ಹಣಬಲ ಇರುವವರಿಗೆ ಇ-ಸ್ವತ್ತು ಮಾಡುವುದಲ್ಲಾ, ಬಡವರಿಗೆ ನಿಗದಿತ ಸಮಯದಲ್ಲಿ ಇ-ಸ್ವತ್ತು ನೀಡುವವನು ನೈಜ ಅಧಿಕಾರಿ. ಸಂಸದ ಡಿ ಕೆ ಸುರೇಶ್
ಚನ್ನಪಟ್ಟಣ:ಆ/06/20/ಗುರುವಾರ. ಹಣಬಲ ಇರುವವರಿಗೆ, ರಾಜಕಾರಣಿಗಳ ಹಿಂಬಾಲಕರಿಗೆ ಲಂಚ ಪಡೆದು, ಕೇಳಿದ ತಕ್ಷಣ ಇ-ಸ್ವತ್ತು ಮಾಡುವ ಅಧಿಕಾರಿಗಳು, ಬಡವರಿಗೂ ಅದೇ ಸಮಯದಲ್ಲಿ ಇ-ಸ್ವತ್ತು ಮಾಡಿಕೊಡಬೇಕು. ಆಗಲೇ ಅವನು ನಿಜವಾದ ಅಧಿಕಾರಿಯಾಗಲು ಸಾಧ್ಯ. ಗ್ರಾಮ ಪಂಚಾಯತಿಯಲ್ಲಿ ಪಿಡಿಓ ಆದಿಯಾಗಿ ಯಾವ್ಯಾವ ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಾರೆಂದು ಗೊತ್ತಿದೆ. ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್
ಸದ್ಯದಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಅತ್ಯವಶ್ಯ. ಲಾಕ್ ಡೌನ್ ಕ್ರಮ ಹೀಗಿರಲಿ
ಕೊರೊನಾ (ಕೋವಿಡ್-೧೯) ರಾಜ್ಯಾದ್ಯಂತ ಗಣನೀಯವಾಗಿ ಏರಿಕೆಯಾಗುತ್ತಿರುವುದು ಹಾಗೂ ಮಕ್ಕಳು, ಯುವಕರು, ಮುದುಕರೆನ್ನದೆ ಬಲಿ ಪಡೆಯುತ್ತಿರುವುದು ದಿನ ನಿತ್ಯವೂ ವರದಿಯಾಗುತ್ತಲೇ ಇವೆ. ಮುದ್ರಣ ಮಾಧ್ಯಮ ಹೊರತುಪಡಿಸಿದರೆ ದೃಶ್ಯ ಮಾಧ್ಯಮಗಳಲ್ಲಂತೂ ರೋಗ ಮತ್ತು ಸಾವಿನ ದೃಶ್ಯಗಳನ್ನು ದೊಡ್ಡ ಗಂಟಲಿನಿಂದ ಕಿರುಚಿ, ಚಿತ್ರವಿಚಿತ್ರವಾಗಿ ತೋರಿಸುವುದರ ಮೂಲಕ ಮನೆಮಂದಿಯನ್ನು ಭಯದಿಂದಲೇ ಸಾಯುವಂತೆ ಮಾಡುತ್ತಿರುವುದು ಮತ್ತೊಂದು ದುರಂತವೇ ಸರಿ.
