ದಳೀಯರಿಬ್ಬರೂ ಹೊರಹೋಗುತ್ತಾರೆಂಬ ನಿನ್ನೆಯ ಸುದ್ದಿಗೆ ಖುಷಿಗೊಂಡ ಉಳಿದ ನಾಯಕರು
ಚನ್ನಪಟ್ಟಣ:ಮೇ/೩೦/೨೦/ಶನಿವಾರ. ಬಿಜೆಪಿ ಬಾಗಿಲು ತಟ್ಟುತ್ತಿರುವ ಇಬ್ಬರು ದಳೀಯರು ? ಹೋದರೆ ಆನಂದ ! ಉಳಿದ ದಳೀಯರ ಸಂತಸ. ಎಂಬ ಸುದ್ದಿಯು ನಮ್ಮ ಪತ್ರಿಕೆಯಲ್ಲಿ ಪ್ರಕಟಗೊಂಡ ನಂತರ ಓದಿದ ಅನೇಕ ದಳದ ನಾಯಕರು ಮತ್ತು ಕಾರ್ಯಕರ್ತರು ಕರೆ ಮಾಡಿ ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದರು.ಅವರು ಹೋದ ನಂತರ ನಾವೇ ಬಹಿರಂಗ ಹೇಳಿಕೆ ನೀಡುತ್
ಕೊರೊನಾ ಗೆ ಹೆದರದ ನಗರಿಗರು ಕರಡಿಗೆ ಹೆದರಿದ್ದು, ಕನಸಿನಲ್ಲೂ ಕನವರಸಿತ್ತಿದ್ದಾರೆ. ಇಲಾಖೆ ಧೈರ್ಯ ತುಂಬಬೇಕಿದೆ
ಚನ್ನಪಟ್ಟಣ:ಮೇ/೩೦/೨೦/ಶನಿವಾರ. ಇಡೀ ಜಗತ್ತನ್ನೇ ಆವರಿಸಿ ಬಲಿ ಪಡೆಯುತ್ತಿರುವ ಮಹಾಮಾರಿ ಕೊರೊನಾ (ಕೋವಿಡ್-೧೯) ಗೆ ಅಂಜದೆ, ಅಳುಕದೆ ಅವರಿಷ್ಟದಂತಿದ್ದ ಮಂದಿ ಕರಡಿಗೆ ಹೆದರಿ ಬಾಗಿಲು ಮುಚ್ಚಿ ಮಲಗುವ ಹಂತಕ್ಕೆ ತಲುಪಿದ್ದಾರೆ.ಹೌದು ಇತ್ತೀಚಿಗೆ ಮೇವು ಹರಸಿ ಕಾಡಿನಿಂದ ನಗರಕ್ಕೆ ಬಂದ ಕರಡಿಯೊಂದು ಜನರ ಭೀತಿಗೆ ಹೆದರಿ, ಮನೆಯೊಂದರ ಕಾಂಪೌಂಡ್ ನೊಳಗೆ ಅವಿತು ಕುಳಿತಿತ್
ಜಿಲ್ಲೆಯಲ್ಲಿ ಜೀವ ವೈವಿದ್ಯತಾ ನಿರ್ವಹಣಾ ಸಮಿತಿಯನ್ನು ಚುರುಕುಗೊಳಿಸಿ: ಅನಂತ ಹೆಗಡೆ ಅಶೀಸರ
ರಾಮನಗರ:ಮೇ/೩೦/೨೦/ಶನಿವಾರ.ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ ಜೀವ ವೈವಿದ್ಯತಾ ನಿರ್ವಹಣಾ ಸಮಿತಿಯನ್ನು ಚುರುಕುಗೊಳಿಸಿ ಜಿಲ್ಲೆಯ ಜೀವ ವೈವಿದ್ಯತೆಯನ್ನು ಸಂರಕ್ಷಿಸಬೇಕು ಎಂದು ಕರ್ನಾಟಕ ಜೀವ ವೈವಿಧ್ಯತಾ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದರು.ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ
ಇಂಡಿಯಾ ಬುಕ್ ಆಪ್ ರೆಕಾಡ್ರ್ಸ್’ ನಲ್ಲಿ ಸ್ಥಾನ ಪಡೆದಿರುವ ವಿಜಯ್ ರಾಂಪುರ ಅವರಿಗೆ ಸನ್ಮಾನ
ರಾಮನಗರ : ಪ್ರತಿಭಾವಂತರನ್ನು ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕು ಎಂದು ಸಮಾಜ ಸೇವಕ ಸಿ.ಆರ್. ಅರುಣ್ ಕುಮಾರ್ ತಿಳಿಸಿದರು.
