ಭೀಮನ ಅಮವಾಸ್ಯೆ ಪ್ರಯುಕ್ತ ಸಾರ್ವಜನಿಕರಿಗೆ ಜೈನ್ ಸಂಘದ ವತಿಯಿಂದ ಉಚಿತ ಉಪಹಾರ
ಚನ್ನಪಟ್ಟಣ: ಭೀಮನ ಅಮಾವಾಸ್ಯೆ ಪ್ರಯುಕ್ತ ತಾಲ್ಲೂಕು *ಜೈನ ಸಂಘದ* ವತಿಯಿಂದ ನಗರದ ಜಯಚಾಮರಾಜೇಂದ್ರ ಒಡೆಯರ್ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ೬೦೦ ಮಂದಿ ಸಾರ್ವಜನಿಕರಿಗೆ ಉಚಿತವಾಗಿ ಟೋಕನ್ ನೀಡಿ ಉಪಹಾರ ನೀಡುವ ಮೂಲಕ ದೈತ್ಯ ಭೀಮನ ಅಮವಾಸ್ಯೆ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.ಈ ಮೊದಲೇ ಇಂದಿರಾ ಕ್ಯಾಂಟೀನಿನಲ್ಲಿ ೬೦೦ ಟೋಕನ್ ಗಳನ್ನು ಖರೀದಿಸ
ಎನ್ ಸಿ ಸಿ ಮಕ್ಕಳಿಂದ ಕೆಂಗಲ್ ನಲ್ಲಿ ಸ್ವಚ್ಚತಾ ಕಾರ್ಯಕ್ರಮ
ಎನ್ ಸಿ ಸಿ ಮಕ್ಕಳು ಮತ್ತು ಅಧಿಕಾರಿಗಳು ಇಂದು ಕೆಂಗಲ್ ದೇವಾಲಯ, ಕೆಂಗಲ್ ಗ್ರಾಮ ಮತ್ತು ಚಂದ್ರಗಿರಿದೊಡ್ಡಿ ಯಲ್ಲಿ ಹಮ್ಮಿಕೊಂಡಿದ್ದ ಸ್ವಚ್ಚತಾ ಕಾರ್ಯಕ್ರಮಕ್ಕೆ ಕರ್ನಲ್ ಜೆ ಎನ್ ಕುಮಾರ್ ಚಾಲನೆ ನೀಡಿದರು.ಚಾಲನೆ ನೀಡಿ ಮಾತನಾಡಿದ ಅವರು ಸ್ವಚ್ಚತೆ ಎನ್ನುವುದು ನಮ್ಮ ರಕ್ತಗತವಾಗಿ ಬರಬೇಕು, ಯಾರೋ ಹೇಳಿದರು, ಮಾಡಬೇಕಲ್ಲಾ ಎಂದು ಮಾಡುವುದು ಸ್ವಚ್ಚತಾ ಕಾರ್ಯಕ್ರಮ ಅಲ್ಲಾ.ಪ್ರತಿ ನಿತ್ಯ ನಮ್ಮ ದೇಹವನ್ನು ಹೇಗೆ ಶ
ಕೂಟಗಲ್ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಯಶಸ್ವಿ
ಕೂಟಗಲ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ರಾಮನಗರ ತಾಲ್ಲೂಕಿನ ಅರೇಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸುತ್ತಮುತ್ತ ಇರುವ ೧೪ ಶಾಲೆಗಳಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿದಂತೆ ಸುಮಾರು ೫೦೦ ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಯಲ್ಲೋ ಅಂಡ್ ರೆಡ್ ಫೌಂಡೇಷನ್ಸ್ ಮತ್ತು ರೋಟರಿ ಸಿಲ್ಕ್ ಸಿಟಿ ರಾಮನಗರ ಸಂಸ್ಥೆಗಳ ಸಹಯೋಗದೊಂದಿಗೆ
ಅದ್ದೂರಿ ಸ್ವಾತಂತ್ರ್ಯ ದಿನಾಚರಣೆ ದಂಡಾಧಿಕಾರಿ ಸುದರ್ಶನ್
ಚನ್ನಪಟ್ಟಣ: ೭೩ ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಪ್ರತಿ ವರ್ಷದಂತೆ ಅದ್ದೂರಿಯಾಗಿ ನಗರದ ಬಾಲಕರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಚರಿಸಲಾಗುವುದು ಎಂದು ನೂತನ ತಹಶಿಲ್ದಾರ್ ಸುದರ್ಶನ್ ತಿಳಿಸಿದರು.ತಮ್ಮ ಕಛೇರಿಯಲ್ಲಿ ಕರೆದಿದ್ದ ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಮುಖಂಡರು ಮತ್ತು ಅಧಿಕಾರಿಗಳ ಜೊತೆ ಚರ್ಚಿಸಿದ ನಂತರ ಈ ವಿಷಯ ತಿಳಿಸಿದರು.
