ಅನಾಥವಾದ ಶಿಕ್ಷಣ ಇಲಾಖೆಯ ಉದ್ಘಾಟನಾ ನಾಮಫಲಕಗಳು
ನಗರದ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಮುಖ್ಯಮಂತ್ರಿಗಳು ಉದ್ಘಾಟಿಸಿದ ತಾಲ್ಲೂಕಿನ ಹೊಸೂರು ದೊಡ್ಡಿ ಮತ್ತು ಲಂಬಾಣಿ ದೊಡ್ಡಿ ಗ್ರಾಮದ ಶಾಲೆಯ ಶಿಲನ್ಯಾಸ ಕಲ್ಲುಗಳು ಕಳೆದ ನಲವತ್ತು ದಿನಗಳಿಂದಲೂ ಅನಾಥವಾಗಿ ಬಿದ್ದಿದ್ದು ಸಂಬಂಧಿಸಿದ ನಿರ್ಮಿತಿ ಕೇಂದ್ರದವರಾಗಲಿ ಅಥವಾ ಶಿಕ್ಷಣ ಸಂಸ್ಥೆಯ ವರಾಗಲಿ ಗಮನ ಹರಿಸದೆ ಬೀದಿ ನಾಯಿಗಳ ಮೂತ್ರ ವಿಸರ್ಜನೆಗೆ ಅನುವು ಮಾಡಿಕೊಟ್ಟಿದ್ದಾರೆ.ದಿನಾಂಕ ೨೩/೦೨/೨೦೧೯ ರ ಶನಿವಾರದಂದು ಚನ್ನಪಟ
ಬಿರುಸುಗೊಳ್ಳದ ಬೆಂಗಳೂರು ಲೋಕಸಭಾ ಕ್ಷೇತ್ರ
೨೦೧೯ ರ ಬೆಂಗಳೂರು ಲೋಕಸಭಾ ಚುನಾವಣೆ ಬಿಸಿಲಿನ ಬೇಗೆಗೋ, ಕಾರ್ಯಕರ್ತರ ನಿರುತ್ಸಾಹದಿಂದಲೋ ಕಳೆಗುಂದುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ, ಪಕ್ಕದ ಮಂಡ್ಯ ಜಿಲ್ಲೆಗೆ ಹೋಲಿಸಿ ನೋಡಿದರೇ ಶೇಕಡಾ ಹತ್ತರಷ್ಟು ಜಿದ್ದಾಜಿದ್ದಿ ಇಲ್ಲದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.ಅಭ್ಯರ್ಥಿಗಳು ಯಾರೆಂದೂ ಘೋಷಣೆ ಆಗುವ ಮುನ್ನಾ ಇದ್ದ ಖದರು ಉತ್ಸಾಹ ಅಭ್ಯರ್ಥಿ ಘೋಷಣೆಯ ನಂತರ ಕಾರ್ಯಕರ್ತರಲ್ಲಿ ಇಲ್ಲವಾಗಿದೆ, ಪಕ್ಷ ಹಾಗೂ
ಜನತಾಬಜಾರ್ ಗೆ ವರ್ಗಾವಣೆಗೊಂಡ ಅಂಗನವಾಡಿ ಆಹಾರ, ಹಸಿರು ನಿಶಾನೆ ತೋರದ ಅಧಿಕಾರಿ ವರ್ಗ
ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ರಾಜ್ಯದ ಅಂಗನವಾಡಿ ಕೇಂದ್ರಗಳಿಗೆ ಬೇಕಾಗುವ ಆಹಾರ ಸಾಮಾಗ್ರಿಗಳನ್ನು ಎಂ ಎಸ್ ಪಿ ಟಿ ಸಿ ಸಂಘವು ಈಗ ಬೆಂಗಳೂರು ಎಪಿಎಂಸಿ ಸೇರಿದಂತೆ ಅನೇಕ ಸ್ಥಳೀಯ ಸಂಸ್ಥೆಗಳಿಂದ ಖರೀದಿಸುವ ಬದಲು ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾ ಮಂಡಳ ನಿಯಮಿತ ಬೆಂಗಳೂರು (ಜನತಾಬಜಾರ್) ನಿಂದ ಖರೀದಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮತ್ತು ಸಂಬಂಧಿಸಿದ ಸಂಸ್ಥೆಗೆ ಸರ್ಕಾರ ಆದೇಶ ನೀಡಿ ತಿಂಗಳು ಕಳೆದಿದ್ದರೂ ಸಹ ಅಧಿಕಾರಿಗಳು ಮ
