ರೋಟರಿ ಕ್ಲಬ್ ಮತ್ತು ಶಾಲಾ ಮಕ್ಕಳಿಂದ ಸುರಕ್ಷತಾ ಚಾಲನೆ ಮತ್ತು ಪರಿಸರ ಜಾಗೃತಿ
ನಗರದ ರೋಟರಿ ಕ್ಲಬ್ ಸದಸ್ಯರು ಮತ್ತು ರೋಟರಿ ಶಾಲಾ ಮಕ್ಕಳು ಸುರಕ್ಷತಾ ಚಾಲನೆ ಮಾಡುವುದು ಹಾಗೂ ಪಟಾಕಿ ಸಿಡಿಸುವುದರಿಂದ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದರು. ರೋಟರಿ ಶಾಲೆಯಿಂದ ಜಾಥಾ ಹೊರಟು ನಗರದ ಪೋಲಿಸ್ ಠಾಣೆಯ ಮುಂಭಾಗ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಚಲಿಸುವ ವಾಹನಗಳ ಚಾಲಕರಿಗೆ ಸುರಕ್ಷತಾ ಚಾಲನೆ ಮತ್ತು ಪರಿಸರ ಜಾಗೃತಿ ಬಗ್ಗೆ ಅರಿವು ಮೂಡಿಸುವ ಕರಪತ್ರಗಳನ್ನು ಹಂಚಿ ನಂತರ ಎಂ ಜಿ ರಸ್ತೆ, ಅಂಚೆ ಕಛೇರಿ ರಸ್ತೆ ಮೂಲಕ ರೋಟರಿ
ಹಾರಿಜಾನ್ ಲೇಕ್ ವ್ಯೂವ್ ಶಾಲೆಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ
ಇಲ್ಲಿನ ಹಾರಿಜಾನ್ಲೇಕ್ ವ್ಯೂವ್ ಪಬ್ಲಿಕ್ ಶಾಲೆಯು ಈ ಸಾರಿಯ ೬೩ನೇ ಕನ್ನಡ ರಾಜ್ಯೋತ್ಸವವನ್ನು ನುಡಿ ವೈಭವ ೨೦೧೮ ಆಗಿ ಆಚರಿಸಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚನ್ನಪಟ್ಟಣ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ಎಸ್. ಸೀತಾ ರಾಮು ಅವರು ಮಾತನಾಡಿ, ನಮ್ಮ ವಿದ್ಯಾರ್ಥಿ ಸಮೂಹ ಇಂದು ಮೊಬೈಲ್ ಹಾಗೂ ದೂರದರ್ಶನಕ್ಕೆ ಮೊರೆ ಹೋಗುತ್ತಿದ್ದಾರೆ. ಅವುಗಳು ಉತ್ತಮ ಸಂಸ್ಕೃತಿ ಯನ್ನು ಕಲಿಸುವುದಿಲ್ಲ. ಅದಕ್ಕೆ ನಮ್ಮ ಕವಿಗಳು, ಬರಹಗಾರರು, ವಿಚಾರ ವಂತರು
ಶೇಕಡಾ ೭೦ ರಷ್ಟು ಸಿಬ್ಬಂದಿ ಕೊರತೆ ಎದುರಿಸುತ್ತಿರುವ ತಾಲ್ಲೂಕು ಪಂಚಾಯತ್, ಅಭಿವೃದ್ಧಿಯತ್ತ ಕೊಂಡೊಯ್ಯುವ ಭರವಸೆಯಲ್ಲಿ ಅಧಿಕಾರಿ
