ಭೂಹಳ್ಳಿ ಗ್ರಾ.ಪಂ. ಪಿಡಿಓ ಮತ್ತು ಅಧ್ಯಕ್ಷನಿಂದ ವಿದ್ಯುತ್ ಮತ್ತು ನೀರಿನ ಹಣ ಕಳ್ಳತನ!?
ಚನ್ನಪಟ್ಟಣ ತಾಲ್ಲೂಕಿನ ಭೂಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳಿಬ್ಬರು ಸೇರಿ ಕಳೆದ ಮೂರು ವರ್ಷಗಳಿಂದ ಹಲವಾರು ಅವ್ಯವಹಾರಗಳನ್ನು ಮಾಡುತ್ತಾ ಹಣವನ್ನು ಲೂಟಿ ಹೊಡೆಯುತ್ತಿರುವುದಾಗಿ ಗ್ರಾ.ಪಂ.ಉಪಾಧ್ಯಕ್ಷೆ ಲಕ್ಷ್ಮಮ್ಮ ಮತ್ತು ಹನ್ನೆರಡು ಮಂದಿ ಸದಸ್ಯರು ಹಾಗೂ ಕರ್ನಾಟಕ ರಾಜ್ಯ ರೈತಸಂಘದ ಹಿರಿಯ ಮುಖಂಡ ಸಿ.ಪುಟ್ಟಸ್ವಾಮಿ ನೇರ ಆರೋಪ ಮಾಡಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಈ ಕುರಿತು ಸುದ್ದಿಗೊಷ್ಠಿ ನಡೆಸ
ಚನ್ನಪಟ್ಟಣ ಕೆಎಸ್ಆರ್ಟಿಸಿ ಘಟಕಕ್ಕೆ ಎಲ್ಲಾ ಸೌಕರ್ಯವಿದ್ದೂ ನಷ್ಟ ಅನುಭವಿಸಲು ಕಾರಣಗಳೇನು?
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಯ ಚನ್ನಪಟ್ಟಣದ ಘಟಕದಲ್ಲಿ ಸಿಬ್ಬಂದಿಯ ಜೊತೆಗೆ ಸಕಲ ಸೌಲಭ್ಯಗಳಿದ್ದು ನಷ್ಟ ಅನುಭವಿಸುತ್ತಿದೆ, ಪ್ರತಿ ಕಿಲೋಮೀಟರ್ ಗೆ ಆರು ರೂಪಾಯಿಗಳಿಂದ ಏಳು ರೂಪಾಯಿಗಳಷ್ಟು ನಷ್ಟವನ್ನು ಚನ್ನಪಟ್ಟಣ ತಾಲ್ಲೂಕಿನ ಕೆ ಎಸ್ ಆರ್ ಟಿ ಸಿ ಘಟಕ ಎದುರಿಸುತ್ತಿದೆ, ಇದಕ್ಕೆ ಕಾರಣವೇನು ? ಅದನ್ನು ತಡೆಗಟ್ಟಲು ಯಾರು ? ಹೇಗೆ ? ಯಾರ ವಿರುದ್ದ ಕ್ರಮ ಕೈಗೊಳ್ಳಬೇಕೆಂಬ ಮಾಹಿತಿಯನ್ನು ಘಟಕದ ಅಧಿಕಾರಿ ರಾಘವೇಂದ್ರ ರವರು ತೆರೆದಿಟ್ಟಿದ್ದಾರೆ, ಈ ಎಲ್ಲಾ ಆಗುಹೋಗುಗಳಿಗೆ ಸಂಬಂಧಿಸಿದ ಮಾಹಿತ
ಲೋಕಾಯುಕ್ತ ಬಲಪಡಿಸಿ ಲಂಚಮುಕ್ತ ಕರ್ನಾಟಕ ಮಾಡಲಿ ಕೆ ಆರ್ ಪೇಟೆ ಕೃಷ್ಣ*
ಕುಮಾರಸ್ವಾಮಿ ಯವರೇ ನೀವು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದೀರಿ ಮೊದಲು ನೀವು ದೃಢ ನಿರ್ಧಾರ ಮಾಡಿ ಪ್ರಣಾಳಿಕೆಯಲ್ಲಿ ಪ್ರಕಟಿಸಿದಂತೆ ಎಸಿಬಿ ಯನ್ನು ನಿರ್ಮೂಲನೆ ಮಾಡಿ, ಭ್ರಷ್ಟಾಚಾರ ತೊಲಗಿಸಲು ಲೋಕಾಯುಕ್ತ ಬಲಪಡಿಸಲೇಬೇಕು ಎಂದು ಮಾಜಿ ವಿಧಾನ ಸಭಾಧ್ಯಕ್ಷ ಕೆ ಆರ್ ಪೇಟೆ ಕೃಷ್ಣ ಆಗ್ರಹಿಸಿದರು. ಅವರು ಇಂದು ತಾಲ್ಲೂಕು ಕಛೇರಿಯ ಮುಂಭಾಗ ಆಯೋಜಿಸಿದ್ದ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.
