ನಗರದ ಕಸದಲ್ಲಿ ನಾಯಿಗಳ ಅಲೆದಾಟ, ಕೋವಿಡ್ ನೆಪದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ. ಪ್ರಾಣಹಾನಿ, ಅನಾರೋಗ್ಯ ಕಟ್ಟಿಟ್ಟಬುತ್ತಿ
ಚನ್ನಪಟ್ಟಣ:ಆ/19/20/ಬುಧವಾರ. ನಗರದ ತುಂಬೆಲ್ಲಾ ಎಲ್ಲಿ ನೋಡಿದರಲ್ಲಿ ಕಸದ ರಾಶಿ ತುಂಬಿ ತುಳುಕುತ್ತಿದೆ. ಕಸ ಹಾಕುವುದಕ್ಕೆ ನಿಗದಿತ ಜಾಗವೇ ಇಲ್ಲ. ಅಲ್ಲೊಂದು ಇಲ್ಲೊಂದು ಜಾಗ ಇದ್ದರೂ ಸಹ ನಗರಸಭೆಯ ಕಾರ್ಮಿಕರು ಕಸ ಎತ್ತುವ ಮೊದಲೇ ಅರ್ಧ ರಸ್ತೆಗೆ ಬಂದಿರುತ್ತದೆ. ಎಂದಿಗಿಂತಲೂ ಹೆಚ್ಚಾಗಿರುವ ನಾಯಿಗಳ ಹಿಂಡು ಕಸದ ರಾಶಿಯಲ್ಲಿ ಆಹಾರವನ್ನು ಅರಸುತ್ತಾ ಕಚ್ಚಾಡುತ್ತಿವೆ. ಈಗಾಗಲೇ ಹಲವಾರು ಕಡೆ ನಾಯಿ
ನರೇಗಾ ಯೋಜನೆ ಸಮರ್ಪಕ ಅನುಷ್ಠಾನಗೊಳಿಸಿದ ತಾಲ್ಲೂಕಿನ ಐವರು ಅಧಿಕಾರಿಗಳಿಗೆ ಜಿಲ್ಲಾಮಟ್ಟದ ಸೇವಾ ಪ್ರಶಸ್ತಿ
ಚನ್ನಪಟ್ಟಣ:ಆ/18/20/ಮಂಗಳವಾರ. ತಾಲ್ಲೂಕು ಪಂಚಾಯಿತಿ ಯ ಹಾಲಿ ಕಾರ್ಯನಿರ್ವಹಣಾಧಿಕಾರಿ ಚಂದ್ರು, ಮಾಜಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ರಾಮಕೃಷ್ಣಪ್ಪ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎಚ್.ಆರ್.ವಿವೇಕ್, ತಿಟ್ಟಮಾರನಹಳ್ಳಿ ಗ್ರಾಮ ಪಂಚಾಯ್ತಿಯ ಅಭಿವೃದ್ಧಿ ಅಧಿಕಾರಿ ಜೆ.ಕಾವ್ಯ, ಎ.ಎಂ.ಪ್ರಶಾಂತ್ ಹಾಗೂ ಬಿಟಿಎಫ್ ಸಿ.ಪ್ರಸನ್ನ ಪ್ರಶಸ್ತಿಗೆ ಭಾಜನರಾಗಿದ್ದು, ರಾಮ
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಒನ್ ಭೂಮಿ ಫೌಂಡೇಶನ್ ವತಿಯಿಂದ ಗಿಡಗಳನ್ನು ನೆಡಲಾಯಿತು
ಚನ್ನಪಟ್ಟಣ:ಆ/15/20/ಶನಿವಾರ. ನಗರದ ಒನ್ ಭೂಮಿ ಫೌಂಡೇಶನ್ ವತಿಯಿಂದ ಇಂದು ಹೆದ್ದಾರಿ ಹಾಗೂ ಶೆಟ್ಟಿಹಳ್ಳಿ ಕೆರೆಯ ನಡುವಣ ಕೆಪಿಟಿಸಿಎಲ್ ನ ರಕ್ಷಣಾ ಗೋಡೆಯ ಬಳಿ ಗಿಡಗಳನ್ನು ನೆಡುವ ಮೂಲಕ 74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿದರು.ಈ ವೇಳೆ ಮಾತನಾಡಿದ ಒನ್ ಭೂಮಿ ಫೌಂಡೇಶನ್ ನ ಯುವ ಉತ್ಸಾಹಿಗಳು ನಾವು ಪೋಟೋ ಮತ್ತು ಪ್ರಚಾರಕ್ಕಾಗಿ ಗಿಡಗಳನ್ನ
