ಕೆಂಗಲ್ ರೈತ ಉತ್ಪಾದಕ ಸಂಸ್ಥೆಯಿಂದ ಹಣ್ಣು ತರಕಾರಿ ಖರೀದಿ
ಚನ್ನಪಟ್ಟಣ:ಏ/೩೦/೨೦/ಗುರುವಾರ. ಚನ್ನಪಟ್ಟಣ ತಾಲೂಕಿನಲ್ಲಿ ಲಾಕ್ಡೌನ್ ನ ನಂತರ ರೈತರು ಬೆಳೆದ ಹಣ್ಣು ಮತ್ತು ತರಕಾರಿಗಳ ಮಾರಾಟಕ್ಕೆ ಬಹಳ ಕಷ್ಟವಾಗುತ್ತಿದ್ದು, ಈ ಸಮಯದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಸ್ಥಾಪಿತವಾದ *ಕೆಂಗಲ್ ರೈತ ಉತ್ಪಾದಕ ಸಂಸ್ಥೆ ಚಿಕ್ಕಮಳೂರು* ಇವರು ರೈತರಿಂದ ನೇರವಾಗಿ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದಾರೆ.
ಗ್ರಾಮೀಣ ಭಾಗದ ಮನೆಮನೆಗೆ ನೀರು ಒದಗಿಸುವ ಜಲ ಜೀವನ್ ಮಿಷನ್ ಸಿಇಓ ಇಕ್ರಂ
ರಾಮನಗರ:ಏ/೩೦/೨೦/ಗುರುವಾರ. ಗ್ರಾಮೀಣ ಭಾಗದ ಮನೆಗಳಿಗೆ ನಿರ್ದಿಷ್ಟ ಪಡಿಸಲಾದ ಪರಿಮಾಣ ಹಾಗೂ ಗುಣಮಟ್ಟದ ನೀರನ್ನು ನಳ ಸಂಪರ್ಕದ ಮೂಲಕ ನಿಯಮಿತವಾಗಿ ಒದಗಿಸುವುದು ಜಲ ಜೀವನ್ ಮಿಷನ್ ಯೋಜನೆಯ ಉದ್ದೇಶವಾಗಿದೆ ಎಂದು ರಾಮನಗರ ಜಿಲ್ಲಾ ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಇಕ್ರಂ ಉಲ್ಲಾ ಷರೀಫ್ ತಿಳಿಸಿದ್ದಾರೆ.ನಳ ಸಂಪರ್ಕದ ಮೂಲಕ ಎಲ್ಲಾ ಮನೆಗಳಿಗೆ ಸಮಾನವಾಗಿ ನಿಗದಿತ ಪರ
ಸತ್ಯಸಾಯಿ ಸೇವಾ ಸಂಸ್ಥೆಯಿಂದ ೧,೦೦೦ ಆಹಾರ ಕಿಟ್ ವಿತರಣೆ
ರಾಮನಗರ:ಏ/೨೯/೨೯/ಬುಧವಾರ. ಲಾಕ್ಡೌನ್ ಹಿನ್ನೆಲೆಯಲ್ಲಿ ಉಂಟಾಗಿರುವ ತೊಂದರೆಗಳನ್ನು ಪರಿಹರಿಸಲು ಹಾಗೂ ಜಿಲ್ಲೆಯಲ್ಲಿ ನಿರ್ಗತಿಕರಿಗೆ ಹಾಗೂ ಬಡಜನರಿಗೆ ಬೇಕಿರುವ ಆಹಾರ ಸಾಮಗ್ರಿಗಳನ್ನು ಒದಗಿಸಲು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೆನಹಳ್ಳಿ ಸತ್ಯಸಾಯಿ ಸೇವಾಸಂಸ್ಥೆ ವತಿಯಿಂದ ೧,೦೦೦ ಆಹಾರ ಕಿಟ್ನ್ನು ರಾಮನಗರ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಇಕ್ರಂ ಅವರಿಗೆ ಹಸ್ತಾಂತರಿ
ಜಿಲ್ಲೆಯಲ್ಲಿ ಕೈಗಾರಿಕೆ ತೆರೆಯಲು ಅವಕಾಶವಿಲ್ಲ: ಕೆಲ ದಿನನಿತ್ಯಪಯೋಗಿ ಅಂಗಡಿಗಳಷ್ಟೇ ತೆಗೆಯಬಹುದು. ಜಿಲ್ಲಾಧಿಕಾರಿ
