ಬ್ರಿಟೀಷರ ಕಾಲದಲ್ಲಿ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು ಧನಂಜಯ
ಬಹುತೇಕ ಬುದ್ದಿಜೀವಿಗಳು ಬ್ರಿಟೀಷರು ನಮಗೆ ಶಿಕ್ಷಣ ಕೊಟ್ಟರು, ರೈಲು ಕೊಟ್ಟರು, ಅಂಚೆ ಪರಿಚಯಿಸಿದರು, ಅವರ ಕೊಡುಗೆ ನಮ್ಮ ದೇಶಕ್ಕೆ ಬಹಳ ಇದೆ ಎಂದು ಮಾತನಾಡುತ್ತಾರೆ, ಅವರು ಅಂದುಕೊಂಡಂತೆ ಬ್ರಿಟೀಷರು ಅವೆಲ್ಲವನ್ನೂ ಮಾಡಿದ್ದು ಅವರ ಅನುಕೂಲಕ್ಕಾಗಿಯೇ ವಿನಹ ನಮ್ಮ ದೇಶದ ಅಭಿವೃದ್ಧಿಗಲ್ಲ ಎಂದು ಕೋಡಂಬಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಕೆ ಎಸ್ ಧನಂಜಯ ತಿಳಿಸಿದರು.
ರಾಮನಗರದಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ
ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ವತಿಯಿಂದ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಸಹಯೋಗದೊಂದಿಗೆ ರಾಮನಗರ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಪ್ರಪ್ರಥಮ ಬಾರಿಗೆ ಹಮ್ಮಿಕೊಳ್ಳಲಾಗಿದೆ ಎಂದು ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಪೂಜ್ಯ ಕಾರ್ಯದರ್ಶಿ ಶ್ರೀ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ತಿಳಿಸಿದರು.ಅ
ಆರಂಭಗೊಂಡ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ
ನಗರದ ಮಹದೇಶ್ವರ ಬಡಾವಣೆಯಲ್ಲಿ ಒತ್ತುವರಿ ಆಗಿರುವ ರಾಜಕಾಲುವೆ ತೆರವುಗೊಳಿಸಲು ಸೂಕ್ತ ಪೋಲಿಸ್ ಬಂದೋಬಸ್ತ್ ನೊಂದಿಗೆ ದಂಡಾಧಿಕಾರಿ ಯೋಗಾನಂದರವರು ಚಾಲನೆ ನೀಡಿದರು.ಲಾಳಾಘಟ್ಟ ರಸ್ತೆಯ ಅಕ್ಕಿಗಿರಣಿ ಯಿಂದ ಮೊದಲ್ಗೊಂಡು ಬಡಾವಣೆಯ ತನಕವೂ ಎರಡು ಜೆಸಿಬಿ ಯಂತ್ರಗಳ ಮೂಲಕ ಕಾರ್ಯಾಚರಣೆ ಆರಂಭಗೊಂಡಿತು.ವೀಣಾಕುಮಾರಿ ಭೇಟಿ
ರಾಜಕಾಲುವೆ ಒತ್ತುವರಿ ತೆರವುಗೊಳಿಸಿಯೇ ಸಿದ್ದ ತಹಶಿಲ್ದಾರ್
ದಂಡಾಧಿಕಾರಿಗಳ ಖಡಕ್ ಉತ್ತರಒತ್ತುವರಿಯಾಗಿರುವ ರಾಜಕಾಲುವೆಯನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸದೆ ಬಿಡುವುದಿಲ್ಲ, ಮೇಲಿನ ಅಧಿಕಾರಿಗಳಿಂದ ಆದೇಶ ಬಂದಿರುವುದರಿಂದ ನಾಳೆಯಿಂದಲೇ ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ತಾಲ್ಲೂಕಿನ ದಂಡಾಧಿಕಾರಿ ಯೋಗಾನಂದ ತಿಳಿಸಿದರು.