ತಾಲ್ಲೂಕಿನಲ್ಲಿ ಪುನರಾರಂಭವಾಯಿತೇ ಮರಳು ದಂಧೆ !? ಪುಷ್ಟೀಕರಿಸುತ್ತಿದೆ ಅಪ್ಪಗೆರೆ ಬಳಿಯ ಸಾಕ್ಷಿಗುಡ್ಡೆ
ಚನ್ನಪಟ್ಟಣ:ಆ/05/20/ಬುಧವಾರ. ಕಳೆದ ವರ್ಷದಿಂದ ಮರಳು ಅಥವಾ ಮರಳು ದಂಧೆ ಎಂಬ ಹೆಸರೇ ಮರೆತು ಹೋಗಿದ್ದ ತಾಲ್ಲೂಕಿನ ಮಂದಿಗೆ ನಿನ್ನೆ ರಾತ್ರಿ ಎಡೆಬಿಡದೆ ಓಡಾಡಿದ ಲಾರಿಗಳು ಮತ್ತು ಟ್ರ್ಯಾಕ್ಟರ್ ಗಳ ಗಡಚಿಕ್ಕುವ ಸದ್ದಿನ ಜೊತೆಗೆ ಅಪ್ಪಗೆರೆ ಮತ್ತು ನೀಲಕಂಠನಹಳ್ಳಿ ನಡುವಿನ ಖಾಲಿ ಜಮೀನಿನಲ್ಲಿ ಗುಡ್ಡೆ ಹಾಕಿರುವ ಮರಳುಗುಡ್ಡೆಯು, ದಂಧೆ ಪುನಾರಾರಂಭಗೊಂಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಕನ್ನಡ ಚಳುವಳಿಯ ಹೋರಾಟಗಾರ ವಾಟಾಳ್ ನಾಗರಾಜ್ ರ ಧರ್ಮಪತ್ನಿ ನಿಧನ
ಬೆಂಗಳೂರು:ಆ/04/20/ಮಂಗಳವಾರ. ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ರವರ ಧರ್ಮಪತ್ನಿ ಜ್ಞಾನಾಂಬಿಕೆ ವಾಟಾಳ್ ನಾಗರಾಜ್ ರವರು (60) ಕಿಡ್ನಿ ವೈಫಲ್ಯದಿಂದ ಮಂಗಳವಾರ ರಾತ್ರಿ ಶೇಷಾದ್ರಿ ಪುರಂ ನ ಮಲ್ಲಿಗೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರ ಪಾರ್ಥಿವ ಶರೀರವನ್ನ ವಾಟಾಳ್ ನಾಗರಾಜ್ ರವರ ಸ್ವಗೃಹ ಡಾಲರ್ಸ್ ಕಾಲೋ
ವಿಜ್ಞಾನ ಹಿನ್ನೆಲೆ ವಿದ್ಯಾರ್ಥಿಗಳಿಗೆ ಸ್ವಾಬ್ ಸಂಗ್ರಹಣೆಗೆ ತರಬೇತಿ ನೀಡಿ: ಡಿಸಿಎಂ ಅಶ್ವಥ್ ನಾರಾಯಣ
ರಾಮನಗರ:ಆ/03/20/ಸೋಮವಾರ. ಕೋವಿಡ್ 19 ಪರೀಕ್ಷೆಯನ್ನು ಹೆಚ್ಚಿಸಲಾಗುತ್ತಿದ್ದು, ಸ್ವಾಬ್ ಸಂಗ್ರಹಣೆಗೆ ವಿಜ್ಞಾನ ಹಿನ್ನೆಲೆಯುಳ್ಳ ಬಿ.ಎಸ್.ಸಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಜಿಲ್ಲೆಯಲ್ಲಿ ನಿಯೋಜಿಸಿಕೊಳ್ಳಿ ಎಂದು ಉಪಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ತಿಳಿಸಿದರು.ಅವರು ಇಂದು
ಕೋವಿಡ್ ಪರೀಕ್ಷೆಯೇ ಮಾಡಿಸಿಲ್ಲಾ ಪಾಸಿಟಿವ್ ಮೆಸ್ಸೇಜ್ ಬಂದಿದೆ !? ಶಂ(ಸೋ)ಕಿತನ ಸಂಬಂಧಿಗಳಿಂದ ಆರೋಪ
ಚನ್ನಪಟ್ಟಣ:ಆ/03/20/ಸೋಮವಾರ. ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಎರಡು ತಿಂಗಳಿಂದೀಚೆಗೆ ಕೊರೋನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ಮಧ್ಯೆ ಚನ್ನಪಟ್ಟಣ ತಾಲ್ಲೂಕಿನಲ್ಲೂ 300 ರ ಗಡಿಯತ್ತ ಸಾಗುತ್ತಿದೆ. ಈ ನಡುವೆ ತಾಲೂಕು ಆಸ್ಪತ್ರೆ ವೈದ್ಯರ ಒಂದು ಯಡವಟ್ಟು, ಸಾರ್ವಜನಿಕರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಪರೀಕ್ಷೆ ಮಾಡಿಸದ