ರಾಮನಗರ:ಏ/೨೯/೨೦/ಬುಧವಾರ. ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶವನ್ನು ಅನುಸರಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಸೇರ್ಪಡೆ ಆದೇಶದಂತೆ ರಾಮನಗರ ಜಿಲ್ಲೆಯಾದ್ಯಂತ ಯಾವುದೇ ಕೈಗಾರಿಕೆಗಳನ್ನು ಪ್ರಾರಂಭಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ಸ್ಪಷ್ಟ ಪಡಿಸಿದ್ದಾರೆ.ದಿನಾಂಕ: ೧೯-೦೪-೨೦೨೦ ರಂದು ಬೆಂಗಳೂರು ನಗರದ ಜೆ.ಜೆ.ನಗರ ಪೊಲೀಸ್ ಠಾಣಾ ವ್ಯಾಪ್ತಿ
ಜಿಲ್ಲೆಯಲ್ಲಿ ಬಹು ಗ್ರಾಮ ಪಂಚಾಯಿತಿಗಳ ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಗೆ ಸಿದ್ಧತೆ
ರಾಮನಗರ:ಏ/೨೯/೨೦/ಬುಧವಾರ. ಪ್ರತಿದಿನ ಉತ್ಪತ್ತಿಯಾಗುವ ತ್ಯಾಜ್ಯವಸ್ತುಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯಗಳನ್ನು ಪಂಚಾಯಿತಿವಾರು ವಿಲೇವಾರಿಯಾದರೆ ಬಹಳಷ್ಟು ಸಮಸ್ಯೆಗಳನ್ನು ಪರಿಹರಿಸಬಹುದು. ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಬಹುದು.ಸ್ವಚ್ಛತೆಗೆ ಹಚ್ಚಿನ ಆದ್ಯತೆ ನೀಡಬೇಕ
ಆನ್ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿಸಲು ಚನ್ನಪಟ್ಟಣ ಬೆಸ್ಕಾಂ ಮನವಿ
ಚನ್ನಪಟ್ಟಣ:ಏ/೨೮/೨೦/ಮಂಗಳವಾರ. ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಕರ್ನಾಟಕ ಸರ್ಕಾರ ದಿನಾಂಕ: ೦೩-೦೫-೨೦೨೦ರ ತನಕ ಲಾಕ್ಡೌನ್ ಅನುಸರಿಸಲು ಆದೇಶಿಸಿರುವುದರಿಂದ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಚನ್ನಪಟ್ಟಣ ನಗರ ಉಪವಿಭಾಗದ ವ್ಯಾಪ್ತಿಯಲ್ಲಿನ ಗ್ರಾಹಕರು ವಿದ್ಯುತ್ ಬಿಲ್ ಮತ್ತು ಬಾಕಿ ಮೊತ್ತವನ್ನು ಆನ್ಲೈನ್ ಸೇವೆಗಳಾದ ಬೆಸ್ಕಾಂ ಮಿತ್ರ, ಪೇಟಿಎಂ, ಗೂಗಲ್ ಪೇ, ಫೋನ್
ಸ್ವಕ್ಷೇತ್ರ ದ ಮಂದಿ ಹಸಿವೆಯಿಂದ ಬಳಲಬಾರದು ಹೆಚ್ ಡಿ ಕುಮಾರಸ್ವಾಮಿ
ಚನ್ನಪಟ್ಟಣ:ಏ/೨೮/೨೦/ಮಂಗಳವಾರ. ಕೊರೊನಾ (ಕೋವಿಡ್-೧೯) ದಿಂದ ಲಾಕ್ ಡೌನ್ ಆಗಿರುವುದರಿಂದ ಕೆಲಸವೂ ಇಲ್ಲದೆ, ಸಂಪಾದನೆಯೂ ಇಲ್ಲದೆ ಇರುವ ಬಡ ಕುಟುಂಬದ ಜನರು ಹಸಿವೆಯಿಂದ ಬಳಲಬಾರದು. ರಾಮನಗರ ಮತ್ತು ಚನ್ನಪಟ್ಟಣ ನನ್ನ ಎರಡು ಕಣ್ಣುಗಳು. ನನ್ನ ಸ್ವ ಕ್ಷೇತ್ರವಾದ ಚನ್ನಪಟ್ಟಣ ದ ಜನರು ಹಸಿವೆಯಿಂದ ಬಳಲಬಾರದು ಎಂಬ ಸದುದ್ದೇಶದಿಂದ ೬೦ ಸಾವಿರ ಬಡ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ವಿತರಿಸಲಾಗುತ್ತಿ
