ಜನರ ನೆನಪಿನಲ್ಲಿ ಉಳಿಯುವಂತ ಕೆಲಸ ಮಾಡುತ್ತೇನೆ, ಡಿವೈಎಸ್ಪಿ ತೈಲೂರು ಮಲ್ಲೇಶ್.
ಚನ್ನಪಟ್ಟಣ ಡಿ ವೈ ಎಸ್ ಪಿ, ಟಿ. ಮಲ್ಲೇಶ್ ರವರ ಸಂದರ್ಶನ ನಾನು ಎಷ್ಟು ದಿವಸ ಚನ್ನಪಟ್ಟಣದಲ್ಲಿ ಅಧಿಕಾರದಲ್ಲಿರುತ್ತೇನೋ ಅಲ್ಲಿಯ ತನಕವೂ ತಾಲ್ಲೂಕಿನ ಜನಮಾನಸದಲ್ಲಿ ಧೀರ್ಘಕಾಲ ನೆನಪಿನಲ್ಲಿ ಉಳಿಯುವಂತ, ಜನಸಾಮಾನ್ಯರಿಗೆ ಅನುಕೂಲವಾಗುವಂತೆ, ಅಪರಾಧಿಗಳು, ಸುಲಿಗೆಕೋರರ, ವ್ಯಸನಮುಕ್ತ ನಗರವನ್ನಾಗ
ಮಾಗಡಿ ತಾಲ್ಲೂಕಿನ ಗೆಜ್ಜಗಾರಗುಪ್ಪೆ ಗ್ರಾಮದಲ್ಲಿ ಪುರಾತನ ಶ್ರೀ ಮುರಾರಿ ಸ್ವಾಮಿ ಯ ಗದ್ದುಗೆ
ಪುರಾತನ ಜೀವಂತ ಸಮಾಧಿ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಗೆಜ್ಜಗಾರಗುಪ್ಪೆಯಲ್ಲಿ ಪುರಾತನವಾದ ಸರಿ ಸುಮಾರು ಹನ್ನೆರಡನೇ ಶತಮಾನದ್ದು ಎಂದು ಹೇಳಲಾಗುವ ಶ್ರೀ ಮುರಾರಿ ಸ್ವಾಮಿಯ ಜೀವಂತ ಸಮಾಧಿ ಇರುವ ಮಂಟಪವೊಂದಿದ್ದು ಅದನ್ನು ಜೀರ್ಣೋದ್ಧಾರ ಮಾಡಲು ಕುಮಾರಸ್ವಾಮಿ ಎಂಬುವವರು ಮುಂದಾಗಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕದಂಮಾ ರೈತ ಸಂಘ ಪ್ರತಿಭಟನೆ
ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಗಾಂಧಿಭವನದಿಂದ ತಾಲ್ಲೂಕು ಕಛೇರಿವರೆಗೆ ಹೊಸದಾಗಿ ರಚನೆಗೊಂಡಿರುವ ಕರ್ನಾಟಕ ದಂಡಿನಮಾರಮ್ಮ ರೈತ ಸಂಘದ ಪದಾಧಿಕಾರಿಗಳು ಜಾಥಾ ಹಮ್ಮಿಕೊಂಡಿದ್ದರು. ರೈತರ ಪಾಲಿಗೆ ಹೆಚ್ಚುವರಿಯಾಗಿ ೩ ರೂಪಾಯಿ ಪ್ರೋತ್ಸಾಹ ಧನ, ಪಹಣಿ, ಖಾತೆ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಜನನ ಮತ್ತು ಮರಣ ಪ್ರಮಾಣ ಪತ್ರ, ಸರ್ವೇ, ರೈತರಿಗೆ ನಿರಂತರ ವಿದ್ಯುತ್, ಹಾಗೂ ಬಲವಂತವಾಗಿ ಬ್ಯಾಂಕ್ ಸಾಲ ವಸೂಲಾತಿ ನಿಲ್ಲಿಸುವಂತೆ ತಹಶಿಲ್ದಾರರ
