ಪ್ರಥಮ ಬಾರಿಗೆ ಚನ್ನಪಟ್ಟಣದ ಸಿ ಐ ಎಸ್ ಸಿ ಕ್ಲಬ್ ನಲ್ಲಿ ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಪಂದ್ಯಾವಳಿ
ಚನ್ನಪಟ್ಟಣ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ ಅಂಡ್ ಕಲ್ಚರ್ (ರಿ) ಕ್ಲಬ್ ನಲ್ಲಿ ನಿರ್ಮಾಣವಾಗಿರುವ ವುಡನ್ ಕೋಟ್೯ ನಲ್ಲಿ ರಾಮನಗರ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ (ರಿ) ಮತ್ತು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ದಿನಾಂಕ ೨೬ ರಿಂದ ೨೮ ರವರೆಗೆ ಪ್ರಪ್ರಥಮ ಬಾರಿಗೆ ಯುನೆಕ್ಸ್ ಸನ್ ರೈಸ್ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಪಂದ್ಯಾವಳಿ ನಡೆಯಲಿದೆ ಎಂದು ಸಿ ಐ ಎಸ್ ಸಿ ಅಧ್ಯಕ್ಷ ಟಿ ಕೆ ಯೋಗೇಶ್ ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಪೂರೈಸಿದ ರೋಟರಿ ಸಿಲ್ಕ್ ಸಿಟಿ, ರಾಮನಗರ
ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಪೂರೈಸಿದ ರೋಟರಿ ಸಿಲ್ಕ್ ಸಿಟಿ, ರಾಮನಗರ ಪ್ರವಾಹದಿಂದ ಕೊಡಗು ಜಿಲ್ಲೆ ನಲುಗಿ ಹೋಗಿದೆ. ಸುರಿಯುತ್ತಿರುವ ಭಾರಿ ಮಳೆಯಿಂದ ಜನರ ಜೀವನ ಅಲ್ಲೋಲ ಕಲ್ಲೋಲ ಆಗಿದೆ. ಇಡೀ ಕನ್ನಡ
ಚನ್ನಪಟ್ಟಣ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಬೆವರಿಳಿಸಿದ ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೃಷ್ಣಪ್ಪ
ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಇಂದು ಕರೆದಿದ್ದ ಕೆಡಿಪಿ ಸಭೆಯಲ್ಲಿ ಮುಖ್ಯಮಂತ್ರಿಗಳ ಕರ್ತವ್ಯಾಧಿಕಾರಿಗಳಾದ ಕೃಷ್ಣಪ್ಪ ರವರು ತಾಲ್ಲೂಕಿನ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಬೆಳಿಗ್ಗೆ 10:30 ಕ್ಕೆ ಆರಂಭವಾಗಬೇಕಾಗಿದ್ದ ಕೆಡಿಪಿ ಸಭೆ 11:15 ದಾದರೂ ಪ್ರಾರಂಭವಾಗಲಿಲ್ಲ. ಬಹುತೇಕ ಅಧಿಕಾರಿಗಳು ತಡವಾಗಿ ಬರುತ್ತಲೇ ಇದ್ದುದರಿಂದ ಕುಪಿತರಾದ ಕೃಷ್ಣಪ್ಪನವರು ಅಧಿಕಾರಿಗಳ ಈ ಬೇಜಾವ್ದಾರಿತನ ಸಹಿಸಲಾಗದು, ಅಧಿಕಾ
ಕಸದ ಗುಂಡಿಯಾಗುತ್ತಿದೆ ಗೊಂಬೆಗಳ ನಗರ
ಇತಿಹಾಸ ಪ್ರಸಿದ್ಧ ವಿಶ್ವವಿಖ್ಯಾತ ಪಾರಂಪರಿಕ ನೈಜ ಬಣ್ಣದ ಗೊಂಬೆಗಳ ತಯಾರಿಕೆಗೆ ಹೆಸರುವಾಸಿಯಾದ ಚನ್ನಪಟ್ಟಣ, ನಗರವೂ ಸೇರಿದಂತೆ ಹಳ್ಳಿ ಹಳ್ಳಿಗಳು ಸಹ ನಾಯಕರ ಮತ್ತು ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದ ಕಸದ ನಗರವಾಗಿ ಮಾರ್ಪಾಡಾಗುತ್ತಿವೆ. ಶಾಸಕ ಬದಲಾದರೂ, ಅಧಿಕಾರಿಗಳು ಬದಲಾದರೂ ತಾಲ್ಲೂಕು ಮಾತ್ರ ಉತ್ಕೃಷ್ಟ ಬೊಂಬೆಯ ನಾಡಾಗದೇ ಹಲವಾರು ಸ್ಥಳಗಳಲ್ಲಿ ಕಣ್ಣು ಮತ್ತು ಮೂಗು ಎರಡನ್ನೂ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಸಾರ್ವಜನಿಕರದ್ದಾಗಿದೆ.