ತಾಲ್ಲೂಕು ಪಂಚಾಯತಿಯಲ್ಲಿ ನೀರಸ ಸಭೆ
ಚನ್ನಪಟ್ಟಣ: ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಇಂದು ಸ್ಥಾಯಿ ಸಮಿತಿಯ ಮೂರು ಸಭೆಗಳು ನಡೆದಿದ್ದು ಎಲ್ಲಾ ಸಭೆಯೂ ಬಸಭೆಗಲಕು ವಾಗಿ ಜರುಗಿದವು, ಬೆರಳೆಣಿಕೆ ಸದಸ್ಯರು ಮತ್ತು ಡಜನ್ ಅಧಿಕಾರಿಗಳನ್ನು ಬಿಟ್ಟರೆ ಮಿಕ್ಕವರು ಇತ್ತ ತಲೆ ಹಾಕಲೇ ಇಲ್ಲ, ಇನ್ನೂ ಸ್ಥಾಯಿ ಸಮಿತಿಯ ಅಷ್ಟೂ ಸದಸ್ಯರು ಮತ್ತು ಎಲ್ಲಾ ಅಧಿಕಾರಿಗಳು ಬರದಿದ್ದರಿಂದ ನೆಪ ಮಾತ್ರಕ್ಕೆ ಸಭೆ ನಡೆದಿದ್ದು ಸದಸ್ಯರು ಮತ್ತು ಅಧಿಕಾರಿಗಳ
ಗುರಿ ಇಲ್ಲದ ವಿದ್ಯೆ ಗುಲಾಮ ಗಿರಿಗೆ ಸಮ, ನವೀನ ಧನವಂತ್
ಚನ್ನಪಟ್ಟಣ: ವಿದ್ಯಾರ್ಥಿಗಳು ವಿದ್ಯೆಯನ್ನು ಕಲಿಯುವ ಸಮಯದಲ್ಲೇ ಒಂದು ನಿರ್ದಿಷ್ಟ ಗುರಿ ಇಟ್ಟುಕೊಂಡು ಕಲಿಯಬೇಕು, ಕನಸು ಮತ್ತು ಗುರಿ ಇಲ್ಲದೇ ಕೇವಲ ಓದಬೇಕು ಎಂದು ಓದಿದರೆ ಅದರಲ್ಲಿ ಅಂಕಗಳನ್ನು ಗಳಿಸುವುದನ್ನು ಬಿಟ್ಟು ಬೇರೇನೂ ಸಾಧಿಸಲಾಗುವುದಿಲ್ಲ ಎಂದು ಮಾತಿನ ಕೌಶಲ ತರಬೇತುದಾರ ನವೀನ ಧನವಂತ ಹೇಳಿದರು.ಅವರು ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಪುರುಷರ ವಿದ್
ತಾಲ್ಲೂಕಿನಲ್ಲಿ ಚುರುಕಾದ ಬಿತ್ತನೆ ಕಾರ್ಯ
ಚನ್ನಪಟ್ಟಣ: ಮುಂಗಾರು ಮಳೆ ಕೈಕೊಟ್ಟ ಹಾಗೂ ತಡವಾಗಿ ಆಗಮಿಸಿದ ಕಾರಣ ಸರಿಯಾದ ಸಮಯದಲ್ಲಿ ಬಿತ್ತನೆ ಮಾಡಲಾಗದೇ ಕಂಗಲಾಗಿದ್ದ ರೈತ, ತಡವಾಗಿ ಆಗಮಿಸಿರುವ ಮಳೆಯಿಂದ ಉಲ್ಲಾಸಗೊಂಡ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.ಕಳೆದ ತಿಂಗಳೇ ಪ್ರಾರಂಭ ಆಗಬೇಕಿದ್ದ ಬಿತ್ತನೆ ಮಳೆಯು ವಾತಾವರಣದ ಏರುಪೇರಿನಿಂದ ಇಳೆಗೆ ಇಳಿಯದ್ದರಿಂದ ಬಿತ್ತನೆ ಮಾಡಲು ಕಾತರಿಸುತ್ತಿದ್ದ ರೈತ
ರೈತನ ಗೋಳು ಕೇಳೋರ್ ಯಾರು ?