ಲೋಕಾಯುಕ್ತ ಬಲಗೊಳಿಸಲು ಮುಖ್ಯಮಂತ್ರಿ ತವರಲ್ಲಿ ನಾಳೆ ರೈತ ಸಂಘ ಧರಣಿ
ಚುನಾವಣಾ ಮುನ್ನಾ ತಮ್ಮ ಪ್ರಣಾಳಿಕೆಯಲ್ಲಿ ಅಂದಿನ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರು ತಮ್ಮ ಸ್ವಾರ್ಥಕ್ಕಾಗಿ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿ ಎಸಿಬಿ ಯನ್ನು ಸೃಷ್ಟಿಸಿದ್ದಾರೆ, ನಾವು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಎಸಿಬಿ ಸಂಸ್ಥೆಯನ್ನು ಕಿತ್ತೊಗೆದು ಸ್ವಾಯತ್ತ ಸಂಸ್ಥೆಯಾದ ಲೋಕಾಯುಕ್ತ ಸಂಸ್ಥೆಯನ್ನು ಮರುಸ್ಥಾಪಿಸಿ ಬಲಗೊಳಿಸುತ್ತೇವೆ ಎಂದು ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿತು. ತಾವು ಅಧಿಕಾರಕ್ಕೆ ಬಂದುದಲ್ಲದೆ ಮುಖ್ಯಮಂತ್ರಿ ಯಾದರೂ ಸಹ ಭ್ರಷ
ಕನ್ನಡ ಉಳಿಯಬೇಕೇಂದರೆ ಇಂದಿನ ಮಕ್ಕಳಿಗೆ ಮಾತೃಭಾಷೆ ಕಲಿಕೆ ಅವಶ್ಯ ಸಿಂಲಿಂ ನಾಗರಾಜು
ಕನ್ನಡ ಎನ್ನುವ ಪದ ಕೇವಲ ಪದವಲ್ಲ, ಅದೊಂದು ಬೆಲೆಬಾಳುವ ವಜ್ರವಿದ್ದಂತೆ, ಅದನ್ನು ಉಳಿಸಿ ಬೆಳೆಸಬೇಕಾದ್ದು ನಮ್ಮೆಲ್ಲರ ಕರ್ತವ್ಯ, ಬೇರೆ ಭಾಷೆಗಳ ಜೊತೆಗೆ ಕನ್ನಡವನ್ನು ಮಕ್ಕಳಿಗೆ ಕಲಿಸಬೇಕು, ಪ್ರಾಥಮಿಕ ಶಾಲೆಯಿಂದ ನಾವು ಮಕ್ಕಳಿಗೆ ಮಾತೃಭಾಷೆಯನ್ನು ಕಲಿಸಿಕೊಟ್ಟರೆ ಅವರ ಬುದ್ಧಿಮತ್ತೆ ಚನ್ನಾಗಿ ಬೆಳೆಯುವುದರ ಜೊತೆಗೆ ಮುಂದಿನ ಪೀಳಿಗೆಗೆ ಕನ್ನಡ ಉಳಿಸಲು ಸಾಧ್ಯವಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಮನಗರ ಜಿಲ್ಲಾಧ್ಯಕ್ಷ ಸಿಂ ಲಿಂ ನಾಗರಾಜು ಹೇಳಿದರು, ಅವರು ನಗರದ ವೆಬ್ ಸ್ಟರ್ ಶಾ
ಬಿಜಿಎಸ್ ವಲ್ಡ್೯ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ
ಕನ್ನಡ ಭಾಷೆ ನಮ್ಮ ದೈನಂದಿನ ಭಾಷೆಯಾಗಬೇಕು, ನಾವು ಇಂಗ್ಲಿಷ್ ಅಥವಾ ಮತ್ತೆ ಬೇರೆ ಭಾಷೆಗಳನ್ನು ಕೇವಲ ವ್ಯವಹಾರಿಕ ಭಾಷೆಯನ್ನಾಗಿ ಬಳಸಬೇಕೇ ವಿನಹ ಅದನ್ನೇ ದೈನಂದಿನ ಭಾಷೆಯಾಗಿ ಬೆಳೆಸಿಕೊಳ್ಳಬಾರದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಸವಿತಾ ರವರು ಮಕ್ಕಳಿಗೆ ಉಪದೇಶಿಸಿದರು. ಇಂಗ್ಲಿಷ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ತಕ್ಷಣವೇ ನಾವು ಇಂಗ್ಲಿಷ್ ಭಾಷೆಯನ್ನು ಮೈಗೂಡಿಸಿಕೊಳ್ಳಬಾರದು, ಅದನ್ನು ವ್ಯವಹಾರದ ಭಾಗವನ್ನಾಗಿ ಆಯ್ಕೆ ಮಾಡಿಕೊಂಡು ನಮ್ಮ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬಡ ವಿದ್ಯಾರ್ಥಿಗಳ ಪಾಲಿಗೆ ಕಲ್ಯಾಣ ಇಲಾಖೆಯೇ ಸರಿ
ಹಲವಾರು ಇಲಾಖೆಗಳ ಪೈಕಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿಗಳು ಮತ್ತು ಬಡ ಪೋಷಕರ ಪಾಲಿಗೆ ಕಲ್ಯಾಣ ಇಲಾಖೆಯೇ ಆಗಿದೆ, ಇಲ್ಲಿ ಓದಿದ ಬಹುತೇಕ ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲದೇ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಉನ್ನತ ಅಧಿಕಾರಿಗಳಾಗಿ ಇಂದಿಗೂ ಕೆಲಸ ಮಾಡುತ್ತಿದ್ದಾರೆ, ಈ ಇಲಾಖೆಯ ಪ್ರಭಾರ ವಿಸ್ತರಣಾಧಿಕಾರಿಗಳಾದ ಎನ್ ಮೋಹನ್ ರವರ ಸಂದರ್ಶನ ತಮ್ಮ ಮುಂದೆ... ಸಹಕಾರಿ ಧುರೀಣ ಮಾಜಿ ಮುಖ್ಯಮಂತ್ರಿ ಡಿ ದೇವರಾಜು ಅರಸರ ಸಾರ್ಥಕ ಶ್ರಮದ ಫಲ
ಟಿಪ್ಪು ಸುಲ್ತಾನ್ ಮತಾಂಧ ಅಲ್ಲ, ಅವನೊಬ್ಬ ದೇಶಾಭಿಮಾನಿ ಡಾ ಬಿ ಎಸ್ ಪುಟ್ಟಸ್ವಾಮಿ
ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಚನ್ನಪಟ್ಟಣ ತಾಲ್ಲೂಕು ವತಿಯಿಂದ ಪೋಲೀಸರ ಬಿಗಿ ಭದ್ರತೆಯಲ್ಲಿ ಇಂದು ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸಲಾಯಿತು. ಟಿಪ್ಪು