ಕಸ ಬೇರ್ಪಡಿಸಲು ನಗರಸಭೆಯಿಂದ ಬಕೆಟ್ ವಿತರಣೆ
ಮಹಾತ್ಮ ಗಾಂಧಿಯವರ ಕನಸನ್ನು ನನಸು ಮಾಡುವ ಸಲುವಾಗಿ ಮಾನ್ಯ ಪ್ರಧಾನಮಂತ್ರಿ ಯವರು ಹಮ್ಮಿಕೊಂಡಿರುವ ಸ್ವಚ್ಚಭಾರತ ನಿರ್ಮಾಣಕ್ಕಾಗಿ ಎಲ್ಲರೂ ಕೈಜೋಡಿಸಿ ಚನ್ನಪಟ್ಟಣ ನಗರವನ್ನು ರಾಜ್ಯದಲ್ಲಾದರೂ ನಂ ೧ ಮಾಡಬೇಕೆಂದು ನಗರಸಭೆಯ ಪೌರಾಯುಕ್ತ ಸಿ ಪುಟ್ಟಸ್ವಾಮಿ ಕರೆ ನೀಡಿದರು. ಅವರು ನಗರಸಭೆಯ ಅಧ್ಯಕ್ಷೆ ನಜ್ಮುನ್ನೀಷಾ ರವರ ಹನ್ನೊಂದನೇ ವಾರ್ಡ್ ನಲ್ಲ ಒಣಕಸ ಮತ್ತು ಹಸಿಕಸವನ್ನು ಮೂಲದಲ್ಲೇ ಬೇರ್ಪಡಿಸುವ ಸಲುವಾಗಿ ಸಾರ್ವಜನಿಕರಿಗೆ ಹಸಿರು ಮತ್ತು ನೀಲಿ ಬಣ್ಣದ ಬಕೆಟ್ ಗಳನ್ನು ವಿತರ
ಫಿಲ್ಟರ್ ಮರಳು ಕಾರ್ಯಾಗಾರದ ಮೇಲೆ ಅಕ್ಕೂರು ಪೋಲಿಸರು ದಾಳಿ, ವಾರಸುದಾರರಿಲ್ಲವೆಂದು ನದಿಗೆ ಮರಳು ಸುರಿದರಂತೆ !?
ಪತ್ರಿಕೆಯ ಫಲಶೃತಿ ಫಿಲ್ಟರ್ ಮರಳು ಕಾರ್ಯಾಗಾರದ ಮೇಲೆ ಅಕ್ಕೂರು ಪೋಲಿಸರು ದಾಳಿ, ವಾರಸುದಾರರಿಲ್ಲವೆಂದು ನದಿಗೆ ಮರಳು ಸುರಿದರಂತೆ !? ನಮ್ಮ ಬಯಲುಸೀಮೆ ಸಂಜೆ ದಿನ ಪತ್ರಿಕೆ ಮತ್ತು ಸಾಮಾಜಿಕ ಜಾಲತಾಣ ಪತ್ರಿಕೆಯಾದ sanmitra.co.in ನಲ್ಲಿ ಪ್ರತಿ ಸೋಮವಾರ ಮತ್ತು ಮಂಗಳವಾರ ಪ್ರಕಟವಾಗುವ ದು:ಖ -ದುಮ್ಮಾನ ಅದರ ಮೇಲೆ ಕ್ಷ-ಕಿರಣ ಎಂಬ ಕಾಲಮ್ಮಿನಲ್ಲಿ ತಾಲ್ಲೂಕಿನ ಸಮಸ್ಯೆಗಳ ಬಗ್ಗೆ ವರದಿಗಾರ ಮತ್ತು ಲೇಖಕರಾದ ಗೋ ರಾ ಶ್ರೀನಿವಾಸ ರವರು ವರದಿ ಮಾಡುತ್ತಿದ್ದು, ವರದಿಯನ
ಸರಳ ವಿಶ್ವಕರ್ಮ ದಿನಾಚರಣೆ, ಸಭೆಯಲ್ಲಿ ಆಕ್ರೋಶ.