ಕ್ಯೂರಿಂಗ್ ಮಾಡದೆ ನಿರ್ಮಾಣಗೊಳ್ಳುತ್ತಿರುವ ಮೋರಿಗಳು
ನಗರದೊಳಗಿನ ಬಹುತೇಕ ರಸ್ತೆಗಳ ಕಾಮಗಾರಿಗಳು ನಡೆಯುತ್ತಿದ್ದು ಮೊದಲ ಹಂತವಾಗಿ ಕಾಂಕ್ರೀಟ್ ಬಾಕ್ಸ್ ಮೋರಿ (ಚರಂಡಿ) ಗಳನ್ನು ನಿರ್ಮಾಣ ಮಾಡುತ್ತಿದ್ದು ಚರಂಡಿಗೆ ಹರಿದು ಬರುವ ನೀರಿಗೆ ಬದಲಿ ವ್ಯವಸ್ಥೆ ಮಾಡದೆ ರಸ್ತೆಯಲ್ಲಿ ಹರಿಯುವಂತೆ ಮಾಡಿರುವುದು ಬೊಂಬೆಗಳ ನಗರಿ ಹೋಗಿ ಕಸದ ಕೊಂಪೆ ನಗರವಾಗಿರುವ ಚನ್ನಪಟ್ಟಣಕ್ಕೆ ಮೋರಿ ನೀರು ಸೇರ್ಪಡೆಯಾಗಿ ಸಾರ್ವಜನಿಕರು ರಸ್ತೆಯಲ್ಲಿ ಓಡಾಡದ ಸ್ಥಿತಿ ನಿರ್ಮಾಣವಾಗಿರುವುದು ನಗರಸಭೆಯ ಸ್ವಚ್ಚತಾ ಅಭಿವೃದ್ಧಿಗೆ ಹಿಡಿದ ಕ
ಪ್ರಯಾಣಿಕರ ಸಾವಿಗಾಗಿ ಹೊಂಚು ಹಾಕುತ್ತಿವೆ, ತಡೆಗೋಡೆ ಇಲ್ಲದ ತಾಲ್ಲೂಕಿನ ಕೆರೆ ಏರಿಗಳು
ತಾಲ್ಲೂಕಿನಾದ್ಯಂತ ಏತ ನೀರಾವರಿ ಹಾಗೂ ಈ ವರ್ಷ ಬಿದ್ದ ಮಳೆಯಿಂದ ಬಹುತೇಕ ಕೆರೆಗಳು ತುಂಬಿತುಳುಕುತ್ತಿವೆ, ಅದರಲ್ಲೂ ನಗರದ ಸುತ್ತಲೂ ಇರುವ ಕೆರೆಗಳೆಲ್ಲವೂ ಮಳೆ ನೀರಿನ ಜೊತೆಗೆ ಏತ ನೀರಾವರಿಯ ಮೂಲಕ ನೀರು ತುಂಬಿಕೊಂಡು ಸುಂದರವಾಗಿ ಕಾಣುವುದರ ಜೊತೆಗೆ ಪ್ರಾಣಿ ಪಕ್ಷಿಗಳ ದಾಹ ತಣಿಸಲು ಮತ್ತು ಅನ್ನದಾತ ರೈತ ಕುಲಕ್ಕೆ ವರವಾಗಿ ಪರಿಣಮಿಸಿವೆ.ಆದರೆ ನಗರದಿಂದ ಹಳ್ಳಿಗಳಿಗೆ ಹೋಗುವ ಬಹುತೇಕ ರಸ್ತೆಗಳು ಕೆರೆ ಏರಿಯ ರಸ್ತೆಗಳಾಗಿವ
ಬದುಕಿಗೆ ಶಿಕ್ಷಣ, ಆರೋಗ್ಯಕ್ಕೆ ಕ್ರೀಡೆ ಸಹಕಾರಿ, ಶ್ರೀ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ
ವೃತ್ತಿ ಬದುಕಿನ ಜೊತೆಗೆ ಸಮಾಜದಲ್ಲಿ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು, ಭವಿಷ್ಯದ ಉತ್ತಮ ಪ್ರಜೆಗಳಾಗಲು ಶಿಕ್ಷಣ ಎಷ್ಟು ಮುಖ್ಯವೋ, ಅದನ್ನೆಲ್ಲಾ ಸಾಧಿಸಲು ದೇಹದ ಆರೋಗ್ಯವೂ ಮುಖ್ಯವಾಗುತ್ತದೆ, ಆರೋಗ್ಯ ಸರಿ ಇರಬೇಕೆಂದರೆ ಇಂದಿನ ಮಕ್ಕಳು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕೆಂದು ಆದಿಚುಂಚನಗಿರಿ ಕ್ಷೇತ್ರದ ರಾಮನಗರ ಶಾಖಾ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಯವರು ಮಕ್ಕಳಿಗೆ ಕರೆನೀಡಿದರು.ಅವ