ಭೀಮನ ಅಮಾವಾಸ್ಯೆ ಪ್ರಯುಕ್ತ ಮಹದೇಶ್ವರ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ
ನಗರದ ಸಾತನೂರು ರಸ್ತೆಯಲ್ಲಿರುವ ಶ್ರೀ ಮಹದೇಶ್ವರ ದೇವಾಲಯದಲ್ಲಿ ಭೀಮನ ಅಮವಾಸ್ಯೆ ಪ್ರಯುಕ್ತ ಭಕ್ತರು ಬೆಳಿಗ್ಗೆಯಿಂದಲೇ ಅನ್ನಸಂತರ್ಪಣೆಯನ್ನು ಏರ್ಪಡಿಸಿದ್ದರು. ಭೀಮನ ಅಮಾವಾಸ್ಯೆ ಯಂದು ದೇವರನ್ನು ಮತ್ತು ಹೆಂಗಸರು ತಮ್ಮ ಪತಿಯನ್ನು ಭಕ್ತಿಯಿಂದ ಪೂಜಿಸಿದರೆ ಒಳ್ಳೆಯದಾಗುತ್ತದೆ ಎಂದು ಬಹುತೇಕ ಹೆಂಗಸರ ನಂಬಿಕೆಯಿರುವುದರಿಂದ ಬೆಳಿಗ್ಗೆ ಐದು ಗಂಟೆಯಿಂದಲೇ ಭಕ್ತಾಧಿಗಳು ಸಾಲುಗಟ್ಟಿ ನಿಂತು ದೇವರ ದರ್ಶನವನ್ನು ಪಡೆದರು. ನಗರದ ಎಲ್ಲಾ ದೇವಾಲಯಗಳ
ಯಶಸ್ವಿಯಾದ ಆರೋಗ್ಯ ತಪಾಸಣಾ ಶಿಬಿರ
ನಗರದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ಬಾಲು ಡಯಾಗ್ನೋಸ್ಟಿಕ್ ಸೆಂಟರ್ ನವರು ಆರೋಗ್ಯ ಇಲಾಖೆ ಮತ್ತು ಪೋಲಿಸ್ ಇಲಾಖೆಯ ಸಹಯೋಗದೊಂದಿಗೆ ಹೆಚ್ ಐ ವಿ, ಊಟಕ್ಕೆ ಮೊದಲು ಮತ್ತು ನಂತರ ಮಧುಮೇಹ ಹಾಗೂ ವಿಡಿಯಾಟ್ರಿಲ್ ಪರೀಕ್ಷೆಗಳನ್ನು ಪೋಲಿಸರು ಮತ್ತು ಆಟೋ ಚಾಲಕರಿಗೆ ಉಚಿತವಾಗಿ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಿವೈಎಸ್ಪಿ ಮಂಜುನಾಥ್ ರವರು ಮಾತನಾಡುತ್ತಾ ನಗರದಲ್ಲಿ ಇಂತಹ ಸಮಾಜಮುಖಿ
ಯೆಲ್ಲೊ ಆಂಡ್ ರೆಡ್ ಫೌಂಡೇಷನ್ಸ್ ವತಿಯಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ
ರಾಮನಗರ ತಾಲ್ಲೂಕಿನ ತಿಬ್ಬೇಗೌಡನ ದೊಡ್ಡಿಯ ಜ್ಞಾನಸಿಂಧು ಗ್ರಾಮಾಂತರ ಪ್ರೌಢಶಾಲೆಯ ೮ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ಯೆಲ್ಲೊ ಆಂಡ್ ರೆಡ್ ಫೌಂಡೇಷನ್ಸ್ ವತಿಯಿಂದ ಸಮವಸ್ತ್ರವಿತರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಫೌಂಡೇಷನ್ಸ್ ನ ಸಂಸ್ಥಾಪಕರಾದ ಶ್ರೀಮತಿ ವರಲಕ್ಷ್ಮಮ್ಮ , ನಿರ್ದೇಶಕರಾದ ಆನಂದಶಿವಾ, ಅಧ್ಯಕ್ಷರಾದ ಅಮಿತ್ ರಾಜ್ ಶಿವಾ ಹಾಗೂ ವಿಶೇಷ ಆಹ್ವಾನಿತರಾಗಿ ರಾಮನಗರ ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷರಾದ ರೊ|| ರಾಘವೇಂದ್ರ ಆರ್, ಕಾ
ಜ್ನಾನಾಂಕುರ ಮಕ್ಕಳ ಬದಲಿಗೆ ಪೋಷಕರಿಗೆ ಬೇಕಾಗಿದೆ, ಪರಮಪೂಜ್ಯ ಡಾ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ.
