ಕಂದಚಾರ, ಮೂಢನಂಬಿಕೆ ವಿರುದ್ಧ ಅರಿವು
ಕಂದಚಾರ ಮತ್ತು ಮೂಢನಂಬಿಕೆ ವಿರುದ್ದ ಅರಿವು ಮೂಡಿಸುವ ಕಾರ್ಯಕ್ರಮವನ್ನು ೨೧/೦೨/೧೯ ರ ಗುರುವಾರ ಬೆಳಿಗ್ಗೆ ೦೯:೦೦ ಗಂಟೆಗೆ ಗೊಲ್ಲರದೊಡ್ಡಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.ಚನ್ನಪಟ್ಟಣ ತಾಲ್ಲೂಕಿನ ದೇವರಹೊಸಹಳ್ಳಿ ಗ್ರಾಮದ ಬಳಿ ಇರುವ
ಪ್ರೀತಿಯಿಂದ ಎಲ್ಲವೂ ಸಾಧ್ಯ ಪೃಥ್ವಿ
ಪ್ರೀತಿಯಿಂದ ಅಡುಗೆ ತಯಾರಿಸುವುದು, ನಿಲಯದ ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸುವುದು ಮತ್ತು ಪ್ರೀತಿಯಿಂದ ಊಟ ಬಡಿಸುವುದು ಈ ಮೂರು ಅಂಶಗಳನ್ನು ನೀವು ಮನದಲ್ಲಿ ಇಟ್ಟುಕೊಂಡು ಪ್ರೀತಿಯಿಂದ ಕೆಲಸ ನಿರ್ವಹಿಸಿದರೇ ನಿಮಗೆ ಮತ್ತು ನಿಮ್ಮ ಹುದ್ದೆಗೆ ಗೌರವ ದೊರೆಯುತ್ತದೆ ಎಂದು ರಾಮನಗರ ಪ್ರೊಬೆಷನರಿ ಡಿವೈಎಸ್ಪಿ ಕುಮಾರಿ ಪೃಥ್ವಿ ತಿಳಿಸಿದರು.ಅವರು ಶ್ರೀ ಮಾರುತಿ ಅನುದಾನಿತ ಖಾಸಗಿ ವಿದ್ಯಾರ್ಥಿನಿಲಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾ
ಐಟಿಐ ತರಬೇತಿ ಭವಿಷ್ಯದ ಬೆಳಕು ಜಯಮುದ್ದಪ್ಪ
ಕೈಗಾರಿಕಾ ತರಬೇತಿ ಪಡೆದ ಕಾಲೇಜಿನ ಮಕ್ಕಳು ಭವಿಷ್ಯದ ಜ್ಞಾನಿಗಳಾಗುವುದರಲ್ಲಿ ಅನುಮಾನವಿಲ್ಲ ಎಂದು ಒಕ್ಕಲಿಗರ ಸಾರ್ವಜನಿಕ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಜಯಮುದ್ದಪ್ಪ ತಿಳಿಸಿದರು, ಅವರು ಇಂದು ಶಾಲೆಯ ಆವರಣದಲ್ಲಿ ಐಟಿಐ ಕಾಲೇಜಿನ ಸ್ಕಿಲ್ ಡೇ ಯನ್ನು ಉದ್ಘಾಟಿಸಿ ಮಾತನಾಡಿದರು.ಎಸ್ ಎಸ್ ಎಲ್ ಸಿ ಯ ನಂತರ ಐಟಿ
ಐವತ್ತು ಸಾವಿರ ಖರ್ಚು, ಐದು ಲಕ್ಷ ಬಿಲ್ ! ಹೊಂಗನೂರು ಜಿಲ್ಲಾ ಪಂಚಾಯತಿಯಲ್ಲಿ ಮತ್ತೊಂದು ದೋಖಾ!
