ಚನ್ನಪಟ್ಟಣ ಎಸ್ ಎಸ್ ಎಲ್ ಸಿ ಯಲ್ಲಿ ಸರ್ಕಾರಿ ಶಾಲೆಯೇ ಮೇಲುಗೈ
ಚನ್ನಪಟ್ಟಣ:೨೦೧೮/೧೯ ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಮನಗರ ಜಿಲ್ಲೆ ರಾಜ್ಯದಲ್ಲಿಯೇ ದ್ವಿತೀಯ ಸ್ಥಾನ ಪಡೆದರೆ, ಚನ್ನಪಟ್ಟಣ ತಾಲ್ಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಅದರಲ್ಲೂ ಬಹುತೇಕ ಪೋಷಕರು ಮೂಗು ಮುರಿಯುವ ಸರ್ಕಾರಿ ಶಾಲೆಗಳೇ ಮೇಲುಗೈ ಸಾಧಿಸಿರುವುದು ಶಿಕ್ಷಣ ಇಲಾಖೆಯ ಸಾಧನೆ ಎನ್ನಲಡ್ಡಿಯಿಲ್ಲ.ಚನ್ನಪಟ್ಟಣ ತಾಲ್ಲೂಕಿನಾದ್ಯಂತ ೨,೯೩೬ ಮಕ್ಕ
ತಾಲ್ಲೂಕು ಜೆಡಿಎಸ್ ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಮೂರನೇ ವ್ಯಕ್ತಿ ಸ್ಪರ್ಧೆಯೇ ಸಾಕ್ಷಿ
ಬಮೂಲ್ ನ ನಿರ್ದೇಶಕರ ಸ್ಥಾನಕ್ಕೆ ಜೆಡಿಎಸ್ ಪಕ್ಷದಿಂದ ಹಾಲಿ ನಿರ್ದೇಶಕ ಎಸ್ ಲಿಂಗೇಶ್ ಕುಮಾರ್ ಮತ್ತು ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಜಯಮುತ್ತು ಸ್ಪರ್ಧಿಸುವುದು ಖಚಿತ ಎಂಬುದನ್ನು ಮನಗಂಡ ಮಾಜಿ ಸಚಿವ ಸಿ ಪಿ ಯೋಗೇಶ್ವರ್, ಅವರ ಸಹೋದರ ಅಥವಾ ಬೆಂಬಲಿಗರಲ್ಲೊಬ್ಬರನ್ನು ಕಣಕ್ಕೆ ಇಳಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ, ಇದರ ನಡುವೆಯೇ ಜೆಡಿಎಸ್ ನ ಮತ್ತೊಬ್ಬ ಯುವ ಮುಖಂಡ ಪಕ್ಷದ ಮೂರನೇ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಜ್ಜಾಗಿರುವುದು ತಾಲ್ಲೂಕು ಜೆಡಿಎಸ್ ನ ಮುಖಂಡರ ಮುಸುಕಿನ ಗುದ್ದಾಟವನ್
ಟಿಬೇಟಿಯನ್ನರ ಹನ್ನೊಂದನೇ ಧರ್ಮಗುರು ಪಂಚೆನ್ ಲಾಮಾ ಬಿಡುಗಡೆಗೆ ಒತ್ತಾಯಿಸಿ ಪಾದಯಾತ್ರೆ.
ಟಿಬೇಟಿನ ಹತ್ತನೇ ಧರ್ಮಗುರು ದಲೈಲಾಮಾ ರವರು 1995 ರಲ್ಲಿ ಹನ್ನೊಂದನೇ ಧರ್ಮ ಗುರುವಾಗಿ ಆರು ವರ್ಷದ ಗೆಧೆಮ್ ಚೊಯ್ಕಿ ಎಂಬ ಬಾಲಕನನ್ನು ಗುರುತಿಸಿ ಅವರ ಸಂಪ್ರದಾಯದಂತೆ ದೀಕ್ಷೆ ನೀಡುವ ಸುದ್ದಿ ತಿಳಿದ ಚೀನಾ ಸರ್ಕಾರವು ಆ ಬಾಲಕನನ್ನು ಕುಟುಂಬ ಸಮೇತವಾಗಿ ಅಪಹರಿಸಿ ಬಂಧನದಲ್ಲಿ ಇಟ್ಟಿದ್ದಾರೆ, ಅಪಹರಿಸಿ 24 ವರ್ಷಗಳು ಸಂದರೂ ಸಹ ಅವರ ಬಿಡುಗಡೆ ಮಾಡಿಲ್ಲ.
