ಮಳೆಗಾಳಿಗೆ ತುಂಡಾದ ರೈಲ್ವೆ ವಿದ್ಯುತ್ ತಂತಿ, ಒಂದು ಗಂಟೆ ತಡವಾದ ಪ್ರಯಾಣ
ಚನ್ನಪಟ್ಟಣ: ಇಂದು ಸಂಜೆ ಸುರಿದ ಗಾಳಿ ಸಮೇತ ಮಳೆಗೆ ಬಿಡದಿಯ ಬಳಿ ಇರುವ ಎಲೆಕ್ಟ್ರಾನಿಕ್ ಕಛೇರಿಯಲ್ಲಿ ವಿದ್ಯುತ್ (sub station power supply) ಮುಗ್ಗರಿಸಿದ್ದರಿಂದ ಬೆಂಗಳೂರು ಮೈಸೂರು ನಡುವೆ ಚಲಿಸುವ ಎಲ್ಲಾ ರೈಲುಗಳು ಒಂದು ಗಂಟೆ ತಡವಾಗಿ, ಪ್ರಯಾಣಿಕರು ಆತಂಕಕ್ಕೀಡಾದ ಸಂಗತಿ ಜರುಗಿತು.ಬಿಡದಿಯ ಎಸ್ ಎಸ್ ಪಿ ಯಲ್ಲಿ ಮುಗ್ಗರಿಸಿದ ವಿದ್ಯುತ್ ತಂತಿಯ ಪರಿಣಾಮ ಚನ
ಕಾಯಕ, ಕನಸು ಮತ್ತು ನಡವಳಿಕೆಯೇ ವ್ಯಕ್ತಿತ್ವ ವಿಕಸನ ಪ್ರೊ ಪ್ರಸನ್ನಕುಮಾರ್
ಕಾಯಕ ಮಾಡುವುದು, ಮನಸ್ಸನ್ನು ಸದೃಢಗೊಳಿಸುವುದು, ಕನಸು ಕಾಣುವುದು, ಆ ಕನಸುಗಳನ್ನು ಸ್ಪಷ್ಟತೆಯ ಗುರಿಯೊಟ್ಟಿಗೆ ನಡವಳಿಕೆಗಳ ಮೂಲಕ ಯಶಸ್ವಿಗೊಳಿಸುವುದೇ ವ್ಯಕ್ತಿತ್ವ ವಿಕಸನ ಎಂದು ಮೈಸೂರು ಸಿದ್ಧಾರ್ಥಕಾಲೇಜಿನ ಸಹಾಯಕ ಇಂಗ್ಲಿಷ್ ಪ್ರಾಧ್ಯಾಪಕ ಪ್ರಸನ್ನ ಕುಮಾರ್ ತಿಳಿಸಿದರು.ಅವರು ಸರ್ಕಾರಿ ಪ್ರಥಮ ದರ್ಜ
ಜಿದ್ದಾ ಜಿದ್ದಿಯಲ್ಲಿ ಗೆದ್ದ ಜಯಮುತ್ತು
ಐದು ವರ್ಷಗಳ ಅವಧಿಗೆ ನಡೆದ ಬಮೂಲ್ ಚುನಾವಣೆಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗೆ ಚುನಾವಣೆ ನಡೆದಿದ್ದು ಚನ್ನಪಟ್ಟಣ ತಾಲ್ಲೂಕಿನಲ್ಲಿ ಜೆಡಿಎಸ್ ಧುರೀಣರು ಸ್ಪರ್ಧಿಸಿದ್ದು ಹಾಲಿ ನಿರ್ದೇಶಕ ಕೇಂಬ್ರಿಡ್ಜ್ ಶಾಲೆಯ ಸಂಸ್ಥಾಪಕ ಎಸ್ ಲಿಂಗೇಶ್ ಕುಮಾರ್ ರವರನ್ನು ಜೆಡಿಎಸ್ ಹಾಲಿ ತಾಲ್ಲೂಕು ಅಧ್ಯಕ್ಷ ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಜಯಮುತ್ತು ಇಪ್ಪತ್ಮೂರು ಮತಗಳಿಂದ ಸೋಲಿಸಿ ಜಯಭೇರಿ ಬಾರಿಸಿದ್ದಾರೆ.
