ಮುಂಜಾಗ್ರತಾ ಕ್ರಮದೊಂದಿಗೆ ಶೃಂಗಾರಗೊಂಡ ಶಾಲೆಗಳು: ಶಿಸ್ತಿನಿಂದ ಹಾಜರಾದ ವಿದ್ಯಾರ್ಥಿಗಳು
ಚನ್ನಪಟ್ಟಣ:ಜ/01/21/ಶುಕ್ರವಾರ. ಕೋವಿಡ್-,19 ಭೀತಿಯ ನಡುವೆಯೂ ಇಂದಿನಿಂದ ಶಾಲಾ, ಕಾಲೇಜುಗಳು ಆರಂಭವಾಗಿದ್ದು ರಾಜ್ಯದಾದ್ಯಂತ ಮಕ್ಕಳು ಕೊರೊನಾ ವೈರಸ್ ದುಗುಡದೊಂದಿಗೆ ಶಾಲೆ, ಕಾಲೇಜುಗಳತ್ತ ಮುಖಮಾಡಿದ್ದಾರೆ. ಒಂಬತ್ತು ತಿಂಗಳಿಂದ ಸ್ಮಶಾನ ಮೌನಕ್ಕೆ ಜಾರಿದ್ದ ಶಾಲೆಗಳ ಆವರಣಗಳಲ್ಲಿ ಇಂದು ಮಕ್ಕಳ ಚಿಲಿಪಿಲಿ ನಾದ ಮೇಳೈಸಿದೆ.ಇಂದಿನಿಂದ ಪ್ರಾರಂಭವಾಗಿರುವ ಶಾಲೆಗಳಿಗೆ ಮಕ್ಕಳನ್ನು ಸ್ವಾಗ
ಅಕ್ರಮ ಗಣಿಗಾರಿಕೆ ವಿರುದ್ಧ ಸೂಕ್ತ ಕ್ರಮ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿ ಸಿ ಪಾಟೀಲ್
ರಾಮನಗರ:ಜ/01/21/ಶುಕ್ರವಾರ. ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದು ಸಾಬೀತಾದರೆ ದಂಡ, ಓವರ್ ಲೋಡ್ ಹಾಕಿದರೆ ದಂಡ ಹಾಗೂ ದಿನದ ಇಪ್ಪತ್ನಾಲ್ಕು ಗಂಟೆಯು ಚೆಕ್ ಪೋಸ್ಟ್ ನಿರ್ವಹಣೆ ಮಾಡಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಾದ ಸಿ.ಸಿ. ಪಾಟೀಲ್ ಅವರು ಇಂದು ತಿಳಿಸಿದರು. ಅವರು ಇಂದು ಬಿಡದಿಯ ಹುರಗಾನಹಳ್ಳಿ ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮ ಪ್
ಜಿಲ್ಲಾಸ್ಪತ್ರೆಗೆ ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಒದಗಿಸಿ: ಡಾ. ಸಿ.ಎನ್.ಅಶ್ವತ್ಥ ನಾರಾಯಣ
ರಾಮನಗರ:ಡಿ/29/20/ಮಂಗಳವಾರ. ಜಿಲ್ಲೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ 250 ಹಾಸಿಗೆ ಸಾಮರ್ಥ್ಯದ ಜಿಲ್ಲಾ ಆಸ್ಪತ್ರೆಗೆ ಅಗತ್ಯ ತಜ್ಞ ವೈದ್ಯರು, ವೈದ್ಯರು ಹಾಗೂ ಸಿಬ್ಬಂದಿಗಳನ್ನು ಆದ್ಯತೆ ಮೇರೆಗೆ ಒದಗಿಸಲು ಕ್ರಮಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಉಪ ಮುಖ್ಯಮಂತ್ರಿ ಸಿ.ಎನ್. ಅಶ್ವತ್ಥ ನಾರಾಯಣ ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಿಂದ ನಡೆಸಿದ ವಿಡಿಯೋ ಸಂವಾ