ಒಂದು ಕಂತೆ ಕೊತ್ತಂಬರಿ ಮತ್ತು ಸಪ್ಪಸೀಗೆ ಸೊಪ್ಪಿಗೆ ಕೇವಲ ಐದು ರೂಪಾಯಿಗಳು, ಆಟೋದಲ್ಲಿ ಮಾರುತ್ತಿರುವ ವ್ಯಕ್ತಿ ವ್ತಾಪಾರಸ್ಥ, ಸೊಪ್ಪು ತಂದಿರುವುದು ಮಂಡ್ಯ ಮಾರ್ಕೆಟ್ ನಿಂದ, ಮಂಡ್ಯದಿಂದ ಆಟೋದಲ್ಲಿ ತಂದು ಚನ್ನಪಟ್ಟಣದಲ್ಲಿ ಮಾರಾಟ ಮಾಡ್ತಾನೆ ಅಂದ್ರೆ ಎಷ್ಟು ಖರ್ಚು ಬೀಳುತ್ತೆ ? ಮಾರ್ಕೆಟ್ ನಲ್ಲಿ ಎಷ್ಟು ಕೊಟ್ಟಿರುತ್ತಾನೆ ? ರೈತ ಭೂಮಿ ಹದಗೊಳಿಸಿ, ಉತ್ತು ಬಿತ್ತು ನೀರು ಹಾಯಿಸಿ, ಕಳೆ ತೆಗೆದು, ಔಷಧ ಸಿಂಪಡಿಸಿ, ಕಿತ್ತು, ಕಟ್ಟಿ ಬೆಳಗಿನ ಚಳಿಯಲ
ಪಿಎಫ್ ಸಂಬಂಧ ಖಾಸಗಿ ಶಾಲೆಗಳನ್ನು ಜಾಲಾಡುತ್ತಿರುವ ಅಧಿಕಾರಿಗಳು
ಚನ್ನಪಟ್ಟಣ:ಅನೇಕ ಖಾಸಗಿ ಶಾಲೆಗಳಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿ ಗಳಿಗೆ ಭವಿಷ್ಯ ನಿಧಿ (ಪಿಎಫ್) ಕಟ್ಟದೆ ಸಿಬ್ಬಂದಿಗಳು ಕೆಲಸ ಬಿಟ್ಟ ನಂತರ ಭವಿಷ್ಯ ನಿಧಿ ಹಣ ದೊರಕದೆ ಕಂಗಾಲಾಗಿದ್ದಾರೆ. ಈ ಸಂಬಂಧ ಕೆಲವು ನಿರ್ಗಮಿತ ಸಿಬ್ಬಂದಿಗಳು ನೇರವಾಗಿ ಪ್ರಧಾನ ಮಂತ್ರಿ ಕಛೇರಿ ಮತ್ತು ಭವಿಷ್ಯ ನಿಧಿ ಕಛೇರಿಗಳಿಗೆ ಪತ್ರ ಬರೆದಿದ್ದು ಅಧಿಕಾರಿಗಳು ಸಂಬಂಧಿಸಿದ ಶಾಲೆಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ನಡೆಸ
ಪತ್ರಕರ್ತ ಮತ್ತು ವೈದ್ಯ ಸಮಾಜದ ಎರಡು ಕಣ್ಣುಗಳು ಪ್ರೊ ಚಾಮರಾಜು
ಸೂರ್ಯ ಕಾಣದ್ದನ್ನು ಪತ್ರಕರ್ತ ಕಾಣುತ್ತಾನೆ, ದೇವರ ಬರಹವನ್ನು ಮೀರಿ ವೈದ್ಯ ರೋಗಿಯನ್ನು ಉಳಿಸುತ್ತಾನೆ, ವೈದ್ಯರ ಮತ್ತು ಪತ್ರಕರ್ತರ ದಿನಾಚರಣೆಯ ಸಂದರ್ಭದಲ್ಲಿ ಈರ್ವರನ್ನೂ ಸನ್ಮಾನಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ನಿವೃತ್ತ ಪ್ರೊಫೆಸರ್ ಚಾಮರಾಜ ರವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ತಾಲ್ಲೂಕಿನ ದೇವರಹಳ್ಳಿ ಗ್ರಾಮದಲ್ಲಿ ಮಾತೃಶ್ರೀ ಸೇವಾ ಟ್ರಸ್ಟ್ ನ ಶಿರಡಿ ಸಾಯಿಬಾಬಾ ವೃದ್ದಾಶ್ರಮ ದಲ್ಲಿ ಆಯೋಜಿಸಿದ ಸನ್ಮಾನ ಕ