ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ ವಿರುದ್ದ ಹರಿಹಾಯ್ದ ಸ್ಥಳೀಯ ದಳದ ಮುಖಂಡರು
ಚನ್ನಪಟ್ಟಣ:ಮೇ/೨೬/೨೦/ಮಂಗಳವಾರ. ಇತ್ತೀಚಿಗೆ ರಾಮನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಅಕ್ಕೂರು ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಗಂಗಾಧರ್ ಪತ್ರಿಕಾ ಗೋಷ್ಠಿ ನಡೆಸಿ ನಮ್ಮ ನಾಯಕರಾದ ಎಚ್.ಡಿ ಕುಮಾರಸ್ವಾಮಿಯವರ ವಿರುದ್ಧ ಹಗುರವಾಗಿ ಮಾತನಾಡಿದ್ದಾರೆ. ಅವರು ಅಭಿವೃದ್ಧಿ ಕಡೆಗಣಿಸಿದ್ದಾರೆ ಎಂದು ಆರೋಪಿಸಿದ್ದುದರ ವಿರುದ್ಧ ತಾಲ್ಲೂಕು ಜನತಾದಳ ಪಕ್ಷದ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಹಿಗ್ಗಾಮು
ಕೊರೊನಾ ಹಿನ್ನೆಲೆ; ಸರಳವಾಗಿ ಆಚರಣೆಗೊಂಡ ರಂಜಾನ್ ಹಬ್ಬ
ಚನ್ನಪಟ್ಟಣ:ಮೇ/೨೫/೨೦/ಸೋಮವಾರ. ಮುಸ್ಲಿಮರ ಬಹುದೊಡ್ಡ ಭಕ್ತಿಯ ಹಾಗೂ ಸ್ನೇಹದ ಆಚರಣೆಯ ಹಬ್ಬವಾದ ರಂಜಾನ್ ಹಬ್ಬವನ್ನು ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ತಮ್ಮ ತಮ್ಮ ಮನೆಯಲ್ಲೇ ಪ್ರಾರ್ಥನೆ ಸಲ್ಲಿ ಸುವ ಮೂಲಕ ಮುಸ್ಲಿ ಮರು ಆಚರಿಸಿದರು.ಪ್ರತಿವರ್ಷವೂ ಹೆದ್ದಾರಿಯ ಹೊಸ ಕೋರ್ಟ್ ಬಳಿ ಇರುವ ಈದ್ಗಾ ಮೈದಾನದಲ್ಲಿ ಸಹಸ್ರಾರು ಮಂದಿ ಒಗ್ಗೂಡಿ ಸಾಮೂಹಿಕ ಪ್ರಾರ್ಥನೆ ಸಲ್ಲ
ಇಪ್ಪತ್ನಾಲ್ಕು ಗಂಟೆಗಳ ಕಾಲ ಲಾಕ್ಡೌನ್ ಗೆ ಸ್ಪಂದಿಸಿದ ಮಂದಿ
ಚನ್ನಪಟ್ಟಣ:ಮೇ/೨೫/೨೦/ಸೋಮವಾರ. ರಾಜ್ಯಾದ್ಯಂತ ಇಪ್ಪತ್ನಾಲ್ಕು ಗಂಟೆಗಳ ಕಾಲ ವಿಧಿಸಿದ್ದ ಲಾಕ್ಡೌನ್ ಗೆ ನಗರದ ಜನರಲ್ಲದೇ ತಾಲ್ಲೂಕಿನ ಬಹುತೇಕ ಎಲ್ಲಾ ಗ್ರಾಮಗಳಲ್ಲಿಯೂ ಅಂಗಡಿ, ಹೋಟೆಲ್ ಗಳನ್ನು ಮುಚ್ಚುವ ಮೂಲಕ ಲಾಕ್ಡೌನ್ ಗೆ ಸಾಥ್ ನೀಡುವ ಮೂಲಕ ಕೊರೊನಾ (ಕೋವಿಡ್-೧೯) ವಿರುದ್ಧ ಸಮರ ಸಾರುವಲ್ಲಿ ಸಫಲರಾದರು.
ಪ್ರತಿ ವರ್ಷದ ಮಳೆಗಾಲದಲ್ಲೂ ಗಿಡ ನೆಡುತ್ತಾರೆ. ನೆಟ್ಟ ಗಿಡಗಳು ಏನಾಗುತ್ತವೇ ?