ನಗರದ ದರ್ಗಾದಿಂದ ಟಿಪ್ಪುವಿನ ಘೋಷಣೆಯನ್ನು ಕೂಗುತ್ತಾ ಮೆರವಣಿಗೆ ಬಂದರು. ನಾಡಗೀತೆ ಮತ್ತು ರೈತಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದ ಜೊತೆಗೆ ಮುಸ್ಲಿಂ ಧರ್ಮಗುರು ಶಾಕೀರ್ ಉಲ್ ಖಾದ್ರಿ ಯವರು ಅಲ್ಲಾಹುವಿನ ಪ್ರಾರ್ಥನೆ ಸಲ್ಲಿಸಿ ಕಾರ್ಯಕ್ರಮವನ್ನು ಇತಿಹಾಸ ತಜ್ಞ ಡಾ ಬಿ ಎಸ್
ಹೊಂಗನೂರು ಕೆರೆ ಕೋಡಿ ಹರಿಯಲು ಕ್ಷಣಗಣನೆ
ಸತತ ಹದಿನೆಂಟು ವರ್ಷಗಳಿಂದ ಬಿರುಕು ಬಿಟ್ಟು ಒಣಗಿ ನಿಂತ ಐತಿಹಾಸಿಕ ಹೊಂಗನೂರು ಕೆರೆ ಸಂಪೂರ್ಣ ತುಂಬಿದ್ದು ಕೋಡಿ ಹರಿಯಲು ಇನ್ನೇನು ಕ್ಷಣಗಣನೆ ಪ್ರಾರಂಭವಾಗಿದೆಯಾದರೂ ಹಲವಾರು ಸಮಸ್ಯೆಗಳನ್ನು ಸಹ ತನ್ನ ಬಗಲಲ್ಲಿರಿಸಿಕೊಂಡು ಜೀವಸಂಕುಲಕ್ಕೆ ಮಾರಕವಾಗುತ್ತಿದೆ. ಹದಿನೆಂಟು ವರ್ಷಗಳ ಹಿಂದೆ ಎರಡು ಬಾರಿ ಕೆರೆ ತುಂಬಿತ್ತಾದರೂ ಕೋಡಿ ಹರಿಯುವ ಮುನ್ನವೇ ಮಳೆ ಸ್ಥಗಿತಗೊಂಡಿದ್ದರಿಂದ ಹೊಂಗನೂರು ಮತ್ತು ಸುತ್ತಲಿನ ಗ್ರಾಮಸ್ಥರು ಅಂದಿನ ಕಾಲಕ್ಕೆ ನಿರಾಸೆಗೊಂಡಿದ್ದಾಗಿ
ದೀಪಾವಳಿ ಹಬ್ಬಕ್ಕೆ ಮದ್ದು ಸಿಡಿಸಲು ಇನ್ನೂ ಸಿಗದ ಅನುಮತಿ ಅಂಗಡಿ ಮಾಲೀಕರಿಗೆ ಕಸಿವಿಸಿ
ಬೆಳಕಿನ ಹಬ್ಬ ದೀಪಾವಳಿಗೆ ದೀಪಗಳಿಗೆ ಎಷ್ಟು ಮಹತ್ವ ಇದೆಯೋ ಅಷ್ಟೇ ಮಹತ್ವ ಸಿಡಿಸುವ ಪಟಾಕಿಗಳಿಗೂ ಇದೆ, ಪೌರಾಣಿಕ ಐತಿಹ್ಯವುಳ್ಳ ದೀವಳಿಗೆ ಹಬ್ಬಕ್ಕೆ ನಗರದಲ್ಲಿ ಒಂದು ದಿನ ಮುಂಚಿತವಾಗಿಯೇ ಪಟಾಕಿ ಅಂಗಡಿಗಳು ತೆರೆಯುವುದು ವಾಡಿಕೆಯಾದರು ಹಲವಾರು ಕಾರಣಗಳಿಂದ ಈ ವರ್ಷ ಒಂದು ಅಂಗಡಿಯೂ ತೆರೆಯದೆ ಇರುವುದು ಪಟಾಕಿ ಪ್ರಿಯರಿಗೆ ಮತ್ತು ಮಕ್ಕಳಿಗೆ ನಿರಾಸೆ ಮೂಡಿಸಿದೆ. ಇದುವರೆಗೂ ನಗರಸಭೆಯ ಆವರಣದಲ್ಲಿ ತಾತ್ಕಾಲಿಕವಾಗಿ ಅಂಗಡಿ ತೆರೆಯಲು ಅನುಮತಿ ನೀಡಲಾಗುತ್ತಿತ್ತು, ನಗರಸಭೆಯ ಆವರಣದಲ್ಲ