ಕೃಷಿ ಪ್ರಧಾನ ದೇಶದಲ್ಲಿ ರೈತನೇ ಗುರು, ಭಾವಿಪ ಶಿಕ್ಷಕರ ದಿನಾಚರಣೆಯಲ್ಲಿ ಡಾ ಟಿ ಬಿ ಪುಟ್ಟರಾಜು.
ಮಕ್ಕಳಿಗೆ ಅಕ್ಷರ ಹೇಳಿಕೊಟ್ಟವನು ಗುರು, ಹೆತ್ತ ಮಕ್ಕಳಿಗೆ ತಾಯಿಯೇ ಗುರು, ಭೂಮಿ ಮೇಲಿರುವ ಪ್ರತಿಯೊಂದು ಜೀವಿಗೂ ದೇಶದ ಬೆನ್ನೆಲುಬು, ಅನ್ನದಾತನೇ ಗುರು ಎಂದು ವಿಶ್ರಾಂತ ಪ್ರಾದ್ಯಾಪಕ ಹಾಗೂ ಕೃಷಿ ವಿಶ್ವವಿದ್ಯಾಲಯ ದ ತಾಂತ್ರಿಕ ಅಧಿಕಾರಿಗಳಾದ ಡಾ ಪುಟ್ಟರಾಜುರವರು ಅಭಿಪ್ರಾಯಪಟ್ಟರು. ಅವರು ಭಾರತ ವಿಕಾಸ ಪರಿಷತ್ತು ಕಣ್ವ ಶಾಖೆ ಚನ್ನಪಟ್ಟಣ ಇವರು ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡ
ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ ಪರಿಶೀಲನೆ
ನಮ್ಮ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಗೋ ರಾ ಶ್ರೀನಿವಾಸ ರವರ ವಿಶೇಷ ವರದಿಗೆ ಸ್ಪಂದನೆ. ನಮ್ಮ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಸಾರ್ವಜನಿಕ ಆಸ್ಪತ್ರೆಯ ಅಧ್ವಾನದ ಬಗ್ಗೆ ಬೆಳಕು ಚಲ್ಲಿದ ವಿಶೇಷ ವರದಿಯನ್ನು ಗಮನಿಸಿದ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ ರಾಜೇಂದ್ರ ರವರು ಇಂದು ಆಸ್ಪತ್ರೆಗೆ ದಿಢೀರ್ ಭೆಟಿ ನೀಡಿ ಪರಿಶೀಲನೆ ನಡೆಸಿದರು.
ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ಮಹಾಮಂಡಳ ಮತ್ತು ಸ್ಥಳೀಯ ಸಂಘಗಳಿಂದ ಸಹಾಯ ಹಸ್ತ ಹನುಮಂತೇಗೌಡ
ಕುರಿ ಸಾಕಾಣಿಕೆದಾರರಿಗೆ ಸಹಕಾರ ಇಲಾಖೆಯಿಂದ ಏನೇನು ಸವಲತ್ತುಗಳನ್ನು ದೊರಕಿಸಿಕೊಡಲು ಸಾಧ್ಯವೋ ಎಲ್ಲಾ ಸೌಕರ್ಯಗಳನ್ನು ದೊರಕಿಸಿಕೊಡಲಾಗುವುದು ಎಂದು ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳ ಅಧ್ಯಕ್ಷರಾದ ಹನುಮಂತೇಗೌಡ ಹೇಳಿದರು. ತಾಲ್ಲೂಕಿನ ದೇವರಹಳ್ಳಿ ಶ್ರೀ ಬೀರೇಶ್ವರ ದೇವಸ್ಥಾನದಲ್ಲಿ ಚನ್ನಪಟ್ಟಣ ಮತ್ತು ಕನಕಪುರ ಕುರಿ ಉಣ್ಣೆ ಉತ್ಪಾದಕರ ಸಂಘ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕುರಿ ಮತ್ತು ಮೇಕೆ ಸಾಕಾಣಿಕೆ ರೈತರಿಗೆ ಸುಲಭವಾದ ಕೆಲ
ಕಸಾಪ ವತಿಯಿಂದ ಕವಿ ಕಾವ್ಯ ಸಮ್ಮೇಳನ
