ಕೊರೊನಾ ಪೀಡಿತ ಶಾನುಭೋಗನಹಳ್ಳಿ ಗ್ರಾಮವನ್ನು ಸೀಲ್ಡೌನ್ ಮಾಡಿದ ಜಿಲ್ಲಾಡಳಿತ
ಚನ್ನಪಟ್ಟಣ:ಜೂ/೦೫/೨೦/ಶುಕ್ರವಾರ.ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿಯ, ಕೋಡಂಬಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾನುಭೋಗನಹಳ್ಳಿಯಲ್ಲಿ ೨೮ ವರ್ಷದ ಯುವಕನಿಗೆ ಕೊರೊನಾ (ಕೋವಿಡ್-೧೯) ಸೋಂಕು ತಗುಲಿರುವುದು ದೃಢ ಪಟ್ಟ ನಂತರ ಆತನನ್ನು ರಾಮನಗರದ ಕಂದಾಯ ಭವನದಲ್ಲಿ ನಿರ್ಮಾಣವಾಗಿರುವ ಕೋವಿಡ್ ರೆಫರಲ್ ಆಸ್ಪತ್ರೆಯ ನಿಗಾಘಟಕದಲ್ಲಿ ಇಡಲಾಗಿದೆ.ಗ್ರಾಮದ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ದಲ್ಲಿದ್ದ
ಪ್ರಾಥಮಿಕ ಕೇಂದ್ರಗಳಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಿದ ಪಶು ಇಲಾಖೆ
ಚನ್ನಪಟ್ಟಣ:ಜೂ/೦೫/೨೦/ಶುಕ್ರವಾರ. ತಾಲ್ಲೂಕಿನ ಪಶು ಇಲಾಖೆ ವತಿಯಿಂದ ಪರಿಸರ ದಿನಾಚರಣೆ ಪ್ರಯುಕ್ತ ತಾಲ್ಲೂಕಿನಾದ್ಯಂತ ಇರುವ ಪ್ರಾಥಮಿಕ ಪಶು ಆರೋಗ್ಯ ಕೇಂದ್ರಗಳು ಹಾಗೂ ನಗರದ ಸಹಾಯಕ ನಿರ್ದೇಶಕರ ಕಛೇರಿಯ ಆವರಣದಲ್ಲಿ ಸಹಾಯಕ ನಿರ್ದೇಶಕ ಡಾ.ಜಯರಾಮ್ ನೇತೃತ್ವದಲ್ಲಿ ಇಂದು ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.ತಾಲ್ಲೂಕಿನಾದ್ಯಂತ ಇರುವ ಇಗ
ಕೊರೋನಾ: ಜಿಲ್ಲೆಯಲ್ಲಿ ಮತ್ತೆರಡು ಹೊಸ ಪ್ರಕರಣ ದೃಢ ಜಿಲ್ಲಾಧಿಕಾರಿ
ರಾಮನಗರ:ಜೂ:೦೪/೨೦/ಗುರುವಾರ. ರಾಮನಗರ ಜಿಲ್ಲೆಯಲ್ಲಿ ಮತ್ತೆರಡು ಕೊರೊನಾ (ಕೋವಿಡ್-೧೯) ಪಾಸಿಟಿವ್ ಪ್ರಕರಣ ಗುರುವಾರ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ ನಾಲ್ಕಕ್ಕೆ ಏರಿಕೆಗೊಂಡಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.ರಾಮನಗರದ ಕುಂಬಾರ ಬೀದಿಯ ೫೭ ವರ್ಷ ವಯಸ್ಸಿನ ವ್ಯಕ್ತಿ ಓರ್ವರಿಗೆ (ಪಿ-೩೩೧೩) ಜೂ
ರಾಮನಗರ ಚನ್ನಪಟ್ಟಣ ದಲ್ಲಿ ತಲಾ ಒಂದೊಂದು ಕೊರೊನಾ ಪಾಸಿಟಿವ್. ಆತಂಕದಲ್ಲಿ ನಾಗರೀಕರು
ರಾಮನಗರ:ಜೂ/೦೪/೨೦/ಗುರುವಾರ. ರಾಮನಗರದ ಕುಂಬಾರಗೇರಿಯಲ್ಲಿ ಐವತ್ತೇಳು ವರ್ಷದ ವ್ಯಕ್ತಿಗೆ ಸೋಂಕು ತಗುಲಿದ ನಂತರ ಅವರ ಕುಟುಂಬವನ್ನು ಸ್ವಾಬ್ ತೆಗೆದು ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ಅವರಲ್ಲೊಬ್ಬರಾದ ಅವರ ಪುತ್ರನೊಬ್ಬನಿಗೆ ಸೋಂಕು ತಗುಲಿರುವುದು ಇಂದು ದೃಢಪಟ್ಟಿದೆ.ಕ್ವಾರಂಟೈನ್ ನಲ್ಲಿದ್ದ ೨೩ ವರ್ಷದ ಯುವಕನಿಗೆ ಸೋಂಕು ತಗುಲಿದ್ದು, ಇದೀಗ ಯುವಕನನ್ನು ರಾಮನ
ಬಗಲಲ್ಲೇ ಜಾಗ ಹುಡುಕುವ ನಾಯಕರು ಕುಮಾರಣ್ಣ ಬಂದಾಗ ತಪ್ಪಿಸಿಕೊಂಡಿದ್ದೇಕೆ. ಬಿಜೆಪಿ ಸೇರುವ ಗುಟ್ಟನ್ನು ಅವರೇ ಬಯಲು ಮಾಡಿದರೇ!?
