ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ಅಂಧ ಕಲಾವಿದ ಜನಪದ ಮರಿಯಯ್ಯ, ಬುಡುಬುಡಿಕೆ ಕಲಾವಿದ ಪಾಪಣ್ಣ ಅವರಿಗೆ ಸನ್ಮಾನ
ಚನ್ನಪಟ್ಟಣ : ಜಾಗತೀಕರಣದ ಪರ್ವ ಕಾಲದಲ್ಲಿದ್ದರೂ, ಗ್ರಾಮೀಣ ಪ್ರದೇಶದ ಪ್ರತಿಭೆಗಳಿಂದ ಜನಪದ ಸಂಸ್ಕೃತಿ ಜೀವಂತಿಕೆ ಉಳಿಸಿಕೊಂಡಿದೆ ಎಂದು ಹಿರಿಯ ಜಾನಪದ ಗಾಯಕ ಚೌ.ಪು. ಸ್ವಾಮಿ ತಿಳಿಸಿದರು. ಚನ್ನಪಟ್ಟಣ ತಾಲ್ಲೂಕಿನ ಗೆಂಡೆಕಟ್ಟೆದೊಡ್ಡಿ ಗ್ರಾಮದಲ್ಲಿ ಜಿಲ್ಲಾ ಲೇಖಕರ ವೇದಿಕೆ ವತಿಯಿಂದ, ಅಂಧ ಜಾನಪದ ಗಾಯಕ ರಾಂಪುರದ ಮರಿಯಯ್ಯ ಹಾಗೂ ಬುಡುಬುಡಿಕೆ ಕಲಾವಿದ ಗೆಂಡೆಕಟ್ಟೆದೊಡ್ಡಿ ಪಾಪಣ್ಣ
ಕೆಡಿಪಿ ಸಭೆಗೆ ಮುನ್ನ ಶ್ರೀರಾಮನ ದರ್ಶನ ಪಡೆದ ಡಿಸಿಎಂ ಅಶ್ವಥ್ ನಾರಾಯಣ
ರಾಮನಗರ:ಜೂ/೧೯/೨೦/ಶುಕ್ರವಾರ. ಶತಶತಮಾನಗಳು ಕಳೆದರೂ ಶ್ರೀರಾಮನ ಮೇಲಿರುವ ಭಾರತೀಯರ ನಂಬಿಕೆ, ಭಕ್ತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ನಮ್ಮ ನರನಾಡಿಗಳಲ್ಲೂ ಆ ಸೀತಾರಾಮನೇ ತುಂಬಿಹೋಗಿದ್ದಾನೆ. ಪ್ರಸಕ್ತ ಕಾಲಘಟ್ಟದಲ್ಲಿ ನಾವು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ರಾಮ ತತ್ತ್ವದಲ್ಲೇ ಪರಿಹಾರವಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರು ಪ್ರತಿಪಾದಿಸಿದರು.
