ಸಂವಿಧಾನದ ಆಶಯ ಉಳಿಸಿ ಬಿಇಓ ಸೀತಾರಾಮು
ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ ನೇತೃತ್ವದಲ್ಲಿ ರಚನೆಯಾದ ಸಂವಿಧಾನದಲ್ಲಿ ನಮ್ಮೆಲ್ಲರಿಗೂ ನೀಡಿರುವ ಮಹತ್ವಾಕಾಂಕ್ಷೆಯ ಹಕ್ಕು ಮತದಾನದ ಹಕ್ಕು, ಈ ಹಕ್ಕು ಚಲಾವಣೆ ಆಗಬೇಕೆಂದರೆ ಪ್ರತಿ ನಾಗರೀಕರು ಮತ ಹಾಕಬೇಕು, ಆಗಲೇ ಸಂವಿಧಾನವೂ ನಮಗೆ ನೀಡಿರುವ ಹಕ್ಕುಗಳಿಗೆ ಒಂದು ಬೆಲೆ ಬರುತ್ತದೆ ಎಂದು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಸ್ ಸೀತಾರಾಮು ತಿಳಿಸಿದರು.
ಯಾವುದೇ ಅಡೆತಡೆ ಇಲ್ಲದೆ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ
ತಾಲ್ಲೂಕಿನಾದ್ಯಂತ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಯಾವುದೇ ರೀತಿಯ ಡಿಬಾರ್, ನಕಲು ನಡೆಯದೆ ಎರಡನೇ ದಿನವೂ ಸಹ ಯಶಸ್ವಿಯಾಗಿ ಪರೀಕ್ಷೆ ನಡೆಯಿತು.ಎಸ್ ಎಸ್ ಎಲ್ ಸಿ ಪರೀಕ್ಷೆ ಗೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸೀತಾರಾಮು ರವರನ್ನು ಪತ್ರಿಕಾ ವರದಿಗಾರ ಸಂಪರ್ಕ ಮಾಡಿದಾಗ ಪರೀಕ್ಷೆಗೆ ಸಂಬಂಧಿಸಿದಂತೆ ಎಲ್ಲಾ ಕೇಂದ್ರಗಳಲ್ಲಿಯೂ ಸಿ ಸಿ ಟಿವಿ, ಸಿಬ್ಬಂದಿಗಳ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿರುವುದರ
ಬಲಿಷ್ಠ ದೇಶಕ್ಕಾಗಿ ತಪ್ಪದೇ ಮತದಾನ ಮಾಡಿ ಚೈತ್ರಾ
ದೇಶದ ಬಲಿಷ್ಠತೆಗೆ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಪ್ರತಿಯೊಬ್ಬ ಮತದಾರರು ತಪ್ಪದೇ ಮತದಾನದಲ್ಲಿ ಭಾಗವಹಿಸಿಬೇಕು ಎಂದು ಸಮಾಜ ವಲಯ ಅರಣ್ಯ ಅಧಿಕಾರಿ ಚೈತ್ರಾ ತಿಳಿಸಿದರು.ಮತದಾನ ಜಾಗೃತಿ ಕುರಿತು ನಗರದ ಬಸ್ ನಿಲ್ದಾಣದ ಆವರಣದಲ್ಲಿ ಗಿಡ ನೆಡುವ ಮೂಲಕ ಮತದಾರರಿಗೆ ಜಾಗೃತಿ ಮೂಡಿಸಿದರು.ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ನಮ್ಮದಾಗಿದ್ದು ಅದನ್ನು ಉಳಿಸಿಕೊಳ್ಳಲು ಹಾಗೂ ದೇಶದ ಸುಭದ್ರತೆಗಾಗಿ ಉತ್ತಮರನ್ನು ಆಯ್ಕೆ
ಅದ್ದೂರಿಯಾಗಿ ಜರುಗಿದ ಕಬ್ಬಾಳಮ್ಮನ ಕೊಂಡ
