ದೀಪದಡಿಯಲ್ಲೇ ಕತ್ತಲು ಎಂಬಂತೆ ಕತ್ತಲಲ್ಲೇ ಮುಳುಗಿದ ನಗರಸಭೆ ! ಸುಂದರನಗರಿ ನಿರ್ಮಾಣಕ್ಕೆ ಬದ್ಧ ಪೌರಾಯುಕ್ತ?
ವಿಶ್ವ ವಿಖ್ಯಾತ ಗೊಂಬೆಗಳ ನಗರಿ, ಇತಿಹಾಸ ಪುಟದಲ್ಲಿ ದಾಖಲಾಗಿರುವ ಹಲವಾರು ರಾಜರು ಮತ್ತು ಪಾಳೇಗಾರರ ರಾಜಧಾನಿ ಕೇಂದ್ರ, ಪುರಾತನ ದೇವಾಲಯಗಳ ಪಟ್ಟಣ, ಬ್ರಿಟೀಷರ ಕಾಲದ ಪೋಲಿಸ್ ಠಾಣೆಯ ಕಟ್ಟಡ, ಮಹಾತ್ಮ ಗಾಂಧಿ, ಮತ್ತು ಜಯಚಾಮರಾಜೇಂದ್ರ ಒಡೆಯರ್ ರಸ್ತೆಗಳು, ಸಣ್ಣಪುಟ್ಟ ದೇಶಗಳಿಂದ ಅಮೇರಿಕಾದ ವೈಟ್ ಹೌಸ್ ನ ವರೆಗೂ ಗೊಂಬೆಗಳಿಗೆ ಪ್ರಸಿದ್ಧಿ ಪಡೆದ ಚನ್ನಪಟ್ಟಣ ಇಂದು ಕಸದ ಸಮಸ್ಯೆಯಿಂದ ಗಬ್ಬೆದ್ದು ನಾರುತ್ತಿದೆ. ಇಂತಹ ಇತಿಹಾಸ ಹಾಗೂ ಪುರಾಣಪ್ರಸಿದ್ದ ನಗರವನ್ನು ಕಸದ ಕೊಂಪೆಯಾಗಿಸುವಲ್ಲಿ ನಗರಸಭ
ಜನರ ನೆನಪಿನಲ್ಲಿ ಉಳಿಯುವಂತ ಕೆಲಸ ಮಾಡುತ್ತೇನೆ, ಡಿವೈಎಸ್ಪಿ ತೈಲೂರು ಮಲ್ಲೇಶ್.
ಚನ್ನಪಟ್ಟಣ ಡಿ ವೈ ಎಸ್ ಪಿ, ಟಿ. ಮಲ್ಲೇಶ್ ರವರ ಸಂದರ್ಶನ ನಾನು ಎಷ್ಟು ದಿವಸ ಚನ್ನಪಟ್ಟಣದಲ್ಲಿ ಅಧಿಕಾರದಲ್ಲಿರುತ್ತೇನೋ ಅಲ್ಲಿಯ ತನಕವೂ ತಾಲ್ಲೂಕಿನ ಜನಮಾನಸದಲ್ಲಿ ಧೀರ್ಘಕಾಲ ನೆನಪಿನಲ್ಲಿ ಉಳಿಯುವಂತ, ಜನಸಾಮಾನ್ಯರಿಗೆ ಅನುಕೂಲವಾಗುವಂತೆ, ಅಪರಾಧಿಗಳು, ಸುಲಿಗೆಕೋರರ, ವ್ಯಸನಮುಕ್ತ ನಗರವನ್ನಾಗ
ಕಾಂಗ್ರೆಸ್ ನ ನಿಷ್ಠಾವಂತ, ಜೆಡಿಎಸ್ ನ ಪ್ರಬಲ ವಿರೋಧಿ ಲಿಂಗಪ್ಪ ಕೋಮುವಾದಿ ಬಿಜೆಪಿಯನ್ನು ಅಪ್ಕೊಳ್ತಾರಾ !?