ಗ್ರಾಮ ಪಂಚಾಯಿತಿ ಗೆ ಆಡಳಿತಾಧಿಕಾರಿ ನೇಮಕ, ತಾಪಂ ಸದಸ್ಯರನ್ನು ಸೇರಿಸಿಕೊಂಡು ಸಲಹೆ ಪಡೆಯಲಿ, ಅಧ್ಯಕ್ಷ ರಾಜಣ್ಣ
ಚನ್ನಪಟ್ಟಣ:ಜೂ/೧೬/೨೦/ಮಂಗಳವಾರ. ಗ್ರಾಮ ಪಂಚಾಯತಿ ಸದಸ್ಯರ ಅಧಿಕಾರ ಅವಧಿ ಕೊನೆಗೊಂಡಿರುವುದರಿಂದ ಹಾಗೂ ಕೊರೊನಾ ಹೆಚ್ಚು ಬಲಿಷ್ಠವಾಗುತ್ತಿರುವುದರಿಂದ ಈ ಸಂದರ್ಭದಲ್ಲಿ ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯತಿ ಚುನಾವಣೆಯನ್ನು ಮುಂದೂಡಿದೆ. ಚುನಾವಣೆ ಆಗುವ ತನಕ ಪ್ರತಿ ಗ್ರಾಮ ಪಂಚಾಯತಿಗೂ ಆಡಳಿತಾಧಿಕಾರಿ ನೇಮಿಸಲು ನಿರ್ಧರಿಸಿದೆ. ಜನಪ್ರತಿನಿಧಿಗಳಿಲ್ಲದೆ ಕೇವಲ ಅಧಿಕಾರಿಗಳು ಕಾರ್ಯ ನಿರ್ವಹಿ
ತಾಲ್ಲೂಕು ಸಾಮಾನ್ಯ ಸಭೆಯಲ್ಲಿ ಎಲ್ಲಾ ಇಲಾಖೆಯೂ ಗೌಣ. ರಿಂಗಣಿಸಿದ ಕೋವಿಡ್, ಮಾಹಿತಿ ನೀಡಿದ ಡಾ ರಾಜು
ಚನ್ನಪಟ್ಟಣ:ಜೂ/೧೬/೨೦/ಮಂಗಳವಾರ. ತಾಲ್ಲೂಕಿನಲ್ಲಿ ಒಂಭತ್ತು ಸೋಂಕಿತರು ಇದ್ದು, ಸ್ಥಳೀಯರಿಗೆ ನೇರವಾಗಿ ಸೋಂಕು ಹರಡಿಲ್ಲ. ಸ್ಥಳಿಯರಿಗೆ ಸೋಂಕು ಬಂದಿರುವುದು ಬೆಂಗಳೂರು ಹಾಗೂ ಪಾದರಾಯನಪುರ ಜೈಲು ವಾಸಿಗಳಿಂದ ಹರಡಿದೆ. ಅದಕ್ಕೆ ಸೂಕ್ತ ಕ್ರಮಗಳನ್ನು ಕೈಗೊಂಡು ನಿಯಂತ್ರಣ ದಲ್ಲಿ ಇರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ ರಾಜು ಸಭೆಗೆ ಮಾಹಿತಿ ನೀಡಿದರು.
ರಾಮನಗರ ಜಿಲ್ಲೆಯಲ್ಲಿ ಆಮಿಷ ಮತಾಂತರ ಮತ್ತು ಭೂ ಕಬಳಿಕೆ ವಿರುದ್ಧ ಹಿಂಜಾವೇ ದೂರು