ಹೊಂಗನೂರು ಜಿಲ್ಲಾ ಪಂಚಾಯತಿಯ ಅನುದಾನದಲ್ಲಿ *ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರ ನೆರಳಲ್ಲೇ* ಆರಂಕಿಯ ದೋಖಾ ನಡೆದಿದ್ದರೂ ಸಹ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಲಿ, ಮಾಹಿತಿ ಹಕ್ಕುದಾರರಾದ ವಿ ಜಿ ಕೃಷ್ಣೇಗೌಡ ಎಂಬುವವರು ನೀಡಿದ ದೂರಿನನ್ವಯ ಜಿಲ್ಲಾಧಿಕಾರಿಗಳಾಗಲಿ, ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದ ಕಾರ್ಯಪಾಲಕ ಅಭಿಯಂತರರಾಗಲಿ ಸಂಬಂಧಿಸಿದ ಇಂಜಿನಿಯರ್ ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕ ವಲಯದಲ್ಲಿ ಅನುಮಾನ ಮೂಡಿಸು
ಚಂದ್ರಗಿರಿದೊಡ್ಡಿ ಗ್ರಾಮದ ಗುಡ್ಡದ ಮೇಲೆ ಒಂದು ಪಾಳು ಬಂಗಲೆ
ರಾಮನಗರ ಚನ್ನಪಟ್ಟಣ ನಡುವಿನ ಕೆಂಗಲ್ ದೇವಾಲಯದ ಬಳಿ ಚಂದ್ರಗಿರಿದೊಡ್ಡಿ ಗ್ರಾಮದ ಗುಡ್ಡದ ಮೇಲೆ ಒಂದು ಪಾಳು ಬಂಗಲೆ ಇದೆ.ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೆಂಗಲ್ ಗೆ ಬಂದಾಗ ವಿಶ್ರಮಿಸಲು ಕಟ್ಟಿದ ಬಂಗಲೆ.ಈ ಬಂಗಲೆಯಲ್ಲಿ ಹಜಾರ, ಕೊಠಡಿ, ಊಟದ ಹಜಾರ, ಅಡುಗೆ ಮನೆ, ಸ್ನಾನದ ಮನೆ, ಕಕ್ಕಸು ಮನೆ ಮತ್ತು ಚಿಕ್ಕ ವರಾಂಡವನ್ನು
ದೈವ ಸನ್ನಿಧಿಯಲ್ಲಿ ಸಹಸ್ರಾರು ಭಕ್ತರ ನಡುವೆ ಕಗ್ಗೊಲೆ
ಪಾಂಡವಪುರ: ಗ್ರಾಮದೇವತೆ ದೇವಿರಮ್ಮನ ಹಬ್ಬದ ಆನಂದದಲ್ಲಿ ಮಿಂದೇಳುತ್ತಿದ್ದ ಗ್ರಾಮದ ಭಕ್ತ ವೃಂದದವರಿಗೆ ಬೆಳಗಿನ ಜಾವ ಮೂರು ಗಂಟೆಗೆ ದೇವರ ಮುಂದೆಯೇ ನಡೆದ ಕೊಲೆ ನೆರೆದಿದ್ದ ಸಹಸ್ರಾರು ಭಕ್ತರನ್ನು ಅಧೀರಗೊಳಿಸಿತು, ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.
ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮಾರಾಟ ದಂಡ ವಿಧಿಸಿದ ವೈದ್ಯಾಧಿಕಾರಿ
ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮಾರಾಟ ಮತ್ತು ಸೇವನೆ ತಪ್ಪು, ಮಿಗಿಲಾಗಿ ತಂಬಾಕು ಸೇವಿಸುವವರಿಗಿಂತಲೂ ಅಕ್ಕಪಕ್ಕದಲ್ಲಿರುವರಿಗೆ ಹೆಚ್ಚು ದುಷ್ಪರಿಣಾಮ ಬೀರುತ್ತದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ ರಾಜು ರವರು ತಿಳಿಸಿದರು, ಅವರು ಇಂದು ನಗರದ ಬೆಂಗಳೂರು ಮೈಸೂರು ಹೆದ್ದಾರಿಯ ಅಂಚಿನಲ್ಲಿರುವ ಅಂಗಡಿ ಮತ್ತು ಹೋಟೆಲ್ ಗಳಲ್ಲಿ ಬೀಡಿ, ಸಿಗರೇಟ್ ಮತ್ತು ಜಗಿಯುವ ತಂಬಾಕನ್ನು ಮುಟ್ಟುಗೋಲು ಹಾಕಿಕೊಂಡು ಮಾಲೀಕರಿಗೆ ಎಚ್ಚರಿಕೆ ನೀಡಿದರು.