ತಾಲ್ಲೂಕು ಆಡಳಿತದಿಂದ ಆತುರಾತುರವಾಗಿ ಮತ್ತು ಸರಳವಾಗಿ ಅದರಲ್ಲೂ ಮುಖ್ಯಮಂತ್ರಿ ಕ್ಷೇತ್ರದಲ್ಲಿ ವಿಶ್ವಕರ್ಮ ದಿನಾಚರಣೆಯನ್ನು ಆಚರಿಸುತ್ತಿರುವುದಕ್ಕೆ ವಿಶ್ವಕರ್ಮ ಮುಖಂಡರು ತೀವ್ರ ಅಸಮಧಾನ ವ್ಯಕ್ತ ಪಡಿಸಿದರು. ತಾಲ್ಲೂಕು ಕಛೇರಿಯಲ್ಲಿ ಇಂದು ಹಮ್ಮಿಕೊಂಡಿದ್ದ ಮೂಲಪುರುಷ ಎಂದೇ ಬಿಂಬಿತವಾಗಿರುವ ವಿಶ್ವಕರ್ಮ ರ ದಿನಾವರಣೆಗೆ ಸರ್ಕಾರ ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ಬಿಡುಗಡೆ ಮಾಡುತ್ತಿದೆಯಾದರೂ ತಾಲ್ಲೂಕು ಆಡಳಿತ ಎಲ್ಲಾ ಮುಖಂಡರ ಗಮನಕ್ಕೆ ತಾರದೆ ಸರಳವಾಗ
ಕನ್ಸರ್ವೆನ್ಸಿ ಒತ್ತುವರಿ ಮಾಡಿ ಶಾಲಾ ಕಾಂಪೌಂಡ್ ಗೆ ಮಣ್ಣು ಸುರಿದ ಡಿಎಆರ್ ಪೋಲಿಸ್ ಇಲಾಖೆ.
ಪೋಲಿಸ್ ವಸತಿ ಗೃಹಗಳು ಮತ್ತು ಸೇಂಟ್ ಆನ್ಸ್ ಇಂಗ್ಲಿಷ್ ಶಾಲೆಯ ನಡುವೆ ಹತ್ತು ಅಡಿ ಕನ್ಸರ್ವೆನ್ಸಿ ಇದ್ದು ಹೊಡೆದು ಹಾಕಿದ ಮನೆಗಳ ಅವಶೇಷಗಳನ್ನು ಇಲ್ಲಿ ತಂದು ಹಾಕಿ ಸಂಪೂರ್ಣ ಕನ್ಸರ್ವೆನ್ಸಿಯನ್ನು ಮುಚ್ಚುವುದರ ಜೊತೆಗೆ ನೂರಾರು ಮಕ್ಕಳು ವಿದ್ಯಾಭ್ಯಾಸ ಮಾಡುವ ಸೇಂಟ್ ಆನ್ಸ್ ಇಂಗ್ಲಿಷ್ ಶಾಲೆಯ ಕಾಂಪೌಂಡ್ ಬಳಿ ಸುರಿದಿದ್ದಾರೆ. ಪೋಲಿಸ್ ವಸತಿಗಳು ಮತ್ತು ಶಾಲೆಯ ನಡುವೆ ಇರುವ ಖಾಲಿಜಾಗದಲ್ಲಿ ಸುರಿದ ಮಣ್ಣಿನ ಗುಡ್ಡೆಯ ಮೇಲೆ ಹಲವಾರು ಜಾತಿಯ ಗಿಡಗಂಟಿಗಳು ದಟ್ಟವ
ಸಂಬಂಧ ಗಟ್ಟಿಗೊಳಿಸುವ ಗೌರಿಹಬ್ಬ
ಬರಹಗಾರ, ಸಂಶೋಧಕ, ಪತ್ರಕರ್ತ ಎಸ್. ರುದ್ರೇಶ್ವರ ಹಾಗೂ ಶಿಕ್ಷಕಿ ಡಿ.ಆರ್. ನೀಲಾಂಬಿಕಾ ಅವರು ತಮ್ಮ ಮಗಳಾದ ಆರ್. ಯಶಿಕಾ(ನೀರು) ಮೂಲಕ ಪ್ರತಿ ವರ್ಷದ ಗೌರಿಗಣೇಶ ಹಬ್ಬದಂದು ಸಮಾಜಮುಖಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿಗೆ ಬಾಗಿನ ಕೊಡುವುದನ್ನು ಪ್ರಾರಂಭಿಸಿ ಎರಡು ವರ್ಷವಾಯಿತು. ದಾರಿದೀಪ ವೃದ್ದಾಶ್ರಮದ ಸಂಸ್ಥಾಪಕಿ ಕವಿತಾರಾವ್, ಕರಕುಶಲ ಕಲಾವಿದೆ ಆರ್.ವಿ. ಅನಸೂಯಬಾಯಿ, ಶೋಭಾ ಸೇರಿದಂತೆ 13 ಮಂದಿಗೆ ಗುರುವಾರ ಬಾಗಿನ ಕೊಟ್ಟರು.