ಚನ್ನಪಟ್ಟಣ:ಜೂ/೧೬/೨೦/ಮಂಗಳವಾರ. ರಾಮನಗರ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ನಡೆದಿದ್ದ ಬೃಹತ್ ಭ್ರಷ್ಟಾಚಾರ ಮತ್ತು ಆಮಿಷ ಒಡ್ಡಿ ಮತಾಂತರ ಮಾಡುತ್ತಿರುವವರ ವಿರುದ್ಧ ನಾವು ಕಳೆದ ಒಂದೂವರೆ ವರ್ಷದಿಂದ ಹೋರಾಟ ಮಾಡುತ್ತಿದ್ದು, ಪ್ರಸ್ತುತ ಹೋರಾಟ ತಾರ್ಕಿಕ ಅಂತ್ಯಕ್ಕೆ ಬಂದಿದೆ. ೫೦ ಲಕ್ಷ ರೂಗಳ ಅಕ್ರಮದಲ್ಲಿ ಇಲಾಖೆಯ ದೊಡ್ಡ ದೊಡ್ಡ ಅಧಿಕಾರಿಗಳ ತಲೆದಂಡಕ್ಕೆ ವೇದಿಕೆ ಸಿದ್ಧಗೊಂಡಿದೆ ಎ
ಗೋವಿಂದೇಗೌಡನದೊಡ್ಡಿ ಯಲ್ಲಿ ಸರಳವಾಗಿ ಉದ್ಘಾಟನೆಗೊಂಡ ಅರಳಿಕಟ್ಟೆ
ಚನ್ನಪಟ್ಟಣ:ಜೂ/೧೫/೨೦/ಸೋಮವಾರ. ತಾಲ್ಲೂಕಿನ ಗೋವಿಂದೇಗೌಡನದೊಡ್ಡಿ ಗ್ರಾಮದಲ್ಲಿ ಶಿಥಿಲಗೊಂಡಿದ್ದ ಹಳೆಯ ಅರಳಿಕಟ್ಟೆಯನ್ನು ಕೆಡವಿ ಹೊಸದಾಗಿ ನಿರ್ಮಿಸಿ ಇಂದು ಸರಳವಾಗಿ ಲೋಕಾರ್ಪಣೆಗೊಳಿಸಲಾಯಿತು.ಮೂವತ್ತು ವರ್ಷಗಳ ಹಿಂದೆ ಗ್ರಾಮದ ಬೋರಯ್ಯ ನ ಕುಟುಂಬದವರು, ಗ್ರಾಮಸ್ಥರ ಸಹಾಯದೊಂದಿಗೆ ಈ ಅರಳಿ ಕಟ್ಟೆ ಯನ್ನು ನಿರ್ಮಿಸಿದ್ದು, ಇತ್ತೀಚಿಗೆ ಅದು ಶಿಥಿಲಗೊಂಡಿತ್ತು. ಗೋವಿಂದೇ
ಕನ್ನಿದೊಡ್ಡಿ ಗ್ರಾಮದಲ್ಲಿ ಮಹಿಳೆಯನ್ನು ತುಳಿದ ಆನೆ. ಬೆಂಗಳೂರಿನ ಆಸ್ಪತ್ರೆಗೆ ರವಾನೆ
ಚನ್ನಪಟ್ಟಣ:ಜೂ/೧೫/೨೦/ಸೋಮವಾರ. ತಾಲ್ಲೂಕಿನಲ್ಲಿ ದಿನೇದಿನೆ ಆನೆಯ ಹಾವಳಿ ಯಥೇಚ್ಛವಾಗಿ ನಡೆಯುತ್ತಿದ್ದು, ಬೆಳೆ ಹಾನಿಯ ಜೊತೆಗೆ ಮಾನವರ ಮೇಲೂ ಎರುಗುತ್ತಿದ್ದು ಇಂದು ಕನ್ನಿದೊಡ್ಡಿ ಗ್ರಾಮದಲ್ಲಿ ಓರ್ವ ಮಹಿಳೆಯನ್ನು ಆನೆಯೊಂದು ತುಳಿದು ಘಾಸಿಗೊಳಿಸಿದೆ.ತಾಲ್ಲೂಕಿನ ಕನ್ನಿದೊಡ್ಡಿ ಗ್ರಾಮದ ಸುನಂದ (೫೦) ಎಂಬ ಮಹಿಳೆಯು ತನ್ನ ತೋಟದಲ್ಲಿ ಹಾಲು ಕರೆಯಲು ಹೋಗುತ್ತಿರುವ
ವಂದಾರಗುಪ್ಪೆ ವ್ಯಾಪ್ತಿಯಲ್ಲಿ ಬೋನಿಗೆ ಬಿದ್ದ ಚಿರತೆ. ನಿಟ್ಟುಸಿರು ಬಿಟ್ಟ ಸ್ಥಳೀಯರು