ಒಕ್ಕಲಿಗರ ಸಾರ್ವಜನಿಕ ಸಂಸ್ಥೆಯ ಚುನಾವಣಾಧಿಕಾರಿ ಬದಲಿಸಿ, ನ್ಯಾಯಯುತ ಚುನಾವಣೆ ನಡೆಸುವಂತೆ ಆಗ್ರಹ
ಚನ್ನಪಟ್ಟಣ:ಡಿ/29/20/ಮಂಗಳವಾರ. ತಾಲ್ಲೂಕಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಾದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಆಡಳಿತ ಮಂಡಳಿಯ ಚುನಾವಣೆಯು 2021 ರ ಜನವರಿ 3 ನೇ ತಾರೀಖಿಗೆ ನಿಗದಿಯಾಗಿದ್ದು, ಅದರ ಪೂರ್ವಭಾವಿಯಾಗಿ ನಡೆಯಬೇಕಾಗಿದ್ದ ಸಿದ್ದತೆಗಳಲ್ಲಿ, ಚುನಾವಣಾಧಿಕಾರಿಗಳು ಲೋಪವೆಸಗಿದ್ದಾರೆ ಎಂದು ಆರೋಪಿಸಿ ಇಂದು ಹಲವು ಅಭ್ಯರ್ಥಿಗಳು ಆರೋಪ ಮಾಡಿದರು.
ಕುವೆಂಪು ಮಹಾನ್ ದಾರ್ಶನಿಕರು ದಂಡಾಧಿಕಾರಿ ನಾಗೇಶ್
ಚನ್ನಪಟ್ಟಣ:ಡಿ/29/20/ಮಂಗಳವಾರ. ಕುವೆಂಪು ರವರು ಕೇವಲ ಕವಿಯಾಗಿರಲಿಲ್ಲ. ಅವರು ಒಬ್ಬ ಮಹಾನ್ ದಾರ್ಶನಿಕರಾಗಿದ್ದರು. ಅವರ ಮಾತು ಮತ್ತು ಕೃತಿಗಳು ಮೌಲ್ಯಯುತವಾಗಿದ್ದವು ಎಂದು ದಂಡಾಧಿಕಾರಿ ನಾಗೇಶ್ ರವರು ಅಭಿಪ್ರಾಯ ಪಟ್ಟರು.ಅವರು ಇಂದು ತಾಲ್ಲೂಕು ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಕುವೆಂಪು ರವರ 116 ನೇ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಕಿಸಾನ್ ಯೋಜನೆಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಲು ಕರೆ ನೀಡಿದ ತಹಶಿಲ್ದಾರ್ ನಾಗೇಶ್
ಚನ್ನಪಟ್ಟಣ:ಡಿ/28/20/ಸೋಮವಾರ.ಕಿಸಾನ್ ವತಿಯಿಂದ ಬಹಳಷ್ಟು ಯೋಜನೆಗಳಿದ್ದು ರೈತರು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಾಲ್ಲೂಕಿನ ದಂಡಾಧಿಕಾರಿ ನಾಗೇಶ್ ರವರು ರೈತರಿಗೆ ಕರೆ ನೀಡಿದರು. ಅವರು ಇಂದು ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರೈತ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.ಇಂದು ಸಾಫ್ಟವೇರ್ ಇ
ಪಕ್ಷದ ಸಭೆಯಲ್ಲಿ ನಿಧನರಾಗಿದ್ದ ಕಾರ್ಯಕರ್ತನ ಕುಟುಂಬಕ್ಕೆ ಡಿಸಿಎಂ ಸಾಂತ್ವನ