ಕಳೆದ ಬಾರಿಯ ವಿಧಾನಸಭಾ ಚುನಾವಣಾ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಸಹ ರಾಜಕೀಯ ಒತ್ತಡದ ಜೊತೆಗೆ ಎಂ ಎಲ್ ಸಿ ಯ ಆಸೆಗೆ ಮಣಿದು ಇಕ್ಬಾಲ್ ಹುಸೇನ್ ಗೆ ಬೆಂಬಲ ಸೂಚಿಸಿ, ಟಿಕೆಟ್ ಆಕಾಂಕ್ಷಿಯಾಗಿದ್ದ ತಮ್ಮ ಪುತ್ರನ ಆಸೆಗೆ ತಣ್ಣೀರೆರಚಿ ಉಪಚುನಾಣೆಯಲ್ಲಿ ಮಾತಿನ ಚಾಟಿ ಮೂಲಕ ಬಂಡಾಯದ ಬಾವುಟ ಹಾರಿಸುತಿದ್ದ ಸಿ ಎಂ ಲಿಂಗಪ್ಪನವರು ಪುತ್ರ ಬಿಜೆಪಿ ಗೆ ಜಿಗಿದ ನಂತರ ಯಾವ ಕಡೆ ವಾಲಬೇಕೆಂದು ಗೊಂದಲಕ್ಕೀಡು ಮಾಡಿರುವಂತಿದೆ.
ಹೆದ್ದಾರಿಯನ್ನು ಬಿಡದ ಬಾರ್ ಗಳ ಟೆಟ್ರಾ ಪ್ಯಾಕ್
ನಗರದಲ್ಲಿ ಕಸದ ಸಮಸ್ಯೆ ಹೆಚ್ಚಾಗುತಿದ್ದು ದಿನೆದಿನೇ ಉಲ್ಬಣಗೊಳ್ಳುತ್ತಿದೆ, ಮನೆಗಳ ಕಸ, ಹೋಟೆಲ್ ಗಳ ಕಸ, ಮಾಂಸದ ತ್ಯಾಜ್ಯ, ಕೋಳಿ ಅಂಗಡಿಗಳ ತ್ಯಾಜ್ಯ, ನಗರದೊಳಗೆ ಮತ್ತು ನಗರದ ಸುತ್ತಮುತ್ತಲಿನ ಕೆರೆಕಟ್ಟೆಗಳಿಗೆಲ್ಲಾ ಕಾಂಕ್ರೀಟ್ ತ್ಯಾಜ್ಯ ಸುರಿದು ಮಲಿನ ಮಾಡುವುದರ ಜೊತೆಗೆ ಒತ್ತುವರಿ ಮಾಡಲು ನಗರಸಭೆಯು ಅಲಿಖಿತ ಅನುಮತಿ ನೀಡಿರುವಂತಿದೆ. ಚನ್ನಪಟ್ಟಣ ತಾಲೂಕಿನಾದ್ಯಂತ ಎಲ್ಲಾ ರೀತಿಯ ಮೂವತ್ತೇಳು ಬಾರ್ ಗಳಿದ್ದು ನಗರದಲ್ಲೇ ಸರಿಸುಮಾರು ಮೂವತ್ತಕ್ಕೂ
ಅಭಿವೃದ್ಧಿ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ
ಹೇಳುವವರಿಲ್ಲ ಕೇಳುವವರಿಲ್ಲ ಲೆಕ್ಕ, ಸುತ್ತೋಲೆಗಳಲ್ಲಿ ಮಾತ್ರ ಲೆಕ್ಕ ಪಕ್ಕ. ಅದಕ್ಕೆ ಒಂದು ಕೋಟಿ, ಇದಕ್ಕೆ ಹತ್ತು ಕೋಟಿ ನೂರುಕೋಟಿ ಸಾವಿರಕೋಟಿ ಅಭಿವೃದ್ಧಿ ಮಾತ್ರ ಲಂಗೋಟಿ. ಇತ್ತೀಚೆಗುಂಟು ಮಂತ್ರಿಮಹೋದಯರಿಗೆಲ್ಲಾ ಪರಿಸರದ ಕಾಳಜಿ, ಅದಕ್ಕಾಗಿ ಇಟ್ಟರು ನವನವೀನ ಹೆಸರಿನಲ್ಲಿ ಕೋಟಿಕೋಟಿ, ಮಂತ್ರಿ ಅಧಿಕಾರಿಗಳ ಕೈಬಿಸಿಯಾಗಿ ಗುತ್ತಿಗೆದಾರನಿಂ