ಸ್ವಾತಂತ್ರ್ಯ ಬಂದು 74 ವರ್ಷವಾದರೂ ಸಮಾನತೆ ಸಾಧಿಸಲಾಗಿಲ್ಲ. ತಹಶಿಲ್ದಾರ್ ನಾಗೇಶ್
ಚನ್ನಪಟ್ಟಣ:ಆ/15/20/ಶನಿವಾರ. ಸ್ವಾತಂತ್ರ್ಯ ಬಂದು ಇಂದಿಗೆ 74 ವರ್ಷ ಕಳೆದರೂ ದೇಶದಲ್ಲಿ ನಾವು ಸಮಾನತೆ ಸಾಧಿಸಲಾಗಿಲ್ಲ. ಅಸಮಾನತೆ ನಮ್ಮಲ್ಲಿ ತಾಂಡವಾಡುತ್ತಿದೆ. ಸಮಾನತೆ ಸಾಧಿಸಲು ಯುವಶಕ್ತಿ ಪಣ ತೊಡಬೇಕು, ಎಂದು ತಾಲ್ಲೂಕಿನ ದಂಡಾಧಿಕಾರಿ ನಾಗೇಶ್ ಅಭಿಪ್ರಾಯ ಪಟ್ಟರು.ಅವರು ಇಂದು ನಗರದ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲ್ಲೂಕು
ರಾಮನಗರ ಅಭಿವೃದ್ಧಿ ಯೋಜನೆಗಳ ಬಗ್ಗೆ ಡಿಸಿಎಂ ಸಮಾಲೋಚನೆ:
ರಾಮನಗರ:ಆ/13/20/ಗುರುವಾರ. 250 ಬೆಡ್’ಗಳ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ, ಕುಡಿಯುವ ನೀರು, ಒಳಚರಂಡಿ ಅಭಿವೃದ್ಧಿ ಬಗ್ಗೆ ಚರ್ಚೆ***ಬೆಂಗಳೂರು: ರಾಮನಗರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಇಲ್ಲಿನ ವಿಕಾಸಸೌಧ ದಲ್ಲಿ ಗುರುವಾರ ಸರಣಿ ಸಭೆಗಳನ್ನು ನಡೆಸಿದ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಅಭಿವೃದ್ಧಿ ಕಾಮಗಾರ
ಮುಂಗಾರು ಮಳೆಗೆ ಚುರುಕುಗೊಂಡ ಬಿತ್ತನೆ ಕಾರ್ಯ. ಮುಂದುವರೆದ ರಸಗೊಬ್ಬರ ಕೊರತೆ
ಚನ್ನಪಟ್ಟಣ:ಆ/13/20/ಗುರುವಾರ. ತಾಲ್ಲೂಕಿನಾದ್ಯಂತ ಮುಂಗಾರು ಮಳೆಯ ನಡುವೆಯೇ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಈಗಾಗಲೇ ರಾಗಿ ಬಿತ್ತನೆ ಮಾಡಿದ ಅನೇಕ ರೈತರು ಅವುಗಳನ್ನು ಬಿಡಿಬಿಡಿಯಾಗಿಸಿ ನಾಟಿ ಮಾಡಿದರೆ ಇನ್ನೂ ಕೆಲ ರೈತರು ಬಿತ್ತಿದ್ದ ರಾಗಿಗೆ ಕುಂಟೆ ಹೊಡೆದು ಬಿಡಿಯಾಗಿಸತೊಡಗಿರುವುದು ಕಂಡು ಬರುತ್ತಿದೆ.ಈ ಬಾರಿ ಹಿಂಗಾರು ಸ್ವಲ್ಪ ಮುಂದಾಗಿಯೇ ಆರಂಭವಾದ್ದರಿಂದ ಕೆಲ ರೈತರು ತಮ್ಮ ಜಮೀನನ್ನು ಉತ್ತು ಹಸ
ನಮ್ಮ ಭೂಮಿ, ನಮ್ಮ ತಾಯಿ ಮಾರಾಟಕ್ಕಿಲ್ಲ. ರೈತಸಂಘ