ಚನ್ನಪಟ್ಟಣ:ಜೂ/೧೫/೨೦/ಸೋಮವಾರ. ತಾಲ್ಲೂಕಿನ ವಂದಾರಗುಪ್ಪೆ ಗ್ರಾಮ ಪಂಚಾಯತಿ ಯ ಪೋಲಿಸ್ ತರಬೇತಿ ಕೇಂದ್ರ (ಪಿಟಿಎಸ್) ಸುತ್ತ ಹಾಗೂ ತಾಲ್ಲೂಕಿನಾದ್ಯಂತ ಸಂಚರಿಸುತ್ತಿದ್ದ ಚಿರತೆ ಯೊಂದು ಬೋನಿಗೆ ಬಿದ್ದಿರುವುದಾಗಿ ವಲಯ ಅರಣ್ಯಾಧಿಕಾರಿ ಮಹಮ್ಮದ್ ಮನ್ಸೂರ್ ತಿಳಿಸಿದ್ದಾರೆ.ಸುಮಾರು ನಾಲ್ಕು ವರ್ಷ ವಯಸ್ಸಿನ ಗಂಡು ಚಿರತೆ ಇದಾಗಿದ್ದು ತಾಲ್ಲೂಕಿನಾದ್ಯಂತ ಸಂಚರಿಸಿ ಜನ ಮತ್ತು
ಮಾಲಿನ್ಯ ತಡೆದರೆ ಅರ್ಧಭಾಗ ಪರಿಸರ ಉಳಿದಂತೆಯೇ, ಧರ್ಮಸ್ಥಳ ಸಂಘದ ಯೋಜನಾಧಿಕಾರಿ ಜಯಂತ್ ಕುಮಾರ್
ಚನ್ನಪಟ್ಟಣ:ಜೂ/೧೩/೨೦/ಶನಿವಾರ. ವಿಶ್ವದಾದ್ಯಂತ ಪರಿಸರಕ್ಕೆ ಮಾರಕವಾಗಿರುವ ಮಾಲಿನ್ಯವನ್ನು ತಡೆಗಟ್ಟಿದರೆ ಅರ್ಧಭಾಗ ಪರಿಸರವನ್ನು ಉಳಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ನವ ಸಮಾಜದ ಪ್ರಜೆಗಳು ಮುಂದಡಿಯಿಡಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಯೋಜನಾಧಿಕಾರಿ ಜಯಂತಕುಮಾರ್ ಅಭಿಪ್ರಾಯ ಪಟ್ಟರು.ಅವರು ತಾಲೂಕಿನ ಮಳೂರು ಹಾಗೂ ಸಿಂಗರಾಜಪುರ ಗ್ರಾಮದಲ್ಲ
ಮಹಿಳೆಯರಿಂದಲೇ ಆಸ್ತಿ ಅಳತೆ, ರಾಮನಗರದಲ್ಲಿ ಯಶಸ್ವಿ ಪ್ರಯೋಗ; ರಾಜ್ಯಾದ್ಯಂತ ವಿಸ್ತರಣೆ ಗುರಿ ಎಂದ ಡಿಸಿಎಂ
ರಾಮನಗರ:೧೨/೨೦/ಶುಕ್ರವಾರ. ರಾಜ್ಯದ ಗ್ರಾಮೀಣ ಜೀವನೋಪಾಯ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯೆಯರು ಇದೀಗ ಮತ್ತೊಂದು ದಿಟ್ಟ ಹೆಜ್ಜೆಯನ್ನು ಇರಿಸಿದ್ದು, ಮನೆ/ ಆಸ್ತಿ ಅಳತೆ, ತೆರಿಗೆ ಅಂದಾಜು ಮಾಡುವ ಮೂಲಕ ಕೊರೊನಾ (ಕೋವಿಡ್-೧೯) ಸಂಕಷ್ಟದ ಕಾಲದಲ್ಲೂ ಹೊಸ ಜೀವನೋಪಾಯ ಮಾರ್ಗವನ್ನು ಕಂಡುಕೊಂಡಿದ್ದಾರೆ. ಇದನ್ನು ಕಣ್ಣಾರೆ ಕಂಡು ಪರಿಶೀಲಿಸಿದ ಉಪ