ಲೋಕಸಭಾ ಚುನಾವಣೆ ಸಿದ್ದತೆ :ಜಿಲ್ಲಾಡಳಿತದ ಕಾರ್ಯವೈಖರಿಗೆ ಮೆಚ್ಚುಗೆ
ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಗೆ ಚುನಾವಣಾಧಿಕಾರಿಗಳೂ ಹಾಗೂ ರಾಮನಗರ ಜಿಲ್ಲಾಧಿಕಾರಿಗಳಾದ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಯಾವುದೇ ಲೋಪವಿಲ್ಲದೇ ಪೂರ್ಣ ಸಿದ್ಧತೆಗಳನ್ನು ನಡೆಸುತ್ತಿರುವುದರಿಂದ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗಿದ
ಗರಕಹಳ್ಳಿ ಸಿದ್ದೇಶ್ವರ ನಿಗೆ ಮಹಾಮಂಡಳೋತ್ಸವ
ಕಳೆದ ಪೆಬ್ರವರಿ ಎಂಟರಂದು ಉದ್ಘಾಟನೆಗೊಂಡಿದ್ದ ಗರಕಹಳ್ಳಿ ಸಿದ್ದೇಶ್ವರ ಸ್ವಾಮಿಗೆ ದಿನಾಂಕ ೨೭/೦೩/೨೦೧೯ ರ ಗುರುವಾರದಂದು ಮಹಾ ಮಂಡಳೋತ್ಸವ ನಡೆಯಲಿದೆ ಎಂದು ಗರಕಹಳ್ಳಿ ಸಿದ್ದೇಶ್ವರ ದೇವಾಲಯದ ಪುನರ್ ನಿರ್ಮಾಣ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.ಗ್ರಾಮದ ಹೊರವಲಯದ ಬೆಟ್ಟದ ಮೇಲೆ ನೆಲೆಸಿರುವ ಬೆಟ್ಟದ ಸಿದ್ದೇಶ್ವರ ಸ್ವಾಮಿ ಯ ದೇವರಗುಡಿಯು ಗ್ರಾಮದಲ್ಲಿ ಇದ್ದು ತುಂಬಾ ಶಿಥಿಲಗೊಂಡಿದ್ದರಿಂದ ದೇವಾಲಯ ಪುನರ್ನಿರ್ಮಾಣ
ಮೂಲ ಜಾನಪದ ಉಳಿಯಲು ಮೂಲ ಪರಿಕರಗಳನ್ನೇ ಬಳಸಬೇಕು ಗೋ ರಾ ಶ್ರೀನಿವಾಸ
ಇಂದಿನ ಎಲೆಕ್ಟ್ರಾನಿಕ್ ವಾದ್ಯ ಪರಿಕರಗಳು ಮತ್ತು ಆಧುನಿಕತೆ ಬೆಳೆಸಿಕೊಂಡ ಇಂದಿನ ಜಾನಪದ ಹಾಡುಗಾರರಿಂದ ಮೂಲ ಜಾನಪದ ನಶಿಸಿ ಹೋಗುತ್ತಿದೆ, ಮೂಲ ಜಾನಪದ ಕೇವಲ ಗೀತೆಯಾಗಿರದೇ ಅದೊಂದು ಜೀವನದ ಪಾಠವಾಗಿತ್ತು, ಅದನ್ನು ಉಳಿಸಿ ಬೆಳೆಸಲು ಇಂದಿನ ಪೀಳಿಗೆ ಮುಂದಾಗಬೇಕು ಎಂದು ಬಯಲುಸೀಮೆ ಸಂಜೆ ದಿನ ಪತ್ರಿಕೆಯ ವರದಿಗಾರರಾದ ಗೋ ರಾ ಶ್ರೀನಿವಾಸ ಅಭಿಪ್ರಾಯ ಪಟ್ಟರು.