ಚನ್ನಪಟ್ಟಣ:ಮೇ/೨೩/೨೦/ಶನಿವಾರ. ತಾಲ್ಲೂಕಿನ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಪ್ರತಿ ವರ್ಷದ ಮಳೆಗಾಲದಲ್ಲಿಯೂ ರಸ್ತೆ ಬದಿ, ಗೋಮಾಳ, ಕೆಲ ಉದ್ಯಾನವನ ಸೇರಿದಂತೆ ಅನೇಕ ಕಡೆ ಸಸಿಗಳನ್ನು ನೆಡುತ್ತಿದ್ದು ಈ ವರ್ಷದ ಮಳೆಗಾಲದಲ್ಲಿಯೂ ಸಹ ಎಲ್ಲಾ ಕಡೆ ನೆಡುತ್ತಿದ್ದಾರೆ. ಆದರೆ ಪ್ರತಿ ವರ್ಷವೂ ಅದೇ ಜಾಗದಲ್ಲಿ ಗಿಡ ನೆಡುತ್ತಿದ್ದು, ಹಿಂದಿನ ವರ್ಷಗಳ ಗಿಡಗಳು ಏನಾದವೂ ? ಎಂಬುದು ಸಾರ್ವಜನಿಕರ ಪ್ರಶ್ನೆಯ
ಕೊರೊನಾ ಎಫೆಕ್ಟ್; ಮಾಹೆ ಶುಲ್ಕ ಹೊರತುಪಡಿಸಿ ಬೇರೆ ಶುಲ್ಕ ಪಡೆಯಲ್ಲ. ಬಾಲು ಶಾಲೆಯ ವೆಂಕಟ ಸುಬ್ಬಯ್ಯ ಚೆಟ್ಟಿ
ಚನ್ನಪಟ್ಟಣ:ಮೇ/೨೩/೨೦/ಶನಿವಾರ. ನನಗೆ ನಾಳೆ (ಮೇ ೨೪ ಭಾನುವಾರ) ಅರವತ್ತು ವರ್ಷ ತುಂಬುತ್ತದೆ. ನನಗೆ ಇಷ್ಟು ವಯಸ್ಸಾಯಿತು, ಆದರೆ ಹಿಂದುರಿಗಿ ನೋಡಿದಾಗ ಸಾಧನೆ ಶೂನ್ಯ ಎನಿಸುತ್ತಿದೆ. ಸಾಧನೆ ಮಾಡದಿದ್ದರೂ ಪರವಾಗಿಲ್ಲ, ನಾಲ್ಕು ಜನರಿಗೆ ಸಹಾಯ ಮಾಡುವ ಮೂಲಕ ಜನಮಾನಸದಲ್ಲಿ ಉಳಿಯಬೇಕು ಎಂಬ ಮನೋಭಾವನೆಯನ್ನು ಬಾಲು ಪಬ್ಲಿಕ್ ಶಾಲೆಯ ವ್ಯವಸ್ಥಾಪಕ ವೆಂಕಟಸುಬ್ಬಯ್ಯ ಚೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕೂಡ್ಲೂರು ದೊಡ್ಡಮಳೂರು ನಡುವೆ ಚಿರತೆಯ ಓಡಾಟದ ಹೆಜ್ಜೆ ಗುರುತು ಗ್ರಾಮಸ್ಥರಲ್ಲಿ ಆತಂಕ
ಚನ್ನಪಟ್ಟಣ:ಮೇ/೨೩/೨೦/ಶನಿವಾರ. ರಾಮನಗರ ಜಿಲ್ಲೆಯಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದು ಮಾಗಡಿ ತಾಲ್ಲೂಕಿನಲ್ಲಿ ಇಬ್ಬರು ಬಲಿಯಾಗಿದ್ದು, ಇದು ಮಾಸುವ ಮುನ್ನವೇ ನಗರಕ್ಕೆ ಸಮೀಪವಿರುವ ದೊಡ್ಡಮಳೂರು ಮತ್ತು ಕೂಡ್ಲೂರು ಗ್ರಾಮಗಳ ನಡುವಿನ ತೋಟಗಳಲ್ಲಿ ಚಿರತೆಯ ಹೆಜ್ಜೆಗಳ ಗುರುತು ಪತ್ತೆಯಾಗಿದ್ದು ಗ್ರಾಮಸ್ಥರುಗಳಲ್ಲಿ ಆತಂಕ ಮನೆ ಮಾಡಿದೆ.ಇತ್ತೀಚೆಗೆ ತೊರೆಹೊಸೂರು ಗ್ರಾ
ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೭೦ ೩,೨೩೩ ಮಂದಿ ನಿಗಾದಲ್ಲಿ
