮತ್ತಿತರ ಸಂಘಟನೆಗಳು ಇಂದು ದೇಶಾದ್ಯಂತ ಇಂದು ಭಾರತ್ ಬಂದ್ ಗೆ ಕರೆ ನೀಡಿದ್ದರು. ಆದರೆ ಚನ್ನಪಟ್ಟಣದಲ್ಲಿ ಸ್ವಯಂ ಪ್ರೇರಿತರಾಗಿ ಯಾರೂ ಸಹ ಬಂದ್ ಮಾಡಲಿಲ್ಲ. ರೈತ ಸಂಘಟನೆ ಮತ್ತು ಟಯೋಟಾ ಕಿರ್ಲೋಸ್ಕರ್ ಎಂಪ್ಲಾಯ್ಸ್ ಯೂನಿಯನ್ ಹಾಗೂ ಮತ್ತಿತರ ಸಂಘಟನೆಗಳು ಇಂದು ಒಗ್ಗೂಡಿ ಪ್ರತಿಭಟನೆ ನಡೆಸಿದ್ದು ಬಿಟ್ಟರೆ ಬಂದ್ ಆಚರಣ
ಎ ಆರ್ ಎಂ ರೇಷ್ಮೆ ನೂಲು ಬಿಚ್ಚಣಿಕೆ ಫಿಲೇಚರಿಯಲ್ಲಿ ಮಂಡ್ಯ ಮೂಲದ ಕಾರ್ಮಿಕ ನೇಣು ಬಿಗಿದು ಸಾವು, ದೂರು ದಾಖಲು
ಚನ್ನಪಟ್ಟಣ:ಡಿ/07/20/ಸೋಮವಾರ. ತಾಲ್ಲೂಕಿನ ಸುಣ್ಣಘಟ್ಟ ಬಳಿಯ ನೀಲಸಂದ್ರ ರಸ್ತೆಯಲ್ಲಿರುವ ಎ ಎಂ ಆರ್ ರೇಷ್ಮೆ ನೂಲು ಬಿಚ್ಚಣಿಕೆ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕನೋರ್ವ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಚೊಟ್ಟನಹಳ್ಳಿ ಗ್ರಾಮದ ಮಹೇಶ್ (೨೫) ನೇಣು ಬಿಗಿದುಕೊಂಡು ಸಾವನ್ನಪ್ಪಿದ
ಪ್ರಜಾಪ್ರಭುತ್ವ ಉಳಿಯಲಿ ಧರ್ಮ ರಾಜಕಾರಣ ತೊಲಗಲಿ ದಸಂಸ ಸಂಚಾಲಕ ವೆಂಕಟೇಶ್
ಚನ್ನಪಟ್ಟಣ:ಡಿ/06/20/ಭಾನುವಾರ. ರಾಷ್ಟ ಮತ್ತು ರಾಜ್ಯದಲ್ಲಿ ಪ್ರಜಾಪ್ರಭುತ್ವದ ಆಶಯಗಳನ್ನು ಒಡೆದು ಸಮಾಜದಲ್ಲಿ ಒಡಕು ಮೂಡಿಸಿ ಧರ್ಮ ರಾಜಕಾರಣ ಮಾಡುತ್ತಿದ್ದು, ಇದು ಅಂಬೇಡ್ಕರ್ ರವರ ಸಂವಿಧಾನದ ಆಶಯಕ್ಕ ಕೊಡಲಿ ಪೆಟ್ಟು ನೀಡಿದೆ ಎಂದು ತಾಲೂಕು ದಲಿತ ಸಂಘರ್ಷ ಸಮಿತಿಯ ಸಂಚಾಲಕ ವೆಂಕಟೇಶ್ (ಶೇಟು) ಆಕ್ರೋಶ ವ್ಯಕ್ತಪಡಿಸಿದರು.ಅವರು ಭಾನುವಾರ ಸಂಜೆ ನಗರದ ಹೃದಯ ಭಾಗದಲ್ಲಿರು
ಅಂಬೇಡ್ಕರ್ ವಿಶ್ವದ ಮಹಾನ್ ಚೇತನ. ತಹಶಿಲ್ದಾರ್ ನಾಗೇಶ್
ಚನ್ನಪಟ್ಟಣ:ಡಿ/06/20/ಭಾನುವಾರ. ಡಾ ಬಿ ಆರ್ ಅಂಬೇಡ್ಕರ್ ರವರು ಕೇವಲ ಭಾರತ ದೇಶಕ್ಕಷ್ಟೇ ಸೀಮಿತವಲ್ಲ.ಅವರು ಇಡೀ ವಿಶ್ವಕ್ಕೆ ಮುಕುಟಮಣಿಯಾಗಿದ್ದವರು. ಅವರ ಜ್ಞಾನ ಸಂಪತ್ತು ಇಡೀ ಪ್ರಪಂಚವನ್ನೇ ನಿಬ್ಬೆರಗಾಗಿಸಿದೆ. ಅವರು ಅಳಿದು ಆರು ದಶಕಗಳೇ ಕಳೆದರೂ ಇನ್ನೂ ಅಜರಾಮರಾಗಿದ್ದಾರೆ ಎಂದರೆ ಅವರ ಭವಿಷ್ಯದ ಚಿಂತನೆಗಳೇ ಕಾರಣ ಎಂದು ತಹಶಿಲ್ದಾರ್ ನಾಗೇಶ್ ತಿಳಿಸಿದರು.ಅವರು ಇಂದು ಡಾ
ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆ, ನಗರದ ರೌಡಿ ಶೀಟರ್ ಗಳ ಪೆರೇಡ್ ನಡೆಸಿ ಎಚ್ಚರಿಕೆ ನೀಡಿದ ಎಸ್ಐ ರವೀಂದ್ರ
ಚನ್ನಪಟ್ಟಣ:ನ/29/20/ಭಾನುವಾರ. ಮುಂಬರುವ ಗ್ರಾಮ ಪಂಚಾಯತಿ ಚುನಾವಣೆ ಹಾಗೂ ಸಮಾಜದ ಸ್ವಾಸ್ಥ್ಯ ಕದಡಬಾರದು ಎಂಬ ಹಿನ್ನೆಲೆಯಲ್ಲಿ ನಗರದ ರೌಡಿ ಶೀಟರ್ ಗಳ ಪೆರೇಡ್ ನಡೆಸಿ ಎಚ್ಚರಿಕೆ ನೀಡಿದ ಘಟನೆ ನಿನ್ನೆ ನಡೆಯಿತು. ನೂತನ ವೃತ್ತ ನಿರೀಕ್ಷಕ ದಿವಾಕರ್ ಮಾರ್ಗದರ್ಶನದಲ್ಲಿ, ನಗರ ಪೋಲೀಸ್ ಠಾಣೆಯ ಆವರಣದಲ್ಲಿ ರೌಡಿಗಳ ಪೆರೇಡ್ ನಡೆಸಿದ ಎಸ್ಐ ರವೀಂದ್ರ ಎಚ್ಚರಿಕೆ ನೀಡಿ ಕಳುಹಿಸಿದರು.