ತಾಲ್ಲೂಕು ಪಂಚಾಯತ್ ಇಲಾಖೆಯು ಈಗ ಸುಧಾರಿಸುತ್ತಿದೆ, ತಾಲ್ಲೂಕಿಗೆ ಸೇರಿದ ಮೂವತ್ತೆರಡು ಗ್ರಾಮ ಪಂಚಾಯತಿಗಳು ಸಹ ಉತ್ತಮವಾಗಿ ಕೆಲಸ ನಿರ್ವಹಿಸಲು ಸಶಕ್ತವಾಗಿವೆ, ತಾಲ್ಲೂಕು ಪಂಚಾಯತಿ ಕಛೇರಿಯಲ್ಲಿ ಹದಿನೇಳು ಹುದ್ದೆಗಳು ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇಪ್ಪತ್ತೆಂಟು ಹುದ್ದೆಗಳು ಖಾಲಿ ಇದ್ದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಲ್ಲಾ ಸಿಬ್ಬಂದಿಗಳು ಶೀಘ್ರವಾಗಿ ದೊರೆತರೆ ತಾಲ್ಲೂಕು ಪಂಚಾಯತ್ ನ್ನು ಉನ್ನತ ದರ್ಜೆಗೆ ಏರಿಸಲು ಶ್ರಮಿಸುತ್ತೇನೆ ಎಂದು ತಾಲ್ಲೂಕು ಪಂಚಾಯತ್ ಕಾರ್ಯನಿರ
ವರ್ತಕರು ಮತ್ತು ಕೈಗಾರಿಕೋದ್ಯಮಿಗಳ ಸಂಘದಿಂದ ಪ್ರಥಮ ಕನ್ನಡ ರಾಜ್ಯೋತ್ಸವ
ಇಂದು ನಗರದ ವರ್ತಕರ ಹೃದಯ ಭಾಗವಾದ ಪೇಟೆಬೀದಿಯ ನಿಂಬೆಹಣ್ಣು ವೃತ್ತದಲ್ಲಿ ಚನ್ನಪಟ್ಟಣ ತಾಲ್ಲೂಕಿನ ವರ್ತಕರು ಮತ್ತು ಕೈಗಾರಿಕೋದ್ಯಮಿಗಳ ಸಂಘದಿಂದ ಅರವತ್ಮೂರನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ವರ್ತಕರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಕನ್ನಡಾಭಿಮಾನಿಗಳು ನಗರದ ಪ್ರಮುಖ ಬೀದಿಗಳಲ್ಲಿ ಕನ್ನಡ ಪರ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದರು.
ರಾಮನಗರ ಚುನಾವಣಾಕಣದಿಂದ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ನಿವೃತಿ
ಬಿಜೆಪಿಗೆ ಶಾಕ್ ನೀಡಿದ ಎಲ್.ಚಂದ್ರಶೇಖರ್. ರಾಮನಗರ ಚುನಾವಣಾ ಕಣದಿಂದ ನಿವೃತ್ತಿ, ಸಂಸದ ಡಿ.ಕೆ.ಸುರೇಶ್ ಜೊತೆ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಜಂಟಿ ಪತ್ರಿಕಾ ಗೋಷ್ಠಿ, ನಡೆಸಿದ ಚಂದ್ರಶೇಖರ್, ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ಎಲ್ಲದಕ್ಕೂ ಕಾರಣ ಸಿ.ಪಿ.ಯೋಗೇಶ್ವರ್. ನಾನು ಬಲಿ ಪಶು ಆಗಿದ್ದೇನೆ. ಬಿಜೆಪಿ ಸಹವಾಸವೇ ಬೇಡ ಎಂದು ನನ್ನ ಮಾತೃ ಪಕ್ಷಕ್ಕೆ ಹಿಂದಿರುಗಿದ್ದೇನೆ.... ನನ್ನ ಬೆಂಬಲವನ್ನು ಮೈತ್ರಿ ಅಭ್ಯರ್ಥಿಗೆ ನೀಡುತ್ತೇನೆ. ನನ್