ಕೋಮಾಗೆ ತೆರಳಿರುವ ಕುಶಲಕರ್ಮಿ ತರಬೇತಿ ಸಂಸ್ಥೆ
ಗತಕಾಲದ ತರಬೇತಿ ಸಂಸ್ಥೆಗೆ ಒಂದೇ ಹುದ್ದೆತಾಲ್ಲೂಕಿನ ಹಲವಾರು ಇಲಾಖೆಗಳ ಪೈಕಿ *ಕೈಗಾರಿಕೆ ಮತ್ತು ವಾಣಿಜ್ಯ* ಇಲಾಖೆಯೂ ಒಂದು, ನಗರದ ಹೃದಯ ಭಾಗದಲ್ಲಿ ಬ್ರಿಟಿಷರ ಕಾಲದ ಬಂಗಲೆಯಲ್ಲಿ ಗತವೈಭವ ಸಾರಬೇಕಾಗಿದ್ದ ಈ ಇಲಾಖೆ ಇಂದು ನೇಪಥ್ಯಕ್ಕೆ ಸರಿದು ಭೂತಬಂಗಲೆಯಾಗಿ ಪರಿವರ್ತಿತವಾಗಿರುವುದಲ್ಲದೆ ಡಿ ಗ್ರೂಪ್ ನ ಏಕವ್ಯಕ್ತಿಯ ಉಸ್ತುವಾರಿಯಲ್ಲಿ ಸಾಗುತ್ತಿದೆ. ಪ್ರಭಾರ ವಿಸ್ರರಣಾಧಿಕಾರಿಯಾಗಿ (ಮೂರು ತಾಲ್ಲೂಕಿಗೆ ಒಬ್ಬರೇ) ಪ್ರಕಾಶ್ ಎಂಬುವವರು ಆಗೊಮ
ಮೃತ ಯೋಧನ ಅಂತಿಮ ದರ್ಶನ ಪಡೆದ ರಾಮನಗರದ ಜನತೆ
ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಗುರುವಾರ ಸಂಭವಿಸಿದ ಭಯೋತ್ಪಾದನ ದಾಳಿಯಲ್ಲಿ 40 ಕ್ಕೂ ಹೆಚ್ಚು ಯೋಧರು ಮೃತ ಪಟ್ಟವರಲ್ಲಿ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಗುಡಿಗೆರೆ ಗ್ರಾಮದ ಹುತಾತ್ಮ ಗುರು ಅವರು ಒಬ್ಬರು. ಅವರ ಪಾರ್ಥಿವ ಶರೀರವು ಈ ದಿನ ಬೆಂಗಳೂರು - ಮೈಸೂರು ಹೆದ್ದಾರಿಯ ಮೂಲಕ ಸ್ವಗ್ರಾಮಕ್ಕೆ ತೆರಳುವಾಗ ರಾಮನಗರದ ಜನತೆಯು ಕೂಡ ವ
ಭೂಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ವಿರುದ್ಧ ಅವಿಶ್ವಾಸ ಮಂಡನೆ
ತಾಲ್ಲೂಕಿನ ಭೂಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ನಿಂಗೇಗೌಡ ವಿರುದ್ಧ ಹನ್ನೊಂದು ಜನ ಸದಸ್ಯರು ಉಪವಿಭಾಗಾಧಿಕಾರಿಗೆ ದೂರುಸಲ್ಲಿಸಿದ ಕಾರಣ ಇಂದು ಅಧಿಕಾರಿಗಳು ಮತ್ತು ಸದಸ್ಯರ ಸಮಕ್ಷಮದಲ್ಲಿ ಅವಿಶ್ವಾಸ ನಿರ್ಣಯವನ್ನು ಮಂಡಿಸಲಾಯಿತು.ಭೂಹಳ್ಳಿ, ಮೆಣಸಿಗನಹಳ್ಳಿ, ತಾಂಡ್ಯ, ಉಜ್ಜನಹಳ್ಳಿ, ಅರಳುಕುಪ್ಪೆದೊಡ್ಡಿ, ಬುಕ್ಕಸಾಗರ ಮತ್ತು ಪೀಹಳ್ಳಿದೊಡ್ಡಿ ಗ್ರಾಮ ಸೇರಿದಂತೆ ಏಳು ಗ್ರಾಮಗಳ ಹದಿನಾರು ಮಂದಿ ಸದಸ್ಯರಲ್ಲಿ ಹನ್ನೊಂದು ಮಂ