ನಮ್ಮ ತಂಡದಿಂದ ಯಾವುದೇ ಲೋಪದೋಷಗಳಾಗಿಲ್ಲ. ಸಮಾನ ಮನಸ್ಕರ ತಂಡದ ಆರೋಪ ನಿರಾಧಾರ ಸಿಂಲಿಂ.
ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಆಡಳಿತ ಮಂಡಳಿಯ ಕಳೆದ ಐದು ವರ್ಷದಲ್ಲಿ ಯಾವುದೇ ಲೋಪ ದೋಷಗಳಾಗಿಲ್ಲ. ಸಮಾನ ಮನಸ್ಕರ ತಂಡವು ನಿನ್ನೆ ನಮ್ಮ ಮೇಲೆ ಮಾಡಿರುವ ಆರೋಪವು ನಿರಾಧಾರ. ತಮ್ಮ ಬಳಿ ದಾಖಲೆ ಇದ್ದರೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸಲಿ. ಅವರ ಚುನಾವಣಾ ಗೆಲುವಿಗೆ ನಮ್ಮ ತಂಡದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು ಸಲ್ಲ ಎಂದು ಸಿಂ ಲಿಂ ನಾಗರಾಜು ಮಾಧ್ಯಮದವರಿಗೆ ತಿಳಿಸಿದರು.ಅವರು ಇಂದು ನಗರದ ಟಿ ಕೆ
ಸಮಾನ ಮನಸ್ಕರ ತಂಡಕ್ಕೆ ಮತನೀಡಿ, ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತೇವೆ
ಚನ್ನಪಟ್ಟಣ: ತಾಲ್ಲೂಕಿನಲ್ಲಿ ತನ್ನದೇ ಆದ ಛಾಪು ಮೂಡಿಸಿ ಶಿಕ್ಷಣ ಸೇವೆಯಿಂದ, ಗುರುತಿಸಿಕೊಂಡು, ಹೆಗ್ಗಳಿಕೆಗೆ ಪಾತ್ರವಾಗಿರುವ ಒಕ್ಕಲಿಗರ ಸಾರ್ವಜನಿಕರ ವಿದ್ಯಾರ್ಥಿ ನಿಲಯದ ಅಭಿವೃದ್ದಿಯ ಹಿತದೃಷ್ಟಿಯಿಂದ, ಸಮಾನ ಮನಸ್ಕರ ತಂಡ ರಚಿಸಿಕೊಂಡು ಈ ಬಾರಿಯ ಸಂಸ್ಥೆಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇವೆ. ನಮ್ಮ ತಂಡಕ್ಕೆ ಮತ ನೀಡಿ ಜಯಶೀಲರನ್ನಾಗಿ ಮಾಡಿದರೆ ಇಡೀ ಸಂಸ್ಥೆಯನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯುತ್ತೇವೆ ಎಂದು ನಿವೃತ್ತ ಉಪ
ಶ್ರಮದಿಂದ ಉದ್ಯೋಗ ಪಡೆದುಕೊಳ್ಳಲು ಸಾಧ್ಯ: ಅಪರ ಜಿಲ್ಲಾಧಿಕಾರಿ ಜವರೇಗೌಡ
ಪರಿಶ್ರಮದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಉದ್ಯೋಗ ಪಡೆಯಲು ವಿದ್ಯಭ್ಯಾಸದ ಜೊತೆ ಜೊತೆಗೆ ಕೌಶಲ್ಯಗಳನ್ನು ರೂಢಿಸಿಕೊಂಡು ಶ್ರಮ ಪಟ್ಟರೆ ಉದ್ಯೋಗ ಪಡೆದುಕೊಳ್ಳಬಹುದು ಎಂದು ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಅವರು ತಿಳಿಸಿದರು.ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಮದ ರಾಷ್ಟ್ರೀಯ ವೃತ್ತಿ ಸೇವಾ ಯೋಜನೆಯಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ, ಜಿಲ್ಲಾ ಮಟ್ಟದ ಉದ್