ಮಾಗಡಿ ತಾಲ್ಲೂಕಿನ ಗೆಜ್ಜಗಾರಗುಪ್ಪೆ ಗ್ರಾಮದಲ್ಲಿ ಪುರಾತನ ಶ್ರೀ ಮುರಾರಿ ಸ್ವಾಮಿ ಯ ಗದ್ದುಗೆ
ಪುರಾತನ ಜೀವಂತ ಸಮಾಧಿ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಗೆಜ್ಜಗಾರಗುಪ್ಪೆಯಲ್ಲಿ ಪುರಾತನವಾದ ಸರಿ ಸುಮಾರು ಹನ್ನೆರಡನೇ ಶತಮಾನದ್ದು ಎಂದು ಹೇಳಲಾಗುವ ಶ್ರೀ ಮುರಾರಿ ಸ್ವಾಮಿಯ ಜೀವಂತ ಸಮಾಧಿ ಇರುವ ಮಂಟಪವೊಂದಿದ್ದು ಅದನ್ನು ಜೀರ್ಣೋದ್ಧಾರ ಮಾಡಲು ಕುಮಾರಸ್ವಾಮಿ ಎಂಬುವವರು ಮುಂದಾಗಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕದಂಮಾ ರೈತ ಸಂಘ ಪ್ರತಿಭಟನೆ
ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಗಾಂಧಿಭವನದಿಂದ ತಾಲ್ಲೂಕು ಕಛೇರಿವರೆಗೆ ಹೊಸದಾಗಿ ರಚನೆಗೊಂಡಿರುವ ಕರ್ನಾಟಕ ದಂಡಿನಮಾರಮ್ಮ ರೈತ ಸಂಘದ ಪದಾಧಿಕಾರಿಗಳು ಜಾಥಾ ಹಮ್ಮಿಕೊಂಡಿದ್ದರು. ರೈತರ ಪಾಲಿಗೆ ಹೆಚ್ಚುವರಿಯಾಗಿ ೩ ರೂಪಾಯಿ ಪ್ರೋತ್ಸಾಹ ಧನ, ಪಹಣಿ, ಖಾತೆ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಜನನ ಮತ್ತು ಮರಣ ಪ್ರಮಾಣ ಪತ್ರ, ಸರ್ವೇ, ರೈತರಿಗೆ ನಿರಂತರ ವಿದ್ಯುತ್, ಹಾಗೂ ಬಲವಂತವಾಗಿ ಬ್ಯಾಂಕ್ ಸಾಲ ವಸೂಲಾತಿ ನಿಲ್ಲಿಸುವಂತೆ ತಹಶಿಲ್ದಾರರ
ಕಸ ಬೇರ್ಪಡಿಸಲು ನಗರಸಭೆಯಿಂದ ಬಕೆಟ್ ವಿತರಣೆ
ಮಹಾತ್ಮ ಗಾಂಧಿಯವರ ಕನಸನ್ನು ನನಸು ಮಾಡುವ ಸಲುವಾಗಿ ಮಾನ್ಯ ಪ್ರಧಾನಮಂತ್ರಿ ಯವರು ಹಮ್ಮಿಕೊಂಡಿರುವ ಸ್ವಚ್ಚಭಾರತ ನಿರ್ಮಾಣಕ್ಕಾಗಿ ಎಲ್ಲರೂ ಕೈಜೋಡಿಸಿ ಚನ್ನಪಟ್ಟಣ ನಗರವನ್ನು ರಾಜ್ಯದಲ್ಲಾದರೂ ನಂ ೧ ಮಾಡಬೇಕೆಂದು