ದಿನಾಂಕ ೦೮/೦೯/೧೮ ರ ಶನಿವಾರ ನಗರದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಕೂರಣಗೆರೆ ಕೃಷ್ಣಪ್ಪ ರವರ ಸಮ್ಮೇಳಾಧ್ಯಕ್ಷತೆಯಲ್ಲಿ ಕವಿ-ಕಾವ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಮನಗರ ಜಿಲ್ಲಾಧ್ಯಕ್ಷ ಸಿಂ ಲಿಂ ನಾಗರಾಜು ತಿಳಿಸಿದರು. ಅವರು ಮಂಗಳವಾರ ಸಂಜೆ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕೊಡಗಿನ ಸಂತ್ರಸ್ತರನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ
ರಾಮನಗರದ ಹುಡುಗರ ಕನ್ನಡ ಕಿರು ಚಿತ್ರ ಪ್ರೇಮ
ಈಗಿನ ಯುವಕರಲ್ಲಿ ಕೆಲವರಲ್ಲಿ ಒಂದೊಂದು ತರನಾದ ಹವ್ಯಾಸಗಳಿರುತ್ತದೆ. ಹಾಗೇಯೆ ರಾಮನಗರದ ಒಂದು ಯುವಕರ ತಂಡ ಕನ್ನಡ ಕಿರುಚಿತ್ರ ತಯಾರಿಕೆಯಲ್ಲಿ ಮಗ್ನರಾಗಿದ್ದಾರೆ. ಯಾವುದೇ ತರಬೇತಿಗಳಿಲ್ಲದೇ. ಕೇವಲ ಸಿನಿಮಾ ಮೇಲಿನ ಪ್ರೀತಿಯಿಂದ ಹಾಗೂ ಸಮಾಜಕ್ಕೆ ಸಂದೇಶಗಳನ್ನು ರವಾನಿಸುವ ಸಲುವಾಗಿ ಕಿರುಚಿತ್ರಗಳನ್ನು ನಿರ್ಮಿಸಲು ಈ ತಂಡ ಸಜ್ಜಾಗಿದೆ. ಈಗಾಗಲೇ ಮಿನರ್ವ ಎಂಬ ಹೆಸರಿನ ಕಿರುಚಿತ್ರ ನಿರ್ಮಿಸಿ ಯಶಸ್ಸು ಕಂಡಿರುವ ಈ ತಂಡ, ಸಾಹಿತ್ಯ ಎಂಬ ಎರಡನೇ ಕಿರುಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದು ಚಿತ
ಜಿಲ್ಲಾಡಳಿತ ನೆಟ್ಟ ಕೋಟಿ ಗಿಡಗಳೇನಾದವು ? ಬಹುತೇಕ ಗಿಡಗಳು ವಿದ್ಯುತ್ ತಂತಿಗಳ ಕೆಳಗೇ ಏಕೆ ನೆಡುತ್ತಾರೆ ? ಗಿಡಗಳ ಅರಣ್ಯರೋಧನ
ಕಳೆದ ಬಾರಿ ರಾಮನಗರ ಜಿಲ್ಲಾಡಳಿತವೂ ಜಿಲ್ಲಾದ್ಯಂತ ಕೋಟಿ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಆಯೋಜಿಸಿ ಚಾಲನೆ ನೀಡಿ ಖಾಲಿ ಇರುವ ಅರಣ್ಯ, ಗೋಮಾಳ, ಸರ್ಕಾರಿ ಬಂಜರು ಭೂಮಿ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಕೋಟಿ ಗಿಡಗಳ ಹೆಸರಿನಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಜಿಲ್ಲಾಡಳಿತ ಲಕ್ಷಾಂತರ ಗಿಡಗಳನ್ನು ನೆಟ್ಟು ಕೈ ತೊಳೆದುಕೊಂಡಿತ್ತು. "ಉಳಿದಿರುವ ಗಿಡಗಳ ಲೆಕ್ಕ ಕೊಡಲಿ" ಜಿಲ್ಲಾದ್ಯಂತ ಎತ್ತ ಹೋಗಿ ಲೆಕ್ಕ ತಂದರು ಸಹ ಕೇವಲ ಒಂದು ವರ್ಷ
ಐ.ಬಿ.ಪಿ.ಎಸ್. ಬ್ಯಾಂಕ್ ಪರೀಕ್ಷೆಗೆ ಉಚಿತ ಪೂರ್ವಸಿದ್ಧತಾ ತರಬೇತಿ ಕಾರ್ಯಕ್ರಮ
ರಾಮನಗರದ ರೋಟರಿ ಸಿಲ್ಕ್ ಸಿಟಿ, ಬೆಂಗಳೂರು ರಾಜರಾಜೇಶ್ವರಿ ನಗರ ಸೆಂಟಿನಲ್ ಕ್ಲಬ್ಗಳು ಸಂಯುಕ್ತವಾಗಿ ನವೆಂಬರ್ ನಲ್ಲಿ ನಡೆಯುವ ಐಬಿಪಿಎಸ್ ಪರೀಕ್ಷೆಯ ಹಿನ್ನೆಲೆಯಲ್ಲಿ ವಿಶೇಷ ತರಬೇತಿ ಶಿಬಿರವನ್ನು ಆಯೋಜಿಸುತ್ತಿವೆ. ಸುವರ್ಣಾವಕಾಶ ! ಸಂಪೂರ್ಣ ಉಚಿತವಾಗಿರುವ ಈ ಶಿಬಿರವನ್ನು ವಿಶೇಷವಾಗಿ ಕಳೆದ ೨೮ ವರ್ಷಗಳಿಂದ ಇಲ್ಲಿಯವರೆಗೆ ೨.೫ ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ಕೊಟ್ಟು ಸುಮಾರು ೩೦ ಸಾವಿರ ಕ್ಕಿಂತ ಹೆಚ್ಚು ಅಭ್ಯರ್ಥಿಗಳಿಗೆ ಉದ್ಯೊÃಗವಕಾ