ಮೂರು ತಿಂಗಳಿಂದ ಹಾಲಿನ ದುಡ್ಡು ನೀಡಿಲ್ಲ ಎಂದು ಮಂಗಳವಾರಪೇಟೆ ಹೈನುಗಾರರಿಂದ ಪ್ರತಿಭಟನೆ
ಮೂರು ತಿಂಗಳಿನಿಂದ ಹಾಲಿನ ಬಟಾವಡೆ ಮಾಡದೆ ಹೈನುಗಾರರಿಗೆ ಮೋಸ ಮಾಡುತ್ತಿದ್ದಾರೆ ಎಂದು ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ರೇವಣ್ಣ ಮತ್ತು ಅಧ್ಯಕ್ಷ ಎಂ ಎನ್ ಸತ್ಯನಾರಾಯಣ ವಿರುದ್ಧ ಹಾಲು ಉತ್ಪಾದಕರ ಸಂಘದ ಕೇಂದ್ರ ಕಛೇರಿಯಲ್ಲಿ ಮಂಗಳವಾರಪೇಟೆಯ ಹಾಲು ಉತ್ಪಾದಕರು ಇಂದು ಬೆಳಿಗ್ಗೆ ಧರಣಿ ಮಾಡಿದರು. ನವೆಂಬರ್ ಒಂದನೇ ತಾರೀಖಿಗೆ ನಮಗೆಲ್ಲಾ ಹಣ ಬಟಾವಡೆ ಮಾಡಿ ಮೂರು ತಿಂಗಳಾಗುತ್ತದೆ, ಜೀವನೋಪಾಯಕ್ಕಾಗಿ ನಾವು ಹೈನುಗಾರಿಕೆಯಿಂದ ಜೀವನ ಮಾಡುತ್ತಿದ್ದೇವೆ, ಹಾಲು ಸರಬರಾಜು ಮಾಡಿದ ಹಣ ಕ
ಹೊಂಡಕ್ಕೆ ಬಿದ್ದು ದಿನಸಿ ಅಂಗಡಿ ಮಾಲೀಕ ನಿಗೂಢ ಸಾವು
ಚನ್ನಪಟ್ಟಣ ತಾಲ್ಲೂಕಿನ ಕಸಬಾ ಹೋಬಳಿ ಗೋವಿಂದೇಗೌಡನದೊಡ್ಡಿ ಗ್ರಾಮದಲ್ಲಿರುವ ಚಿಕ್ಕರಾಜು ಎಂಬುವವರು ತಮ್ಮ ಜಮೀನಿಗೆ ನೀರು ಉಣಿಸುವ ಸಲುವಾಗಿ ನಿರ್ಮಿಸಿಕೊಂಡಿರುವ ಸಿಮೆಂಟ್ ಕಟ್ಟಡದ ಬೃಹತ್ ಹೊಂಡಕ್ಕೆ ಯುವಕನೋರ್ವ ಮುಳುಗಿ ಸತ್ತಿದ್ದಾನೆ. ಬಹುಶ ಬೆಳಗಿನ ಜಾವ ಬಿದ್ದಿರಬಹುದೆಂದು ಶಂಕಿಸಲಾಗಿದೆ, ರಸ್ತೆ ಬದಿಯಲ್ಲಿ ತನ್ನ ಹೋಂಡಾ ಆಕ್ಟೀವಾ ದ್ವಿಚಕ್ರ ವಾಹನವನ್ನು ನಿಲ್ಲಿಸಿ ವಾಹನದ ಕೀಲಿ ಕೈ ಮತ್ತು ತನ್ನ ಆಂಡ್ರಾಯ್ಡ್ ಮೊಬೈಲ್ ಪೋನ್ ಎರಡನ್ನು ಹೊಂಡದ ಕಟ್ಟೆಯ ಮೇ
ಎಪಿಎಂಸಿ ಚುನಾವಣೆ ಮುಂದೂಡಿಕೆ, ಕಾಂಗ್ರೆಸ್ ಬಿಜೆಪಿ ನಿರ್ದೇಶಕರಿಂದ ಗಲಾಟೆ
