ಮತದಾನದ ಚೀಟಿ ಹೊಂದಿದ್ದು ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಆತ ಮತದಾನ ಮಾಡಲು ಅವಕಾಶವಿಲ್ಲ ಡಾ ಯತೀಶ್ ಉಲ್ಲಾಳ
ಮತದಾನದ ಗುರುತಿನ ಚೀಟಿ ಹೊಂದಿದ್ದು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಆ ಮತದಾರನಿಗೆ ಮತ ಚಲಾಯಿಸಲು ಕಾನೂನಿನಲ್ಲಿ ಅವಕಾಶ ಇಲ್ಲ ಇದನ್ನು ಈಗಲೇ ಪರಿಶೀಲಿಸಿಕೊಳ್ಳಬೇಕೆಂದು ಸಹಾಯಕ ಚುನಾವಣಾಧಿಕಾರಿ ಡಾ.ಯತೀಶ್ ಉಲ್ಲಾಳ ತಿಳಿಸಿದರು.ಅವರು ಇಂದು ತಾಲ್ಲೂಕು ಕಛೇರಿಯ ಸಭಾಂಗಣದಲ್ಲಿ ಕರೆದಿದ್ದ ಮಾಧ್ಯಮ, ಅಧಿಕಾರಿಗಳು ಹಾಗೂ ರಾಜಕೀಯ ಮುಖಂಡರಿಗೆ ಮಾಹಿತಿ ನೀಡಿ,ಈಗಾಗಲೇ ಮತದಾನ ಮಾಡಲು ಮತದಾರರ ಹೆಸರನ್ನು ಸೇರ್ಪಡಿಸ
ತಾಲ್ಲೂಕಿನಾದ್ಯಂತ ೨೯೭೭ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪರೀಕ್ಷೆಗೆ ತಯಾರಿ
ಚನ್ನಪಟ್ಟಣ ತಾಲ್ಲೂಕಿನಾದ್ಯಂತ ೨೧/೦೩/೨೦೧೯ ರ ಗುರುವಾರದಿಂದ ೦೪/೦೪/೨೦೧೯ ರ ಗುರುವಾರದ ತನಕ ಒಟ್ಟು ೨೯೭೭ ಮಕ್ಕಳು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಾಹಿತಿ ನೀಡಿದೆ.ಒಟ್ಟು ೧೪ ಪರೀಕ್ಷಾ ಕೇಂದ್ರಗಳಲ್ಲಿ ಸರ್ಕಾರಿ ಶಾಲೆಗಳ ೬೩೯ ಗಂಡು ಮಕ್ಕಳು, ೭೫೧ ಹೆಣ್ಣು ಮಕ್ಕಳು, ಅನುದಾನಿತ ಶಾಲೆಗಳ ೪೧೧ ಗಂಡು ಮಕ್ಕಳು, ೨೯೭ ಹೆಣ್ಣು ಮಕ್ಕಳು, ಅನುದಾನ ರಹಿತ ಶಾಲೆಗಳ ೪೮೩ ಗಂಡ
ಪೌರಾಣಿಕ ಹಿನ್ನೆಲೆಯ ರತಿಮನ್ಮಥ ರ ಕಾಮನ ಹಬ್ಬ
ಗಿರಿಜಾ ಕಲ್ಯಾಣ ನಂತರ ದಕ್ಷಬ್ರಹ್ಮ ಮಾಡುವ ಯಜ್ಞ ನಂತರ ಅದೇ ಯಜ್ಞದ ಕೊಂಡಕ್ಕೆ ಬಿದ್ದು ಪ್ರಾಣಾರ್ಪಣೆ ಮಾಡುವ ಗಿರಿಜೆ, ಶಿವನ ರುದ್ರನರ್ತನ, ಬೆವರಿನಿಂದ ಹುಟ್ಟಿದ ವೀರಭದ್ರ, ಶಿವನ ಕೋಪ ತಣಿಸಲು ಮನ್ಮಥ ಹೂಡುವ ಹೂಬಾಣ, ರತಿಯ ಕೋರಿಕೆ ಮೇರೆಗೆ ಪ್ರಾಣಭಿಕ್ಷೆ ಇವೆಲ್ಲಾ ಪುರಾಣಕಾಲದ ಕಥೆಗಳ ಪಾತ್ರಗಳೇ ಇಂದಿನ ಕಾಮನ ಹಬ್ಬವಾಗಿ ಆಚರಣೆಯಲ್ಲಿವೆ.