ಮಕ್ಕಳಿಗೆ ವಿದ್ಯೆಯ ಜೊತೆಗೆ ಸಂಸ್ಕಾರ ಕಲಿಸಬೇಕು ಎಸ್ ಐ ಹೇಮಂತ್ ಕುಮಾರ್*
ಚನ್ನಪಟ್ಟಣ: ಯಾವ ವ್ಯಕ್ತಿ ಯಾವಾಗ ಬೇಕಾದರೂ ಹೇಗೆ ಬೇಕಾದರೂ ಹಣ ಸಂಪಾದಿಸಬಹುದು, ಕಳೆದುಕೊಳ್ಳಬಹುದು, ಆದರೆ ಕಲಿತ ವಿದ್ಯೆಯಿಂದ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪಗೊಳ್ಳಬಹುದು, ಎಳೆಯ ಮಕ್ಕಳಿಗೆ ಕಲಿಸುವ ವಿದ್ಯೆಯ ಜೊತೆಜೊತೆಗೆ ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ಸಂಸ್ಕಾರವನ್ನು ಕಲಿಸಿಕೊಡಬೇಕೆಂದು ಸಬ್ ಇನ್ಸಪೆಕ್ಟರ್ ಹೇಮಂತ್ ಕುಮಾರ ರವರು ಶಿಕ್ಷಕರು ಮತ್ತು ಪೋಷಕರಿಗೆ ಕಿವಿಮಾತು ಹೇಳಿದರು.ನಗರದ ಐದು ದೀಪಗಳ
ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭ
ಸಾರ್ವಜನಿಕ ಶಿಕ್ಷಣ ಇಲಾಖೆ, ರಾಮನಗರ ಮತ್ತು ಬಾಷ್ ಲಿಮಿಟೆಡ್ ಇವರ ಸಹಯೋಗದೊಂದಿಗೆ ಬಾಷ್ ಇಂಡಿಯಾ ಪ್ರತಿಷ್ಠಾನ, ಯೆಲ್ಲೊ ಆಂಡ್ ರೆಡ್ ಫೌಂಡೇಷನ್ಸ್, ಅಗಸ್ತ್ಯ ಫೌಂಡೇಷನ್ ಸಹಯೋಗದಿಂದ ಈ ದಿನ ಶ್ಯಾನುಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭ ನೆರವೇರಿತು. ಇದೇ ಸಂಧರ್ಭದಲ್ಲಿ ಶಿಬಿರಕ್ಕೆ ಹಾಜರಾದ ಮಕ್ಕಳೆಲ್ಲರಿ
ಇಂದು ಮತ್ತು ನಾಳೆ ಸಿ.ಇ.ಟಿ ಪರೀಕ್ಷೆ, ಒಟ್ಟು ೫೬೧ ಜನ ಪರೀಕ್ಷಾರ್ಥಿಗಳು
ಚನ್ನಪಟ್ಟಣ: ಇಂದಿನಿಂದ ಸಿಇಟಿ ಪರೀಕ್ಷೆ ಶುರುವಾಗಿದೆ. ನಾಳೆ ಮುಕ್ತಾಯಗೊಳ್ಳಲಿದೆ.ಚನ್ನಪಟ್ಟಣದಲ್ಲಿ ಬಾಲಕರ ಹಾಗೂ ಬಾಲಕಿಯರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಪರೀಕ್ಷೆ ನಿಯೋಜನೆಗೊಂಡಿದ್ದು ಪರೀಕ್ಷೆಯು ೧೦.೩೦ ರಿಂದ ೧೧.೩೦, ಮದ್ಯಾಹ್ನ ೨.೩೦ ರಿಂದ ೩.೩೦ ರವರೆಗೆ ನಿಯೋಜನೆಯಾಗಿದೆ.ಈ ಪರೀಕ್ಷೆಯಲ್ಲಿ ೨೮೦ ಜನ ಗಂಡು ಮಕ್ಕಳು, ೨೮೧ ಜನ ಹೆಣ್ಣು ಮಕ್ಕಳು ಪರೀಕ್ಷೆ ಕಟ್ಟಿದ್ದಾರೆ. ಇಂದು ಬಯಾಲಜಿ
ರಕ್ತಕೊಡುವುದನ್ನೇ ಉದ್ಯೋಗ ಮಾಡಿಕೊಂಡವರಿಂದ ರಕ್ತ ಸಂಗ್ರಹಿಸಬೇಡಿ- ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ
ಇಂದು ಚಂದ್ರು ಡಯಾಗ್ನೋಸ್ಟಿಕ್ ಸೆಂಟರ್ ನಲ್ಲಿ ಜೀವಾಮೃತ ಬ್ಲಡ್ ಬ್ಯಾಂಕ್ನ್ನು ರಾಮನಗರ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ ರಾಜೇಂದ್ರ ರವರು ಉದ್ಘಾಟಿಸಿದರು. ರಕ್ತನಿಧಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ಡಾ. ಕೆ. ರಾಜೇಂದ್ರ ಅವರು ರಕ್ತ ಕೊಡುವುದನ್ನೇ ಉದ್ಯೋಗ ಮಾಡಿಕೊಂಡಿರುವವರಿಂದ ರಕ್ತ ಸಂಹ್ರಹಿಸ ಬೇಡಿ ಆರೋಗ್ಯವಂತ ಯುವಕರು ಮತ್ತು ಸಂಘಸಂಸ್ಥೆಗಳ ಸದಸ್ಯರಿಂದ ರಕ್ತ ಸಂಗ್ರಹಿಸಿ ಎಂದು ಸಲಹೆ ನೀಡಿದರು.