ಚನ್ನಪಟ್ಟಣ:ಆ/11/20/ಮಂಗಳವಾರ. ತಾಲ್ಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕ ದಿಂದ *'ನಮ್ಮ ಭೂಮಿ, ನಮ್ಮ ತಾಯಿ ಎರಡೂ ಮಾರಾಟಕ್ಕಿಲ್ಲ’* ಎಂಬ ಹೋರಾಟಕ್ಕೆ ಚಾಲನೆ ನೀಡಲಾಯ್ತು.ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ರಾಜ್ಯ ಸಮಿತಿ ಉಪಾಧ್ಯಕ್ಷರಾದ ಎಂ.ರಾಮು ಅವರು, ನಮ್ಮ ಭೂಮಿ ಮತ್ತು ನಮ್ಮ ತಾಯಿ ಈ ಎರಡೂ ಮಾರಾಟಕ್ಕಿಲ್ಲ ಎಂದು ತಮ್ಮ
ಕೊರೋನಾ: ಚನ್ನಪಟ್ಟಣದ 20 ಮಂದಿ ಸೇರಿ ಇಂದು ಜಿಲ್ಲೆಯಲ್ಲಿ 76 ಪ್ರಕರಣ ದೃಢ
ರಾಮನಗರ:ಆ/10/20/ಸೋಮವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 20, ಕನಕಪುರ 17, ಮಾಗಡಿ 8 ಮತ್ತು ರಾಮನಗರ 31 ಪ್ರಕರಣಗಳು ಸೇರಿ ಇಂದು ಒಟ್ಟು 76 ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ. *ಒಟ್ಟು
ನರೇಗಾ ಅಕೌಂಟ್ಸ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ
ರಾಮನಗರ:ಆ/08/20/ಶನಿವಾರ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ನರೇಗಾ) ಸಮರ್ಪಕ ಅನುಷ್ಠಾನಕ್ಕಾಗಿ ರಾಮನಗರ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನುರಿತ ಅಕೌಂಟ್ಸ್ ಮ್ಯಾನೇಜರ್ ಅನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.ಎಂಕಾಂ ಇಲ್ಲವೇ ಎಂಬಿಎ ಫೈನಾನ್ಸ್ ನಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು. 35 ವರ್ಷ ಮೀರಿರಬಾರದು. ಕ
ತಾಲ್ಲೂಕಿನಲ್ಲಿ ಸರಳ ಸ್ವಾತಂತ್ರ್ಯೋತ್ಸವ ಆಚರಣೆ ತಹಶಿಲ್ದಾರ್ ನಾಗೇಶ್
ಚನ್ನಪಟ್ಟಣ:ಆ/07/20/ಶುಕ್ರವಾರ. ಕೊರೊನಾ (ಕೋವಿಡ್-19) ಹಿನ್ನೆಲೆಯಲ್ಲಿ 74 ನೇ ಸ್ವಾತಂತ್ರ್ಯೋತ್ಸವ ವನ್ನು ಸರಳವಾಗಿ ಆಚರಿಸಲಾಗುವುದು ಎಂದು ತಹಶಿಲ್ದಾರ್ ನಾಗೇಶ್ ರವರು ತಿಳಿಸಿದರು.ಅವರು ಇಂದು ತಾಲ್ಲೂಕು ಕಛೇರಿಯ ಸಭಾಂಗಣದಲ್ಲಿ ಅಧಿಕಾರಿಗಳು ಮತ್ತು ನಾಡಹಬ್ಬ ಆಚರಣಾ ಸಮಿತಿಯ ಸದಸ್ಯರ ಜೊತೆ ಚರ್ಚಿಸಿ ಈ ವಿಷಯ ತಿಳಿಸಿದರು.ಯಾವುದೇ ಶಾಲೆಯ ಮಕ್ಕಳನ್ನು ಕ