ಮಾವು ಬೆಳೆಗಾರರ ಹಿತ ಕಾಯಲು ಬದ್ದ ನಿರ್ದೇಶಕ ಡಾ ವೆಂಕಟೇಶ್
ರೈತ ಬೆಳೆದ ಮಾವಿನ ಹಣ್ಣುಗಳಿಗೆ ನೇರ ಮತ್ತು ಮುಕ್ತ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ತೋಟಗಾರಿಕೆ ನಿರ್ದೇಶಕ ಡಾ ಎಂ ಎ ವೆಂಕಟೇಶ್ ಹೇಳಿದರು.ಅವರು ರಾಮನಗರ ಚನ್ನಪಟ್ಟಣ ಹೆದ್ದಾರಿಯಲ್ಲಿರುವ ಜಾನಪದ ಲೋಕದ ಬಳಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ ಹಾಗೂ ತೋಟಗಾರಿಕೆ ಕ್ಷೇತ್ರದಲ್ಲಿ ಬೆಳೆಸುವ ಕಸಿ ಹಣ್ಣಿನ ಸಸಿಗಳ ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.ಈ ಸಾಲಿನ ಮಾವ
ಸಾಧನೆ ಗೆ ಬಾಹ್ಯ ಸೌಂದರ್ಯ ಮುಖ್ಯವಲ್ಲ ಪ್ರೊ ಕೃಷ್ಣೇಗೌಡ
ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಲು ಗುರುವಿನ ಮಾರ್ಗದರ್ಶನ ಇರಬೇಕು, ಗುರಿ ಮುಟ್ಟುವ ಛಲ ಇರಬೇಕೆ ಹೊರತು ಮುಖದ ಅಂದ ಚಂದ, ದೇಹದ ಸೌಂದರ್ಯ ಮುಖ್ಯವಾಗುವುದಿಲ್ಲ ಎಂದು ವಾಗ್ಮಿ ಪ್ರೊ ಕೃಷ್ಣೇಗೌಡ ಹೇಳಿದರು.ಅವರು ಆದಿಚುಂಚನಗಿರಿ ಮಹಾಸಂಸ್ಥಾನ ದ ರಾಮನಗರ ಶಾಖಾ ಮಠದಲ್ಲಿ ಆಯೋಜನೆಗೊಂಡಿದ್ದ ೨೨ ನೇ ರಾಜ್ಯ ಮಟ್ಟದ ಮಹಿಳಾ ಜನ ಜಾಗೃತಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳ ಕುರಿತು ಮಾತನಾಡಿದರು.
ವಿದ್ಯಾರ್ಥಿಯನ್ನು ಗುರಿಯೆಡೆಗೆ ಕರೆದೊಯ್ಯಲು ಗುರುಗಳಿಂದ ಮಾತ್ರ ಸಾಧ್ಯ, ಚಿಕ್ಕವೀರಯ್ಯ
ನುಗ್ಗಿ ನಡೆ ಮುಂದೆ ನುಗ್ಗಿ ನಡೆ ಮುಂದೆ ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ* ಎಂಬ ಕುವೆಂಪು ರವರ ಗೀತೆಯ ಸಾಲುಗಳೇ ಗುರಿಯೆಡೆಗೆ ತಲುಪಿಸುವ ಮಾರ್ಗವನ್ನು ಉಲ್ಲೇಖಿಸಿವೆ,ವಿದ್ಯೆ ಆಗಲಿ, ಸಂಸ್ಕಾರ ಆಗಲಿ, ಗುರುವಿನ ಮಾರ್ಗದರ್ಶನದಲ್ಲಿ ಶಿಕ್ಷಿತವಾಗಿ ಮುನ್ನಡೆದರೆ ಗುರಿ ಸಾಧ್ಯ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಚಿಕ್ಕವೀರಯ್ಯ ತಿಳಿಸಿದರು.