ಅಧಪತನದತ್ತ ರೇಷ್ಮೆ ಕೃಷಿ ತರಬೇತಿ ಸಂಸ್ಥೆ
ರೇಷ್ಮೆ ಬಿತ್ತನೆ ಕೋಠಿರೇಷ್ಮೆ ಬಿತ್ತನೆ ಎಂದರೆ ಕರಿಕಲ್ ಫಾರಂ ಎಂದೇ ಸುಪ್ರಸಿದ್ಧವಾಗಿದ್ದ ಕರ್ನಾಟಕ ಸರ್ಕಾರದ ರೇಷ್ಮೆ ಕೃಷಿ ತರಬೇತಿ ಸಂಸ್ಥೆಯು ಇಂದು ಕೇವಲ ಹೆಸರಿಗಷ್ಟೇ ಸೀಮಿತವಾಗಿದ್ದು, ಪಾಳು ಬಿದ್ದ ಕಛೇರಿಗಳು, ವಸತಿ ನಿಲಯಗಳು, ಕೇವಲ ಹಾಜರಾತಿಗಾಗಿ ಬಂದೋಗುವ ಸಿಬ್ಬಂದಿಗಳು, ಏನೋ ಒಂದಷ್ಟು ಮಾಡಿದರೆ ಸಾಕು ಎಂಬ ಮನೋಭಾವ ಉಳ್ಳ ಅಧಿಕಾರಿಗಳು, ಎಲ್ಲಾ ಸವಲತ್ತುಗಳು ಇದ್ದರೂ ಖಾಸಗಿ ಮೊಟ್ಟೆ ಮತ್ತು ಚಾಕಿ ಸಾಕಾಣಿಕೆದಾರರಿಗೆ ಒತ್ತು ಕೊಟ್ಟು
ಡಿಕೆ ಸಹೋದರರ ಸವಾಲು ಸ್ವೀಕರಿಸಿದ ಸಿಪಿವೈ
ದೇಶದ ಭವಿಷ್ಯ ನೋಡಿ, ಮೋದಿಯವರು ದೇಶ ನಡೆಸುವ ರೀತಿ ನೋಡಿ ಜನ ಮತ ಹಾಕುತ್ತಾರೆಯೇ ವಿನಹ ದರ್ಪಕ್ಕೆ ಹೆದರಿ ಮತ ಹಾಕುವ ಮತದಾರರು ಇಂದಿಲ್ಲ, ಮೋದಿ ವಿರುದ್ಧ ನಿಂತು ಗೆಲ್ತಿನಿ ಎಂದು ಹೇಳುವ ಹುಂಬತನ, ತೋಳ್ಬಲ, ಹಣ ಬಲಕ್ಕೆ ಹೆದರುವುದಿಲ್ಲ ಎಂದು ಚನ್ನಪಟ್ಟಣ ಕ್ಷೇತ್ರದ ಮಾಜಿ ಶಾಸಕ ಸಿ ಪಿ ಯೋಗೇಶ್ವರ್ ಡಿ ಕೆ ಸಹೋದರರ ಸವಾಲನ್ನು ಸ್ವೀಕರಿಸುವುದಾಗಿ ತಿಳಿಸಿದರು.ಅವರು ಹೆದ್ದಾರಿಯ ಜಾನಪದ ಲೋಕದ ಕಾಮತ್ ಹೋಟೆಲ್ ನಲ್ಲಿ ಕರೆದಿದ್ದ ಪತ್ರಿ
ಪರಮಪೂಜ್ಯ ಡಾ. ನಿರ್ಮಲಾನಂದನಾಥ ಸ್ವಾಮೀಜಿಗಳಿಗೆ ಗುಲ್ಬರ್ಗಾ ವಿವಿ ಯಿಂದ ಪಿ ಎಚ್ ಡಿ ಪದವಿ