ಗಬ್ಬೆದ್ದು ನಾರುತ್ತಿದೆ ಹೊಂಗನೂರು ಗ್ರಾಮದ ಮಾದರಿ ಪಾಠಶಾಲೆಯ ಹಳೆಯ ಕಟ್ಟಡ
ಚನ್ನಪಟ್ಟಣ:ಫೆ:02/21/ಮಂಗಳವಾರ. ತಾಲ್ಲೂಕಿನ ಹೊಂಗನೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ಮಾದರಿ ಮಾಧ್ಯಮಿಕ ಶಾಲೆ ಈ ಮೊದಲು ಅಸ್ತಿತ್ವದಲ್ಲಿತ್ತು. ಊರ ಹೊರಗಿನ ದೊಡ್ಡ ಜಾಗದಲ್ಲಿ ಹೊಸದಾಗಿ ನಿರ್ಮಿಸಿದ ಹೊಸ ಕಟ್ಟಡಕ್ಕೆ ಶಾಲೆಯು ಸ್ಥಳಾಂತರಗೊಂಡು ನಡೆಯುತ್ತಿದೆ. ಆದರೆ ಹಳೆಯ ಕಟ್ಟಡ ಮಾತ್ರ ಹಾಳು ಕೊಂಪೆಯಾಗಿ, ಭೂತಬಂಗಲೆಯಾಗಿ ಪರಿವರ್ತಿತವಾಗಿದೆ.ಸುಮಾರು ಎಂಟಕ್ಕೂ ಹೆಚ
ತಾಲ್ಲೂಕಿನ 32 ಗ್ರಾಮ ಪಂಚಾಯತಿಗಳಲ್ಲಿ 16 ಮಹಿಳಾ ಅಧ್ಯಕ್ಷರು. ಇನ್ನೂ ಹೆಚ್ಚಾದರೂ ಆಶ್ಚರ್ಯ ಪಡಬೇಕಾಗಿಲ್ಲ
ಚನ್ನಪಟ್ಟಣ: ಚನ್ನಪಟ್ಟಣ ತಾಲ್ಲೂಕಿನ 32 ಗ್ರಾಮ ಪಂಚಾಯತಿಗಳಿಗೆ ಡಿಸೆಂಬರ್ 27 ನೇ ತಾರೀಖಿನಂದು ಚುನಾವಣೆ ನಡೆದು 30 ನೇ ತಾರೀಖಿನಂದು ಫಲಿತಾಂಶ ಹೊರಬಿದ್ದಿತ್ತು. ಚುನಾವಣೆ ನಡೆದು ಒಂದು ತಿಂಗಳಿಗೆ ಸರಿಯಾಗಿ ಇಂದು ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿಯನ್ನು ಸರ್ಕಾರ ಇಂದು ಪ್ರಕಟಿಸಿದೆ.ತಾಲ್ಲೂಕಿನ ಕೆಂಗಲ್ ನಲ್ಲಿರುವ ಪುಷ್ಪ ಭೈರೇಗೌಡ ಕಲ್ಯಾಣ ಮಂಟಪದಲ್ಲಿ ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರ ನೇತೃತ್ವದಲ್ಲಿ ತಹಶಿಲ್ದಾ
ಸರಳವಾಗಿ ಆಚರಣೆಗೊಂಡ ಗಣರಾಜ್ಯೋತ್ಸವ
ಚನ್ನಪಟ್ಟಣ:ಜ/26/21/ಮಂಗಳವಾರ. ಇಂದು ತಾಲ್ಲೂಕು ಆಡಳಿತ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸರಳವಾಗಿ, ಕೋವಿಡ್ ನಿಯಮವನ್ನು ಪಾಲಿಸಿ 72 ನೇ ಗಣರಾಜ್ಯೋತ್ಸವ ಆಚರಣೆ ಗೊಂಡಿತು. ಧ್ವಜಾರೋಹಣ ನೆರವೇರಿಸಿ, ಜನತೆಗೆ ಶುಭಾಶಯ ಕೋರಿದ ತಹಶೀಲ್ದಾರ್ ನಾಗೇಶ್ ಅವರು, ಬಹುದೊಡ್ಡ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರು ಸಮಾ ನವಾಗಿ ಬದುಕುವುದೇ ಒಂದು ವಿಶಿಷ್ಟ ಕಲ್ಪನೆಯಾ ಗಿದೆ
ಸಂಕ್ರಾಂತಿ ಯುವಕವಿಗೋಷ್ಠಿ