ಸಾಕವ್ವ ನಿಗೆ ಸಾಂತ್ವನ; ಪ್ರಾಣಕ್ಕೆ ತೊಂದರೆಯಿಲ್ಲ. ಇನ್ನೂ ಇಪ್ಪತ್ನಾಲ್ಕು ಗಂಟೆ ಕಣ್ಣಿನ ಬಗ್ಗೆ ಹೇಳಲಾಗುವುದಿಲ್ಲa
ಬೆಂಗಳೂರು/ಚನ್ನಪಟ್ಟಣ:ಮೇ/೨೮/೨೦/ಗುರುವಾರ. ನಿನ್ನೆ ಬೆಳಿಗ್ಗೆ ತನ್ನ ಮನೆಯ ಕಾಂಪೌಂಡ್ ನೊಳಗೆ ಕರಡಿಯೊಂದು ಅವಿತು ಕುಳಿತು ದಾಳಿ ಮಾಡಿದ್ದರಿಂದ ಒಂದು ಕಣ್ಣನ್ನು ಸ್ಥಳದಲ್ಲಿಯೇ ಕಳೆದುಕೊಂಡು, ಮುಖದ ಬಹುಭಾಗವನ್ನೆಲ್ಲಾ ಕಳೆದುಕೊಂಡಿರುವ ವೃದ್ದೆ ಸಾಕವ್ವ ನನ್ನು ಬೆಂಗಳೂರಿನ ಸಂಜಯಗಾಂಧಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಜ್ಯ ರೈತ ಸಂಘದಿಂದ ತಹಶಿಲ್ದಾರರ ಮುಖೇನ ಪ್ರಧಾನಿಗೆ ಮನವಿ
ಚನ್ನಪಟ್ಟಣ:ಮೇ/೨೭/೨೦/ಬುಧವಾರ. ಇಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ರಾಷ್ಟ್ರದ ಪ್ರಧಾನಿಯವರಿಗೆ ಇಲ್ಲಿನ ದಂಡಾಧಿಕಾರಿಗಳ ಮೂಲಕ ಮನವಿಯೊಂದನ್ನು ಸಲ್ಲಿಸಿದರು. ಕೊರೊನಾ ಲಾಕ್ಡೌನ್ ಪರಿಸ್ಥಿತಿಯಿಂದ ರೈತರು, ಕೃಷಿ ಕೂಲಿಕಾರರು ಹಾಗೂ ಗ್ರಾಮ ಕಸುಬುದಾರರು ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ರೈತರು ಒಂದು ರೀತಿಯಲ್ಲಿ ನೋವಿಗೆ ಒಳಗಾಗಿದ್ದರೆ, ಅವರನ್ನು ಅವಲಂಭಿಸಿರುವ ಈ
ಕಾಡಾನೆ ದಾಳಿಗೆ ನಲುಗಿದ ಟೊಮ್ಯಾಟೊ ತೋಟ
ಚನ್ನಪಟ್ಟಣ:ಮೇ/೨೭/೨೦/ಬುಧವಾರ. ಒಂದೆಡೆ ಕೊರೋನಾ ಕಾಟಕ್ಕೆ ರೈತರು ಸೊರಗಿ ದ್ದಾರೆ. ಮತ್ತೊಂದೆಡೆ ಕಾಡುಪ್ರಾಣಿಗಳ ಹಾವಳಿ ಯಿಂದಾಗಿ ರೈತರು ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗುತ್ತಿವೆ. ತಾಲೂಕಿನ ಮೆಣಸಿಗನಹಳ್ಳಿ ಗ್ರಾಮದ ರೈತ ಸ್ವಾಮಿ ಎಂಬುವವರ ಟೊಮೋಟೋ ತೋಟಕ್ಕೆ ನುಗ್ಗಿದ್ದ ೫ - ೬ ಕಾಡಾನೆ ಗಳ ಹಿಂಡು ೨ ಎಕರೆಯಲ್ಲಿ ಬೆಳೆದಿದ್ದ ಟೊಮೋಟೋ ಬೆಳೆಯಲ್ಲಿ ಭಾಗಶಃ ನಾಶಪಡಿಸಿರುವ ಘಟನೆ ನಡೆದಿದೆ. ಜೊತೆ