ಜ್ನಾನಾಂಕುರ ಇಂದಿನ ಪೀಳಿಗೆಯ ಮಕ್ಕಳಿಗಿಂತ ಅವರ ಪೋಷಕರಿಗೆ ಅತ್ಯಗತ್ಯವಾಗಿದೆ, ಮಕ್ಕಳಿಗೆ ಮಾರ್ಗದರ್ಶಕವಾಗಬೇಕಾಗಿರುವ ಕೆಲವು ತಂದೆತಾಯಿಗಳು ನನ್ನ ಮಕ್ಕಳು ಹೀಗೆ ಬದುಕಬೇಕೆಂಬ ಹಠಕ್ಕೆ ಬಿದ್ದಿರುವುದರಿಂದ ಮಕ್ಕಳು ತನ್ನಿಚ್ಚೆ ಹಾಗೂ ಪೋಷಕರಿಚ್ಚೆ ಎರಡಕ್ಕೂ ಸ್ಪಂದಿಸಲಾಗದೇ ಅತಂತ್ರ ಸ್ಥಿತಿಗೆ ತಲಪುತ್ತಿವೆ ಎಂದು ಪರಮಪೂಜ್ಯ ಜಗದ್ಗುರು ಡಾ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ತಮ್ಮ ಆಶೀರ್ವಚನದಲ್ಲಿ ಅಭಿಪ್ರಾಯ ಪಟ್ಟರು,
ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ಪಾದಯಾತ್ರೆ.
ಸದ್ಯ ಎರಡು ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಯೂ ಆಗಿರುವ ಹೆಚ್ ಡಿ ಕುಮಾರಸ್ವಾಮಿ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆಯಲು ಬಿಜೆಪಿಯ ರಾಮನಗರ ಜಿಲ್ಲಾ ಘಟಕದ ವತಿಯಿಂದ ದಿನಾಂಕ 26ರಿಂದ28 ರ ನಡುವೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್ ತಿಳಿಸಿದರು. ಮಾಜಿ ಶಾಸಕ ಸಿ ಪಿ ಯೋಗೇಶ್ವರ್ ರವರ ಮನೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಮಾನ್ಯ ಕುಮಾರಸ್ವಾಮಿ ಯವರು ಸರ್ಕಾರ ರಚನೆಯಾದ ಇಪ್ಪತ್ನಾಲ್ಕು ಗಂಟೆ
ರೇಷ್ಮೆ ಬೆಳೆಗಾರ ಕೆಂಪಯ್ಯ ಆತ್ಮಹತ್ಯೆ
ರಾಮನಗರ : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತನ್ನ ಕರ್ಮಭೂಮಿ ರಾಮನಗರಕ್ಕೆ ಭೇಟಿ ನೀಡಿದ ಮರುದಿನವೇ ರೇಷ್ಮೆ ಬೆಳೆಗಾರನೊಬ್ಬ ಸಾಲಬಾಧೆಯಿಂದಾಗಿ ಕ್ರಿಮಿನಾಶಕ ಸೇವಿಸಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ. ಮುಖ್ಯಮಂತ್ರಿ ಭೇಟಿ ನಂತರ ರೇಷ್ಮೆ ಬೆಳೆಗಾರರ ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ ರಾಮನಗರ ತಾಲೂಕಿನ ಕಟಮಾನದೊಡ್ಡಿಯ ಕೆಂಪಯ್ಯ(38) ಆತ್ಮಹತ್ಯೆ ಮಾಡಿಕೊಂಡವ. ವಿವಿಧ ಸ್ತ್ರೀಶಕ್ತಿ ಸಂಘಗಳು ಮತ್ತು ಬ್ಯಾಂಕ್ಗಳಲ್ಲಿ 5 ಲಕ್ಷ ರೂಪಾಯಿ