ರಾಮನಗರ:ಜ/23/21/ಶನಿವಾರ. ರಾಮನಗರ ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಸಂಕ್ರಾಂತಿ ಯುವ ಕವಿಗೋಷ್ಠಿ ಮತ್ತು ಗೀತಗಾಯನ ಕಾರ್ಯಕ್ರಮವು ಜಿಲ್ಲಾ ಕ.ಸಾ.ಪ.ಕಛೇರಿಯಲ್ಲಿ ಅರ್ಥಪೂರ್ಣವಾಗಿ ನಡೆಯಿತು. ಈ ಕಾರ್ಯಕ್ರಮವು ಗೋವಿಂದಹಳ್ಳಿ ಶಿವಣ್ಣರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಆಹ್ವಾನಿತ ಅತಿಥಿ ಗಣ್ಯರನ್ನು ತಾಲ್ಲೂಕು
ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ರಾಜಕೀಯ ಪ್ರೇರಿತ;
ರಾಮನಗರ:ಜ/25/21/ಸೋಮವಾರ. ರೈತರನ್ನು ಇನ್ನೂ ದುಃಸ್ಥಿತಿಗೆ ತಳ್ಳಲು ಷಡ್ಯಂತ್ರ ಎಂದು ದೂರಿದ ಡಿಸಿಎಂ**12 ಕೋಟಿ ರೂ. ವೆಚ್ಚದ ಟಯೋಟ-ಕಿರ್ಲೋಸ್ಕರ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಿಲಾನ್ಯಾಸ*ರೈತರ ಕಲ್ಯಾಣಕ್ಕಾಗಿ ರೂಪಿಸಿರುವ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಹೋರಾಟ ರಾಜಕೀಯ ಪ್ರೇರಿತ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಕಟ
ಆರೋಗ್ಯ ಇಲಾಖೆ ಸಾರ್ವಜನಿಕರ ನಡುವೆ ಮಾಧ್ಯಮಗಳು ಜ್ಞಾನದ ಸೇತುವೆಯಾಗಿವೆ. ಡಾ ಪ್ರಸನ್ನ
ರಾಮನಗರ:ಜ/23/21/ಶನಿವಾರ. ಆರೋಗ್ಯ ಇಲಾಖೆಯಲ್ಲಿ ಜನರ ಆರೋಗ್ಯ ಕಾಪಾಡಲು ಹಲವಾರು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇದನ್ನು ಅನುಷ್ಠಾನಗೊಳಿಸಲು ಜನರಿಗೆ ಬೇಕಿರುವ ಅರಿವು ಹಾಗೂ ಜ್ಞಾನವನ್ನು ತಲುಪಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ: ಪ್ರಸನ್ನ ಕುಮಾರ್ ಎನ್ ಅವರು ತಿಳಿಸಿದರು.ಅವರು ಶುಕ್ರವ
ಅಂಬೇಡ್ಕರ್ ರವರ ಹೋರಾಟದ ಬದುಕೇ ನಮಗೆ ಆದರ್ಶವಾಗಬೇಕು ಶ್ರೀರಾಮುಲು.
ಚನ್ನಪಟ್ಟಣ:ಜ/22/21/ಶುಕ್ರವಾರ. ನಮಗೆ ಅಂಬೇಡ್ಕರ್ ರವರ ಹೋರಾಟದ ಜೀವನ ಮಾದರಿಯಾಗಬೇಕು.ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಮತ್ತು ಇಪ್ಪತ್ತನೆಯ ಶತಮಾನದ ಅಂಬೇಡ್ಕರ್ ರವರ ಕನಸು ನನಸು ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ತಿಳಿಸಿದರು. ಅವರು ನೂತನ ಡಾ.ಬಿ.ಆರ್ ಅಂಬೇಡ್ಕರ್ ಭವನವನ್ನು ಉದ್ಘಾಟಿಸಿ ಮಾತನಾಡಿದರು.