೨೨ ನೇ ತಾರೀಖು ಕುವೆಂಪು ಜಯಂತಿ ದಂಡಾಧಿಕಾರಿ ಯೋಗಾನಂದ
ಇದೇ ತಿಂಗಳ ೨೨ ನೇ ತಾರೀಖು ರಾಷ್ಟ್ರಕವಿ ಕುವೆಂಪು ರವರ ಜಯಂತಿಯನ್ನು ಶತಮಾನೋತ್ಸವ ಭವನದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ತಾಲ್ಲೂಕು ದಂಡಾಧಿಕಾರಿ ಯೋಗಾನಂದರವರು ತಿಳಿಸಿದರು.ಅವರು ತಾಲ್ಲೂಕು ಕಛೇರಿಯಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಂಡರು.ಶಿವಮೊಗ್ಗದ ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ವ್ಯಕ್ತಿ
ವರ್ಷ ವರ್ಷವೂ ಕಳೆಗುಂದುತ್ತಿರುವ ಕೆಂಗಲ್ ಜಾತ್ರೆ
ಇತಿಹಾಸ ಪ್ರಸಿದ್ಧ ಅಯ್ಯನಗುಡಿ ಎಂದೇ ಸುಪ್ರಸಿದ್ದವಾದ ಕೆಂಗಲ್ ಜಾತ್ರೆ, ರಾಮನಗರ ಜಿಲ್ಲೆಯಲ್ಲಿಯೇ ಅತಿದೊಡ್ಡ ದನಗಳ ಜಾತ್ರೆ ಎಂದು ಗುರುತಿಸಿಕೊಂಡಿದ್ದು ವರ್ಷವರ್ಷಕ್ಕೆ ಕ್ಷೀಣಿಸುತ್ತಲೇ ಬರುತ್ತಿರುವುದು ವಿಷಾದನೀಯ ಎನಿಸುತ್ತಿದೆ.ಸಂಕ್ರಾಂತಿ ಹಬ್ಬದಂದು ನಿತ್ಯಾರಾಧಾನೆ, ಸ್ನಪನ ಮಹಾಮಂಗಳಾರತಿ, ಶಾತ್ತುಮೊರೈ, ರಾಷ್ಟ್ರಾಶೀರ್ವಾದದೊಂದಿಗೆ ಶುರುವಾಗಿ ಬುಧವಾರ ಸುದರ್ಶನ ಹೋಮ, ಮೂರ್ತಿಹೋಮ, ಗರುಡೋತ್ಸವ, ಗುರುವಾರ ಆಂಜನೇಯ ಸ
ಮನಬಂದಂತೆ ನಡೆದುಕೊಳ್ಳುವ ಖಾಸಗಿ ಶಾಲೆಗಳು, ಇದ್ದಷ್ಟೇ ಸೈ ಎನ್ನುವ ಸರ್ಕಾರಿ ಶಿಕ್ಷಕರು, ಬೆಂಡಾಗುತ್ತಿರುವ ಬಿಇಓ
ಅರಗಿಸಿಕೊಳ್ಳಲಾಗದ ವಾಸ್ತವ ಸಂಗತಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಕಲಿಯಲೆಂಬ ಉದ್ದೇಶದಿಂದ ರಾಜ್ಯ ಸರ್ಕಾರವು ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಾ ಬಂದರೂ ಹಲವು ಸರ್ಕಾರಿ ಶಿಕ್ಷಕರ ಉದಾಸೀನತೆಯಿಂದ, ಪೋಷಕರು ಹೊಂದಿರುವ ಖಾಸಗಿ ಶಾಲೆಗಳ ವ್ಯಾಮೋಹದಿಂದ, ಕಳಪೆ ಗುಣಮಟ್ಟದಿಂದ ನಿರ್ಮಾಣವಾಗಿರುವ ಕಟ್ಟಡಗಳ ಭಯದಿಂದ, ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಮಾತ್ರ ಖಾಸಗಿ ಶಾಲೆಗಳಿಗ