ಇರುಳಿಗ ಸಮುದಾಯದವರು ಸರ್ಕಾರದ ಸವಲತ್ತು ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು : ಇಕ್ರಂ
ರಾಮನಗರ:ಮೇ/೨೭/೨೦/ಬುಧವಾರ. ಇರುಳಿಗ ಸಮುದಾಯದವರು ಸರ್ಕಾರದ ಸವಲತ್ತುಗಳನ್ನು ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಇಕ್ರಂ ಉಲ್ಲಾ ಷರೀಫ್ ಅವರು ತಿಳಿಸಿದರು.ಅವರು ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರಾಮನಗರ ಜಿಲ್ಲೆಯ ಇರುಳಿಗ ಸಮುದಾಯದ ಸ್ಥಿತಿಗತಿ ಹಾಗೂ ಅವರಿಗೆ ದೊರೆಯಬೇಕಿರುವ ಸವಲತ್ತು
ನಗರದಲ್ಲಿ ನರರ ಮೇಲೆ ಅಟ್ಯಾಕ್ ಮಾಡಿದ ಕರಡಿ; ಸಾವು ಬದುಕಿನ ಹೋರಾಟದಲ್ಲಿ ವೃದ್ದೆ. ವಾಕಿಂಗ್ ಪ್ರಿಯರು ಥರಥರ
ಚನ್ನಪಟ್ಟಣ:ಮೇ/೨೭/೨೦/ಬುಧವಾರ. ನಗರದ ಸುಣ್ಣದ ಕೇರಿ ಗೆ ಇಂದು ಬೆಳಗಿನ ಜಾವ ಮೂರು ಗಂಟೆಗೆ ಕರಡಿಯೊಂದು ಬಂದಿದ್ದು, ಬೆಳಗಿನ ಆರು ಗಂಟೆಯಲ್ಲಿ ಮನೆಯಿಂದ ಹೊರಗೆ ಬಂದ ಮಾಜಿ ನಗರಸಭಾ ಸದಸ್ಯೆ ಸಾಕಮ್ಮ (೬೫) ಎಂಬ ವೃದ್ದೆಯ ಮೇಲೆ ಅವರದೇ ಮನೆಯ ಕಾಂಪೌಂಡ್ ನಲ್ಲಿ ಅಡಗಿದ್ದ ಕರಡಿಯು ಎರಗಿದೆ. ಅವರ ಸಂಪೂರ್ಣ ಮುಖವನ್ನು ಪರಚಿದ್ದು. ಸಹಾಯಕ್ಕೆ ತೆರಳಿದ ಅವರ ಪುತ್ರ ಸುಧೀರ್ (೪೦) ಗೂ ಸಹ ಗಾಯಗಳಾಗಿರುವು
ಕೋವಿಡ್-19 ಸಂಚಾರಿ ತಪಾಸಣಾ ಕೇಂದ್ರಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ
ರಾಮನಗರ:ಮೇ/೨೬/೨೦/ಮಂಗಳವಾರ.ಕೊರೊನಾ (ಕೋವಿಡ್-೧೯) ಸೋಂಕನ್ನು ಜಿಲ್ಲೆಯಲ್ಲಿ ಪತ್ತೆ ಹಚ್ಚಲು ಹಾಗೂ ತಪಾಸಣೆಯನ್ನು ಹೆಚ್ಚಿಸಲು ಕೆ.ಎಸ್.ಆರ್.ಟಿ.ಸಿ ಸಂಚಾರಿ ಬಸ್ನ್ನು ಕ್ಲಿನಿಕ್ ರೂಪದಲ್ಲಿ ಪರಿವರ್ತಿಸಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸಂಚರಿಸಿ ಕೋವಿಡ್-೧೯ ಲಕ್ಷಣವುಳ್ಳವರನ್ನು ಪರೀಕ್ಷಿಸುವ ಸಂಚಾರಿ ವಾಹನಕ್ಕೆ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ಚಾಲನೆ ನೀಡಿದರು.