ಅಧಿದೇವತೆ, ಕರಿದುರ್ಗಿ, ಗ್ರಾಮ ದೇವತೆಯಾದ ಶ್ರೀ ಕಬ್ಬಾಳಮ್ಮ ದೇವಿಯ ಪೂಜಾ ಮತ್ತು ಕೊಂಡೋತ್ಸವವು ಇಂದು ಬೆಳಿಗ್ಗೆ ಅದ್ದೂರಿಯಾಗಿ ನೆರವೇರಿತು.ಚನ್ನಪಟ್ಟಣ ತಾಲ್ಲೂಕಿನ ಗೋವಿಂದೇಗೌಡನದೊಡ್ಡಿ ಮತ್ತು ಚನ್ನಂಕೇಗೌಡನದೊಡ್ಡಿ ಗ್ರಾಮದಲ್ಲಿ ನೆಲೆಸಿರುವ ಗ್ರಾಮದೇವತೆ ಕಬ್ಬಾಳಮ್ಮ
ದೇಹದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆಯಿರಿ : ಸಿದ್ಧಲಿಂಗ ಸ್ವಾಮೀಜಿ
ನಾವು ದೇಹ ದಾನ ಮಾಡುವ ಮೂಲಕ ನಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆಯಬೇಕಿದೆ ಎಂದು ಸಿದ್ಧಗಂಗಾಮಠದ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು. ನಗರದ ಐಜೂರಿನ ಮಲ್ಲೇಶ್ವರ ಬಡಾವಣೆಯ ಎಂ. ಚಂದ್ರಶೇಖರ್ ಅವರ ನಿವಾಸದ ಆವರಣದಲ್ಲಿ ಶನಿವಾರ ನಡೆದ \'ದೇಹದಾನ ಜಾಗೃತಿ\' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಭೂಮಿ ಮೇಲೆ ಮನುಷ್ಯನಿಗೆ ಉನ್ನತ ಸ್ಥಾನವಿದೆ. ನಾವೆಲ್ಲರೂ ಮಾನವೀಯ ಮೌಲ್ಯಗಳ
ಈ ಸನ್ಮಾನ ಶ್ರೇಷ್ಠವಾದುದು:ಎಸ್.ರುದ್ರೇಶ್ವರ
ಡಾ.ಕೆ.ಪಿ.ಹೆಗ್ಡೆ ಅವರು ತಮ್ಮ 72ನೇ ಜನುಮ ದಿನದ ಅಂಗವಾಗಿ ನನ್ನನ್ನು ಕರೆಸಿ ರಾಮನಗರದ ಕಾಮಣ್ಣನ ಗುಡಿ ವೃತ್ತದಲ್ಲಿರುವ ಪ್ರಗತಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಸನ್ಮಾನಿಸಿದರು. ಪ್ರತಿ ವರ್ಷವೂ ಅವರು ತಮ್ಮ ಹುಟ್ಟು ಹಬ್ಬದಂದು ಸಮ
ಮತದಾನ ಕುಸಿತ ತಪ್ಪಿಸಲು ತಪ್ಪದೇ ಮತ ಚಲಾಯಿಸಿ ರಾಮಕೃಷ್ಣ
ವಿಧಾನಸಭೆ ಯಲ್ಲಿ ಶೇಕಡಾ ೮೫ ರಿಂದ ೯೦ ರಷ್ಟು ಮತದಾನವಾದರೆ ಲೋಕಸಭಾ ಚುನಾವಣೆಯಲ್ಲಿ ಶೇಕಡಾ ೫೨ ರಿಂದ ೬೦ ಕ್ಕೆ ಕುಸಿಯುತ್ತಿದೆ, ಪ್ರಜ್ಞಾವಂತ ಮತದಾರರು ತಪ್ಪದೇ ಮತ ಚಲಾಯಿಸುವ ಮೂಲಕ ಹಾಗೂ ನಿರಾಸಕ್ತಿ ಹೊಂದಿದ ಮತದಾರರನ್ನು ತಿಳಿ ಹೇಳಿ ಮನವೊಲಿಸುವ ಮೂಲಕ ಹೆಚ್ಚು ಮಂದಿ ಮತದಾನ ಮಾಡುವಂತೆ ಉತ್ಸಾಹಿ ಯುವಕರು ಮತ್ತು ವಿದ್ಯಾರ್ಥಿಗಳು ಪ್ರೇರೇಪಿಸಬೇಕು ಎಂದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಮಕೃಷ್ಣ ತಿಳಿಸಿದರು.
ನಿರಾತಂಕವಾಗಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ
ಇಂದು ತಾಲ್ಲೂಕಿನಾದ್ಯಂತ ಹದಿಮೂರು ಕೇಂದ್ರಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭವಾಗಿದ್ದು ಮೂಲಭೂತ ಸೌಕರ್ಯಗಳ ಜೊತೆಗೆ ಬಿಗಿ ಬಂದೋಬಸ್ತ್ ಏರ್ಪಡಿಸಿ ಮಕ್ಕಳು ನಿರಾತಂಕವಾಗಿ ಪರೀಕ್ಷೆ ಬರೆಯಲು ಶಿಕ್ಷಣ ಇಲಾಖೆ ಮತ್ತು ತಾಲ್ಲೂಕು ಆಡಳಿತ ಕ್ರಮ ಕೈಗೊಂಡಿತ್ತು.ನಗರದ ಬಾಲಕರ ಪದವಿ ಪೂರ್ವ ಕಾಲೇಜು, ಬಾಲಕಿಯರ
ಬಣ್ಣದೋಕುಳಿಯಲ್ಲಿ ಮಿಂದೆದ್ದ ಯುವ ಜನತೆ
ಇಂದು ಹೋಳಿ ಹುಣ್ಣಿಮೆಯ ಪ್ರಯುಕ್ತ ಸ್ನೇಹಿತರು, ಸಂಬಂಧಿಗಳು ಒಬ್ಬರಿಗೊಬ್ಬರು ಬಣ್ಣ ಹಚ್ಚಿ ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತಿದ್ದ ದೃಶ್ಯ ಬಹುತೇಕ ಎಲ್ಲಾ ಬೀದಿಗಳಲ್ಲಿಯೂ ಕಂಡು ಬಂತು.ಸಣ್ಣ ವಯಸ್ಸಿನ ಮಕ್ಕಳಿಂದ ವಯಸ್ಕರ ವರೆಗೂ ರಸ್ತೆ ಬದಿಗಳಲ್ಲಿ, ಮನೆಯ ಮುಂಭಾಗ ಮತ್ತು ವೃತ್ತಗಳಲ್ಲಿ ಕೇಕೆ ಹಾಕುತ್ತಾ ಒಬ್ಬರಿಗೊಬ್ಬರು ಬಣ್ಣ ಎರಚಿ ಸಂಭ್ರಮಿಸಿದರೇ, ಅನೇಕ ಮಾರ್ವಾಡಿಗಳು ತಮ್ಮ ಸಂಬಂಧಿಕರ ಮನೆಗಳಲ್ಲಿ ಸೇರಿ ಬಣ್ಣದೋಕ
ದೇಶದ ಬಹುದೊಡ್ಡ ಹಬ್ಬದಲ್ಲಿ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಿ ಜಿ ಪಂ ಸಿಇಓ
ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶದ ಚುನಾವಣಾ ಹಬ್ಬದಲ್ಲಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿ ಪ್ರಜಾಪ್ರಭುತ್ವವವನ್ನು ಉಳಿಸುವಲ್ಲಿ ಸಕ್ರಿಯ ಪಾತ್ರವಹಿಸಬೇಕೆಂದು ರಾಮನಗರ ಜಿಲ್ಲಾ ಪಂಚಾಯತ ಸಿಇಓ ಮುಲ್ಲೈಮುಹಿಲನ್ ಕರೆ ನೀಡಿದರು.ಅ