ನಾಥ ಸಂಪ್ರದಾಯದ ಮಹಾ ಕ್ಷೇತ್ರ ಎನಿಸಿಕೊಂಡಿರುವ ಶ್ರೀ ಕಾಲಭೈರವೇಶ್ವರ ಸ್ವಾಮಿ ನೆಲೆನಿಂತ ಆದಿಚುಂಚನಗಿರಿ ಕ್ಷೇತ್ರದ ೭೨ ನೇ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಡಾ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ಸಂಸ್ಕೃತ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ ಪಿ ಬಿ ಸಂತಪ್ಪ ನವರ ಮಾರ್ಗದರ್ಶನದಲ್ಲಿ ಅಧ್ಯಯನ ಕೈಗೊಂಡು ಮಂಡಿಸಿದ ನಾಥ ಸಂಪ್ರದಾಯ ಒಂದು ಸಾಂಸ್ಕೃತಿಕ ಅಧ್ಯಯನ ಎಂಬ ಮಹಾ ಪ್ರಬಂಧಕ್ಕೆ ಪ್ರತಿಷ್ಠಿತ ಗುಲ್ಬರ್ಗಾ ವಿಶ್
ಯಾವುದೇ ಅಡ್ಡಿ ಇಲ್ಲದೆ ಪಿಯುಸಿ ಪರೀಕ್ಷೆ, ಸೋಮವಾರ ಕೊನೇದಿನ
ರಾಜ್ಯಾದ್ಯಂತ ಇದೇ ತಿಂಗಳ ಒಂದನೇ ತಾರೀಖಿನಿಂದ ಪದವಿ ಪೂರ್ವ ಪರೀಕ್ಷೆಗಳು ನಡೆಯುತ್ತಿದ್ದು ಸೋಮವಾರ ಕೊನೆಗೊಳ್ಳಲಿದೆ.ಹಲವಾರು ಭಾಷೆಗಳನ್ನೊಳಗೊಂಡ ಮೂವತ್ತೇಳು ವಿಷಯಗಳ ಪರೀಕ್ಷೆ ಗಳು ನಗರದ ಮೂರು ಪ್ರತಿಷ್ಠಿತ ಕಾಲೇಜುಗಳಾದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಮತ್ತು ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ಬೆಳಿಗ್ಗೆ ೧೦:೧೫ ರಿಂದ ಮಧ್ಯಾಹ್ನ ೦೧:೩೦ ರ ಸಮಯದಲ್ಲಿ ನಡೆಯುತ್ತಿದ್ದು
ಕೆರೆಗೆ ನೀರು ಬಿಡಲು ಆಗ್ರಹಿಸಿ ಹೊಂಗನೂರು ಗ್ರಾಮದಲ್ಲಿ ಧರಣಿ
ಸಂತೆಮೊಗಳ್ಳಿದೊಡ್ಡಿ ಕೆರೆಗೆ ನೀರು ತುಂಬಿಸಿಲ್ಲ ಎಂದು ಗ್ರಾಮದ ರೈತರು ಇಂದು ಹೊಂಗನೂರು ಗ್ರಾಮದಲ್ಲಿ ರಸ್ತೆ ತಡೆ ನಡೆಸಿ ಅಧಿಕಾರಿಗಳು, ಡಿ ಕೆ ಶಿವಕುಮಾರ್ ಗೆ ಧಿಕ್ಕಾರ ಕೂಗುವ ಮೂಲಕ ಪ್ರತಿಭಟನೆ ನಡೆಸಿದರು.ಹೊಡಿಕೆ ಹೊಸಹಳ್ಳಿ ಕೆರೆಗೆ ಡಿಸೆಂಬರ್ ನಲ್ಲಿ ನೀರು ತುಂಬಿಸಿದ್ದು ಕೋಡಿ ಹರಿದ ನೀರು ನಮ್ಮ ಕೆರೆಗೆ ಬರಬೇಕಾಗಿತ್ತು, ತುಂಬಿದ ಮರುಕ್ಷಣವೇ ನಿಲ್ಲಿಸಿ ನಮ್ಮ ಕೆರೆಗೆ ನೀರು ಹರಿಸಲಿಲ್ಲ, ಹೊಂಗನೂರು ಕೆರೆ ಇಷ್ಟು