ವಾಹನಗಳನ್ನು ನೋಂದಣಿ ಮಾಡಿಸಿಕೊಳ್ಳಲು ಸೂಚನೆ
ರಾಮನಗರ:ಏ/೨೮/೨೦/ಮಂಗಳವಾರ. ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದ ಅನ್ವಯ ಹಾಗೂ ಸಾರಿಗೆ ಆಯುಕ್ತರ ಪತ್ರದ ಅನ್ವಯ ದಿನಾಂಕ: ೦೧-೦೫-೨೦೨೦ ರಿಂದ ಭಾರತ ದೇಶದಲ್ಲಿ ಭಾರತ್ ಸ್ಟೇಜ್-೪ ಮಾಪನದ ವಾಹನಗಳನ್ನು ನೋಂದಣಿ ಮಾಡುವುದನ್ನು ನಿರ್ಬಂಧಿಸಲಾಗಿತ್ತು.ದಿನಾಂಕ: ೦೧-೦೪-೨೦೨೦ಕ್ಕಿಂತ ಮುಂಚಿತವಾಗಿ ಭಾರತ ಸ್ಟೇಜ್ ವಾಹನಗಳನ್ನು ಖರೀದಿಸಿ ತಾತ್ಕಾಲಿಕ ನೋಂದಣಿ ಪಡೆದಿರುವ ವಾಹನಗಳನ್ನು
ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದಿಂದ ೨,೦೦೦ ರೂ.ಗಳ ಸಹಾಯಧನದ ನೆರವು
ರಾಮನಗರ:ಏ/೨೮/೨೦/ಮಂಗಳವಾರ. ಕೊರೊನಾ (ಕೋವಿಡ್-೧೯) ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸರ್ಕಾರವು ಲಾಕ್ಡೌನ್ ಘೋಷಿಸಿರುವುದರಿಂದ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಫಲಾನುಭವಿಗಳಾಗಿ ಈಗಾಗಲೇ ನೋಂದಾಯಿತರಾಗಿರುವ ಎಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಅವರ ಅವಶ್ಯಕ ಜೀವನ ನಿರ್ವಹಣೆಗಾಗಿ ರೂ.೨,೦೦೦/-ಗಳ ಸಹಾಯಧನವನ್ನು ನೇರವಾಗಿ ಕಾರ್ಮಿಕರ ಬ್ಯಾಂಕ್
ಹಳ್ಳಿಗಾಡಿನ ರೈತ ಸಮುದಾಯಕ್ಕೆ ಕುವೆಂಪುರವರು ನೀಡಿದ ಕೊಡುಗೆಯೇ ಮಂತ್ರಮಾಂಗಲ್ಯ ಎಂ ರಾಮು
ಚನ್ನಪಟ್ಟಣ.ಏ.೨೭: ನೆನ್ನೆ ಇಲ್ಲಿನ ಗುಡ್ಡೆ ತಿಮ್ಮಸಂದ್ರದಲ್ಲಿ ಕುವೆಂಪುರವರ ಮಂತ್ರ ಮಾಂಗಲ್ಯ ಮಾದರಿಯಲ್ಲಿ ಒಂದು ಸರಳ ಮದುವೆ ಜರುಗಿತು. ವರ, ಚನ್ನಪಟ್ಟಣ ತಾಲ್ಲೂಕಿನ ಗೌಡನಗೆರೆ ಗ್ರಾಮದ ಶ್ರೀಮತಿ ಗೌರಮ್ಮ, ತಿಮ್ಮೇಗೌಡರ ಮಗ ಸಿದ್ದರಾಮು.ವಧು, ಇದೇ ತಾಲ್ಲೂಕಿನ ಬೊಮ್ಮನಾಯಕನಹಳ್ಳಿ ಗ್ರಾಮದ, ಶ್ರೀಮತಿ ರಾಧಮ್ಮ ಲೇ|| ಪುಟ್ಟಸ್ವಾಮಿಗೌಡರ ಪುತ್ರಿ ರಕ್ಷಿತಾ.ಇವರುಗಳ ಸರಳ ವಿವಾಹವನ್ನು ಕುರಿತು ಮಾತನಾಡಿದ ರಾಜ್ಯ