ಜೀವನದಲ್ಲಿ ಶ್ರಮದಾನ ಮಾಡಿದರೇ ಸುಖದ ಜೀವನ ನಿವೃತ್ತ ಯೋಧ ತಿಮ್ಮೇಗೌಡ
ಸುಖಜೀವನ ನಮ್ಮದಾಗಬೇಕೆಂದರೆ ವಿದ್ಯಾರ್ಥಿ ಇದ್ದಾಗ ಓದು, ಯುವಕರಿದ್ದಾಗಿ ದುಡಿಮೆ ಇವೆಲ್ಲದರ ನಡುವೆ ಸಮಾಜಕ್ಕಾಗಿ ಕೆಲಸಮಯ ಮೀಸಲಿಟ್ಟರೆ ವಯಸ್ಸಾದ ನಂತರ ಸುಖ ಜೀವನ ನಡೆಸಬಹುದು ಎಂದು ಭಾರತೀಯ ನಿವೃತ್ತ ಯೋಧ ಅಂಕನಹಳ್ಳಿ ತಿಮ್ಮೇಗೌಡ ಅಭಿಪ್ರಾಯಪಟ್ಟರು. ಅವರು ನಗರದ ಬಾಲು ಪಬ್ಲಿಕ್ ಶಾಲೆಯ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಕರ್ನಾಟಕ ದಂಡಿನ ಮಾರಮ್ಮ ರೈತ ಸಂಘ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಕಜವೇ ಅಧ
ಚನ್ನಪಟ್ಟಣದಲ್ಲಿ ಬಂದ್ ಬಹುತೇಕ ಯಶಸ್ವಿ
ಬೆಲೆ ಏರಿಕೆ ವಿರುದ್ಧ ಇಂದು ಕರೆದಿದ್ದ ಭಾರತ್ ಬಂದ್ ಚನ್ನಪಟ್ಟಣದಲ್ಲಿ ಬಹುತೇಕ ಯಶಸ್ವಿಯಾಯಿತು, ಚನ್ನಪಟ್ಟಣ ನಗರದ ಪೇಟೆ ಬೀದಿಯಲ್ಲಿ ಬೆಳಿಗ್ಗೆ ಹನ್ನೊಂದಾದರೂ ಶೇ ೯೦ ಭಾಗ ಅಂಗಡಿಮುಂಗಟ್ಟುಗಳು ಸ್ವಯಂ ಬಾಗಿಲು ಹಾಕಿ ಬಂದ್ ಗೆ ಸಹಕರಿಸಿದ್ದರು. ತಾಲ್ಲೂಕು ಕಾಂಗ್ರೆಸ್ ಕಾರ್ಯಕರ್ತರು ನಗರದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಅಲ್ಲಲ್ಲಿ ತೆಗೆದಿದ್ದ ಕೆಲವು ಅಂಗಡಿಗಳನ್ನು ಮುಚ್ಚಿಸುವ ಮೂಲಕ ಚನ್ನಪಟ್ಟಣದಲ್ಲಿ ಬಂದ್ ಯಶಸ್ವಿಯಾಗುವಂತೆ ಪ್ರಯತ್ನ ನಡೆಸಿದರು.