ಚನ್ನಪಟ್ಟಣ:ಜೂ/೦೪/೨೦/ಗುರುವಾರ. ಕಳೆದವಾರ ತಾಲ್ಲೂಕಿನ ಈರ್ವ ದಳದ ಮುಖಂಡರು ಬಿಜೆಪಿ ಪಕ್ಷದ ಕದ ತಟ್ಟುತ್ತಿದ್ದು, ಆ ಪಕ್ಷ ಸೇರಿ ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ದಳದ ಕೆಲ ಮುಖಂಡರು ಹಾಗೂ ನಿಷ್ಠಾವಂತ ಕಾರ್ಯಕರ್ತರು ನೀಡಿದ ಖಚಿತ ಮಾಹಿತಿ ಮೇರೆಗೆ ಸುದ್ದಿ ಪ್ರಕಟಿಸಿದ್ದೆವು. ಆಂತರಿಕ ವಿಷಯವನ್ನರಿತಿದ್ದ ದಳದ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು ಇದನ್ನು ಸಂಪ
ಬೆಂಗಳೂರು- ಮಾಗಡಿ ನಾಲ್ಕುಪಥದ ರಸ್ತೆ ಕಾಮಗಾರಿಗೆ ಮುಂದಿನ ತಿಂಗಳು ಚಾಲನೆ. ಅಶ್ವಥ್ ನಾರಾಯಣ
ಬೆಂಗಳೂರು:ರಾಮನಗರ:ಜೂ/೦೩/೨೦/ಬುಧವಾರ.ರಾಜಧಾನಿ ಬೆಂಗಳೂರಿನಿಂದ (ನೈಸ್ ರಸ್ತೆಯಿಂದ) ಮಾಗಡಿ ಪಟ್ಟಣದವರೆಗೆ ನಾಲ್ಕು ಪಥದ ರಸ್ತೆ ನಿರ್ಮಾಣ ಕಾಮಗಾರಿಗೆ ಇನ್ನೊಂದು ತಿಂಗಳಲ್ಲಿ ಚಾಲನೆ ನೀಡಲಾಗುವುದು ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಬುಧವಾರ ಇಲ್ಲಿ ತಿಳಿಸಿದರು.ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ (ಕೆ-ಶಿ
ಎಂತಹ ಮಾರಕ ಖಾಯಿಲೆ ಬಂದರೂ ಧೈರ್ಯವಾಗಿ ಕೆಲಸ ಮಾಡುವವರೇ ಪೌರಕಾರ್ಮಿಕರು. ಪೌರಾಯುಕ್ತ
ಚನ್ನಪಟ್ಟಣ:ಜೂ/೦೩/೨೦/ಬುಧವಾರ. ದೇಶದಲ್ಲಿ ಯಾವುದೇ ರೀತಿಯ ಮಾರಕ ಖಾಯಿಲೆಗಳು ಬಂದರೂ ನಗರವನ್ನು ಶುಚಿಯಾಗಿಟ್ಟು ಖಾಯಿಲೆಯನ್ನು ತಡೆಗಟ್ಟುವುದರ ಜೊತೆಗೆ ಖಾಯಿಲೆ ಬರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡು, ನಾನು ಕೆಲಸ ಮಾಡಿದರೆ ನನಗೆ ಖಾಯಿಲೆ ತಗುಲಬಹುದು ಎಂದು ಯೋಚಿಸದೆ ಕೆಲಸ ನಿರ್ವಹಿಸುವವರೇ ಪೌರ ಕಾರ್ಮಿಕರು ಎಂದು ಪೌರಾಯುಕ್ತ ಶಿವನಂಕಾರಿಗೌಡ ಅಭಿಪ್ರಾಯ ಪಟ್ಟರು.ಅವರು ಇಂದು