ಇಂದು ನಿಗದಿಯಾಗಿದ್ದ ಎಪಿಎಂಸಿ ಚುನಾವಣೆಯನ್ನು ಏಕಾಏಕಿ ಮುಂದೂಡಲಾಗಿದೆ ಎಂದು ನಿರ್ದೇಶಕರು ಮತ್ತು ಸದಸ್ಯರು ಅಧಿಕಾರಿಯ ವಿರುದ್ಧ ದಂಗೆ ಎದ್ದು ಗಲಾಟೆ ಎಬ್ಬಿಸಿದ ಘಟನೆ ಎಪಿಎಂಸಿ ಕಛೇರಿಯಲ್ಲಿ ಇಂದು ನಡೆಯಿತು. ಎಪಿಎಂಸಿ ಅಧ್ಯಕ್ಷ ಕುಮಾರ್ ಮತ್ತು ನಿರ್ದೇಶಕರು, ಸದಸ್ಯರು ಅನೇಕ ಜನಪ್ರತಿನಿಧಿಗಳು ಇಂದು ಚುನಾವಣೆಗಾಗಿ ಆಗಮಿಸಿದರು, ಎಪಿಎಂಸಿ ಕಛೇರಿಯ ನೋಟಿಸ್ ಬೋರ್ಡ್ ನಲ್ಲಿ , ೨೯/೧೦/೧೮ ರಂದು ನಡೆಯಬೇಕಾಗಿದ್ದ ಎಪಿಎಂಸಿ ಅಧ್ಯಕ್ಷರ/ಉಪಾಧ್ಯಕ್ಷ
ಮೀನುಗಾರಿಕೆ ಇಲಾಖೆಯಲ್ಲಿ ಆಸಕ್ತಿ ಉಳ್ಳವರಿಗೆ ವಿಫುಲ ಅವಕಾಶಗಳಿವೆ ಯೋಗಾನಂದ
(ತಾಲ್ಲೂಕಿನಲ್ಲಿ ಅನೇಕ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದರೂ ಅನೇಕರಿಗೆ ಗೊತ್ತಿಲ್ಲ, ಅಥವಾ ಕೆಲವರಿಗಷ್ಟೇ ಸೀಮಿತವಾಗಿವೆ, ಹಾಗಾಗಿ ಪ್ರತಿ ಸೋಮವಾರ ನಿಮಗಾಗಿ ಇಲಾಖೆ ಮತ್ತು ಅಧಿಕಾರಿಗಳ ಪರಿಚಯ ನಿಮಗಾಗಿ) ಮೀನುಗಾರಿಕೆ ಇಲಾಖೆಯಲ್ಲಿ ಮೀನು ಕೃಷಿ ಮಾಡುವ ಆಸಕ್ತಿ ಉಳ್ಳವರಿಗೆ ವಿಫುಲ ಅವಕಾಶಗಳಿವೆ, ನಿರುದ್ಯೋಗಿಗಳು, ಕಡಿಮೆ ಭೂಮಿ ಉಳ್ಳವರು ಆಸಕ್ತಿ ವಹಿಸ ಮೀನು ಕೃಷಿಯಲ್ಲಿ ತೊಡಗಿಕೊಂಡರೇ ಆರ್ಥಿಕವಾಗಿ ಸದೃಢರಾಗಬಹುದು, ಇಲಾಖೆಯು ಆಸಕ್ತರಿಗೆ ತರಬೇತಿಯ ಜೊತೆಗೆ ಸಹಾಯಧನವನ್ನು ನೀಡ
ನಿವೃತ್ತ ನೌಕರರು ಅನುಭವದ ಗಣಿ ಕೃಷ್ಣಯ್ಯ
ಸರ್ಕಾರಿ ನಿವೃತ್ತ ನೌಕರರಲ್ಲಿ ದೀರ್ಘಕಾಲ ಕೆಲಸ ಮಾಡಿದ ಅನುಭವವಿದೆ, ಆ ಅನುಭವವನ್ನು ಆಯಾಯ ಇಲಾಖೆಗಳಿಗೆ ಸಂಬಂಧಿಸಿದಂತೆ ತಮ್ಮ ಜ್ಞಾನಾರ್ಜನೆಯನ್ನು ಇಲಾಖೆಗಳ ಸಿಬ್ಬಂದಿಗೆ ಧಾರೆ ಎರೆದರೆ ಇಲಾಖೆಯ ಕೆಲಸ ಸರಾಗವಾಗಿ ನಡೆಯುವುದರ ಜೊತೆಗೆ ನಿವೃತ್ತರ ಆರೋಗ್ಯವೂ ಸರಿಯಾಗಿ ಲವಲವಿಕೆಯಿಂದ ಇರಬಹುದು ಎಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಕೃಷ್ಣಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ತಾಲ್ಲೂಕು ಪಂಚಾಯತ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ನಿವೃತ್ತ