ಕುರಿಗಾಹಿ ಉರುಳಿಗೆ ಚಿರತೆ ಬಲಿ
ಹಿಂದೊಮ್ಮೆ ಚಿರತೆಯೊಂದು ಕುರಿ ಕೊಟ್ಟಿಗೆಗೆ ಬಂದು ಕುರಿಯನ್ನು ಕೊಂದು ತಿಂದಿತ್ತು ಎಂಬ ಕಾರಣಕ್ಕೆ ಕುರಿ ಕೊಟ್ಟಿಗೆಯ ಬಳಿ ಮೋಟರ್ ಬೈಕ್ ನ ಎಕ್ಸಲೇಟರ್ ತಂತಿಯ ಉರುಳನ್ನು ಮಾಡಿ ಇಟ್ಟಿದ್ದ ಉರುಳಿಗೆ ಚಿರತೆಯೊಂದು ಸಿಲುಕಿ ಒದ್ದಾಡಿ ಪ್ರಾಣ ಬಿಟ್ಟಿರುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.ತಾಲ್ಲೂಕಿನ ಭೈರನಾಯಕನಹಳ್ಳಿ ಗ್ರಾಮದ ಅಮ್ಮಳ್ಳಿಗೌಡ ಬಿನ್ ವೀರಭದ್ರಯ್ಯ ಎಂಬುವವರು ಉರುಳು ಹಾಕಿದ್ದು ನಿನ್ನೆ ರಾತ್ರಿ ವೇಳೆಯಲ್ಲಿ ಬಂದ ಚಿ
ಸಂವಿಧಾನದ ಆಶಯ ಉಳಿಸಿ ಬಿಇಓ ಸೀತಾರಾಮು
ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ ನೇತೃತ್ವದಲ್ಲಿ ರಚನೆಯಾದ ಸಂವಿಧಾನದಲ್ಲಿ ನಮ್ಮೆಲ್ಲರಿಗೂ ನೀಡಿರುವ ಮಹತ್ವಾಕಾಂಕ್ಷೆಯ ಹಕ್ಕು ಮತದಾನದ ಹಕ್ಕು, ಈ ಹಕ್ಕು ಚಲಾವಣೆ ಆಗಬೇಕೆಂದರೆ ಪ್ರತಿ ನಾಗರೀಕರು ಮತ ಹಾಕಬೇಕು, ಆಗಲೇ ಸಂವಿಧಾನವೂ ನಮಗೆ ನೀಡಿರುವ ಹಕ್ಕುಗಳಿಗೆ ಒಂದು ಬೆಲೆ ಬರುತ್ತದೆ ಎಂದು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಸ್ ಸೀತಾರಾಮು ತಿಳಿಸಿದರು.
ಯಾವುದೇ ಅಡೆತಡೆ ಇಲ್ಲದೆ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ
ತಾಲ್ಲೂಕಿನಾದ್ಯಂತ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಯಾವುದೇ ರೀತಿಯ ಡಿಬಾರ್, ನಕಲು ನಡೆಯದೆ ಎರಡನೇ ದಿನವೂ ಸಹ ಯಶಸ್ವಿಯಾಗಿ ಪರೀಕ್ಷೆ ನಡೆಯಿತು.ಎಸ್ ಎಸ್ ಎಲ್ ಸಿ ಪರೀಕ್ಷೆ ಗೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸೀತಾರಾಮು ರವರನ್ನು ಪತ್ರಿಕಾ ವರದಿಗಾರ ಸಂಪರ್ಕ ಮಾಡಿದಾಗ ಪರೀಕ್ಷೆಗೆ ಸಂಬಂಧಿಸಿದಂತೆ ಎಲ್ಲಾ ಕೇಂದ್ರಗಳಲ್ಲಿಯೂ ಸಿ ಸಿ ಟಿವಿ, ಸಿಬ್ಬಂದಿಗಳ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿರುವುದರ
ಬಲಿಷ್ಠ ದೇಶಕ್ಕಾಗಿ ತಪ್ಪದೇ ಮತದಾನ ಮಾಡಿ ಚೈತ್ರಾ
ದೇಶದ ಬಲಿಷ್ಠತೆಗೆ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಪ್ರತಿಯೊಬ್ಬ ಮತದಾರರು ತಪ್ಪದೇ ಮತದಾನದಲ್ಲಿ ಭಾಗವಹಿಸಿಬೇಕು ಎಂದು ಸಮಾಜ ವಲಯ ಅರಣ್ಯ ಅಧಿಕಾರಿ ಚೈತ್ರಾ ತಿಳಿಸಿದರು.ಮತದಾನ ಜಾಗೃತಿ ಕುರಿತು ನಗರದ ಬಸ್ ನಿಲ್ದಾಣದ ಆವರಣದಲ್ಲಿ ಗಿಡ ನೆಡುವ ಮೂಲಕ ಮತದಾರರಿಗೆ ಜಾಗೃತಿ ಮೂಡಿಸಿದರು.ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ನಮ್ಮದಾಗಿದ್ದು ಅದನ್ನು ಉಳಿಸಿಕೊಳ್ಳಲು ಹಾಗೂ ದೇಶದ ಸುಭದ್ರತೆಗಾಗಿ ಉತ್ತಮರನ್ನು ಆಯ್ಕೆ