ರಾಮನಗರ:ಮೇ/೨೨/೨೦/ಶುಕ್ರವಾರ. ರಾಮನಗರ ಜಿಲ್ಲೆಯ ಕೊರೊನಾ (ಕೋವಿಡ್-೧೯) ಪಿಡುಗು ತಡೆ ಕುರಿತ ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಶುಕ್ರವಾರ (ದಿ.೨೨) ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರು ಬಿಡುಗಡೆ ಮಾಡಿದ್ದಾರೆ.ಇದುವರೆಗೆ ರಾಮನಗರ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ ೩,೨೩೩ (ಹೊಸದಾಗಿ ಇಂದಿನ ೭೦ ಸೇರಿ). ೨೮ ದಿನಗಳ ನಿಗಾ
ಕೆರೆ ಮತ್ತು ಕಾಡಿನ ಅಭಿವೃದ್ಧಿ ಹೆಚ್ಚಿನ ಆದ್ಯತೆ ನೀಡಿ: ಅಶ್ವಥ್ ನಾರಾಯಣ*
ರಾಮನಗರ:ಮೇ/೨೨/೨೦/ಶುಕ್ರವಾರ.ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳುವ ಕೆಲಸಗಳಲ್ಲಿ ಕೆರೆ ಮತ್ತು ಕಾಡಿನ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಉಪ ಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಡಾ. ಅಶ್ವಥ್ ನಾರಾಯಣ ತಿಳಿಸಿದರು.ಅವರು ಇಂದು ಮಾಗಡಿ ತಾಲ್ಲೂಕು ಪಂಚಾಯತ
ಬಮೂಲ್ ನಿಂದ ಆಶಾ ಕಾರ್ಯಕರ್ತೆಯರಿಗೆ ಧನ ಮತ್ತು ಆಹಾರ ಕಿಟ್ ವಿತರಿಸಿದ ಜಯಮುತ್ತು
ಚನ್ನಪಟ್ಟಣ:ಮೇ/೨೦/೨೦/ಬುಧವಾರ. ಬಮೂಲ್ ವತಿಯಿಂದ ಚನ್ನಪಟ್ಟಣ ತಾಲ್ಲೂಕಿನ ೧೯೬ ಜನ ಆಶಾ ಕಾರ್ಯಕರ್ತೆಯರಿಗೆ ತಲಾ ಮೂರು ಸಾವಿರ ರೂಪಾಯಿಗಳ ಚೆಕ್ ಅನ್ನು ಬಮೂಲ್ನ ಚನ್ನಪಟ್ಟಣ ತಾಲ್ಲೂಕು ನಿರ್ದೇಶಕ ಜಯಮುತ್ತು ಅವರು ಇಂದು ಇಲ್ಲಿನ ಬಮೂಲ್ ಕಛೇರಿಯಲ್ಲಿ ವಿತರಣೆ ಮಾಡಿದರು.ಜೊತೆಗೆ ಪ್ರಶಸ್ತಿ ಪತ್ರ, ಕೈಗಡಿಯಾರ ಹಾಗೂ ರೇಷನ್ ಕಿಟ್ಗಳನ್ನು ವಿತರಿಸಲಾಯ್ತು. ಸಂದರ್ಭದಲ
ನಗರಸಭಾಧಿಕಾರಿಗಳೇ ಒಮ್ಮೆ ಸಾರ್ವಜನಿಕ ಕಕ್ಕಸು ಮನೆಯನ್ನು ನೀವು ಉಪಯೋಗಿಸಿ, ನಂತರ ಸಾರ್ವಜನಿಕರಿಗೆ ಬಿಡಿ !?
ಚನ್ನಪಟ್ಟಣ:ಮೇ/೨೦/೨೦/ಮಂಗಳವಾರ.ನಗರಸಭೆಯ ಕಮೀಷನರ್ ಸಾಹೇಬ್ರೇ ನೀವು ಮತ್ತು ನಿಮ್ಮ ಅಧಿಕಾರಿಗಳು ಒಮ್ಮೆಯಾದರೂ, ಕೇವಲ ಒಂದೇ ಒಂದು ಬಾರಿಯದರೂ ನಿಮ್ಮದೇ ಆವರಣದಲ್ಲಿರುವ *ಸ್ವಚ್ಚತೆಯ ಪ್ರತಿರೂಪ* ಎಂದೇ ಬೋಡ್೯ ಹಾಕಿಕೊಡಿರುವ ಸುಗಮ್ ಶೌಚಾಲಯ ಮತ್ತು ಸ್ನಾನದ ಗೃಹಗಳಲ್ಲಿ ಒಮ್ಮೆ, ಕನಿಷ್ಠ ಐದು ನಿಮಿಷಗಳ ಕಾಲವಾದರು ಕಕ್ಕಸು ಮಾಡಿ ಬನ್ನಿ, ನಂತರ ಸ್ನಾನದ ಗೃಹಗಳಲ್ಲಿ ಸ್ನಾನ ಮಾಡಿ ಬನ್ನಿ. ನಿಮಗೇ ಯಾವುದೇ