ನಗರಸಭೆಯ ಪೌರಾಯುಕ್ತ ಸಿ ಪುಟ್ಟಸ್ವಾಮಿ ಕರೆ ನೀಡಿದರು. ಅವರು ನಗರಸಭೆಯ ಅಧ್ಯಕ್ಷೆ ನಜ್ಮುನ್ನೀಷಾ ರವರ ಹನ್ನೊಂದನೇ ವಾರ್ಡ್ ನಲ್ಲ ಒಣಕಸ ಮತ್ತು ಹಸಿಕಸವನ್ನು ಮೂಲದಲ್ಲೇ ಬೇರ್ಪಡಿಸುವ ಸಲುವಾಗಿ ಸಾರ್ವಜನಿಕರಿಗೆ ಹಸಿರು ಮತ್ತು ನೀಲಿ ಬಣ್ಣದ ಬಕೆಟ್ ಗಳನ್ನು ವಿತರ
ಅಬಕಾರಿ ಇಲಾಖೆ ಅಡಿಯಲ್ಲಿ ಅಕ್ರಮಗಳು, ಸರಿಪಡಿಸುವತ್ತ ಹೊಸ ಅಧಿಕಾರಿ ಸಾಹಸ ಸಫಲವಾಗುವುದೇ
ಯಾವ್ಯಾವ ರೀತಿಯ ಮದ್ಯದಂಗಡಿಗಳು ಚನ್ನಪಟ್ಟಣ ತಾಲ್ಲೂಕಿನಾದ್ಯಂತ ನಗರವೂ ಸೇರಿದಂತೆ ಒಟ್ಟು ಮೂವತ್ತೇಳು ಮದ್ಯದಂಗಡಿಗಳಿದ್ದು ಸಿಎಲ್ ೨ ಇಪ್ಪತ್ತೆರಡು (cl2 22) ಸಿಎಲ್ ೪ ಒಂದು (cl4 1), ಸಿಎಲ್ ೯ ಎಂಟು (cl9 8), ಎಂಎಸ್ಐಎಲ್ ೧೧ಸಿ, (MSIL 11C 4) ಗ್ರಾಮೀಣ ಸೇರಿ, ಎಲ್ ಎಫ್ ಡಬ್ಲ್ಯೂ ೨ ಮತ್ತು ೩ ತಲಾ ಒಂದು (lfw-2&3, 1+1) ಮದ್ಯದಂಗಡಿಗಳಿದ್ದು ನಗರದಲ್ಲಿ ಇನ್ಸ್ಪೆಕ್ಟರ್ ಸಮೇತ ಒಂದು ಕಛೇರಿಯೂ ಇದ
ಪ್ರೀತಿಸಿ ಮದುವೆಯಾಗಿ ಗರ್ಭಿಣಿ ಮಾಡಿ ತಲೆಮರೆಸಿಗೊಂಡ ದ್ರೋಹಿ
ಒಂದೇ ಕಡೆ ಕೆಲಸ ಮಾಡುತಿದ್ದಾಗ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾದ ಭೂಪನೊಬ್ಬ ತನ್ನ ತಾಯಿ ಬೇರೆ ಜಾತಿಯ ಹುಡುಗಿಯನ್ನು ಮದುವೆಯಾಗಿರುವುದಕ್ಕೆ ಆಕ್ಷೇಪಣೆ ವ್ಯಕಪಡಿಸಿದಳು ಎಂಬ ನೆಪವೊಡ್ಡಿ ಹೆಂಡತಿಯ ಎಟಿಎಂ ಕಾಡ್೯ ಪಡೆದು ಪರಾರಿಯಾಗಿರುವ ಘಟನೆ ಚನ್ನಪಟ್ಟಣ ಗ್ರಾಮಾಂತರ ಠಾಣಾ ವ್ಯಾಪ್ತಿಯ ಹೊಂಗನೂರು ಗ್ರಾಮದಲ್ಲಿ ನಡೆದಿದೆ. ಹೊಂಗನೂರು ಗ್ರಾಮದ ಅರಸು ಜನಾಂಗದ ಪಾಂಡುರಂಗರಾಜೇಅರಸು ಸವಿತಮ್ಮಣ್ಣಿ ಯ ಪುತ್ರ ಇಪ್ಪತ್ನಾಲ್ಕು ವರ್ಷದ ಪ್ರಸನ್ನರಾಜೇಅರಸು ಎಂಬಾತ