ಹನೂರು ಪಟ್ಟಣ ಪಂಚಾಯತಿಯಲ್ಲಿ ಇ-ಸ್ವತ್ತು ಭ್ರಷ್ಟಾಚಾರ. ಇಬ್ಬರ ತಲೆದಂಡ
ಹನೂರು:ಆ/೦೩/೨೦/ಸೋಮವಾರ.ಖಾತೆ ಬದಲಾವಣೆ, ಇ-ಸ್ವತ್ತು ವ್ಯವಹಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ್ದ ಪ್ರಕರಣದ ವಿಚಾರಣೆ ಎದುರಿಸುತ್ತಿದ್ದ ಹನೂರು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮೂರ್ತಿ ಹಾಗೂ ದ್ವಿತೀಯ ದರ್ಜೆ ಸಹಾಯಕಿ ಜಯಲಕ್ಷ್ಮಿ ರವರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವಿಚಾರಣೆ ಕಾಯ್ದಿರಿಸಿ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಕಾವೇರಿ ಯವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.ಶಿಸ್ತ
ದಕ್ಷ ತಹಶಿಲ್ದಾರ್ ಸುದರ್ಶನ್ ರವರ ವರ್ಗಾವಣೆ ಖಂಡಿಸಿ ಸಮಾನ ಮನಸ್ಕರಿಂದ ತಾಲ್ಲೂಕು ಕಛೇರಿ ಮುಂದೆ ಧರಣಿ
ಚನ್ನಪಟ್ಟಣ:ಆ/03/20/ಸೋಮವಾರ. ದಕ್ಷ, ಪ್ರಾಮಾಣಿಕ, ಜನಸ್ನೇಹಿ ತಹಶಿಲ್ದಾರ್ ಸುದರ್ಶನ್ ರವರ ವರ್ಗಾವಣೆ ವಿರೋಧಿಸಿ ತಾಲ್ಲೂಕಿನ ಸಮಾನ ಮನಸ್ಕರ ಒಕ್ಕೂಟದ ವತಿಯಿಂದ ಧರಣಿ ನಡೆಸಿ ನೂತನ ತಹಶಿಲ್ದಾರ್ ನಾಗೇಶ್ ರವರಿಗೆ ಮನವಿ ಸಲ್ಲಿಸಿದರು.ಸರ್ಕಾರಿ ಭೂಗಳ್ಳರ ವಿರುಧ್ಧ ನಿರಂತರವಾಗಿ ಸರ್ವೇ ನಡೆಸಿ ಒತ್ತುವರಿ ತೆರವುಗೊಳಿಸುವ ಮೂಲಕ ತಾಲ್ಲೂಕಿನ ಜನಸಾಮಾನ್ಯರ ಮನಸ್ಸನ್ನು
ಕೊರೋನಾ: ಜಿಲ್ಲೆಯಲ್ಲಿ ಇಂದು 59 ಪ್ರಕರಣ ದೃಢ ಜಿಲ್ಲಾಧಿಕಾರಿ
ರಾಮನಗರ:ಆ/02/20/ಭಾನುವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 22, ಕನಕಪುರ 11, ಮಾಗಡಿ 5 ಮತ್ತು ರಾಮನಗರ 21 ಪ್ರಕರಣಗಳು ಸೇರಿ ಇಂದು ಒಟ್ಟು 59 ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.*ಚನ್ನಪಟ್ಟಣ ವರದಿ
ಕೊರೋನಾ: ಜಿಲ್ಲೆಯಲ್ಲಿ ಇಂದು 64 ಕೊರೊನಾ ಪ್ರಕರಣ ದೃಢ ಜಿಲ್ಲಾಧಿಕಾರಿ
ರಾಮನಗರ:ಆ.01/20/ಶನಿವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 26, ಕನಕಪುರ 17, ಮಾಗಡಿ 4 ಮತ್ತು ರಾಮನಗರ 17 ಪ್ರಕರಣಗಳು ಸೇರಿ ಇಂದು ಒಟ್ಟು 64 ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.*ಚನ್ನಪಟ್ಟಣ ವ