ತಾಲ್ಲೂಕಿನಾದ್ಯಂತ ಯಶಸ್ವಿಗೊಂಡ ಪಲ್ಸ್ ಪೋಲಿಯೊ
ಐದು ವರ್ಷ ಒಳಪಟ್ಟ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆಯನ್ನು ತಾಲ್ಲೂಕಿನಾದ್ಯಂತ ಯಶಸ್ವಿಯಾಗಿ ನೀಡಲಾಯಿತು.ತಾಲ್ಲೂಕು ವೈದ್ಯಾಧಿಕಾರಿ ಡಾ ರಾಜು ನೇತೃತ್ವದಲ್ಲಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಂಗನವಾಡಿಗಳು ಸೇರಿದಂತೆ ಬೆಳಿಗ್ಗೆ ಯಿಂದ ಸಂಜೆ ತನಕವೂ ಪಲ್ಸ್ ಪೋಲಿಯೊ ಲಸಿಕೆಯನ್ನು ಮಕ್ಕಳಿಗೆ ನೀಡಲಾಯಿತು.ತಾಲ್ಲೂಕು ವೈದ್ಯಾಧಿಕಾರಿ ರಾಜು ರವರು ಮಾತನಾಡಿ ಪೋಷಕರು ಈ ಮೊದಲು ಲಸಿಕೆಯನ್ನು ಹಾಕಿಸಿದ್ದರೂ
ಹುಟ್ಟಿನಿಂದ ಸಾವಿನವರೆಗೂ ಅವಳಿಗೆ ಮಹಿಳಾ ದಿನವೇ, ಸುಮಂಗಲ
ಯಾವಾಗ ಹೆಣ್ಣು ಜನ್ಮ ತಳೆಯುತ್ತಾಳೋ ಅಂದಿನಿಂದ ಮತ್ತೊಂದು ಮನೆಯಲ್ಲಿ ಹೋಗಿ ಆ ಮನೆಯ ದೀಪವನ್ನು ಬೆಳಗಿ ಅಸುನೀಗುವ ವರೆಗೂ ಆಕೆಗೆ ಪ್ರತಿದಿನ, ಪ್ರತಿಕ್ಷಣವೂ ಮಹಿಳೆಯ ದಿನವೇ, ಬೆಳಿಗ್ಗೆ ಎದ್ದು ಮನೆ ಮುಂದೆ ನೀರು ಹಾಕಿ, ರಂಗೋಲಿ ಬಿಡಿಸಿ, ಅಡುಗೆ ಮಾಡಿ ಮಕ್ಕಳು ಮನೆಯವರಿಗೆ ಬಡಿಸಿ, ತೊಳೆದು ಬಂದವರನ್ನು ಉಪಚರಿಸಿ, ಸಂತೈಸಿ ರಾತ್ರಿ ಹಾಸಿಗೆ ಹಾಕಿ ಮಲಗುವವರೆಗೂ ಆಕೆ ಹೆಣ್ಣಾಗಿಯೇ ವರ್ತಿಸುತ್ತಾಳೆ, ಪ್ರೀತಿಸುತ್ತಾಳೆ, ಸತ್ಕರಿಸುತ್ತಾಳೆ, ಹೆಣ್ಣಾಗಿಯೇ