ಪುರಾತನ ಭಾರತದ ಮಹಿಳೆಯರ ಸಂಸ್ಕೃತಿ ಅಮರ, ಜಾನಪದ ವಿದ್ವಾಂಸ ಡಾ ಕುರುವ ಬಸವರಾಜು
ಪುರಾತನ ಭಾರತದ ಮಹಿಳೆಯರ ಸಂಸ್ಕೃತಿ ಎಂದೆಂದಿಗೂ ಅಮರವಾದದ್ದು, ಎಲ್ಲಾ ಪದಗಳು ಮತ್ತು ಸಂಸ್ಕಾರಗಳಿಗೆ ಮೂಲ ಜಾನಪದ, ಜಾನಪದಕ್ಕೆ ಮೂಲ ಭಾರತದ ಪುರಾತನ ಮಹಿಳೆಯರು ಎಂದು ಜಾನಪದ ವಿದ್ವಾಂಸ, ಜಾನಪದ ಲೋಕದ ಆಡಳಿತ ಅಧಿಕಾರಿ ಡಾ ಕುರುವ ಬಸವರಾಜು ತಿಳಿಸಿಕೊಟ್ಟರು.ಅವರು ಆದಿಚುಂಚನಗಿರಿ ಮಹಾಸಂಸ್ಥಾನದ ವತಿಯಿಂದ ರಾಮನಗರ ಶಾಖಾ ಮಠದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ೨೨ ನೇ ಮಹಿಳಾ ಜನ ಜಾಗೃತಿ ತರಬೇತಿ ಶಿಬಿರದಲ್ಲಿ ಜಾನಪದ ಉಳಿವಿನಲ್ಲಿ ಮಹಿಳ
ಪ್ರಾಕೃತಿಕ ಆಹಾರ ಸೇವಿಸಿ ಆರೋಗ್ಯವಂತರಾಗಿ ಕಲ್ಪನಾ ಶಿವಣ್ಣ
ಇಂದಿನ ಮಕ್ಕಳು ಪಿಜ್ಜಾ, ಬರ್ಗರ್, ಇನ್ನಿತರೆ ಬೇಕರಿ ತಿನಿಸುಗಳನ್ನು ತಿಂದು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ವಿಷಾದನೀಯ ಎಂದು ಮಾಗಡಿ ತಾಲ್ಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕಲ್ಪನಾ ಶಿವಣ್ಣ ಅಭಿಪ್ರಾಯ ಪಟ್ಟರು.ಅವರು ಆದಿಚುಂಚನಗಿರಿ ಮಹಾಸಂಸ್ಥಾನ
ಹೆರಿಗೆ ಸಮಯದಲ್ಲಿ ತಾಯಿ ಸಾವು, ಬಾಲು ಆಸ್ಪತ್ರೆಯಲ್ಲಿ ದುರ್ಘಟನೆ, ಸಂಬಂಧಿಕರು ಮತ್ತು ಸಾರ್ವಜನಿಕರಿಂದ ಧರಣಿ
ಚನ್ನಪಟ್ಟಣ: ನಗರದ ಪಾರ್ವತಿ ಟಾಕೀಸ್ ಬಳಿ ಇರುವ ಬಾಲು ಆಸ್ಪತ್ರೆ ಯಲ್ಲಿ ವೈದ್ಯರ ನಿರ್ಲಕ್ಷ್ಯ ದಿಂದ ಹೆರಿಗೆ ಸಮಯದಲ್ಲಿ ತಾಯಿ ಮೃತ ಪಟ್ಟಿದ್ದಾರೆ ಎಂದು ಸಂಬಂಧಿಕರು, ಮಳೂರು ಪಟ್ಟಣ ಗ್ರಾಮ, ಬೇವೂರು ಗ್ರಾಮ, ದೇವರಹೊಸಹಳ್ಳಿ ಗ್ರಾಮ ಮತ್ತು ಸಾರ್ವಜನಿಕರಿಂದ ಆಸ್ಪತ್ರೆ ಮುಂದೆ ಧರಣಿ ನಡೆಸಿ ನ್ಯಾಯಕ್ಕಾಗಿ
ಪ್ರತಿ ಹೆಣ್ಣಿಗೂ ಗಂಡಿನಷ್ಟೇ ಅಧಿಕಾರವಿದೆ, ಹಿರಿಯ ಸಿವಿಲ್ ನ್ಯಾಯಾಧೀಶೆ ಅನಿತಾ
ನಮ್ಮ ದೇಶದ ಸಂವಿಧಾನದಲ್ಲಿ ಸಮಾನತೆಯ ದೃಷ್ಟಿಯಿಂದ ಪುರುಷರಿಗೆ ಏನೇನು ಅಧಿಕಾರ ಇದೆಯೋ ಅಷ್ಟೇ ಅಧಿಕಾರ ಪ್ರತಿ ಹೆಣ್ಣಿಗೂ ಇದೆ, ಕಾನೂನಿನ ಜ್ಞಾನವನ್ನು ಈಗಿನಿಂದಲೇ ಅಳವಡಿಸಿಕೊಂಡರೆ ಭವಿಷ್ಯದ ಬದುಕಿನಲ್ಲಿ ಬರುವ ಎಡರುತೊಡರುಗಳನ್ನು ನಿವಾರಿಸಿಕೊಳ್ಳಬಹುದು ಎಂದು ರಾಮನಗರ ದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಅನಿತಾ ರವರು ಮಕ್ಕಳಿಗೆ ತಿಳಿಸಿಕೊಟ್ಟರು.ಅವರು ಆದಿಚುಂಚನಗಿರಿ ಮಹಾಸಂಸ್ಥಾನ ಅರ್ಚಕರಹಳ್ಳಿ ಶಾಖಾ ಮಠದಲ್ಲಿ ಹಮ್ಮಿಕೊಂಡಿ