ಗಬ್ಬು ನಾರುತ್ತಿರುವ ಕನ್ಸರ್ವೆನ್ಸಿ ಗಲ್ಲಿಗಳು
ನಗರದ ಹೃದಯ ಭಾಗವಾದ ಅತಿ ಹೆಚ್ಚು ವಿಸ್ತೀರ್ಣವುಳ್ಳ ನಿವೇಶನಗಳು ಮತ್ತು ಮನೆಗಳಿರುವ ಬಡಾವಣೆ ಎಂದರೆ ಅದು ಬೆಂಗಳೂರು ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತಿರುವ ಪ್ರತೀಷ್ಟಿತ ಕನ್ನಡದ ಹಿರಿಯ ಕವಿ ಕುವೆಂಪು ಹೆಸರಿನ ಬಡಾವಣೆ.ಈ ಬಡಾವಣೆಯ ಎಲ್ಲಾ ಮುುಖ್ಯ ರಸ್ತೆಗಳಿಗೆ ಎರಡು ರಸ್ತೆ ಸೇರಲು ಗಲ್ಲಿಗಳನ್ನು ನಿವೇಶನಗಳನ್ನು ಹಂಚುವ
ಬಮೂಲ್ ಕ್ಷೇತ್ರದಲ್ಲಿ ಜೆಡಿಎಸ್ ನ ಜಗಳದ ಲಾಭ ಪಡೆಯಲು ಮುಂದಾದ ಸಿಪಿವೈ ! ?
ಚನ್ನಪಟ್ಟಣ: 28/4/2019 ಭಾನುವಾರ; ಕಳೆದ ಐದು ವರ್ಷಗಳಲ್ಲಿ ಅಧಿಕಾರಕ್ಕಾಗಿ ನ್ಯಾಯಾಲಯಕ್ಕೆ ಅಲೆದಾಡಿ ತಮ್ಮ ಸ್ವಾರ್ಥಕ್ಕೆ ಹೈನುಗಾರರನ್ನು ಬಲಿಕೊಟ್ಟವರ ವಿರುದ್ದ, ರೈತರ ಮತ್ತು ಹೈನುಗಾರಿಕೆ ಪರ ಕೆಲಸ ಮಾಡುವ ಒಬ್ಬ ಬೆಂಬಲಿಗನನ್ನು ಬಮೂಲ್ ಚುನಾವಣೆÀಗೆ ಸ್ಪರ್ಧಿಸಲು ಸಜ್ಜುಗೊಳಿಸಲಾಗುವುದು ಎಂದು ಮಾಜಿ ಅರಣ್ಯ ಸಚಿವ ಸಿ ಪಿ ಯೋಗೇಶ್ವರ್ ಬಹಿರಂಗವಾಗಿ ತಿಳಸಿದರು.ಅವರು ಚನ್ನಪಟ್ಟಣದ ಸಾತನೂರು ರಸ್ತೆಯ ಸುಣ್ಣಘಟ್ಟ ಗ್ರಾಮದ ಬಳಿ ಇರುವ ತ
ಚನ್ನಪಟ್ಟಣ ನಗರಸಭೆ ಮತ್ತು ಹೆದ್ದಾರಿ ಚರಂಡಿಗಳ ಕಳಪೆ ಕಾಮಗಾರಿ
ಚನ್ನಪಟ್ಟಣ ನಗರಸಭೆ ಮತ್ತು ರಾಷ್ಟ್ರೀಯ ಹೆದ್ದಾರಿ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಜೊತೆಗೆ ಎರಡೂ ಬದಿಯಲ್ಲಿ ಚರಂಡಿ ನಿರ್ಮಿಸಿ ಪಾದಚಾರಿಗಳು ಓಡಾಡಲು ಅನುಕೂಲ ಮಾಡಿಕೊಟ್ಟಿರುವುದು ಸರಿಯಷ್ಟೇ, ನಗರಸಭೆಯ ವತಿಯಿಂದ ನಡೆದ ಒಳ ಚರಂಡಿ ಕಾಮಗಾರಿಗಳಲ್ಲಿ ರಸ್ತೆ ಮತ್ತು ಚರಂಡಿ (ಬಾಕ್ಸ್) ನಿರ್ಮಾಣವಾದ ನಂತರ ಮೇಲೆ ಸಿಮೆಂಟ್ ಸ್ಲ್ಯಾಬ್ ಗಳನ್ನು ಅಳವಡಿಸಿದ್ದಾರೆ, ಇದು ಕ್ರಮಬದ್ಧವಾಗಿ ಇಲ್ಲ, ಹಾಗೂ ಅಳವಡಿಸಿದ ನಂತರ ಸಿಮೆಂಟ್ ಹಾಕಿ ಮುಚ್ಚದೆ ಇರುವುದರಿಂದ ಪಾದಚಾ