ಮಾಗಡಿ:ಡಿ/23/20/ಬುಧವಾರ. ಇತ್ತೀಚೆಗೆ ಪಕ್ಷದ ಸಾರ್ವಜನಿಕ ಸಭೆಯಲ್ಲೇ ಹಠಾತ್ತನೆ ಹೃದಯಾಘಾತದಿಂದ ನಿಧನರಾದ ಮಾಗಡಿ ತಾಲ್ಲೂಕಿನ ತಿಪ್ಪಸಂದ್ರ ಹೋಬಳಿ ಮಂಡಲದ ಬಿಜೆಪಿ ಕಾರ್ಯದರ್ಶಿ ಶಿವರಾಜು ಅವರ ಹೆಬ್ಬಾಳಲು ನಿವಾಸಕ್ಕೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.ಶಿವರಾಜು ಅವರ ತಾಯಿ, ಪತ್ನಿ, ಮಕ್ಕಳಿಗೆ ಸಾಂತ್ವನ ಹೇಳಿದರಲ್ಲದೆ, ನಿಮ್ಮ ಯಾವುದೇ
ಕೃಷಿ, ನೀರಾವರಿ ಯೋಜನೆಗಳ ಜಾರಿಯಲ್ಲಿ ರಾಜಿ ಇಲ್ಲ ಎಂದ ಡಿಸಿಎಂ
ರಾಮನಗರ:ಡಿ/23/20/ಬುಧವಾರ.*ರೈತ ದಿನದ ಅಂಗವಾಗಿ ಇಡೀ ದಿನ ಗ್ರಾಮ ಸಂಚಾರ; ಹಲವೆಡೆ ಅನ್ನದಾತರ ಜತೆ ಸಂವಾದ ***:ರೈತರಿಗೆ ಪೂರಕವಾದ ಕೃಷಿ ಮತ್ತು ನೀರಾವರಿ ಯೋಜನೆಗಳನ್ನು ಕಾರ್ಯಗತ ಮಾಡುವ ವಿಷಯದಲ್ಲಿ ರಾಜ್ಯ ಸರಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸ್ಪಷ್ಟ ಮಾತುಗಳಲ್ಲಿ ತಿಳಿಸಿದರು
ರಾಜ್ಯ ಸರ್ಕಾರಿ ನೌಕರರ ಸಂಘದಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ
ರಾಮನಗರ:ಡಿ/19/20/ಶನಿವಾರ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಘಟಕ ರಾಮನಗರ ಜಿಲ್ಲೆ , ಸರ್ವ ಸದಸ್ಯರ ಮಹಾಸಭೆ, ನೌಕರರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವು ಜನವರಿ-2021 ರ ಮಾಹೆಯಲ್ಲಿ ನಗರದ ಡಾ// ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಕೆ ಭೈರಲಿಂಗಯ್ಯ, ಅವರು ತಿಳಿಸಿದರು
ದಾನಿಗಳ ನೆರವಿನಿಂದ ಚನ್ನಪ್ಪಸ್ವಾಮಿ ಬೆಟ್ಟಕ್ಕೆ ಶಾಶ್ವತವಾಗಿ ನೀರೆರೆದ ಗ್ರಾಮಸ್ಥರು
ಚನ್ನಪಟ್ಟಣ:ಡಿ/19/20/ಶನಿವಾರ. ಭೂಮಿಯಲ್ಲಿ ಕೊಳವೆ ಬಾವಿಗೆ ನೀರು ದಕ್ಕಿದ್ದು ತಾಳು ಬೆಟ್ಟಕ್ಕೆ 900 ಮೀಟರ್ ದೂರದಲ್ಲಿ. ತಾಳು ಬೆಟ್ಟದಿಂದ ಶ್ರೀ ಚನ್ನಪ್ಪ ಸ್ವಾಮಿ ಬೆಟ್ಟದ ಎತ್ತರ 1610 ಮೀಟರ್. ಒಟ್ಟು 2510 ಮೀಟರ್ ಬೆಟ್ಟಕ್ಕೆ ಶಾಶ್ವತವಾಗಿ ನೀರು ಸರಬರಾಜು ಆಗುವಂತೆ ದಾನಿಗಳ ನೆರವಿನಿಂದ, ಮಂಗಾಡಹಳ್ಳಿ ಗ್ರಾಮದ ಮುಖಂಡ ಮುನಿಸಿದ್ದೇಗೌಡ ರ ನೇತೃತ್ವದಲ್ಲಿ ನಿನ್ನೆ ಜರುಗಿತು.