ಮುಖ್ಯಮಂತ್ರಿ ತವರಲ್ಲಿ ಮೂಲಭೂತ ಸೌಕರ್ಯವಿಲ್ಲದ
ಸಾರ್ವಜನಿಕ ಆಸ್ಪತ್ರೆ ಮುಖ್ಯಮಂತ್ರಿ ತವರು ಚನ್ನಪಟ್ಟಣದಲ್ಲಿ ಸಾರ್ವ ಜನಿಕ ಆಸ್ಪತ್ರೆ ಸಿಬ್ಬಂದಿ ಕೊರತೆಯಿಂದ ಗಬ್ಬೆದ್ದು ನಾರುತ್ತಿದೆ. ಸದ್ಯ ಎಲ್ಲಾ ಹುದ್ದೆಗಳು ಸೇರಿ ತೊಂಭತ್ತೆ ರಡು ಹುದ್ದೆಗಳಿರಬೇಕಾಗಿತ್ತು, ಆದರೆ ಇರುವುದು ಕೇವಲ ಅರವತ್ಮೂರು ಹುದ್ದೆ ಮಾತ್ರ ಇನ್ನು ಇಪ್ಪ ತ್ತೊಂಭತ್ತು ಹುದ್ದೆಗಳು ಖಾಲಿ ಇವೆ. ಎಲ್ಲಾ ಔಷಧಗಳು ದೊರೆಯುವುದಿಲ್ಲ ಜನೌಷಧ ಮಳಿಗೆಯು ಸೇರಿ ಎರಡು ಮೆಡಿಕಲ್ ಅಂಗಡಿಗಳಿದ್ದರು ಇದ್ದರೂ
ಜ್ಞಾನ ವಿಕಾಸ ಕೇಂದ್ರದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಉದ್ಘಾಟನೆ
ರಾಮನಗರ: ಗುರಿ ಮತ್ತು ಪರಿಶ್ರಮದೊಂದಿಗೆ ಅಭ್ಯಾಸ ಮಾಡಿದರೆ ಐಎಎಸ್ ಮತ್ತು ಐಪಿಎಸ್ ಅಸಾಧ್ಯವಾದ ಪರೀಕ್ಷೆಗಳೇನಲ್ಲ ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ.ಪಿ.ಮುಲ್ಲೈ ಮುಹಿಲನ್ ಹೇಳಿದರು. ನಗರದ ಗುರುಭವನದಲ್ಲಿ ಸೋಮವಾರ ದೇಸಿ ಸ್ಕಿಲ್ಸ್ ಜ್ಞಾನ ವಿಕಾಸ ಕೇಂದ್ರದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿಗೆ ತನ್ನ ಭವಿಷ್ಯಕ್ಕೆ ಸಂಬಂಧಿಸಿದಂತೆ ದೊಡ್ಡ ಕನಸು ಮತ್ತು ಸ್ಪಷ್ಟ ಗುರಿ ಇರಬೇಕು. ನಂತರ ತನ್
ಕೊಡಗಿನ ಸಂತ್ರಸ್ತರಿಗೆ ನೆರವು ನೀಡಿದ ನಟ ಚೇತನ್ ಜೊತೆ ಚನ್ನಪಟ್ಟಣದ ಹುಡುಗರು
ಭೀಕರ ಮಳೆಗೆ ತುತ್ತಾಗಿ ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿರುವ ಕೊಡವ ರಿಗೆ ಚಲನಚಿತ್ರ ನಟ ಚೇತನ್ ರವರ ಜೊತೆಗೆ ನಮ್ಮ ಚನ್ನಪಟ್ಟಣದ ಹುಡುಗರು ಸೇರಿದಂತೆ ಹಲವರು ನಿತ್ಯ ಅಗತ್ಯ ವಸ್ತುಗಳನ್ನು ವಿತರಿಸಿದರು. ಚೇತನ್ ಕಷ್ಟ ಯಾರಿಗೆ ಬಂದರೂ ಅದು ನಮಗೆ ಒದಗಿಬಂದ ಕಷ್ಟ ಎಂದು ತಿಳಿದು ಎಲ್ಲರೂ ತಮ್ಮ ಕೈಲಾದ ಸಹಾಯವನ್ನು ಮಾಡಬೇಕು, ಕೊಡಗು ಹಿಂದೆ ಹೇಗಿತ್ತು ಎಂಬುದನ್ನು ಮನಗಂಡು ಅದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಶಾಶ್ವತವಾಗಿ ನೆಲೆ ನಿಲ್ಲುವಂತೆ ಕೊಡಗು ಜಿಲ್ಲೆಯನ್ನು ನವನಿರ್ಮಾಣ ಮ