ಕೃಷಿ ಯಂತ್ರಧಾರಾ ಕೇಂದ್ರಕ್ಕೆ ಚಾಲನೆ ನೀಡಿದ ಕುಮಾರಸ್ವಾಮಿ
ಚನ್ನಪಟ್ಟಣ:ಜೂ/೦೩/೨೦/ಬುಧವಾರ. ಯಾರನ್ನೂ ನಂಬಿ ರಾಜಕೀಯ ಮಾಡುವುದಿಲ್ಲ. ನಂಬಿದ ಕಾರ್ಯಕರ್ತರನ್ನು ಕೈಬಿಡುವುದೂ ಇಲ್ಲ. ಇನ್ನು ಮುಂದೆ ಯಾರ ಹಂಗಿನಲ್ಲೂ ಸರ್ಕಾರ ರಚಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕ್ಷೇತ್ರದ ಶಾಸಕ ಹೆಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ತಿರುಗೇಟು ನೀಡಿದರು. ಅವರು ತಾಲ್ಲೂಕಿನ ಕೃಷಿ ಇಲಾಖೆಯ ವತಿಯಿಂದ, ತಾಲ್ಲೂಕಿನ ಸುಣ್ಣಘಟ್ಟದಲ್ಲಿ ಕೃಷಿ ಯಂತ್ರೋಪಕರಣ ಗಳನ್ನು ಬಾಡಿಗೆಗ
ರಾಮನಗರದ ಕುಂಬಾರ ಬೀದಿ ಸೀಲ್ಡೌನ್; ದ್ವಿತೀಯ ಹಂತದ ೨೨ ಮಂದಿ ಕ್ವಾರಂಟೈನ್
ರಾಮನಗರ:ಜೂ/೦೩/೨೦/ಬುಧವಾರ. ರಾಮನಗರ ಟೌನ್ ನ ಕುಂಬಾರ ಬೀದಿಯ ೫೭ ವರ್ಷದ ವ್ಯಕ್ತಿಯೊಬ್ಬ ಸುಲ್ತಾನ್ ಪೇಟೆಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದು, ಕೊರೊನಾ ಸೋಂಕಿಗೆ ಒಳಗಾಗಿದ್ದ. ಈ ಹಿನ್ನೆಲೆಯಲ್ಲಿ ಇವನು ವಾಸವಾಗಿದ್ದ ಈ ಬೀದಿಯನ್ನು ಈಗ ಸಂಪೂರ್ಣವಾಗಿ ದಿಗ್ಬಂಧಿಸಲಾಗಿದೆ.೨ನೆಯ ಸಂಪರ್ಕಕ್ಕೆ ಬಂದಿದ್ದ ೨೨ ಜನರನ್ನು ಕ್ವಾರಂಟೈನ್ ಮಾಡಲಾಗಿದೆ, ೧೦೦ ಮೀಟರ್ ಪ್ರದೇಶ
ಕೊರೋನಾ: ಹೊಸ ಪ್ರಕರಣ ದೃಢ; ರಾಮನಗರದಲ್ಲಿ ಎರಡನೇ ಪ್ರಕರಣ ದಾಖಲು
ರಾಮನಗರ:ಜೂನ್/೦೧/೨೦/ಸೋಮವಾರ. ರಾಮನಗರ ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ (ಕೋವಿಡ್-೧೯) ಪಾಸಿಟಿವ್ ಪ್ರಕರಣ ಸೋಮವಾರ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಎರಡಕ್ಕೆ ಏರಿಕೆಗೊಂಡಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.ಜಿಲ್ಲೆಯ ರಾಮನಗರ ತಾಲ್ಲೂಕಿನ ೫೭ ವರ್ಷ ವಯಸ್ಸಿನ ವ್ಯಕ್ತಿ ಓರ್ವರಿಗೆ (ಪಿ-೩೩೧೩)